Advertisement
MIRROR FOCUS

ತೆಂಗಿನಕಾಯಿ ಕೊಯ್ಲಿಗೆ ಬಂದಿದೆ “ಹಲೋ ನಾರಿಯಲ್‌” | ನಿರೀಕ್ಷಿಸಿದ ದಿನಕ್ಕೆ ಕೊಯ್ಲು….! | ನೀರ್ಚಾಲಿನಲ್ಲಿ ಕೆಲಸ ಆರಂಭಿಸಿದ ತಂಡ |

Share

ತೆಂಗು ಕೃಷಿಕರಿಗೆ ಇರುವ ಬಹುದೊಡ್ಡ ಸಮಸ್ಯೆ ತೆಂಗಿನಕಾಯಿ ಕೊಯ್ಲು. ಈ ಸಮಸ್ಯೆ ನಿವಾರಣೆಗೆ ಈಗ ರಂಗಕ್ಕೆ ಇಳಿದಿದೆ “ಹಲೋ ನಾರಿಯಲ್‌” ತಂಡ. ಉದ್ಯಮ ರೂಪದಲ್ಲಿ ಕೇರಳದಲ್ಲಿ ಕೆಲಸ ಮಾಡುತ್ತಿರುವ ಈ ತಂಡ ಇದೀಗ ಕಾಸರಗೋಡು ಜಿಲ್ಲೆಯ ನೀರ್ಚಾಲಿಗೆ ಆಗಮಿಸಿದೆ. ತೆಂಗು ಕೊಯ್ಲು ಆರಂಭಿಸಿದೆ.

Advertisement

ನೀರ್ಚಾಲಿನಲ್ಲಿ ಕಾಸರಗೋಡು  ಎಗ್ರಿಕಲ್ಟರಿಸ್ಟ್‌ ಕೋ ಆಪರೇಟಿವ್‌ ಮಾರ್ಕೆಂಟಿಗ್‌ ಸೊಸೈಟಿ ವತಿಯಿಂದ ನಡೆದ ಸಾಂಕೇತಿಕ ಕಾರ್ಯಕ್ರಮದಲ್ಲಿ ಈ ತಂಡ ಕೆಲಸ ಆರಂಭಿಸಿದೆ. ಕಟ್ಟತ್ತೋಡಿ ಬಳಿಯ ಕೃಷಿಕ ಸತ್ಯಶಂಕರ ದೇವಪೂಜಿತ್ತಾಯ ಅವರ ಮನೆಯಲ್ಲಿ ಈ ತಂಡ ಕಾಸರಗೋಡು ಜಿಲ್ಲೆಯಲ್ಲಿ ಮೊದಲ ಕೆಲಸ ಆರಂಭಿಸಿದೆ. ತಿರುವಂತನಪುರದಿಂದ ಬಂದಿರುವ ಹಲೋ ನಾರಿಯಲ್‌ ತಂಡ ಉದ್ಯಮ ರೂಪದಲ್ಲಿ ಈ ಕೆಲಸ ಮಾಡುತ್ತಿದೆ.  ಆಪ್‌ ಮೂಲಕ ಕಾರ್ಯಾಚರಣೆ ನಡೆಸುವ ಈ ತಂಡಕ್ಕೆ ಕೇರಳದಲ್ಲಿ ಸುಮಾರು 60 ಸಾವಿರ ಗ್ರಾಹಕರನ್ನು  ತೋಟಗಳಲ್ಲಿ ಕೆಲಸ ಮಾಡುತ್ತಿದೆ. ಎಲ್ಲಾ ಗ್ರಾಹಕರಿಗೂ ಸಂತೃಪ್ತ ಸೇವೆಯನ್ನು ನೀಡುತ್ತಿದೆ. ಛತ್ತೀಸ್‌ಗಡ ಸೇರಿದಂತೆ ಉತ್ತರಭಾರತದ ತಂಡದವರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಕರೆ ಮಾಡುವ ಕೃಷಿಕರಿಂದ ಮಾಹಿತಿ ಪಡೆದು ಸೇವೆ ನೀಡಲು ಲಭ್ಯವಾಗುತ್ತದೆಯೇ ಎಂದು ಗಮನಿಸಿ ಬುಕಿಂಗ್‌ ಪಡೆದುಕೊಳ್ಳುತ್ತದೆ.

Advertisement

ಈ ಬಗ್ಗೆ ಮಾತನಾಡಿದ ಹಲೋ ನಾರಿಯಲ್‌ ತಂಡದ ಮುಖ್ಯಸ್ಥ ತಿರುವಂತನಪುರದ ಮೋಹನ್‌ ದಾಸ್‌, ಆರಂಭದಲ್ಲಿ ನನ್ನ ಮನೆಯ 10 ತೆಂಗಿನ ಮರದಿಂದ ತೆಂಗಿನಕಾಯಿ ತೆಗೆಯಲು ಜನರು ಇರಲಿಲ್ಲ. ಹೀಗಾಗಿ ತರಬೇತಿ ನೀಡಿ ಇದೀಗ ಕೇರಳದ ಕೃಷಿಕರಿಗೆ ಸೇವೆ ನೀಡಲಾಗುತ್ತಿದೆ ಎನ್ನುತ್ತಾರೆ.

Advertisement

ವಾಯುಪಡೆಯ ನಿವೃತ್ತ ಸಿಬಂದಿಯಾಗಿರುವ ಮೋಹನ್‌ ದಾಸ್‌ ಅವರು ಇಂದು ಹಲೋ ನಾರಿಯಲ್‌ ತಂಡದ 10 ಕ್ಕೂ ಹೆಚ್ಚು ಬ್ರಾಂಚ್‌ ಹೊಂದಿದ್ದು, 15 ಕ್ಕೂ ಹೆಚ್ಚು ಕಚೇರಿ ಸಿಬಂದಿಗಳು ಕೃಷಿಕರಿಂದ ಬರುವ ಕರೆಗಳನ್ನು ಸ್ವೀಕರಿಸಿ ಬುಕಿಂಗ್‌ ಪಡೆಯುತ್ತಾರೆ. ಕೇರಳ ಮಾತ್ರವಲ್ಲ ಕರ್ನಾಟಕಕ್ಕೂ ನಮ್ಮ ಸಿಬಂದಿಗಳು ಆಗಮಿಸಬಹುದು, ಆದರೆ ಕೆಲವು ಮೂಲಭೂತ ಆವಶ್ಯಕತೆಗಳನ್ನು ನಿರೀಕ್ಷೆ ಮಾಡುತ್ತದೆ ಈ ತಂಡ.

Advertisement

ಕಳೆದ ಹಲವಾರು ವರ್ಷಗಳಿಂದ ತೆಂಗು ಬೆಳೆಗಾರರಿಗೆ ಕೊಯ್ಲು ಸಮಸ್ಯೆ ಇದೆ. ಇದಕ್ಕೆ ಪರಿಹಾರದ ನೆಲೆಯಲ್ಲಿ ಇಂತಹ ತಂಡವೊಂದು ಕೆಲಸ ನಿರ್ವಹಿಸುತ್ತಿರುವುದು  ಆಶಾದಾಯಕ ಬೆಳವಣಿಗೆಯಾಗಿದೆ. ಕಾಸರಗೋಡು ಜಿಲ್ಲೆಯ ನೀರ್ಚಾಲಿಗೂ ಈ ತಂಡ ಬಂದಿದೆ. ಹೊಸದೊಂದು ಚರಿತ್ರೆಯನ್ನು ಇಲ್ಲಿ ಸೃಷ್ಟಿಸಲು ಸಾಧ್ಯವಿದೆ ಎಂದು ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಹೇಳುತ್ತಾರೆ.

Advertisement

ಕಾಸರಗೋಡು  ಎಗ್ರಿಕಲ್ಟರಿಸ್ಟ್‌ ಕೋ ಆಪರೇಟಿವ್‌ ಮಾರ್ಕೆಂಟಿಗ್‌ ಸೊಸೈಟಿ ಕಳೆದ ಹಲವಾರು ವರ್ಷಗಳಿಂದ ಕೃಷಿಕರ ಬೇಡಿಕೆಗಳನ್ನು ಈಡೇರಿಸುತ್ತಿದೆ. ಇದೀಗ ತಿರುವಂತನಪುರದಿಂದ ಆಗಮಿಸಿರುವ ಈ ತಂಡಕ್ಕೆ ನೆರವು ನೀಡುವ ಮೂಲಕ ಕೃಷಿಕರಿಗೆ ಸಹಾಯವನ್ನು ಮಾಡುತ್ತಿದೆ. ನೀರ್ಚಾಲು ಆಸುಪಾಸಿನ ಕೃಷಿಕರಿಗೆ ಸದ್ಯಕ್ಕೆ ಸೇವೆ ನೀಡಲು ಸಿದ್ಧತೆ ನಡೆಸಲಾಗಿದೆ ಎಂದು ಹೇಳುತ್ತಾರೆ ಸೊಸೈಟಿ  ಅಧ್ಯಕ್ಷ ಪದ್ಮರಾಜ ಪಟ್ಟಾಜೆ.

ಕಳೆದ ಆರು ತಿಂಗಳಿನಿಂದ ತೆಂಗಿನ ಕೊಯ್ಲು ಮಾಡಲು ಸಾಧ್ಯವಾಗಿಲ್ಲ. ಕಾರ್ಮಿಕರ ಕೊರತೆ ಇತ್ತು, ಹೀಗಾಗಿ 30000 ತೆಂಗಿನ ಕಾಯಿ ಪ್ರತೀ ವರ್ಷ ಕೊಯ್ಲು ಮಾಡುತ್ತಿದ್ದರೂ ಈಚೆಗೆ ಅಡುಗೆ, ಪೂಜೆ ಮಾಡಲೂ ತೆಂಗಿನ ಕಾಯಿ ಇರಲಿಲ್ಲ ಎಂದು ಭಾವುಕರಾಗುವ ಕೃಷಿಕ ಕೃಷಿಕ ಸತ್ಯಶಂಕರ ದೇವಪೂಜಿತ್ತಾಯ , ಇಂತಹ ಪರಿಸ್ಥಿತಿಯಲ್ಲಿ ಕೃಷಿಯೇ ಕಷ್ಟ ಎಂದು ಭಾವಿಸಿದ್ದೆವು ಎನ್ನುತ್ತಾರೆ. ಆದರೆ ಅಡಿಕೆ ಪತ್ರಿಕೆಯಲ್ಲಿ ಬಂದಿರುವ ಲೇಖನದ ಹಿಂದೆ ಬಿದ್ದು ಮೋಹನದಾಸ್‌ ಅವರನ್ನು ಸಂಪರ್ಕ ಮಾಡಿ, ಕ್ಲಬ್‌ ಹೌಸ್‌ ಮೂಲಕ ಸಭೆ ನಡೆಸಿ, ಊರಿನಲ್ಲಿ ಇರುವ ತೆಂಗು ಬೆಳೆಗಾರರ ಸಮಸ್ಯೆಯನ್ನು ಸರ್ವೆ ಮಾಡಿ ಈ ತಂಡವನ್ನು ಮುರಳೀಕೃಷ್ಣ ಎಡನಾಡು ಅವರ ನೆರವನ್ನು ಪಡೆದು  ಈ ತಂಡ ನೀರ್ಚಾಲಿಗೆ ಕರೆತರಲು ಸಾಧ್ಯವಾಗಿದೆ ಎಂದು ಹೇಳುತ್ತಾರೆ ಸತ್ಯಶಂಕರ. ಇದೀಗ ನೆಮ್ಮದಿಯಾಗಿದೆ ಎಂದು ಹೇಳುತ್ತಾ ಹಲೋ ನಾರಿಯಲ್‌ ತಂಡವನ್ನು ಸ್ವಾಗತಿಸುತ್ತಾರೆ.

Advertisement

ಶನಿವಾರ ಕೆಲಸ ಆರಂಭಿಸಿದ ತಂಡವು ಒಂದೇ ದಿನದಲ್ಲಿ ನೀರ್ಚಾಲು ಆಸುಪಾಸಿನಲ್ಲಿ 8 ಕ್ಕೂ ಹೆಚ್ಚು ತೋಟಗಳಿಂದ ಆಹ್ವಾನವನ್ನು ಪಡೆದಿದೆ. ಮುಂದಿನ ದಿನಗಳಲ್ಲಿ ಈ ತಂಡವು ವಿಸ್ತಾರಗೊಳ್ಳುವ ನಿರೀಕ್ಷೆ ಇದೆ.  ಹಲೋ ನಾರಿಯಲ್‌ ತಂಡ ಕೆಲಸ ಆರಂಭದ ವೇಳೆ ಕಾಸರಗೋಡು  ಎಗ್ರಿಕಲ್ಟರಿಸ್ಟ್‌ ಕೋ ಆಪರೇಟಿವ್‌ ಮಾರ್ಕೆಂಟಿಗ್‌ ಸೊಸೈಟಿ ಸಿಇಒ ಅಪ್ಪಣ್ಣ ಬಿ ಎಫ್‌, ಸಿಪಿಸಿಆರ್‌ಐ ತಾಂತ್ರಿಕ ಅಧಿಕಾರಿ ಮುರಳಿಕೃಷ್ಣ ಎಡನಾಡು, ಹಲೋ ನಾರಿಯಲ್‌ ಮುಖ್ಯಸ್ಥ ಮೋಹನ್‌ ದಾಸ್‌ ಮೊದಲಾದವರು ಇದ್ದರು.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಮುಂಗಾರು ಮತ್ತಷ್ಟು ಚುರುಕು – ಕರಾವಳಿ ಕರ್ನಾಟಕದಲ್ಲಿ ಜೂನ್ 26 ರವರೆಗೆ ಭಾರೀ ಮಳೆ ಎಚ್ಚರಿಕೆ

ಕರಾವಳಿ ಕರ್ನಾಟಕದಲ್ಲಿ ಜೂನ್ 26ರವರೆಗೆ ಭಾರೀದಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇದೆ…

8 hours ago

ಅಡಿಕೆ ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕೆ ತಕ್ಷಣ ಕ್ರಮ – ಸರ್ಕಾರಕ್ಕೆ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಒತ್ತಾಯ

ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಕಾಪರ್ ಸಲ್ಫೇಟ್ ಕೊರತೆ, ಬೆಳೆ ವಿಮೆ ವಿಳಂಬ, ಕಳಪೆ…

10 hours ago

ಹವಾಮಾನ ವರದಿ | 23-06-2026 | ಕರ್ನಾಟಕದಲ್ಲಿ ಜೂನ್ 25 ರಿಂದ ಮುಂಗಾರು ಚುರುಕು? ಕರಾವಳಿ-ಮಲೆನಾಡಿನಲ್ಲಿ ಮಳೆ ಹೆಚ್ಚಳದ ನಿರೀಕ್ಷೆ

ಜೂನ್ 25ರಿಂದ ಕರ್ನಾಟಕದಲ್ಲಿ ಮುಂಗಾರು ಮಳೆ ಚುರುಕುಗೊಳ್ಳುವ ಸಾಧ್ಯತೆ ಇದೆ. ಕರಾವಳಿ ಮತ್ತು…

17 hours ago

ಕೀಟನಾಶಕಗಳ ಅತಿಯಾದ ಬಳಕೆ ನಿಯಂತ್ರಣಕ್ಕೆ ನೈಸರ್ಗಿಕ ಕೃಷಿಯೇ ಮದ್ದು

ಕೀಟನಾಶಕ ಮತ್ತು ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಕೃಷಿ ಹಾಗೂ ಆರೋಗ್ಯಕ್ಕೆ ಹಾನಿಯಾಗುತ್ತಿದೆ…

23 hours ago

ಭಾರೀ ಮಳೆ ಎಚ್ಚರಿಕೆ : 13 ರಾಜ್ಯಗಳಿಗೆ IMD ಅಲರ್ಟ್‌ | ಉಳಿದೆಡೆ ಉಷ್ಣ ಅಲೆ ಮುಂದುವರಿಕೆ

ದೇಶದ 13 ರಾಜ್ಯಗಳಿಗೆ ಐಎಂಡಿ ಭಾರೀ ಮಳೆಯ ಎಚ್ಚರಿಕೆ ನೀಡಿದ್ದು, ಕರಾವಳಿ ಕರ್ನಾಟಕ…

23 hours ago

ಕೆಳದಿ ಶಿವಪ್ಪ ನಾಯಕ ಕೃಷಿ ವಿವಿ ಆಡಳಿತ ಮಂಡಳಿಗೆ ಇಬ್ಬರ ನಾಮನಿರ್ದೇಶನ

ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ…

1 day ago