Opinion

ಮಾನವನಿಂದ ಮರೆಯಾಗುತ್ತಿರುವ ಬೆಟ್ಟದ ನೆಲ್ಲಿಕಾಯಿ | ರಾಜು ಕಾನಸೂರು ಬರಹ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ದೇಹದಲ್ಲಿ(Body) ವಿಟಾಮಿನ್ ಸಿ(Vitamin C) ಕೊರತೆ ಉಂಟಾದಾಗ “ನೆಲ್ಲಿ ಕಾಯಿ(Amla) ತಿನ್ನಿ ಸಮಸ್ಯೆ ಸರಿಹೋಗುತ್ತದೆ” ಎಂದು ವೈದ್ಯರು(Doctor) ಸಲಹೆ ನೀಡುತ್ತಾರೆ. ಆದರೆ, ಮಲೆನಾಡಿನ ಬೆಟ್ಟ, ಗುಡ್ಡಗಳಲ್ಲಿ ನೆಲ್ಲಿಕಾಯಿ ಹುಡುಕಿ ಹೊರಟರೆ ಗಿಡ ಮಾತ್ರ ಕಾಣಸಿಗುತ್ತಿದೆ..ಕಾಯಿಗಳೇ ಇಲ್ಲ !

Advertisement

ಇಂಥದ್ದೊಂದು ಕರಾಳ ವಿದ್ಯಮಾನ ಮಲೆನಾಡಿನಲ್ಲಿ ಸಂಭವಿಸುತ್ತಿದೆ. ಕಳೆದ ನಾಲೈು ವರ್ಷಗಳಿಂದ ಬೆಟ್ಟದ ನೆಲ್ಲಿ ಗಿಡಗಳು ಬಂಜೆಯಾಗಿ ನಿಂತಿವೆ. ಡಿಸೆಂಬರ್ ಚಳಿಗೆ ಕೆಲ ಗಿಡಗಗಳಲ್ಲಿ ನೆಲ್ಲಿ ಹೂವು ಅರಳುತ್ತಿದ್ದರೂ ಕಾಯಿಯೇ ಕಟ್ಟಿಕೊಳ್ಳುತ್ತಿಲ್ಲ. ಕಳೆದ ಎರಡು ವರ್ಷಗಳ ಈಚೆಯಂತೂ ಶೇ.80 ರಷ್ಟು ಗಿಡಗಳಲ್ಲಿ ಹೂವು ಬಿಡುತ್ತಿಲ್ಲ. ನೆಲ್ಲಿಕಾಯಿ ಆಸೆಯಿಂದ ಬೆಟ್ಟದ ತುತ್ತ ತುದಿಗೆ ಏರಿದರೂ ಎಲೆ ಉದುರಿಸಿ ಬೇತಾಳ ಸದೃಷ ನಿಂತ ನೆಲ್ಲಿ ಮರಗಳೇ ಕಾಣಿಸುತ್ತಿವೆ. ಬೆಟ್ಟದ ತುಂಬೆಲ್ಲ ನೂರಾರು ನೆಲ್ಲಿ ಗಿಡಗಳಿದ್ದರೂ ನಾಲೈದು ಗಿಡಗಳಲ್ಲಿ ಮಾತ್ರ ಅಲ್ಪ ಪ್ರಮಾಣದ ಕಾಯಿಗಳು ಸಿಗುತ್ತಿವೆ.

ದಶಕದ ನೆನಪು: ನೆಲ್ಲಿಕಾಯಿ ಅಂದ ತಕ್ಷಣ ಇಂದಿನ ಮಧ್ಯ ಶಾಲೆ ಬಿಟ್ಟ ತಕ್ಷಣ ಬೆಟ್ಟ ಗುಡ್ಡ ಓಡಾಡಿ ನೆಲ್ಲಿ ಮರಗಳನ್ನು ಹತ್ತಿ ಕಾಯಿ ಕೊಯ್ಯುತ್ತಿದ್ದ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾರೆ. ಅಂದಿನ ದಿನಗಳಲ್ಲಿ ಪ್ರತಿ ಗಿಡಗಳಲ್ಲಿಯೂ ಭರ್ಜರಿ ನೆಲ್ಲಿಕಾಯಿ ಬಿಡುತ್ತಿತ್ತು ಮರವೇರಿ ಕಾಯಿ ಕೊಯ್ದು ಮನೆಗೆ ತಂದು ಅದನ್ನು ಉಪ್ಪು ನೀರಿನಲ್ಲಿ ನೆನೆಸಿಡುತ್ತಿದ್ದೆವು. ಇನ್ನು ಕೆಲವರು ನೆಲ್ಲಿಕಾಯಿಯ ಚಟ್ಟಿ ಮಾಡಿದರೆ ಇನ್ನು ಕೆಲವರದು ನೆಲ್ಲಿಕಾಯಿ ಒಣಗಿಸಿ ಅದಕ್ಕೆ ಉಪ್ಪು ಖಾರ ಹಾಕಿ ತಿನ್ನುತ್ತಿದ್ದರು. “ಅಂದು ಬಿಡುತ್ತಿದ್ದ ಶೇ.10ರಷ್ಟು ಇಂದು ನೆಲ್ಲಿಗಿಡಗಳು ಕಾಯಿ ಬಿಡುತ್ತಿಲ್ಲ” ಎಂದು ನೆನಪು ಮಾಡಿಕೊಳ್ಳುತ್ತಾರೆ ರೈತ ಸುಬ್ರಾಯ ಗೌಡ. ಪರಿಸರ ಹೋರಾಟಗಾರ ಅನಂತ ಆಶೀಸರ ದಶಕದ ಹಿಂದೆ ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷರಾಗಿದ್ದ ವೇಳೆ ಬೆಟ್ಟದ ನೆಲ್ಲಿಯ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದರು. ಬೆಟ್ಟದ ನೆಲ್ಲಿಯ ಸಂರಕ್ಷಣೆಯ ದೃಷ್ಟಿಯಿಂದ ನಲ್ಲಿ ಗಿಡಗಳನ್ನು ಅರಣ್ಯ ಇಲಾಖೆಯ ನರ್ಸರಿಗಳಲ್ಲಿ ಅಧಿಕ ಪ್ರಮಾಣದಲ್ಲಿ ಉತ್ಪಾದಿಸಿ ಬೆಟ್ಟಗಳಲ್ಲಿಯೇ ನೆಡುವ ಯೋಜನೆ ಹಾಕಿಕೊಂಡಿದ್ದರು. ಅರಣ್ಯ ಇಲಾಖೆ ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ನೆಲ್ಲಿ ಇಲ್ಲಿ ಈಗಲೂ ನೆಡುತ್ತಿದೆ. ಆದರೆ, ಇನ್ನೊಂದೆಡೆ ಈ ನೈಸರ್ಗಿಕವಾಗಿ ಬೀಜೋತ್ಪಾದನೆ ಮಾಡಿ. ತನ್ನ ಸಂತತಿಯನ್ನು ತಾನೇ ಬೆಳೆಸಿಕೊಳ್ಳುವ ಶಕ್ತಿ ಮಲೆನಾಡಿನ ನೆಲ್ಲಿ ಗಿಡಗಳಿಗೆ ಕಡಿಮೆಯಾಗತೊಡಗಿದೆ.

ನೆಲ್ಲಿಗಿಡಗಳಲ್ಲಿ ಕಾಯಿ ಬರದಿರುವುದು ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಅವರ ಗಮನಕ್ಕೂ ಬಂದಿದೆ. ತಮ್ಮ ಕದಂಬ ಸಂಸ್ಥೆ ಮೂಲಕ ಇಂಗ್ಲಿಷ್ ಔಷಧಗಳಿಗೆ ಪರ್ಯಾಯವಾಗಿ, ನ್ಯಾನೋ ತಂತ್ರಜ್ಞಾನದ ಮೂಲಕ ಸಸ್ಯದ ಔಷಧಿ ತಯಾರಿಸುವ ಕಾರ್ಯವನ್ನು ಕದಂಬ ಸಂಸ್ಥೆ ದಶಕದಿಂದ ನಡೆಸಿಕೊಂಡು ಬಂದಿದೆ. ಔಷಧಿಯ ಗುಣಗಳ ಆಗರವಾಗಿರುವ ನೆಲ್ಲಿಕಾಯಿ ನಿಗದಿತ ಪ್ರಮಾಣದಲ್ಲಿ ಲಭ್ಯವಾಗದಿದ್ದಾಗ ಮಲೆನಾಡಿನ ಬೆಟ್ಟದ ಗಿಡಗಳಲ್ಲಿ ಕಾಯಿಯೇ ಬಿಡದಿರುವುದು ಅವರ ಗಮನಕ್ಕೆ ಬಂದಿದೆ. ಈ ವೈರುದ್ಯಕ್ಕೆ ಕಾರಣ ಏನು? ಎಂದು ಹುಡುಕ ಹೊರಟ ಅನಂತಕುಮಾರ ಹೆಗಡೆ ಮತ್ತು ಕದಂಬ ಸಂಸ್ಥೆ ಹಲವು ವಿಜ್ಞಾನಿಗಳು, ಪರಿಸರ ತಜ್ಞರ ಜೊತೆ ಚರ್ಚೆ ನಡೆಸಿದ್ದಾರೆ. ಈ ಸ್ಥಿತಿ ಹೋಗಲಾಡಿಸಲು ಏನು ಪರ್ಯಾಯ ಮಾರ್ಗ ಎಂಬುದನ್ನೂ ಚರ್ಚಿಸಿದ್ದಾರೆ. ಆದರೆ, ಇದಾವುದಕ್ಕೂ ವಿಜ್ಞಾನದಿಂದ ಸ್ಪಷ್ಟ ಉತ್ತರ ಬಂದಿಲ್ಲ. ಜಾಗತಿಕ ತಾಪಮಾನ ಏರಿಕೆಯ ಪರಿಣಾಮ ನೆಲ್ಲಿ ಗಿಡಗಳ ಮೇಲೂ ಆಗಿರಬಹುದು ಎಂಬ ಊಹೆ ಎಲ್ಲರದ್ದು. ಒಟ್ಟಿನಲ್ಲಿ ಮಲೆನಾಡ ನೆಲ್ಲಿಗಿಡಗಳ ಬಂಜೆತನ ಹಲವು ಏರುಪೇರು ಸೃಷ್ಟಿಸುತ್ತಿದೆ.

ಬರಹ :
ರಾಜು ಕಾನಸೂರು
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಸಹಜ ಸಾವನ್ನಪ್ಪುವ ಕಾಡುಪ್ರಾಣಿಗಳನ್ನು ಸುಡುವಂತಿಲ್ಲ | ಪ್ರಕೃತಿ ಚಕ್ರ ಕಾಪಾಡಲು ಸಹಕಾರಿ | ರಾಜ್ಯ ಸರ್ಕಾರದಿಂದ ಸುತ್ತೋಲೆ

ರಾಜ್ಯದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಸಹಜವಾಗಿ ಸಾವನ್ನಪ್ಪುವ ಕಾಡುಪ್ರಾಣಿಗಳ ಕಳೇಬರವನ್ನು ಸುಡದೆ ಕಾಡಿನಲ್ಲಿಯೇ…

4 hours ago

ಬದರೀನಾಥ ಧಾಮ ಯಾತ್ರಾ ಆರಂಭ | ಭಾರೀ ಪ್ರಮಾಣದಲ್ಲಿ ಆಗಮಿಸಿರುವ ಭಕ್ತರು | ಸುರಕ್ಷತೆಗಾಗಿಅರೆಸೇನಾ ಪಡೆ ನಿಯೋಜನೆ

ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಕ್ಷೇತ್ರ ಬದರೀನಾಥ ಧಾಮವನ್ನು  ತೆರೆಯಲಾಗಿದೆ. ಮುಂಜಾನೆ 6 ಗಂಟೆಯ…

15 hours ago

ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ ವಿರುದ್ಧ ಕಾನೂನು ಕ್ರಮ – ಅರಣ್ಯ ಸಚಿವ ಈಶ್ವರ ಖಂಡ್ರೆ

ಅರಣ್ಯ ಪ್ರದೇಶದಲ್ಲಿ ಆಗಿರುವ ಅಕ್ರಮ ಮಂಜೂರಾತಿ ರದ್ದುಪಡಿಸಿ, ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ…

15 hours ago

ಅಡಿಕೆ ಧಾರಣೆ ಏರಿಕೆಗೆ ಕಾರಣ ಇದೆ | ಈಗ ಅಡಿಕೆ ಮಾರುಕಟ್ಟೆಗೆ ಅನ್ವಯಿಸುವ ಸಿದ್ಧಾಂತಗಳು ಯಾವುದು..?

ಈ ಬಾರಿ ಅಡಿಕೆ ಮಾರುಕಟ್ಟೆಯಲ್ಲಿ ಏರಿಳಿತ, ಅಡಿಕೆ ಬೆಳೆ ಕಡಿಮೆ, ಧಾರಣೆ ಏರಿಕೆ…

21 hours ago

2025: ಲಕ್ಷ್ಮೀನಾರಾಯಣ ಯೋಗ | ಈ ರಾಶಿಗೆ ಅದೃಷ್ಟದ ಬಾಗಿಲು ಓಪನ್

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜೋತಿಷಿಗಳನ್ನು ಸಂಪರ್ಕಿಸಿ 9535156490

21 hours ago

ರೈತರ ಪಂಪ್ ಸೆಟ್ ಗಳಿಗೆ ಹಗಲು ಹೊತ್ತಿನಲ್ಲಿಯೇ ವಿದ್ಯುತ್ ನೀಡಲು ತೀರ್ಮಾನ

ಕುಸುಮ್ ಯೋಜನೆ ಮೂಲಕ ಪ್ರತಿ ತಾಲ್ಲೂಕಿನಲ್ಲಿ 20 ಮೆ.ವ್ಯಾ ಸಾಮರ್ಥ್ಯದ ಸೋಲಾರ್ ವಿದ್ಯುತ್…

1 day ago