ಹಲಸು ಮೌಲ್ಯವರ್ಧನೆಯ ಆಸಕ್ತ ಶಿವಣ್ಣ | ಹಲಸು ಬೀಜದ ಮೂಲಕ ಜಾಫಿ ಹುಡಿ ತಯಾರಿಸಿದ ಶಿವಣ್ಣ ಇನ್ನಿಲ್ಲ |

October 25, 2023
3:00 PM
ಹಲಸು ಮೌಲ್ಯವರ್ಧನೆಯ ಬಗ್ಗೆ ತೀರಾ ಆಸಕ್ತರಾಗಿ ಹಲವು ಪ್ರಯತ್ನ ಮಾಡುತ್ತಿದ್ದ ಸಖರಾಯಪಟ್ಟಣದ ಶಿವಣ್ಣ ನಿಧನರಾಗಿದ್ದಾರೆ.

ಹಲಸಿನ ಮೌಲ್ಯವರ್ಧನೆ ವಿವಿಧ ಮಾದರಿಯಲ್ಲಿ ನಡೆಯುತ್ತಿದೆ. ಅದರಲ್ಲಿ ಹಲಸಿನ ಬೀಜಗಳಿಂದ ಮಾಡಿದ ಆರೋಗ್ಯ ಪಾನೀಯ ಜಾಫಿ. ಮಾರುಕಟ್ಟೆಗೆ ಬಂದಿರುವ ಹಲವು ಉತ್ಪನ್ನಗಳ ಪೈಕಿ ಜಾಫಿ ಹೆಚ್ಚು ಜನಪ್ರಿಯವಾಗಿತ್ತು. ಇದರ ತಯಾರಕ ಶಿವಣ್ಣ. ಇಂತಹ ಆಸಕ್ತ, ಅಧ್ಯಯನಶೀಲ ಹಾಗೂ ಹಲಸು ಮೌಲ್ಯವರ್ಧನೆಯ ರುವಾರಿ ಶಿವಣ್ಣ ಇನ್ನಿಲ್ಲ.

Advertisement

ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದ ಪರಿವರ್ತನಾ ಎಂಬ ಸ್ವಯಂಸೇವಾ ಸಂಸ್ಥೆಯ ಶಿವಣ್ಣ ಅವರು ತಯಾರಿಸಿದ “ಆರೋಗ್ಯ ಪಾನೀಯ” ಜಾಫಿ ಹೆಚ್ಚು ಜನಪ್ರಿಯವಾಗಿತ್ತು. ಈ ಜಾಫಿಯನ್ನು ಸವಿಯಲೇಬೇಕು ಎಂಬ ಟ್ಯಾಗ್‌ ಲೈನ್‌ ಕಳೆದ ಕೆಲವು ಸಮಯಗಳ ಹಿಂದೆ ಇತ್ತು.  ಮಾರುಕಟ್ಟೆಗೆ ಬಂದಿರುವ ನವೀನ ಹಲಸಿನ ಉತ್ಪನ್ನಗಳ ಶ್ರೇಣಿಯಲ್ಲಿ ಜಾಫಿ ಗಮನ ಸೆಳೆದಿತ್ತು.  “ಜಾಫಿ” ಶಿವಣ್ಣ ಎಂದೇ ಪರಿಚಿತವಾದ  ಶಿವಣ್ಣ ಅವರು  ಹಲಸಿನ ಉತ್ಪನ್ನಗಳ ರುವಾರಿ ಎಂದರೂ ತಪ್ಪಾಗಲಾರದು. ವಿವಿಧ ಹಲಸು ಉತ್ಪನ್ನಗಳ ಮೂಲಕ ಗಮನ ಸೆಳೆದವರು. ಹಲಸಿನ ಕಾಯಿ, ಹಣ್ಣುಗಳ ಮೌಲ್ಯ ವರ್ಧನೆ ಕುರಿತು ಚಿಂತಿಸುತ್ತಾ ಪ್ರಯತ್ನ ಮಾಡುತ್ತಿದ್ದ ಸಹೃದಯಿ ಕೃಷಿಕರಾಗಿದ್ದರು.

 

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ವಿದ್ಯುತ್ ದರ ಶಾಕ್..! ಸಣ್ಣ ಕೈಗಾರಿಕೆಗಳಿಗೆ ಭಾರೀ ಹೊರೆ – ಉಮಾ ರೆಡ್ಡಿ ಎಚ್ಚರಿಕೆ
April 21, 2026
7:35 AM
by: ಮಿರರ್‌ ಡೆಸ್ಕ್
ಮುಳಬಾಗಿಲಿನಲ್ಲಿ ಹೋಟೆಲ್ ಮೇಲೆ ದಾಳಿ : 30 ಲೀಟರ್ ಹಳೆಯ ತುಪ್ಪ ಜಪ್ತಿ, ದಂಡ
April 21, 2026
7:31 AM
by: ಮಿರರ್‌ ಡೆಸ್ಕ್
ರೈತರಿಗೆ ಗುಡ್ ನ್ಯೂಸ್..! ತೊಗರಿ ಖರೀದಿ ಅವಧಿ ಮೇ 15ರವರೆಗೆ ವಿಸ್ತರಣೆ
April 21, 2026
7:24 AM
by: ಮಿರರ್‌ ಡೆಸ್ಕ್
ವಿಜಯಪುರದಲ್ಲಿ ತಾಪಮಾನ ಹೆಚ್ಚಳ : ಜಿಲ್ಲಾಸ್ಪತ್ರೆಯಲ್ಲಿ 10 ಬೆಡ್ AC ವಾರ್ಡ್ ಸಿದ್ಧ
April 21, 2026
7:21 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror