ಹೋಳಿ ಹಬ್ಬ: ಪ್ರಾಣಿ-ಪಕ್ಷಿಗಳಿಗೆ ಹಾನಿಯಾಗದಂತೆ ಆಚರಿಸಿ – ಮಂಡಳಿ ಮನವಿ

March 3, 2026
9:28 PM
ಹೋಳಿ ಹಬ್ಬದ ಸಂದರ್ಭದಲ್ಲಿ ಪ್ರಾಣಿ ಮತ್ತು ಪಕ್ಷಿಗಳಿಗೆ ಹಾನಿಯಾಗದಂತೆ ಆಚರಿಸಲು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಸಾರ್ವಜನಿಕರಿಗೆ ಸೂಚನೆ ನೀಡಿದೆ. ಜೋರಾದ ಶಬ್ದ, ಬಣ್ಣ ಮತ್ತು ನೀರಿನ ಬಲೂನ್ ಬಳಕೆಗೆ ಎಚ್ಚರಿಕೆ.

ಬಣ್ಣಗಳ ಹಬ್ಬ ಹೋಳಿ ಮಾರ್ಚ್ 4ರಂದು ದೇಶಾದ್ಯಂತ ಆಚರಿಸಲಾಗುತ್ತಿದ್ದು, ಈ ವೇಳೆ ಪ್ರಾಣಿ-ಪಕ್ಷಿಗಳಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕೆಂದು  ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಮನವಿ ಮಾಡಿದೆ.

ಹೋಳಿ ಹಬ್ಬವು ಸಂತೋಷ, ಸಾಮರಸ್ಯ ಮತ್ತು ವಿಜಯದ ಸಂಕೇತ. ಆದರೆ ಜೋರಾದ ಶಬ್ದಗಳು, ಹಠಾತ್ ಬಣ್ಣ ಎರಚುವುದು, ನೀರಿನ ಬಲೂನ್‌ಗಳನ್ನು ಎಸೆಯುವುದು ಮತ್ತು ಆಕ್ರಮಣಕಾರಿ ನಡವಳಿಕೆಗಳು ಸಾಕುಪ್ರಾಣಿಗಳು ಹಾಗೂ ಬೀದಿ ಪ್ರಾಣಿಗಳಿಗೆ ಭಯ, ಒತ್ತಡ ಮತ್ತು ಗಂಭೀರ ಗಾಯಗಳಿಗೆ ಕಾರಣವಾಗಬಹುದು ಎಂದು ತಿಳಿಸಲಾಗಿದೆ.

ಪ್ರಾಣಿಗಳನ್ನು ಬೆನ್ನಟ್ಟುವುದು ಅಥವಾ ಬಲವಂತವಾಗಿ ಬಣ್ಣ ಬಳಿಯುವುದು ಕ್ರೌರ್ಯಕ್ಕೆ ಸಮಾನವಾಗಿದ್ದು, ಇದು ಕಾನೂನುಬದ್ಧವಾಗಿ ದಂಡನೀಯವೂ ಆಗಿದೆ.

 ಪಾಲಿಸಬೇಕಾದ ಸೂಚನೆಗಳು:

  • ಸಾಕುಪ್ರಾಣಿಗಳು, ಬೀದಿ ಪ್ರಾಣಿಗಳು ಮತ್ತು ಪಕ್ಷಿಗಳ ಮೇಲೆ ಬಣ್ಣಗಳನ್ನು ಎರಚಬೇಡಿ.

  • ನೀರಿನ ಬಲೂನ್‌ಗಳು ಹಾಗೂ ಬಣ್ಣದ ನೀರನ್ನು ಪ್ರಾಣಿಗಳ ಮೇಲೆ ಸಿಂಪಡಿಸುವುದನ್ನು ತಪ್ಪಿಸಿ.

  • ಸಾಕುಪ್ರಾಣಿಗಳನ್ನು ಶಾಂತ ಮತ್ತು ಸುರಕ್ಷಿತ ಸ್ಥಳದಲ್ಲಿ ಇರಿಸಿ.

  • ಹಬ್ಬದ ನಂತರ ಬಣ್ಣದ ಅವಶೇಷ, ಪ್ಲಾಸ್ಟಿಕ್ ತ್ಯಾಜ್ಯವನ್ನು ಸ್ವಚ್ಛಗೊಳಿಸಿ.

  • ಪ್ರಾಣಿ ಬಣ್ಣಕ್ಕೆ ಒಡ್ಡಿಕೊಂಡರೆ ಶುದ್ಧ ನೀರಿನಿಂದ ನಿಧಾನವಾಗಿ ತೊಳೆಯಿ; ಅಗತ್ಯವಿದ್ದರೆ ಪಶುವೈದ್ಯಕೀಯ ನೆರವು ಪಡೆಯಿ.

ಮಕ್ಕಳು ಹಾಗೂ ಯುವಕರಲ್ಲಿ ಪ್ರಾಣಿ ಸ್ನೇಹಿ ಹೋಳಿ ಕುರಿತು ಜಾಗೃತಿ ಮೂಡಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ನೈಸರ್ಗಿಕ ಬಣ್ಣಗಳನ್ನು ಮನುಷ್ಯರಿಗೆ ಮಾತ್ರ ಬಳಸಿ, ಪರಿಸರ ಸ್ನೇಹಿ ಹಾಗೂ ಕ್ರೌರ್ಯ-ಮುಕ್ತ ಹಬ್ಬವನ್ನು ಆಚರಿಸಬೇಕೆಂದು ಪ್ರಕಟಣೆ ತಿಳಿಸಿದೆ.

The Animal Welfare Board of India has urged citizens to celebrate Holi responsibly without causing harm to animals and birds. The board advised avoiding colors, water balloons, loud noises, and ensuring pets remain safe indoors during celebrations.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್

the rural mirror news

ಇದನ್ನೂ ಓದಿ

ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ವಿರುದ್ಧ ಮಿಜೋರಾಂ ಸರ್ಕಾರದ ಕಠಿಣ ಕ್ರಮ : 468 ಪ್ರಕರಣ ದಾಖಲು
March 3, 2026
10:34 PM
by: ಮಿರರ್‌ ಡೆಸ್ಕ್
ಸುಸ್ಥಿರ ಕೃಷಿ ಮತ್ತು ‘ತ್ಯಾಜ್ಯದಿಂದ ಸಂಪತ್ತು’ ಮಾದರಿಗೆ ಐಸಿಎಆರ್ ಸಭೆಯಲ್ಲಿ ಒತ್ತು
March 3, 2026
9:51 PM
by: ಮಿರರ್‌ ಡೆಸ್ಕ್
ಅಡಿಕೆ ಮಾರುಕಟ್ಟೆ ಸುದ್ದಿ | ಅಡಿಕೆ ಧಾರಣೆ ಇಳಿಕೆಯಿಂದ ಸ್ಥಿರತೆಯತ್ತ ಮುಂದುವರಿಕೆ
March 3, 2026
2:15 PM
by: ದ ರೂರಲ್ ಮಿರರ್.ಕಾಂ
2030ರೊಳಗೆ 5 ಟ್ರಿಲಿಯನ್ ಆರ್ಥಿಕತೆ ಮೀರಿದ ರಾಷ್ಟ್ರವಾಗಲಿದೆ ಭಾರತ
March 3, 2026
9:53 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror