Advertisement
ಅನುಕ್ರಮ

ಈ ರೋಗಗಳು ಹೋಮಿಯೋಪತಿ ಚಿಕಿತ್ಸೆಯಿಂದ ಪರಿಹಾರವಾಗುತ್ತದಾ ? | ಡಾ. ಆದಿತ್ಯ ಇಲ್ಲಿ ಹೇಳುತ್ತಾರೆ…. |

Share

ಒಂದು ಮರದ ಕೊಂಬೆಗೆ ಏನಾದರೂ ಆಯಿತೆಂದು ಆ ಕೊಂಬೆಯನ್ನೇ ಕಡಿಯುವುದರಲ್ಲಿ ಏನು ಅರ್ಥ. ಅದರನ್ನು ಸರಿ ಪಡಿಸುವ ಮಾರ್ಗವಿದ್ದಲ್ಲಿ ಹಾಗೆಯೇ ಆರೋಗ್ಯ ಎನ್ನುವುದು. ದೇಹದ ಒಂದು ಭಾಗಕ್ಕೆ ಏನಾದರೂ ಆಯಿತೆಂದರೆ ಆ ಭಾಗವನ್ನೇ ಕತ್ತರಿಸುವುದರಲ್ಲೇನಿದೆ ಅರ್ಥ.

ರೋಗದ ಪ್ರತಿ ಲಕ್ಷಣವನ್ನು ನೋಡಿ ಅದರೊಡನೆ ಆ ವ್ಯಕ್ತಿಯಲ್ಲಿ ಆದ ಬದಲಾವಣೆಗಳನ್ನು ಗಮನಿಸಿ ಅದಕ್ಕೆ ಸೂಕ್ತವಾದ ಔಷಧಿ ಕೊಡುವುದರಿಂದ ಆ ಮನುಷ್ಯನಲ್ಲಿ ಆ ರೋಗದಿಂದಾದ ಬದಲಾವಣೆಯನ್ನು ಸರಿ ಪಡಿಸುವಲ್ಲಿ ಯಶಸ್ವಿಯಾದ ಆರೋಗ್ಯ ಪದ್ದತಿಯಲ್ಲಿ ಹೋಮಿಯೋಪತಿಯು ಒಂದು.

ಶೀಘ್ರಗುಣ ಹೊಂದುವ ಹಾಗು ದೀರ್ಘಕಾಲಿಕ ಎರಡು ತೆರನಾದ ರೋಗಗಳಲ್ಲಿ ಹೋಮಿಯೋಪತಿಯ ಚಿಕಿತ್ಸೆಯ ಅತ್ಯಂತ ಪರಿಣಾಮಕಾರಿಯಾಗಿದೆ. ಬೆಳೆಯುತ್ತಿರುವ ಮಕ್ಕಳಲ್ಲಿ ಸಾಮಾನ್ಯವಾಗಿ ಕಾಣುವ ರೋಗಗಳಾದ ವಾಂತಿ , ಭೇದಿ , ಜ್ವರ , ನ್ಯುಮೋನಿಯ , ಅಲರ್ಜಿ ,ದಡಾರ , ಮಕ್ಕಳಲ್ಲಿ ಕಿರಿಕಿರಿ , ರಜ್ಜೆ ಕಡಿಯುವುದು , ನಿದ್ರಾಹೀನತೆ , ಅತಿಯಾಗಿ ಉದ್ವೇಗಕ್ಕೊಳಕಾಗುವುದು ಇತ್ಯಾದಿ ರೋಗಗಳಲ್ಲಿ ಪರಿಣಾಮಕಾರಿ . ಸಾಂಕ್ರಾಮಿಕ ರೋಗಗಳು , ಸ್ತ್ರೀ ರೋಗ , ಬಂಜೆತನ , ಮುಟ್ಟಿನ ತೊಂದರೆ (ಋತುಚಕ್ರದ ತೊಂದರೆ ) , ಗರ್ಭಕೋಶದ ಗಡ್ಡೆಗಳು , ಅಂಡಾಶಯದ ಸಮಸ್ಯೆ .
ಮಧುಮೇಹ , ಬಿಪಿ , ಹೊಟ್ಟೆಯುಬ್ಬರ , ಗ್ಯಾಸ್ಟ್ರಿಕ್ , ಗಂಟುಗಳ ಸವೆತ , ಮೂಳೆ ಯೂತ ,ದೀರ್ಘ ಕಾಲಿಕ ತೆಲೆನೋವು , ಅಸ್ತಮಾ , ಬೊಜ್ಜುತನ ಉತ್ಯಾದಿ ರೋಗಗಳಲ್ಲಿಯೂ ಅತ್ಯಂತ ಪರಿಣಾಮಕಾರಿಯಾಗಿದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಅತ್ಯಂತ ಹೆಚ್ಚು ಪರಿಣಾಮಕಾರಿಯಾಗಿದೆ. ಕೊರೋನಾದ ಸಮಯದಲ್ಲಿ ಅತ್ಯಂತ ಹೆಚ್ಚಿನ ಪರಿಣಾಮವನ್ನು ಎಲ್ಲರೂ ಗಳಿಸಿಕೊಂಡಿರುತ್ತಾರೆ.ಇಷ್ಟೆಲ್ಲ ಕಾಯಿಲೆಗಳಿಗೆ ಪರಿಣಾಮ ಪಡೆಯುತ್ತಿದ್ದರು ಕೆಲವೊಂದು ಪ್ರಶ್ನೆಗಳಿಗೆ ಇನ್ನು ಕೇಳಿ ಬರುತ್ತಲೇ ಇದೆ .

  • ಹೋಮಿಯೋಪತಿ ಮದ್ದು ತೆಗೆದುಕೊಳ್ಳುವಾಗ ಬೇರೆ ಮದ್ದು ತೆಗೆದುಕೊಳ್ಳಬಹುದೇ ?

ಖಂಡಿತವಾಗಿ ತೆಗೆದುಕೊಳ್ಳಬಹುದು,ಹೋಮಿಯೋಪತಿ ಔಷಧಿ  ಬೇರೆ ವೈದ್ಯ ಪದ್ದತಿಯ ಮದ್ದು ತೆಗೆದುಕೊಳ್ಳುವ ವಿಧಾನವನ್ನು ವೈದ್ಯರ ಮಾರ್ಗಸೂಚಿಯೊಂದಿಗೆ ಪಡೆದುಕೊಳ್ಳಿ. ಹೋಮಿಯೋಪತಿಯು ಕೆಲವು ಗಿಡ ಮೂಲಿಕೆ , ಬೇರು , ಸಸ್ಯ , ಪ್ರಾಣಿ , ಕೀಟ ಇತ್ಯಾದಿಗಳಿಂದ ಮಾಡಲ್ಪಟ್ಟಿದೆ, ಈ ಔಷದಿ ಬೇರೆ ಔಷದಿಯೊಡನೆ ಬೆರೆಯುವುದಿಲ್ಲ. ಇದರಿಂದಾಗಿ ನೀವು ಔಷದಿ ಸೇವನೆ ಮಾಡುತ್ತಿದ್ದರು ಇದನ್ನು ಸೇವನೆ ಮಾಡುವುದರಲ್ಲಿ ಯಾವುದೇ ಅಡ್ಡಿಯಿಲ್ಲ.

  • ಹೋಮಿಯೋಪತಿ ನಿಧಾನ ಅಲ್ವಾ ?

ಖಾಯಿಲೆಯ ಮೇಲೆ ಹೊಂದಿಕೊಳ್ಳುತ್ತದೆ. ಕೆಲವು ತೀವ್ರ ರೋಗ (Acute Disease ) ಅಂತಹ ರೋಗಗಳು ಅತೀ ವೇಗವಾಗಿ ಕಡಿಮೆಯಾಗುತ್ತದೆ ಬೇರೆ ವೈದ್ಯ ಪದ್ಧತಿಗಳಂತೆಯೇ. Chronic disease ಗಳು ಅಂದರೆ ಅಸ್ತಮಾ ಗ್ಯಾಸ್ಟ್ರಿಕ್ ಮತ್ತಿತರ ಖಾಯಿಲೆಗಳು ಕೊಂಚ ಸಮಯ ತೆಗೆದುಕೊಳ್ಳುತ್ತದೆ.ಕಡಿಮೆಯಾಗುವುದು ಖಾಯಿಲೆಗಳ ಮೇಲೆ ಹೊಂದಿಕೊಂಡಿರುತ್ತದೆ ಮತ್ತು ಕಡಿಮೆಯಾಗುವಾಗ ಕಾಯಿಲೆಗಳು ಮೂಲದಿಂದ ತೆಗಯುವುದರಲ್ಲಿ ಯಶಸ್ವಿಯಾಗುತ್ತದೆ. ಹಾಗೆಂದ ಮಾತ್ರಕ್ಕೆ ನಿಧಾನವೆಂದೇನಲ್ಲ.

  • ಪ್ರಾಣಿಗಳಿಗೆ ಹೋಮಿಯೋಪತಿ ಮದ್ದು ಕೊಡಬಹುದೇ ? ಮತ್ತು ಪರಿಣಾಮಕಾರಿಯಾಗಿದೆಯೇ ?

ಪ್ರಾಣಿಗಳಿಗೆ ಅತ್ಯಂತ ಉತ್ತಮ .ಹೆಚ್ಚಿನ ಸಮಸ್ಯೆಗಳಾದಂತಹ ಕೆಚ್ಚಲುಬಾವು (Mastitis) ಕರು ಹಾಕಿದಮೇಲೆ ಕಸ ಹೊರತೆಗೆಯಲು , ಸುಲಭ ಕರುವಿನ ಜನನಕ್ಕೆ , ದನದಲ್ಲಾಗುವ ಕಫಕ್ಕೆ.ಸಾಂಕ್ರಾಮಿಕ ರೋಗಗಳಿಗೆ ಮತ್ತಿತರ ಕಾಯಿಲೆಗಳಿಗೆ ಹೆಚ್ಚಿನ ಪರಿಣಾಮಕಾರಿಯಾಗಿದೆ. ಹಾಗೆಯೇ ಕುರಿ, ಆಡು , ಕೋಳಿ ಮತ್ತಿತರ ಪ್ರಾಣಿಗಳಿಗೂ ಉಪಯುಕ್ತವಾಗಿದೆ.

  • ಹೋಮಿಯೋಪತಿ ಮದ್ದು ತೆಗೆದು ಕೊಂಡರೆ ಅಡ್ಡ ಪರಿಣಾಮ ಇದೆಯಾ ?

ಯಾವುದೇ ತರಹವಾದ ಅಡ್ಡ ಪರಿಣಾಮವಿಲ್ಲ ,ಆದರೆ ಮದ್ದನ್ನು ಸ್ವೀಕರಿಸುವಾಗ ವೈದ್ಯರಲ್ಲಿ ಅವರ ಮಾರ್ಗ ದರ್ಶನದಂತೆ ತೆಗೆದುಕೊಂಡರೆ ಉತ್ತಮ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಡಾ.ಆದಿತ್ಯ ಭಟ್‌, ಚಣಿಲ, BHMS

ಹೋಮಿಯೋಪತಿ ವೈದ್ಯರು ಶ್ರೀ ಹೋಮಿಯೋ ಕೇರ್‌, ಕುಕ್ಕೆಸುಬ್ರಹ್ಮಣ್ಯ Ph: 8073052529

Published by
ಡಾ.ಆದಿತ್ಯ ಭಟ್‌, ಚಣಿಲ, BHMS

Recent Posts

ಕೊಂಬೆಯಲ್ಲ, ಕಾಂಡದಲ್ಲೇ ಗೊಂಚಲು ಗೊಂಚಲಾಗಿ ಹಣ್ಣು! ಪಶ್ಚಿಮ ಘಟ್ಟದ ಅಪರೂಪದ ‘ಕೋಳಿಜುಟ್ಟು’ ಹಣ್ಣಿನ ಕಥೆ

ಪಶ್ಚಿಮ ಘಟ್ಟದ ಅಪರೂಪದ ಕೋಳಿಜುಟ್ಟು ಕಾಡು ಹಣ್ಣು ಇದೀಗ ರೈತರ ತೋಟಗಳಲ್ಲೂ ಫಲ…

2 hours ago

ಕಾಡು ಹಣ್ಣು…. ಕೋಳಿ ಜುಟ್ಟು ಹಣ್ಣು…!

ಪಶ್ಚಿಮ ಘಟ್ಟದ ಅಪರೂಪದ ಕೋಳಿಜುಟ್ಟು ಹಣ್ಣು ಕಾಂಡದ ಮೇಲೆಯೇ ಗೊಂಚಲು ಗೊಂಚಲಾಗಿ ಬೆಳೆಯುವ…

4 hours ago

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಒಡಿಶಾದಲ್ಲಿ ಭಾರಿ ಮಳೆ, ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ಒಡಿಶಾದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ…

13 hours ago

ಭರ್ತಿಯಾಗುವ ಹಂತಕ್ಕೆ ಆಲಮಟ್ಟಿ ಜಲಾಶಯ – 114.896 ಟಿಎಂಸಿ ನೀರು ಸಂಗ್ರಹ, 73 ಸಾವಿರ ಕ್ಯೂಸೆಕ್ ಒಳಹರಿವು

ಆಲಮಟ್ಟಿ ಕೃಷ್ಣಾ ಜಲಾಶಯದಲ್ಲಿ 114.896 ಟಿಎಂಸಿ ನೀರು ಸಂಗ್ರಹವಾಗಿದ್ದು, ಜಲಾಶಯ ಭರ್ತಿಯಾಗಲು ಕೆಲವೇ…

13 hours ago

ಹವಾಮಾನ ವರದಿ | 28-07-2026 | ಕರಾವಳಿ, ಮಲೆನಾಡಿನಲ್ಲಿ ಸಾಮಾನ್ಯ ಮಳೆ ಮುಂದುವರಿಕೆ

ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಬಿಟ್ಟುಬಿಟ್ಟು ಮಳೆ ಮುಂದುವರಿಯುವ…

13 hours ago

ಮಳೆ ಕೊರತೆ ತೀವ್ರ – ಬೆಂಗಳೂರು ಗ್ರಾಮಾಂತರದಲ್ಲಿ ಕೇವಲ ಶೇ. 3 ಬಿತ್ತನೆ; ನೀರಿನ ಬಳಕೆಗೆ ಕಟ್ಟುನಿಟ್ಟಿನ ಕ್ರಮ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇಕಡಾ 66 ರಷ್ಟು ಮಳೆ ಕೊರತೆಯಿಂದ ಕೇವಲ ಶೇ.…

18 hours ago