Advertisement
ಅಂಕಣ

ಪ್ರಾಮಾಣಿಕತೆ‌ ಎಂಬ ಅತ್ಯುತ್ತಮ ನೀತಿ | ಅರ್ಜುನ್‌ ಬಾಳಿಗಾ ಬರೆಯುತ್ತಾರೆ….

Share

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಲು ಬಹಳಷ್ಟು ಪ್ರಯತ್ನ ಹಾಗೂ ಕೌಶಲ್ಯವು ಅಗತ್ಯವಾಗಿದೆ. ಪ್ರಾಮಾಣಿಕತೆಯಿಂದ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವೇ ಎಂಬ ಪ್ರಶ್ನೆ ನಿಮಗೆ ಬಂದಿರಬಹುದು. ಪ್ರಾಮಾಣಿಕವಾದ ಜನರು ಸಂತೋಷವಾಗಿರುತ್ತಾರೆ ಹಾಗೂ ಯಶಸ್ವಿಯಾಗುತ್ತಾರೆ ಎಂಬ ವಿಷಯ ಇಂದಿಗೂ ಪ್ರಸ್ತುತವಾಗಿದೆ.

Advertisement
Advertisement

ಪ್ರಾಮಾಣಿಕತೆಯೇ ಅತ್ಯುತ್ತಮ ನೀತಿ ((“Honesty is a best policy”) ”) ಎಂಬ ನುಡಿಗಟ್ಟನ್ನು ಅಳವಡಿಸಿಕೊಂಡಿರುವ ಹಲವರನ್ನು ನೀವು ಕಂಡಿರಬಹುದು. ಪ್ರಾಮಾಣಿಕತೆಯು ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಹಾಗೂ ನೈತಿಕ ಗುಣವನ್ನು ಅಭಿವೃದ್ಧಿಪಡಿಸುತ್ತದೆ.

Advertisement

ಪ್ರಾಮಾಣಿಕತೆ  ಶಿಸ್ತು,ಸತ್ಯ ಹಾಗೂ ನೈತಿಕ ಸಮಗ್ರತೆಗಳಂತಹ ಲಕ್ಷಣಗಳನ್ನುಅಭಿವೃದ್ಧಿಪಡಿಸಲು ಸಹಾಯಪಡಿಸುತ್ತದೆ. ಪ್ರಾಮಾಣಿಕತೆ ನಿಮ್ಮ ಒಡನಾಡಿಗಳ ಸಂಬಂಧ ಹಾಗೂ ವಿಶ್ವಾಸವನ್ನು ಬಲಪಡಿಸುತ್ತದೆ. ಪ್ರಾಮಾಣಿಕತೆಯು ಸ್ನೇಹ ಹಾಗೂ ಬಾಂಧವ್ಯಗಳನ್ನು ಶಾಶ್ವತಗೊಳಿಸುತ್ತದೆ.

ಟಾಟಾ ಸಮೂಹ ಸಂಸ್ಥೆಯ ಅಡಿಯಲ್ಲಿ ಹಲವಾರು ಕೈಗಾರಿಕೆಗಳನ್ನು ಟಾಟಾರವರು ಸ್ಥಾಪಿಸಿದರು. ಒಮ್ಮೆ ಇವರು ತಮ್ಮ ವಿವಿಧ ಕಂಪನಿಗಳ ಲೆಕ್ಕಪರಿಶೋಧಕರ ಒಂದು ಮುಖಾಮುಖಿ ಚರ್ಚೆ ನಡೆಸಿದರು ಸಂಪನ್ಮೂಲ ಹೆಚ್ಚಿಸಲು ಸಲಹೆ ಸೂಚನೆಗಳನ್ನು ನೀಡಲು ಕೇಳಿದರು. ಆಗ ಒಬ್ಬ ಹೇಳಿದ – ನಾವು ನಮ್ಮ ಲೆಕ್ಕಪತ್ರದಲ್ಲಿ ಹೀಗೊಂದು ವ್ಯತ್ಯಾಸ ಮಾಡಿದ್ದಾರೆ ಸಂಪನ್ಮೂಲ ಹೆಚ್ಚಿಸಲು ಸಾಧ್ಯ. ಆಗ ಟಾಟಾರವರು ಇದು ನ್ಯಾಯ ಸಮ್ಮತವಾಗಿದ್ದರೂ ನೈತಿಕವಾಗಿ ಸರಿಯಿದೆಯೇ ಎಂದು ವಿಚಾರಿಸಿ, ಈ ನಿರ್ಧಾರವನ್ನು ತಿರಸ್ಕರಿಸುತ್ತಾರೆ.

Advertisement

ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕರಾದ ರಾಹುಲ್ ಡ್ರಾವಿಡ್  ಅವರನ್ನು ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಗೆ ನಾಮನಿರ್ದೇಶನ ಮಾಡಿತು. ಆದರೆ ಅವರು ಅದನ್ನು ನಯವಾಗಿ ತಿರಸ್ಕರಿಸಿದರು. ಅವರು ಗೌರವ ಪದವಿಗಿಂತ ಹೆಚ್ಚಾಗಿ ಸಂಶೋಧನೆಯ ಮೂಲಕ ಡಾಕ್ಟರೇಟ್‌ ಗಳಿಸಲು ಬಯಸಿದರು ಎಂಬ ಕಾರಣ ಬಹಳ ವಿಶಾಲವಾಗಿತ್ತು.

Advertisement

ಬಾಬಿ ಜೋನ್ಸ್ ಒಂದು ಶತಮಾನದ ಹಿಂದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಗಾಲ್ಫ್‌ ಪಂದ್ಯಗಳನ್ನು ಆಡಿದ ಆಟಗಾರರಾಗಿದ್ದರು. ಅವರು ತಮ್ಮ ಪ್ರಾಮಾಣಿಕತೆ ಹಾಗೂ ಕ್ರೀಡಾಮನೋಭಾವಕ್ಕೆ ಹೆಸರಾಗಿದ್ದರು. 1925 ರ ಬೋಸ್ಟನ್ ಯುಎಸ್ ಓಪನ್‌ ನಲ್ಲಿ  ಅವರು ತಮ್ಮ ಚೆಂಡನ್ನು11 ನೇ ರಂದ್ರದಲ್ಲಿ ಹೊಡೆದರು.

ಅದಾಗ್ಯೂ ಅವರು ತಮ್ಮ ಪಂದ್ಯದ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಅಧಿಕಾರಿಗಳಿಗೆ ತಿಳಿಸಿದರು. ಆದರೆ ಅವರು ಒಪ್ಪಲಿಲ್ಲ ಅವರು ದೃಢವಾಗಿಯೇ ಉಳಿದರು ಹಾಗೂ ಅದೇ ಅಂತರದಿಂದ ಪಂದ್ಯವನ್ನು ಕಳೆದುಕೊಂಡರು.

Advertisement

ಕ್ರೀಡಾಬರಹಗಾರರು ಅವರ ಪ್ರಾಮಾಣಿಕತೆಯನ್ನು ಮೆಚ್ಚುಗೆ  ವ್ಯಕ್ತಪಡಿಸಿದರು. ನೀವು ವೈಫಲ್ಯಕ್ಕೆ ಹೆದರಬೇಡಿ ಹಾಗೂ ಪ್ರಾಮಾಣಿಕತೆಯಿಂದ ವರ್ತಿಸುವ ಜನರು ಸಂತೋಷದಿಂದ ಇರುತ್ತಾರೆ ಎಂಬ ನೀತಿಯನ್ನು ಈ ಸಣ್ಣ ಕಥೆಯು ತಿಳಿಸುತ್ತದೆ.

Advertisement

ಲಾಲ್ ಬಹದ್ದೂರ್‌ ಶಾಸ್ತ್ರಿಯವರು ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವಾಗ ಅವರು ಜವಳಿ ಗಿರಣಿಗೆ ಹೋಗಿದ್ದರು. ಅವರು ತಮ್ಮ ಹೆಂಡತಿಗಾಗಿ ಕೆಲವು ಸೀರೆಗಳನ್ನು ತೋರಿಸಲು ಗಿರಣಿ ಮಾಲೀಕರನ್ನು ವಿನಂತಿಸಿದರು. ಮಾಲೀಕರು ಕೆಲವು ಸೊಗಸಾದ ಸೀರೆಗಳನ್ನು ತೋರಿಸಿದರು ಶಾಸ್ತ್ರಿಯವರು ಬೆಲೆಗಳನ್ನು ಕೇಳಿದಾಗ ಅವರು ತುಂಬಾ ದುಬಾರಿ ಎಂದುಕೊಂಡರು. ಕಡಿಮೆ ಬೆಲೆಗೆ ಸೀರೆಕೊಡಿ ಎಂದು ಕೇಳಿದರು.

Advertisement

ಮಾಲೀಕರು ಕಡಿಮೆ ದರದ ಸೀರೆಗಳನ್ನು ತೋರಿಸಿದರು ಆದರೆ ಶಾಸ್ತ್ರಿಯವರಿಗೆ ಇದು ಕೂಡ ದುಬಾರಿಯಾಗಿ ಕಾಣಿಸಿತು ಮಾಲಿಕರು ಆಶ್ಚರ್ಯ ಚಕಿತರಾದರು ಮತ್ತು ಅವರು ಭಾರತದ ಪ್ರಧಾನಿಯಾಗಿರುವುದರಿಂದ ಸೀರೆಗಳನ್ನು ಉಡುಗೊರೆಯಾಗಿ ನೀಡುವುದು ಅವರ ಭಾಗ್ಯ ಎಂದರು. ಇದಕ್ಕೆ ಉತ್ತರಿಸಿದ ಶಾಸ್ತ್ರಿಯವರು ಅಂತಹ ದುಬಾರಿ ಉಡುಗೊರೆಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ ಮತ್ತು ತಮಗೆ ಖರೀದಿಸಬಹುದಾದ ಸೀರೆಗಳನ್ನು ಮಾತ್ರ ತೆಗೆದುಕೊಳ್ಳುತ್ತಾರೆ.

Advertisement

ಯಶಸ್ಸು ಬಂದು ಹೋಗುತ್ತದೆ ಆದರೆ ಪ್ರಾಮಾಣಿಕತೆ ವ್ಯಕ್ತಿಯೊಡನೆ ಶಾಶ್ವತವಾಗಿರುವ ಗುಣ. ಸಮಗ್ರತೆ ಎಂದರೆ ಎಲ್ಲಾ ಸಮಯಗಳಲ್ಲಿಯೂ ಸರಿಯಾದ ಕೆಲಸವನ್ನೇ ಮಾಡುವುದು. ಅಪ್ರಮಾಣಿಕತೆ ತ್ವರಿತದಲ್ಲಿ  ತೃಪ್ತಿ ನೀಡಬಹುದು ಆದರೆ ಅದು ಎಂದಿಗೂ ಶಾಶ್ವತವಾಗಿರುವುದಿಲ್ಲ ಸತ್ಯ ಹಾಗೂ ಪ್ರಾಮಾಣಿಕತೆಯನ್ನು ಪಾಲಿಸಿದಲ್ಲಿ ಶ್ರೇಷ್ಠ ಗೆಲುವು ನಿಮ್ಮದಾಗುತ್ತದೆ.

# ಅರ್ಜುನ್‌ ಬಾಳಿಗಾ, ( ಸಾಫ್ಟ್‌ವೇರ್ ಮತ್ತು ಕ್ಲೌಡ್ ಎಂಜಿನಿಯರ್. ಮೈಕ್ರೋಸಾಫ್ಟ್, ಬೆಂಗಳೂರು.)

Advertisement

ಅರ್ಜುನ್‌ ಬಾಳಿಗಾ, ಬೆಂಗಳೂರು

Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ

ಮೇ 6 ರಿಂದ ಕೊಡಗು ಹಾಗೂ ದಕ್ಷಿಣ ಕರಾವಳಿ, ಚಿಕ್ಕಮಗಳೂರು ಭಾಗಗಳಲ್ಲಿ ಮತ್ತೆ…

16 hours ago

ಕೊಕೋ ಧಾರಣೆ ಇಳಿಕೆ | ಒಮ್ಮೆಲೇ ಕುಸಿತ ಕಂಡ ಕೊಕೋ ಧಾರಣೆ |

ಕೊಕೋ ಧಾರಣೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.

18 hours ago

ಮಳೆಯ ಜೊತೆಗೆ ಮಲೆನಾಡಲ್ಲಿ ಸಿಡಿಲಬ್ಬರ | ಸುಬ್ರಹ್ಮಣ್ಯದಲ್ಲಿ ಯುವಕ ಬಲಿ | ಮಡಿಕೇರಿಯಲ್ಲಿ ಕಾರ್ಮಿಕ ಗಂಭೀರ |

ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಸುಳ್ಯ,ಕಡಬ ತಾಲೂಕಿನ  ಘಟ್ಟದ ತಪ್ಪಲಿನ ಪ್ರದೇಶದಲ್ಲಿ ಗುಡುಗು ಸಿಡಿಲು…

1 day ago

ವೆದರ್‌ ಮಿರರ್‌ | 03.05.2024 |ಮೇ. 4ರಿಂದ ಮೋಡ| ಮೇ.6 ರಿಂದ ಅಲ್ಲಲ್ಲಿ ಮಳೆ ನಿರೀಕ್ಷೆ

04.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…

2 days ago

ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |

03.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…

3 days ago

ಬಿದಿರು ಕೃಷಿ | ತರಕಾರಿ ಕೃಷಿಯಾಗಿ ಬಿದಿರು

ಬಿದಿರು ಕೃಷಿಯ ಬಗ್ಗೆ ಈಗ ಸಾಕಷ್ಟು ಅಧ್ಯಯನ ನಡೆಯುತ್ತಿದೆ. ಈ ನಡುವೆ ಪುತ್ತೂರು…

3 days ago