Advertisement
ಅನುಕ್ರಮ

ಪ್ರಾಮಾಣಿಕತೆ‌ ಎಂಬ ಅತ್ಯುತ್ತಮ ನೀತಿ | ಅರ್ಜುನ್‌ ಬಾಳಿಗಾ ಬರೆಯುತ್ತಾರೆ….

Share

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಲು ಬಹಳಷ್ಟು ಪ್ರಯತ್ನ ಹಾಗೂ ಕೌಶಲ್ಯವು ಅಗತ್ಯವಾಗಿದೆ. ಪ್ರಾಮಾಣಿಕತೆಯಿಂದ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವೇ ಎಂಬ ಪ್ರಶ್ನೆ ನಿಮಗೆ ಬಂದಿರಬಹುದು. ಪ್ರಾಮಾಣಿಕವಾದ ಜನರು ಸಂತೋಷವಾಗಿರುತ್ತಾರೆ ಹಾಗೂ ಯಶಸ್ವಿಯಾಗುತ್ತಾರೆ ಎಂಬ ವಿಷಯ ಇಂದಿಗೂ ಪ್ರಸ್ತುತವಾಗಿದೆ.

ಪ್ರಾಮಾಣಿಕತೆಯೇ ಅತ್ಯುತ್ತಮ ನೀತಿ ((“Honesty is a best policy”) ”) ಎಂಬ ನುಡಿಗಟ್ಟನ್ನು ಅಳವಡಿಸಿಕೊಂಡಿರುವ ಹಲವರನ್ನು ನೀವು ಕಂಡಿರಬಹುದು. ಪ್ರಾಮಾಣಿಕತೆಯು ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಹಾಗೂ ನೈತಿಕ ಗುಣವನ್ನು ಅಭಿವೃದ್ಧಿಪಡಿಸುತ್ತದೆ.

ಪ್ರಾಮಾಣಿಕತೆ  ಶಿಸ್ತು,ಸತ್ಯ ಹಾಗೂ ನೈತಿಕ ಸಮಗ್ರತೆಗಳಂತಹ ಲಕ್ಷಣಗಳನ್ನುಅಭಿವೃದ್ಧಿಪಡಿಸಲು ಸಹಾಯಪಡಿಸುತ್ತದೆ. ಪ್ರಾಮಾಣಿಕತೆ ನಿಮ್ಮ ಒಡನಾಡಿಗಳ ಸಂಬಂಧ ಹಾಗೂ ವಿಶ್ವಾಸವನ್ನು ಬಲಪಡಿಸುತ್ತದೆ. ಪ್ರಾಮಾಣಿಕತೆಯು ಸ್ನೇಹ ಹಾಗೂ ಬಾಂಧವ್ಯಗಳನ್ನು ಶಾಶ್ವತಗೊಳಿಸುತ್ತದೆ.

ಟಾಟಾ ಸಮೂಹ ಸಂಸ್ಥೆಯ ಅಡಿಯಲ್ಲಿ ಹಲವಾರು ಕೈಗಾರಿಕೆಗಳನ್ನು ಟಾಟಾರವರು ಸ್ಥಾಪಿಸಿದರು. ಒಮ್ಮೆ ಇವರು ತಮ್ಮ ವಿವಿಧ ಕಂಪನಿಗಳ ಲೆಕ್ಕಪರಿಶೋಧಕರ ಒಂದು ಮುಖಾಮುಖಿ ಚರ್ಚೆ ನಡೆಸಿದರು ಸಂಪನ್ಮೂಲ ಹೆಚ್ಚಿಸಲು ಸಲಹೆ ಸೂಚನೆಗಳನ್ನು ನೀಡಲು ಕೇಳಿದರು. ಆಗ ಒಬ್ಬ ಹೇಳಿದ – ನಾವು ನಮ್ಮ ಲೆಕ್ಕಪತ್ರದಲ್ಲಿ ಹೀಗೊಂದು ವ್ಯತ್ಯಾಸ ಮಾಡಿದ್ದಾರೆ ಸಂಪನ್ಮೂಲ ಹೆಚ್ಚಿಸಲು ಸಾಧ್ಯ. ಆಗ ಟಾಟಾರವರು ಇದು ನ್ಯಾಯ ಸಮ್ಮತವಾಗಿದ್ದರೂ ನೈತಿಕವಾಗಿ ಸರಿಯಿದೆಯೇ ಎಂದು ವಿಚಾರಿಸಿ, ಈ ನಿರ್ಧಾರವನ್ನು ತಿರಸ್ಕರಿಸುತ್ತಾರೆ.

ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕರಾದ ರಾಹುಲ್ ಡ್ರಾವಿಡ್  ಅವರನ್ನು ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಗೆ ನಾಮನಿರ್ದೇಶನ ಮಾಡಿತು. ಆದರೆ ಅವರು ಅದನ್ನು ನಯವಾಗಿ ತಿರಸ್ಕರಿಸಿದರು. ಅವರು ಗೌರವ ಪದವಿಗಿಂತ ಹೆಚ್ಚಾಗಿ ಸಂಶೋಧನೆಯ ಮೂಲಕ ಡಾಕ್ಟರೇಟ್‌ ಗಳಿಸಲು ಬಯಸಿದರು ಎಂಬ ಕಾರಣ ಬಹಳ ವಿಶಾಲವಾಗಿತ್ತು.

ಬಾಬಿ ಜೋನ್ಸ್ ಒಂದು ಶತಮಾನದ ಹಿಂದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಗಾಲ್ಫ್‌ ಪಂದ್ಯಗಳನ್ನು ಆಡಿದ ಆಟಗಾರರಾಗಿದ್ದರು. ಅವರು ತಮ್ಮ ಪ್ರಾಮಾಣಿಕತೆ ಹಾಗೂ ಕ್ರೀಡಾಮನೋಭಾವಕ್ಕೆ ಹೆಸರಾಗಿದ್ದರು. 1925 ರ ಬೋಸ್ಟನ್ ಯುಎಸ್ ಓಪನ್‌ ನಲ್ಲಿ  ಅವರು ತಮ್ಮ ಚೆಂಡನ್ನು11 ನೇ ರಂದ್ರದಲ್ಲಿ ಹೊಡೆದರು.

ಅದಾಗ್ಯೂ ಅವರು ತಮ್ಮ ಪಂದ್ಯದ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಅಧಿಕಾರಿಗಳಿಗೆ ತಿಳಿಸಿದರು. ಆದರೆ ಅವರು ಒಪ್ಪಲಿಲ್ಲ ಅವರು ದೃಢವಾಗಿಯೇ ಉಳಿದರು ಹಾಗೂ ಅದೇ ಅಂತರದಿಂದ ಪಂದ್ಯವನ್ನು ಕಳೆದುಕೊಂಡರು.

ಕ್ರೀಡಾಬರಹಗಾರರು ಅವರ ಪ್ರಾಮಾಣಿಕತೆಯನ್ನು ಮೆಚ್ಚುಗೆ  ವ್ಯಕ್ತಪಡಿಸಿದರು. ನೀವು ವೈಫಲ್ಯಕ್ಕೆ ಹೆದರಬೇಡಿ ಹಾಗೂ ಪ್ರಾಮಾಣಿಕತೆಯಿಂದ ವರ್ತಿಸುವ ಜನರು ಸಂತೋಷದಿಂದ ಇರುತ್ತಾರೆ ಎಂಬ ನೀತಿಯನ್ನು ಈ ಸಣ್ಣ ಕಥೆಯು ತಿಳಿಸುತ್ತದೆ.

ಲಾಲ್ ಬಹದ್ದೂರ್‌ ಶಾಸ್ತ್ರಿಯವರು ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವಾಗ ಅವರು ಜವಳಿ ಗಿರಣಿಗೆ ಹೋಗಿದ್ದರು. ಅವರು ತಮ್ಮ ಹೆಂಡತಿಗಾಗಿ ಕೆಲವು ಸೀರೆಗಳನ್ನು ತೋರಿಸಲು ಗಿರಣಿ ಮಾಲೀಕರನ್ನು ವಿನಂತಿಸಿದರು. ಮಾಲೀಕರು ಕೆಲವು ಸೊಗಸಾದ ಸೀರೆಗಳನ್ನು ತೋರಿಸಿದರು ಶಾಸ್ತ್ರಿಯವರು ಬೆಲೆಗಳನ್ನು ಕೇಳಿದಾಗ ಅವರು ತುಂಬಾ ದುಬಾರಿ ಎಂದುಕೊಂಡರು. ಕಡಿಮೆ ಬೆಲೆಗೆ ಸೀರೆಕೊಡಿ ಎಂದು ಕೇಳಿದರು.

ಮಾಲೀಕರು ಕಡಿಮೆ ದರದ ಸೀರೆಗಳನ್ನು ತೋರಿಸಿದರು ಆದರೆ ಶಾಸ್ತ್ರಿಯವರಿಗೆ ಇದು ಕೂಡ ದುಬಾರಿಯಾಗಿ ಕಾಣಿಸಿತು ಮಾಲಿಕರು ಆಶ್ಚರ್ಯ ಚಕಿತರಾದರು ಮತ್ತು ಅವರು ಭಾರತದ ಪ್ರಧಾನಿಯಾಗಿರುವುದರಿಂದ ಸೀರೆಗಳನ್ನು ಉಡುಗೊರೆಯಾಗಿ ನೀಡುವುದು ಅವರ ಭಾಗ್ಯ ಎಂದರು. ಇದಕ್ಕೆ ಉತ್ತರಿಸಿದ ಶಾಸ್ತ್ರಿಯವರು ಅಂತಹ ದುಬಾರಿ ಉಡುಗೊರೆಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ ಮತ್ತು ತಮಗೆ ಖರೀದಿಸಬಹುದಾದ ಸೀರೆಗಳನ್ನು ಮಾತ್ರ ತೆಗೆದುಕೊಳ್ಳುತ್ತಾರೆ.

ಯಶಸ್ಸು ಬಂದು ಹೋಗುತ್ತದೆ ಆದರೆ ಪ್ರಾಮಾಣಿಕತೆ ವ್ಯಕ್ತಿಯೊಡನೆ ಶಾಶ್ವತವಾಗಿರುವ ಗುಣ. ಸಮಗ್ರತೆ ಎಂದರೆ ಎಲ್ಲಾ ಸಮಯಗಳಲ್ಲಿಯೂ ಸರಿಯಾದ ಕೆಲಸವನ್ನೇ ಮಾಡುವುದು. ಅಪ್ರಮಾಣಿಕತೆ ತ್ವರಿತದಲ್ಲಿ  ತೃಪ್ತಿ ನೀಡಬಹುದು ಆದರೆ ಅದು ಎಂದಿಗೂ ಶಾಶ್ವತವಾಗಿರುವುದಿಲ್ಲ ಸತ್ಯ ಹಾಗೂ ಪ್ರಾಮಾಣಿಕತೆಯನ್ನು ಪಾಲಿಸಿದಲ್ಲಿ ಶ್ರೇಷ್ಠ ಗೆಲುವು ನಿಮ್ಮದಾಗುತ್ತದೆ.

# ಅರ್ಜುನ್‌ ಬಾಳಿಗಾ, ( ಸಾಫ್ಟ್‌ವೇರ್ ಮತ್ತು ಕ್ಲೌಡ್ ಎಂಜಿನಿಯರ್. ಮೈಕ್ರೋಸಾಫ್ಟ್, ಬೆಂಗಳೂರು.)

ಅರ್ಜುನ್‌ ಬಾಳಿಗಾ, ಬೆಂಗಳೂರು

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

2050 ರ ವೇಳೆಗೆ ಭೂಕುಸಿತದ ಅಪಾಯ ಮತ್ತಷ್ಟು ಹೆಚ್ಚಳ : ಮಳೆ ತೀವ್ರತೆ, ನಗರೀಕರಣವೇ ಪ್ರಮುಖ ಕಾರಣ – ಅಧ್ಯಯನ

2050ರ ವೇಳೆಗೆ ಮಳೆಯ ತೀವ್ರತೆ ಮತ್ತು ನಗರೀಕರಣದ ಪರಿಣಾಮವಾಗಿ ಭಾರತದ ಹಲವು ಗುಡ್ಡ…

11 hours ago

ಅಕಾಲದ ಹಸಿವು, ಅಸಮಯದ ನಿದ್ದೆ ದೇಹದ ಯಂತ್ರ ಕೆಟ್ಟಿರುವ ಸಂಕೇತ : ರಾಘವೇಶ್ವರ ಶ್ರೀ

ಅಕಾಲದ ಹಸಿವು ಮತ್ತು ಅಸಮಯದ ನಿದ್ದೆ ದೇಹದ ಯಂತ್ರದಲ್ಲಿ ಸಮಸ್ಯೆಯ ಸಂಕೇತ ಎಂದು…

13 hours ago

ಮತ್ತೆ ಚುರುಕುಗೊಂಡ ಮಳೆ | ಸುಳ್ಯ ಮಲೆನಾಡು ಭಾಗದಲ್ಲಿ ಬೆಳಗ್ಗಿನಿಂದ ಧಾರಾಕಾರ ಮಳೆ

ಸುಳ್ಯ ತಾಲೂಕಿನ ಮಲೆನಾಡು ಭಾಗದಲ್ಲಿ ಎರಡು ದಿನಗಳ ವಿರಾಮದ ಬಳಿಕ ಮತ್ತೆ ಭಾರೀ…

13 hours ago

ದೇಶದ ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕದ ಮೊದಲು – 75.47% ಉತ್ಪಾದನೆ, 71.56% ವಿಸ್ತೀರ್ಣದಲ್ಲಿ ಅಡಿಕೆ ಬೆಳೆ

ದೇಶದ ಅಡಿಕೆ ಉತ್ಪಾದನೆ ಹಾಗೂ ಬೆಳೆ ವಿಸ್ತೀರ್ಣದಲ್ಲಿ ಕರ್ನಾಟಕವೇ ಅಗ್ರಸ್ಥಾನದಲ್ಲಿದೆ ಎಂದು ಕೇಂದ್ರ…

22 hours ago

ಕಳಪೆ ವಿದೇಶಿ ಅಡಿಕೆ ಆಮದು ನಿಯಂತ್ರಿಸಿ – ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ

ವಿದೇಶದಿಂದ ಕಳಪೆ ಅಡಿಕೆ ಆಮದು ನಿಯಂತ್ರಿಸಿ ದೇಶೀಯ ಅಡಿಕೆ ಬೆಳೆಗಾರರನ್ನು ರಕ್ಷಿಸುವಂತೆ ಸಂಸದ…

1 day ago

ಹವಾಮಾನ ವರದಿ | 04-08-2026 | ರಾಜ್ಯದಲ್ಲಿ ಆಗಸ್ಟ್‌ 12 ರವರೆಗೆ ಮಳೆ ಸಾಧ್ಯತೆ – ಮುಂಗಾರು ದುರ್ಬಲವಾಗುವ ಲಕ್ಷಣ

ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್‌ 12ರವರೆಗೆ ಬಿಟ್ಟುಬಿಟ್ಟು ಮಳೆಯಾಗುವ ಸಾಧ್ಯತೆ ಇದೆ. ಜಪಾನ್ ಸಮೀಪದ…

1 day ago