ಜೇನು ಸಾಕಣೆ ಹಾಗೂ ರಫ್ತು ಹೆಚ್ಚಿಸಲು “ಸಿಹಿ ಕ್ರಾಂತಿ” ಯೋಜನೆ

January 7, 2022
2:52 PM

ಜೇನುಸಾಕಣೆ ಹಾಗೂ ಸಂಬಂಧಿತ ಇತರ ಚಟುವಟಿಕೆಗಳನ್ನು ಉತ್ತೇಜಿಸುವ ದೃಷ್ಟಿಯಿಂದ  ಸಿಹಿ ಕ್ರಾಂತಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಜೇನುತುಪ್ಪದ ರಪ್ತು ಸಾಮರ್ಥ್ಯವನ್ನು ಹೆಚ್ಚಿಸಲು, ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳನ್ನು ಹೆಚ್ಚು ಮಾಡಲು  ರಫ್ತು ಅಭಿವೃದ್ಧಿ ಪ್ರಾಧಿಕಾರವು ಒತ್ತುನೀಡುತ್ತಿದೆ.

Advertisement

ಭಾರತವು 2020-21 ರಲ್ಲಿ 59,999 ಮೆಟ್ರಿಕ್ ಟನ್ ನೈಸರ್ಗಿಕ ಜೇನುತುಪ್ಪವನ್ನು ಉತ್ಪಾದಿಸಿದೆ. ಯುನೈಟೆಡ್ ಸ್ಟೇಟ್ಸ್ 44,881 ಮೆಟ್ರಿಕ್‌ ಟನ್ ಪ್ರಮುಖ ಪಾಲನ್ನು ತೆಗೆದುಕೊಂಡಿದೆ. ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಬಾಂಗ್ಲಾದೇಶ ಮತ್ತು ಕೆನಡಾ ಭಾರತೀಯ ಜೇನುತುಪ್ಪದ ಇತರ ಪ್ರಮುಖ ತಾಣಗಳಾಗಿವೆ. ಭಾರತವು ತನ್ನ ಮೊದಲ ಸಂಘಟಿತ ರಪ್ತುಗಳನ್ನು 1996-97 ರಲ್ಲಿ ಪ್ರಾರಂಭಿಸಿತು. ಮಾತ್ರವಲ್ಲದೇ 2020ರಲ್ಲಿ ವಿಶ್ವ ಜೇನು ರಪ್ತು 736,266.02 ಮೆಟ್ರಿಕ್ ಟನ್ ಆಗಿದೆ. ಜೇನು ಉತ್ಪಾದನೆ ಮತ್ತು ರಪ್ತು ಮಾಡುವ ದೇಶಗಳಲ್ಲಿ ಭಾರತವು ವಿಶ್ವದಲ್ಲಿ 8ನೇ ಹಾಗೂ 9ನೇ ಸ್ಥಾನವನ್ನು ಪಡೆದುಕೊಂಡಿದೆ.

Advertisement

ಭಾರತ ಸರ್ಕಾರವು ಮೂರು ವರ್ಷಗಳವರೆಗೆ ಅಂದರೆ 2020-21 ರಿಂದ 2022-23 ರವರೆಗೆ ರಾಷ್ಟ್ರೀಯ ಜೇನುಸಾಕಣೆ ಮತ್ತು ಹನಿಮಿಷನ್‌ಗಾಗಿ 500 ಕೋಟಿ ರೂ. , ಫೆಬ್ರವರಿ 2021 ರಲ್ಲಿ ಆತ್ಮನಿರ್ಭರ  ಭಾಗವಾಗಿ ಮಿಷನ್ ಘೋಷಿಸಲಾಯಿತು. ರಾಷ್ಟ್ರೀಯ ಜೇನುನೂಣ ಮಂಡಳಿ ಮೂಲಕ ಅನುಷ್ಠಾನಗೊಳಿಸುತ್ತಿರುವ ಸಿಹಿ ಕ್ರಾಂತಿಯ ಗುರಿಯನ್ನು ಸಾಧಿಸಲು ದೇಶದಲ್ಲಿ ವೈಜ್ಞಾನಿಕ ಜೇನುಸಾಕಣೆಯ ಒಟ್ಟಾರೆ ಪ್ರಚಾರ ಮತ್ತು ಅಭಿವೃದ್ಧಿಗೆ ಗುರಿಯಾಗಿದೆ. ಇದರ ಮುಖ್ಯ ಉದ್ದೇಶವೆಂದರೆ ದೇಶದಲ್ಲಿ ಜೇನುಸಾಕಣೆಯನ್ನು ಅಭಿವೃದ್ಧಿಪಡಿಸುವುದು, ಜೇನು ಸಮೂಹಗಳನ್ನು ಅಭಿವೃದ್ಧಿಪಡಿಸುವುದು, ಜೇನುತುಪ್ಪದ ಗುಣಮಟ್ಟ ಮತ್ತು ಉತ್ಪಾದಕತೆಯನ್ನು ಸುಧಾರಿಸುವುದು ಮತ್ತು ರಪ್ತುಗಳನ್ನು ಹೆಚ್ಚಿಸುವುದಾಗಿದೆ.

Advertisement
Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಅಡಿಕೆಗೆ ವ್ಯಾಪಕ ಕೊಳೆರೋಗ | ಹವಾಮಾನ ಆಧಾರಿತ  ಬೆಳೆವಿಮೆ ತಕ್ಷಣವೇ ಬಿಡುಗಡೆಗೆ ಕ್ರಮ ಕೈಗೊಳ್ಳಲು ಒತ್ತಾಯ
August 20, 2025
4:59 PM
by: The Rural Mirror ಸುದ್ದಿಜಾಲ
ಅಡಿಕೆ ಕೊಳೆರೋಗ ವ್ಯಾಪಕ | ಶೇ.50 ಕ್ಕಿಂತ ಅಧಿಕ ಪ್ರಮಾಣದ ಅಡಿಕೆ ಕೊಳೆರೋಗದಿಂದ ಹಾನಿ | ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಸಮೀಕ್ಷೆ | ಸೂಕ್ತ ಪರಿಹಾರಕ್ಕೆ ಒತ್ತಾಯ |
August 19, 2025
3:09 PM
by: ದ ರೂರಲ್ ಮಿರರ್.ಕಾಂ
ನ್ಯಾನೊ ಯೂರಿಯಾ ಬಳಕೆಯಿಂದ ಶೇಕಡಾ 80 ರಷ್ಟು ಇಳುವರಿ ಸಾಧ್ಯ
August 18, 2025
7:43 AM
by: The Rural Mirror ಸುದ್ದಿಜಾಲ
ದೇಶದ ಉತ್ಪನ್ನಗಳನ್ನು ಬಳಸಲು ರೈತರ ಸಂಕಲ್ಪ
August 16, 2025
11:17 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group