Advertisement
MIRROR FOCUS

ನೀರು, ಭೂಮಿ ಮತ್ತು ಮಂಜುಗಡ್ಡೆಯ ಮೇಲೆ ಚಲಿಸುತ್ತೆ ಹೋವರ್‌ಕ್ರಾಫ್ಟ್ ಬೋಟ್ | ತಮಿಳುನಾಡಿನಲ್ಲಿ ನಡೆಯಿತು ಯಶಸ್ವಿ ಪ್ರಯೋಗ | ಪ್ರಕೃತಿ ವಿಕೋಪ ಸಮಯದಲ್ಲಿಇದರ ಪಾತ್ರವೇನು..?

Share

ಪ್ರಕೃತಿಯ(Environment) ತಾರತಮ್ಯಕ್ಕೆ ಅನುಗುಣವಾಗಿ ಕೆಲವೊಂದು ಆವಿಷ್ಕಾರಗಳು(Invention) ಅತ್ಯಗತ್ಯ. ಪ್ರಕೃತಿ ವಿಕೋಪ(Environment disaster), ಜಲ ಪ್ರಳಯ, ಹಿಮಪಾತ(Snow fall) ಸಮಯದಲ್ಲಿ ಜನರನ್ನು ಕಾಪಾಡಲು ರಕ್ಷಣಾ ತಂಡಗಳು(Rescue team) ಇನ್ನಿಲ್ಲದ ಪ್ರಯಾಸವನ್ನು ಪಡುತ್ತವೆ. ಅವರಿಗೆ ಅನುಕೂಲವಾಗುವ ಕೆಲವು ಸಾಧನಗಳನ್ನು ಒದಗಿಸದಿದ್ದಲ್ಲಿ ಜನರನ್ನು ರಕ್ಷಿಸುವ ಕೆಲಸ ಬೇಗ ಹಾಗೂ ಸುರಕ್ಷಿತವಾಗಿ ನಡೆಯದು.

ಇದೀಗ ಈ ಮಟ್ಟಿನಲ್ಲಿ ಹೊಸ ಆವಿಷ್ಕಾರವೊಂದನ್ನು ಮಾಡಲಾಗಿದೆ. ನೀರು, ಭೂಮಿ, ಹಿಮದ ಮೇಲೆ ಚಲಿಸುವ ದೇಶದ ಮೊದಲ ಹೋವರ್‌ಕ್ರಾಫ್ಟ್ ಬೋಟ್(Hovercraft boat) ಜನ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ. ಯುರೋಟೆಕ್ ಪಿವೋಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ರೂಪಿಸಿರುವ ಈ ಬೋಟ್ ಅನ್ನು ತಮಿಳುನಾಡಿನ(Tamilnadu) ಕೆರೆಯೊಂದರಲ್ಲಿ(Lake) ಪರೀಕ್ಷೆ(test) ನಡೆಸಲಾಯಿತು. ಇದು ಗಂಟೆಗೆ 20 ರಿಂದ 25 ಕಿಮೀ ವೇಗದಲ್ಲಿ ಸಂಚಾರ ನಡೆಸಿದೆ.

ನೀರು ಮತ್ತು ಭೂಮಿಯ ಮೇಲೆ ಕಾರ್ಯಾಚರಣೆ ನಡೆಸಲು ಉದ್ದೇಶಿಸಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಹೋವರ್‌ಕ್ರಾಫ್ಟ್ `ಬೋಟ್ ಅನ್ನು ನಿರ್ಮಿಸಲಾಗಿದೆ. ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡದ ನೇತೃತ್ವದಲ್ಲಿ ಸೂಲೂರು ಎಂಬಲ್ಲಿನ ಚಿಕ್ಕ ಕೆರೆಯಲ್ಲಿ ಪ್ರಾಯೋಗಿಕ ಓಡಾಟ ನಡೆಸಲಾಯಿತು. ಹೋವರ್‌ಕ್ರಾಫ್ಟ್ ನೀರಿನ ಮೇಲೆ ನುಗ್ಗುತ್ತಿರುವುದನ್ನು ಜನರು ಅಸಕ್ತಿಯಿಂದ ವೀಕ್ಷಿಸಿದರು.

ಪ್ರವಾಹದ ವೇಳೆಯೂ ಬಳಕೆ: ಯೂರೋಟೆಕ್ ಸಲ್ಯೂಷನ್ಸ್‌ನ ವ್ಯವಸ್ಥಾಪಕ ನಿರ್ದೇಶಕಿ ಸುಪ್ರಿತಾ ಚಂದ್ರಶೇಖ‌ರ್ ಮಾತನಾಡಿ, ದೇಶದಲ್ಲಿಯೇ ಪ್ರಥಮ ಬಾರಿಗೆ ನೀರು ಮತ್ತು ಭೂಮಿಯಲ್ಲಿ ಕಾರ್ಯಾಚರಣೆ ನಡೆಸುವ ಹೋವರ್‌ಕ್ರಾಫ್ಟ್ ಬೋಟ್ ತಯಾರಿಸಿರುವುದು ಸಂತಸ ತಂದಿದೆ. ಸದ್ಯ ಪ್ರಾಯೋಗಿಕವಾಗಿ ನಡೆದ ಪರೀಕ್ಷೆ ಯಶಸ್ವಿಯಾಗಿದೆ. ಗಂಟೆಗೆ 20 ರಿಂದ 25 ಕಿಮೀ ವೇಗದಲ್ಲಿ ಬೋಟ್ ಚಲಿಸಿದೆ. ಇದಕ್ಕೆ ನೀರು, ಭೂಮಿ ಮತ್ತು ಹಿಮಭರಿತ ಪ್ರದೇಶಗಳಲ್ಲಿ ಗಂಟೆಗೆ 80 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಗಂಟೆಗೆ 100 ಕಿಮೀ ವೇಗದಲ್ಲಿ ಪ್ರಯಾಣಿಸುವ ಕ್ರಾಫ್ಟ್ ಬೋಟ್ ಅನ್ನು ಮುಂದೆ ವಿನ್ಯಾಸಗೊಳಿಸಲಾಗುತ್ತದೆ ಎಂದು ತಿಳಿಸಿದರು.

ಕೆನಡಾದ ಖಾಸಗಿ ಕಂಪನಿಯ ಸಹಯೋಗದಲ್ಲಿ ಸಿದ್ಧಪಡಿಸಲಾದ ಈ ರೋವರ್ ಕ್ರಾಫ್ಟ್ ಅನ್ನು ಚಂಡಮಾರುತ, ಪ್ರವಾಹ ಸೇರಿದಂತೆ ಪ್ರಕೃತಿ ವಿಕೋಪಕ್ಕೊಳಗಾದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗೆ ಬಳಸಬಹುದಾಗಿದೆ. ಜೊತೆಗೆ ಕರಾವಳಿ ಗಡಿ ರಕ್ಷಣೆ, ನೌಕಾಪಡೆಯ ಕಣ್ಣಾವಲು ಮತ್ತು ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ಅಗತ್ಯಗಳಿಗಾಗಿಯೂ ಬಳಸಬಹುದು. ಪ್ರತಿ ಗಂಟೆಗೆ ಸುಮಾರು 20 ರಿಂದ 25 ಲೀಟರ್ ಇಂಧನ ಇದಕ್ಕೆ ಖರ್ಚಾಗುತ್ತದೆ ಎಂದು ಮಾಹಿತಿ ನೀಡಿದರು.

ಸಾಮಾನ್ಯ ಹಡಗು ಮತ್ತು ಕ್ರಾಫ್ಟ್ ನಡುವಿನ ವ್ಯತ್ಯಾಸವೇನು?: ಸಾಮಾನ್ಯ ಹಡಗಿನ ಕೆಳಭಾಗ ನೀರಿನ ಮೇಲೆ ಮಾತ್ರ ಚಲಿಸುವಂತೆ ರೂಪಿಸಲಾಗಿರುತ್ತದೆ. ಆದರೆ, ಹೋವರ್‌ಕ್ರಾಫ್ಟ್‌ಗಳು ಹಲ್ (ಹಡಗು ಮುಂದೆ ಸಾಗುವ ಯಂತ್ರಗಳನ್ನು ಹೊಂದಿದ್ದು, ಅವುಗಳು ನೀರಿನ ಮೇಲೆ ದೋಣಿ ತೇಲುವಂತೆ ಮಾಡುತ್ತದೆ. ಜೊತೆಗೆ ನೀರನ್ನು ಸೀಳಿಕೊಂಡು ಹಡಗನ್ನು ಸಾಗಿಸುತ್ತದೆ. ಲಂಬವಾದ ಫ್ಯಾನ್‌ಗಳೊಂದಿಗೆ ಬೀಸಿದ ಗಾಳಿಯು ಹೋವರ್‌ಕ್ರಾಫ್ಟ್ ತೇಲುವಂತೆ ಮಾಡುತ್ತದೆ. ಏರ್ ಕುಶನ್ ಅನ್ನು ಸಾಮಾನ್ಯವಾಗಿ ಬಟ್ಟೆಯಿಂದ ತಯಾರಿಸಲಾಗಿರುತ್ತದೆ. ಇದು ಸಲೀಸಾಗಿ ನೀರು, ಭೂಮಿ ಮತ್ತು ಮಂಜುಗಡ್ಡೆಯಲ್ಲಿ ಕ್ರಾಫ್ಟ್ ಮುಂದೆ ಸಾಗಲು ಸಹಾಯ ಮಾಡುತ್ತದೆ ಹೋವ‌ರ್ ಕ್ರಾಫ್ಟ್ ಅನ್ನು ಸಾಮಾನ್ಯ ದೋಣಿಗಳಿಗಿಂತ ಹೆಚ್ಚು ವೇಗದಲ್ಲಿ” ಭೂಮಿ ಮೇಲೆ ಚಲಿಸುವ ಹಾಗೆ ಶಕ್ತಗೊಳಿಸಲಾಗಿರುತ್ತದೆ.

This hovercraft ``boat'' has been built at a cost of Rs 50 lakh to operate on water and land. A trial run was conducted in a small lake called Suluru under the leadership of fire brigade and rescue team. People watched disinterestedly as the hovercraft skimmed over the water.

– ಅಂತರ್ಜಾಲ ಮಾಹಿತಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕೃಷಿ ಮಾರುಕಟ್ಟೆ ವರದಿ | ಅಡಿಕೆ ಮಾರುಕಟ್ಟೆಯಲ್ಲಿ ಮಿಶ್ರ ಫಲ…!

ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಏರಿಳಿತ ಕಂಡುಬಂದಿದೆ. ಮಲೆನಾಡು ಮಾರುಕಟ್ಟೆಗಳಲ್ಲಿ ಸ್ವಲ್ಪ ಏರಿಕೆ…

1 hour ago

ನೈಸರ್ಗಿಕ ಕೃಷಿಯಿಂದ ರೈತರ ಆದಾಯ ಹೆಚ್ಚಳ

ಅಸ್ಸಾಂನಲ್ಲಿ ಐಸಿಎಆರ್–ಐಎಆರ್‌ಐ ಸಂಸ್ಥೆ “ನೈಸರ್ಗಿಕ ಕೃಷಿ” ವಿಷಯದಡಿ ಕಿಸಾನ್ ಮೇಳ 2026 ಆಯೋಜಿಸಿತು.…

2 hours ago

ಭಾರತದಲ್ಲಿ ಮಳೆಗಾಲದ ತೀವ್ರತೆ ಹೆಚ್ಚಳ | ತಾಪಮಾನ ಏರಿಕೆಯಿಂದ ‘ಸೂಪರ್ ಚಾರ್ಜ್’ ಆಗುತ್ತಿರುವ ಮಾರುತ

ಜಾಗತಿಕ ತಾಪಮಾನ ಏರಿಕೆಯಿಂದ ಭಾರತದಲ್ಲಿ ಮಾರುತ ಮಳೆಯ ತೀವ್ರತೆ ಹೆಚ್ಚುತ್ತಿರುವುದು ಹೊಸ ಅಧ್ಯಯನದಲ್ಲಿ…

6 hours ago

ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ವಿರುದ್ಧ ಮಿಜೋರಾಂ ಸರ್ಕಾರದ ಕಠಿಣ ಕ್ರಮ : 468 ಪ್ರಕರಣ ದಾಖಲು

ಮ್ಯಾನ್ಮಾರ್‌ನಿಂದ ಅಕ್ರಮ ಅಡಿಕೆ ಕಳ್ಳಸಾಗಣೆ ವಿರುದ್ಧ ಮಿಜೋರಾಂ ಸರ್ಕಾರ ಜಾರಿ ಕ್ರಮವನ್ನು ಬಿಗುಗೊಳಿಸಿದೆ.…

15 hours ago

ಸುಸ್ಥಿರ ಕೃಷಿ ಮತ್ತು ‘ತ್ಯಾಜ್ಯದಿಂದ ಸಂಪತ್ತು’ ಮಾದರಿಗೆ ಐಸಿಎಆರ್ ಸಭೆಯಲ್ಲಿ ಒತ್ತು

ಕೊಲ್ಕತ್ತಾದಲ್ಲಿ ನಡೆದ ಸಭೆಯಲ್ಲಿ ಸೆಣಬು ವಲಯ ಸುಧಾರಣೆ, ಸುಸ್ಥಿರ ಕೃಷಿ ಹಾಗೂ ಮೀನುಗಾರಿಕೆ…

15 hours ago

ಹೋಳಿ ಹಬ್ಬ: ಪ್ರಾಣಿ-ಪಕ್ಷಿಗಳಿಗೆ ಹಾನಿಯಾಗದಂತೆ ಆಚರಿಸಿ – ಮಂಡಳಿ ಮನವಿ

ಹೋಳಿ ಹಬ್ಬದ ಸಂದರ್ಭದಲ್ಲಿ ಪ್ರಾಣಿ ಮತ್ತು ಪಕ್ಷಿಗಳಿಗೆ ಹಾನಿಯಾಗದಂತೆ ಆಚರಿಸಲು ಭಾರತೀಯ ಪ್ರಾಣಿ…

16 hours ago