ಮಳೆ ಕೊರತೆ ಎಷ್ಟಿದೆ… ? | ದಾಖಲೆಗಳ ಪ್ರಕಾರ ಅತೀ ಕನಿಷ್ಟ ಮಳೆ ಈ ವರ್ಷ… |

September 3, 2023
10:28 AM
ಈ ಬಾರಿ ಮಳೆಯ ಕೊರತೆ ಇದೆ. ಎಷ್ಟು ಇದೆ ? ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಪಿಜಿಎಸ್‌ಎನ್‌ ಪ್ರಸಾದ್‌ ಅವರು ತಮ್ಮ ಮಳೆ ದಾಖಲೆಯಿಂದ ಮಾಹಿತಿ ನೀಡಿದ್ದಾರೆ.

ಈ ಬಾರಿ ಮಳೆಯ ಕೊರತೆ ಬಗ್ಗೆ ಚರ್ಚೆಯಾಗುತ್ತಿದೆ. ಕೃಷಿ ಏನಾದೀತು..?, ಗ್ರಾಮೀಣ ಜನರ ಬದುಕು ಏನಾದೀತು, ನಗರ ಕಡೆ ನೀರು ಇದ್ದೀತೇ…?, ಇನ್ನಾದರೂ ಮಳೆಯಾದೀತೇ ಎಂಬ ಚರ್ಚೆ, ಪ್ರಶ್ನೆ ಎಲ್ಲೆಡೆ ಇದೆ. ದಾಖಲೆಗಳ ಪ್ರಕಾರ ಅತೀ ಕನಿಷ್ಟ ಮಳೆಯ ಲೆಕ್ಕ ಕಾಣುತ್ತಿದೆ. ಮಳೆ ಲೆಕ್ಕಗಳನ್ನು ದಾಖಲಿಸುವ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಪಿಜಿಎಸ್‌ಎನ್‌ ಪ್ರಸಾದ್‌ ಅವರು ತಮ್ಮ ಡೈರಿಯಲ್ಲಿ ದಾಖಲೆ ಮಾಡಿಕೊಂಡಿರುವ ಮಾಹಿತಿಯನ್ನು ಮಳೆ ಮಾಹಿತಿ ಲೆಕ್ಕದ ವಾಟ್ಸಪ್‌ ಗುಂಪಿನಲ್ಲಿ ನೀಡಿದ್ದಾರೆ. ಈ ಪ್ರಕಾರ ಆಗಸ್ಟ್‌ ತಿಂಗಳಲ್ಲಿ ದಾಖಲಾದ ಅತೀ ಕಡಿಮೆ ಮಳೆ ಈ ವರ್ಷ…!.

Advertisement
ಪಿಜಿಎಸ್‌ಎನ್‌ ಪ್ರಸಾದ್, ಬಾಳಿಲ

ಆಗಸ್ಟ್ ತಿಂಗಳಲ್ಲಿ ದಾಖಲಾದ ಮಳೆ 331 ಮಿ.ಮೀ.  ಆಗಸ್ಟ್ ತಿಂಗಳಲ್ಲಿ ಈ ಹಿಂದಿನ ಕನಿಷ್ಠ ಮಳೆ 1977 ರಲ್ಲಿ 551 ಮಿ.ಮೀ.ದಾಖಲಾಗಿತ್ತು. ನನ್ನಲ್ಲಿರುವ ಮಾಹಿತಿ ಪ್ರಕಾರ ಮಳೆಗಾಲದ ಜೂನ್, ಜುಲೈ, ಆಗಸ್ಟ್ ಈ ಮೂರೂ ತಿಂಗಳಲ್ಲಿ ತಿಂಗಳೊಂದರಲ್ಲಿ ದಾಖಲಾದ ಕನಿಷ್ಟ ಮಳೆಯಿದು. 1977 ರಲ್ಲಿ ಸೆಪ್ಟೆಂಬರ, ಅಕ್ಟೋಬರನಲ್ಲಿ ಸಾಮಾನ್ಯ ಮಳೆ, ನವೆಂಬರ ದಲ್ಲಿ ಗರಿಷ್ಠ 606 ಮಿ.ಮೀ.ಸುರಿದಿತ್ತು.

Advertisement

ಆಗಸ್ಟ್ ತಿಂಗಳ ಅಂತ್ಯಕ್ಕೆ ಬರುವ ವಾರ್ಷಿಕ ಸರಾಸರಿ ಮಳೆ (1976 – 2023) 3523 ಮಿ.ಮೀ. ಈ ವರ್ಷ 2737 ಮಿ.ಮೀ.ಅಂದರೆ ಶೇ.22.3 ರಷ್ಟು ಕೊರತೆಯಿದೆ. ಆಗಸ್ಟ್ ತಿಂಗಳ ಸರಾಸರಿ 965 ಮಿ.ಮೀ. ಹೋಲಿಸಿದರೆ ಈ ಬಾರಿ ಶೇ.65.7 ಕೊರತೆಯಿದೆ. ಆಗಸ್ಟ್ ತಿಂಗಳ ಅಂತ್ಯದವರೆಗೆ ಮಳೆ ಬರುವ ವಾಡಿಕೆ ದಿನಗಳು 109. ಈ ಬಾರಿ ಕೇವಲ 88 ದಿನ ಮಾತ್ರ ಮಳೆಯಾಗಿದೆ. ವಾರ್ಷಿಕವಾಗಿ ಮಳೆ ದಾಖಲಾಗುವ ಸರಾಸರಿ ದಿನಗಳು 165.. ಗರಿಷ್ಟ 202 (2021) ಕನಿಷ್ಟ 144 (1986 & 2017) ನನ್ನ ತಂದೆಯವರ ಡೈರಿಯಲ್ಲಿ ದಾಖಲಾದಂತೆ 1965 ರಲ್ಲಿ ಕೇವಲ 123 ದಿನಗಳಷ್ಷೇ ಮಳೆ ದಾಖಲಾಗಿತ್ತು.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ದರ್ಶಿತ್‌ ಕೆ ಎಸ್
July 7, 2025
11:04 PM
by: ದ ರೂರಲ್ ಮಿರರ್.ಕಾಂ
ಕೋವಿಡ್ ಲಸಿಕೆಯಿಂದ ಹೃದಯಾಘಾತ ಸಂಭವಿಸುತ್ತಿಲ್ಲ | ಸಚಿವ ದಿನೇಶ್ ಗುಂಡೂರಾವ್
July 7, 2025
9:25 PM
by: ದ ರೂರಲ್ ಮಿರರ್.ಕಾಂ
ಮೆಕ್ಕೆಜೋಳ ಸಮಾವೇಶ | ಕನಿಷ್ಠ ಬೆಂಬಲ ಬೆಲೆ ಮೂಲಕ ರೈತರ ಹಿತರಕ್ಷಣೆ
July 7, 2025
9:17 PM
by: The Rural Mirror ಸುದ್ದಿಜಾಲ
ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಪ್ರದೇಶ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟ ನಿಷೇಧ
July 7, 2025
8:58 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group