MIRROR FOCUS

ಮಳೆ ಕೊರತೆ ಎಷ್ಟಿದೆ… ? | ದಾಖಲೆಗಳ ಪ್ರಕಾರ ಅತೀ ಕನಿಷ್ಟ ಮಳೆ ಈ ವರ್ಷ… |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಈ ಬಾರಿ ಮಳೆಯ ಕೊರತೆ ಬಗ್ಗೆ ಚರ್ಚೆಯಾಗುತ್ತಿದೆ. ಕೃಷಿ ಏನಾದೀತು..?, ಗ್ರಾಮೀಣ ಜನರ ಬದುಕು ಏನಾದೀತು, ನಗರ ಕಡೆ ನೀರು ಇದ್ದೀತೇ…?, ಇನ್ನಾದರೂ ಮಳೆಯಾದೀತೇ ಎಂಬ ಚರ್ಚೆ, ಪ್ರಶ್ನೆ ಎಲ್ಲೆಡೆ ಇದೆ. ದಾಖಲೆಗಳ ಪ್ರಕಾರ ಅತೀ ಕನಿಷ್ಟ ಮಳೆಯ ಲೆಕ್ಕ ಕಾಣುತ್ತಿದೆ. ಮಳೆ ಲೆಕ್ಕಗಳನ್ನು ದಾಖಲಿಸುವ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಪಿಜಿಎಸ್‌ಎನ್‌ ಪ್ರಸಾದ್‌ ಅವರು ತಮ್ಮ ಡೈರಿಯಲ್ಲಿ ದಾಖಲೆ ಮಾಡಿಕೊಂಡಿರುವ ಮಾಹಿತಿಯನ್ನು ಮಳೆ ಮಾಹಿತಿ ಲೆಕ್ಕದ ವಾಟ್ಸಪ್‌ ಗುಂಪಿನಲ್ಲಿ ನೀಡಿದ್ದಾರೆ. ಈ ಪ್ರಕಾರ ಆಗಸ್ಟ್‌ ತಿಂಗಳಲ್ಲಿ ದಾಖಲಾದ ಅತೀ ಕಡಿಮೆ ಮಳೆ ಈ ವರ್ಷ…!.

Advertisement
ಪಿಜಿಎಸ್‌ಎನ್‌ ಪ್ರಸಾದ್, ಬಾಳಿಲ

ಆಗಸ್ಟ್ ತಿಂಗಳಲ್ಲಿ ದಾಖಲಾದ ಮಳೆ 331 ಮಿ.ಮೀ.  ಆಗಸ್ಟ್ ತಿಂಗಳಲ್ಲಿ ಈ ಹಿಂದಿನ ಕನಿಷ್ಠ ಮಳೆ 1977 ರಲ್ಲಿ 551 ಮಿ.ಮೀ.ದಾಖಲಾಗಿತ್ತು. ನನ್ನಲ್ಲಿರುವ ಮಾಹಿತಿ ಪ್ರಕಾರ ಮಳೆಗಾಲದ ಜೂನ್, ಜುಲೈ, ಆಗಸ್ಟ್ ಈ ಮೂರೂ ತಿಂಗಳಲ್ಲಿ ತಿಂಗಳೊಂದರಲ್ಲಿ ದಾಖಲಾದ ಕನಿಷ್ಟ ಮಳೆಯಿದು. 1977 ರಲ್ಲಿ ಸೆಪ್ಟೆಂಬರ, ಅಕ್ಟೋಬರನಲ್ಲಿ ಸಾಮಾನ್ಯ ಮಳೆ, ನವೆಂಬರ ದಲ್ಲಿ ಗರಿಷ್ಠ 606 ಮಿ.ಮೀ.ಸುರಿದಿತ್ತು.

ಆಗಸ್ಟ್ ತಿಂಗಳ ಅಂತ್ಯಕ್ಕೆ ಬರುವ ವಾರ್ಷಿಕ ಸರಾಸರಿ ಮಳೆ (1976 – 2023) 3523 ಮಿ.ಮೀ. ಈ ವರ್ಷ 2737 ಮಿ.ಮೀ.ಅಂದರೆ ಶೇ.22.3 ರಷ್ಟು ಕೊರತೆಯಿದೆ. ಆಗಸ್ಟ್ ತಿಂಗಳ ಸರಾಸರಿ 965 ಮಿ.ಮೀ. ಹೋಲಿಸಿದರೆ ಈ ಬಾರಿ ಶೇ.65.7 ಕೊರತೆಯಿದೆ. ಆಗಸ್ಟ್ ತಿಂಗಳ ಅಂತ್ಯದವರೆಗೆ ಮಳೆ ಬರುವ ವಾಡಿಕೆ ದಿನಗಳು 109. ಈ ಬಾರಿ ಕೇವಲ 88 ದಿನ ಮಾತ್ರ ಮಳೆಯಾಗಿದೆ. ವಾರ್ಷಿಕವಾಗಿ ಮಳೆ ದಾಖಲಾಗುವ ಸರಾಸರಿ ದಿನಗಳು 165.. ಗರಿಷ್ಟ 202 (2021) ಕನಿಷ್ಟ 144 (1986 & 2017) ನನ್ನ ತಂದೆಯವರ ಡೈರಿಯಲ್ಲಿ ದಾಖಲಾದಂತೆ 1965 ರಲ್ಲಿ ಕೇವಲ 123 ದಿನಗಳಷ್ಷೇ ಮಳೆ ದಾಖಲಾಗಿತ್ತು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹಕ್ಕಿಗಳಿಗೆ ಗೂಡುಕಟ್ಟುವ ಪರಿಸರ ಪ್ರೇಮಿ..

ಹಕ್ಕಿಗಳಿಗೆ ಗೂಡುಕಟ್ಟುವ ಮೂಲಕ ಪರಿಸರ ಸಂರಕ್ಷಣೆಗೆ ಪಣತೊಟ್ಟಿರುವ ದಂಪತಿಗಳು ಬಂಟ್ವಾಳ ತಾಲೂಕಿನಲ್ಲಿದ್ದಾರೆ. ಇವರ…

4 hours ago

ಭಾರತದಿಂದ ಅಡಿಕೆಯ ರಫ್ತು ಎಷ್ಟಾಗುತ್ತದೆ…? ಹೇಗಾಗುತ್ತದೆ…?

ಜಾಗತಿಕ ಮಟ್ಟದಲ್ಲಿ ಅಡಿಕೆ ಬೆಳೆಯ ವಿಸ್ತೀರ್ಣ ಮತ್ತು ಉತ್ಪಾದನೆಯಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ.ಇನ್ನು…

7 hours ago

ಮಹಾರಾಷ್ಟ್ರ ಸರ್ಕಾರ ಕೃಷಿ ಕ್ಷೇತ್ರದಲ್ಲಿ 25,000 ಕೋಟಿ ರೂ. ಹೂಡಿಕೆ ಮಾಡಲಿದೆ

ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ  ರಾಜ್ಯ ಸರ್ಕಾರವು ಮುಂದಿನ ಐದು ವರ್ಷಗಳಲ್ಲಿ ಕೃಷಿ…

7 hours ago

ಆಶ್ಲೇಷ ನಕ್ಷತ್ರದಲ್ಲಿ ಬುಧ: ಈ 4 ರಾಶಿಗೆ ಹೆಜ್ಜೆ ಹೆಜ್ಜೆಗೂ ಕಂಟಕ..!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

7 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ದರ್ಶಿತ್‌ ಕೆ ಎಸ್

ದರ್ಶಿತ್‌ ಕೆ ಎಸ್‌, 3 ನೇ ತರಗತಿ, ಜ್ಞಾನಗಂಗಾ ಸೆಂಟ್ರಲ್‌ ಸ್ಕೂಲ್‌, ಬೆಳ್ಳಾರೆದರ್ಶಿತ್‌…

15 hours ago

ಕೋವಿಡ್ ಲಸಿಕೆಯಿಂದ ಹೃದಯಾಘಾತ ಸಂಭವಿಸುತ್ತಿಲ್ಲ | ಸಚಿವ ದಿನೇಶ್ ಗುಂಡೂರಾವ್

ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಕುರಿತು ವರದಿ ನೀಡಲು ರಚಿಸಲಾಗಿದ್ದ ತಜ್ಞರ ಸಮಿತಿ…

17 hours ago