Advertisement
ಸುದ್ದಿಗಳು

ಬೆಳೆಗೆ ಮಣ್ಣು ಎಷ್ಟು ಪೂರಕ | ಬೇಸಾಯ ಮಾಡುವ ರೈತರಿಗೊಂದು ಅತೀ ಸಹಜ ಪಾಠ

Share

ಮಲ್ಲಪ್ಪ ವಾಯ್ ಕಟ್ಟಿ ಅವರು ಮಣ್ಣಿನ ರಚನೆ ಬಗ್ಗೆ ಬಹಳ ಸೊಗಸಾಗಿ ವಿವರಣೆ ನೀಡಿದ್ದಾರೆ. ಓದಿ ನೋಡಿ…..

ಯಾವುದೇ ಬೆಳೆ ಬೆಳೆಯ ಬೇಕಾದರೆ ಆಯಾ ಬೆಳೆಯ ಬೆಳವಣಿಗೆಗೆ ತಕ್ಕಂತೆ ಮಣ್ಣಿನ ರಚನೆ ಹೊಂದಿರಬೇಕು. ಸ್ವಲ್ಪ ಮಟ್ಟಿನ ಕ್ಷಾರವನ್ನೂ ಬಳಸಿ ಸಹಜವಾಗಿ ಬೆಳೆಯಬಲ್ಲ ಸಸ್ಯ ಪ್ರಬೇಧಗಳು ನಮ್ಮಲ್ಲಿ ಸಾಕಷ್ಟಿವೆ.

ನಮ್ಮ ಉತ್ತರ ಕರ್ನಾಟಕದ ಲಕ್ಷಾಂತರ ಎಕರೆ ಕಬ್ಬು ಬೇಸಾಯ ಪ್ರದೇಶಗಳಲ್ಲಿ ಎರಡು ಮೂರು ವರ್ಷ ಭೂಮಿಗೆ ವಿಶ್ರಾಂತಿ ಇಲ್ಲದೇ ಅತಿಯಾದ ನೀರಾವರಿಯಿಂದ, ಆಳ ಕೊಳವೆ ಭಾವಿಗಳ ನೀರಿನ ಬಳಕೆಯಿಂದ, ರಾಸಾಯನಿಕ ತ್ಯಾಜ್ಯ ಮಿಶ್ರಿತ ಮತ್ತು ಬೇಸಿಗೆಯಲ್ಲಿ ಹರಿಯದೇ ನಿಂತ ನದಿ ನೀರು, ಸಾವಯವ ಗೊಬ್ಬರ ಎಂದು ರಾಸಾಯನಿಕ ಮಿಶ್ರಿತ ಗೊಬ್ಬರ ಬಳಕೆಯಿಂದ ಮಣ್ಣಿನ ರಸಸಾರ ಕ್ಷಾರಿಯವಾಗಿದೆ. ಗೋಧಿ, ಜವೆಗೋದಿ (ಸದಕ) ಗಜ್ಜರಿ ಮುಂತಾದ ಬೆಳೆಗಳು ಈ ಕ್ಷಾರವನ್ನು ಬಳಸಿಕೊಂಡು ಹುಲುಸಾಗಿ ಬೆಳೆಯುತ್ತವೆ. ಅಲ್ಲದೆ ಸ್ವಲ್ಪ ಮಟ್ಟಿಗೆ ಭೂಮಿಯ ಕ್ಷಾರವನ್ನೂ ಕಡಿಮೆ ಮಾಡುತ್ತವೆ.

ಉತ್ತರ ಕರ್ನಾಟಕದ ಕಬ್ಬು ಬೇಸಾಯ ಪ್ರದೇಶಗಳಲ್ಲಿ ಪ್ರತಿ ವರ್ಷ ಅಂದಾಜು ನಾಲ್ಕು ಲಕ್ಷಕ್ಕೂ ಅಧಿಕ ಕೂಳೆ ಕಬ್ಬು ಕಟಾವು ಮುಂದಿನ ಬೇಸಾಯಕ್ಕೆ ಭೂಮಿಯನ್ನು ಸಿದ್ಧಗೊಳಿಸುತ್ತೇವೆ. ಡಿಸೆಂಬರ್ ವೇಳೆಗೆ ಖಾಲಿಯಾದ ಇಂತಹ ಭೂಮಿಯಲ್ಲಿ ಪ್ರಯೋಗಾತ್ಮಕವಾಗಿ DWB 303 (ಡೈರೆಕ್ಟರೇಟ ಆಫ್ ವ್ಹೀಟ& ಬಾರ್ಲಿ ಪಂಜಾಬ) ಅವರ ಗೋದಿ ತಳಿಯನ್ನು ಒಂದು ಎಕರೆಯಲ್ಲಿ ಜನವರಿ 10 ರಂದು ಬಿತ್ತನೆ ಮಾಡಿದ್ದೇನೆ.

ಎಕರೆಗೆ 38 ರಿಂದ 40 ಕ್ವಿಂಟಲ್ ಇಳುವರಿ ನೀಡಬಲ್ಲ, ಗಿಡ್ಡ ತಳಿ ಇದಾಗಿದ್ದು ಕ್ಷಾರ ಸಹಿಷ್ಣುತೆ ಹೊಂದಿದೆ. CoC 671 ಎರಡನೇ ಕೂಳೆ ಬೆಳೆ ಬೆಳೆದ ಭೂಮಿಯಲ್ಲಿ ಎಕರೆಗೆ 40 ಕೆಜಿ ಬೀಜ ಬಳಸಲಾಗಿದೆ. 95 ರಿಂದ 100 ದಿನದೊಳಗೆ ಕಟಾವಾಗಬಲ್ಲ ಅಲ್ಪಾವಧಿ ತಳಿ ಇದಾಗಿದ್ದು ಈ ತಿಂಗಳು 20 ನೇ ತಾರೀಖಿನ ಒಳಗೇ  ಕಟಾವಿಗೆ ಬರುತ್ತದೆ. ಉತ್ತಮ ಇಳುವರಿಯ ನಿರೀಕ್ಷೆಯೂ ಇದೆ. ಅದಕ್ಕಿಂತಲೂ ಹೆಚ್ಚಾಗಿ ಬಿತ್ತನೆ ಮಾಡಿದ ಈ ಜೌಗು ಪ್ರದೇಶದ pH ಹತೋಟಿಗೆ ಬರುವ ಎಲ್ಲ ಲಕ್ಷಣಗಳೂ ಇವೆ.
ಸ್ವಲ್ಪ ಮುತುವರ್ಜಿವಹಿಸಿ ಇಂತಹ ತಳಿಗಳನ್ನು ಬೇಸಾಯ ಮಾಡುವುದು ಸಹಜ ಬೇಸಾಯಕ್ಕೆ ಪೂರಕವಲ್ಲವೇ ?

ಮಲ್ಲಪ್ಪ ವಾಯ್ ಕಟ್ಟಿ
ರೋಹಿಣಿ ಬಯೋಟೆಕ್
ಮಹಾಲಿಂಗಪೂರ
9845553416

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಡಿಕೆ ತಳಿಗಳ ಬಗ್ಗೆ ಹೊಸ ವೈಜ್ಞಾನಿಕ ಅಧ್ಯಯನ – ಅಡಿಕೆ ತಳಿಗಳಲ್ಲೂ ಆಲ್ಕಲಾಯ್ಡ್ ಪ್ರಮಾಣದಲ್ಲಿ ವ್ಯತ್ಯಾಸ

ICAR-CPCRI ಸಂಶೋಧನೆಯ ಪ್ರಕಾರ ಅಡಿಕೆ ತಳಿಗಳಲ್ಲಿ ಆಲ್ಕಲಾಯ್ಡ್ ಪ್ರಮಾಣದಲ್ಲಿ ಗಣನೀಯ ವ್ಯತ್ಯಾಸವಿದೆ. ಮಂಗಳ…

8 hours ago

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ – ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯಲ್ಲಿ ಜು.25ರಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ…

17 hours ago

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ಜುಲೈ 30ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

ಮಂಗಳೂರಿನಲ್ಲಿ ಜುಲೈ 30ರಂದು ವಿವಿಧ ಖಾಸಗಿ ಸಂಸ್ಥೆಗಳ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ…

17 hours ago

ರಸಗೊಬ್ಬರದಲ್ಲಿ ಆತ್ಮನಿರ್ಭರತೆ ಅನಿವಾರ್ಯ – ಸಂಕಷ್ಟದಿಂದ ಅವಕಾಶದತ್ತ ಭಾರತ ಸಾಗಬೇಕಿದೆ

ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿರುವ ಭಾರತ, ರಸಗೊಬ್ಬರದಲ್ಲಿ ಇನ್ನೂ ಆಮದು ಅವಲಂಬಿತವಾಗಿದೆ. ದೇಶೀಯ…

21 hours ago

ಹವಾಮಾನ ವರದಿ | 24-07-2026 | ಕರಾವಳಿಯಲ್ಲಿ ಮುಂದುವರಿಯುವ ಮಳೆ, ಜುಲೈ ಅಂತ್ಯದ ವೇಳೆಗೆ ಮುಂಗಾರು ಹೇಗೆ..?

ಕರಾವಳಿ ಮತ್ತು ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಯಲಿದ್ದು, ಸುಳ್ಯ-ಮಡಿಕೇರಿ ಘಾಟಿ ಭಾಗಗಳಲ್ಲಿ ಮಳೆ…

22 hours ago