#BloodPressure | ಪ್ರಾಣಕ್ಕೆ ಕುತ್ತು ತರಬಲ್ಲ ಅಧಿಕ ರಕ್ತದೊತ್ತಡ | ಆಯುರ್ವೇದ ಚಿಕಿತ್ಸೆ ಉತ್ತಮ |

September 5, 2023
3:44 PM
ನಮ್ಮ ಹೃದಯ ಶುದ್ಧ ರಕ್ತವನ್ನು ಪಂಪ್‌ ಮಾಡಿ ದೇಹದ ಎಲ್ಲಾ ಭಾಗಗಳಿಗೂ ಕಳಿಹಿಸುತ್ತದೆ. ಈ ರೀತಿ ಪಂಪ್‌ ಮಾಡಲು ಒಂದು ಮಿತಿಯಲ್ಲಿ ಒತ್ತಡ ಬೇಕಾಗುತ್ತದೆ. ನಿಯಮಿತವಾದ ಈ ಒತ್ತಡಕ್ಕೆ ರಕ್ತದೊತ್ತಡ ಎನ್ನುತ್ತೇವೆ. ಈ ಒತ್ತಡ ಜಾಸ್ತಿಯಾದಾಗ ಅಧಿಕ ರಕ್ತದೊತ್ತಡ ಮತ್ತು ಕಡಿಮೆಯಾದಾಗ ಕಡಿಮೆ ರಕ್ತದೊತ್ತಡ ಉಂಟಾಗುತ್ತದೆ.

ನಿಮ್ಮ ಹೃದಯವು ರಕ್ತವನ್ನು ಪಂಪು ಮಾಡಲು ಹೆಚ್ಚು ಶ್ರಮಿಸಬೇಕಾದರೆ ಮತ್ತು ನಿಮ್ಮ ಅಪಧಮನಿಗಳು ಕಿರಿದಾಗುತ್ತಿದ್ದರೆ, ರಕ್ತದೊತ್ತಡ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ರಕ್ತದೊತ್ತಡ 120/ 80 ಇರುತ್ತದೆ. ರಕ್ತದೊತ್ತಡ ಇದು ಎರಡು ಸಂಖ್ಯೆಗಳನ್ನು ಒಳಗೊಂಡಿರುತ್ತದೆ. ಅಗ್ರ ಸಂಖ್ಯೆ ನಿಮ್ಮ ಸಂಕೋಚನದ ರಕ್ತದೊತ್ತಡವಾಗಿದೆ ನಿಮ್ಮ ಹೃದಯ ಬಡಿತ ಮತ್ತು ದೇಹದಾದ್ಯಂತ ರಕ್ತವನ್ನು ತಳ್ಳಿದಾಗ ಆಗುವ ಹೆಚ್ಚಿನ ಒತ್ತಡ ಕೆಳಭಾಗವು ನಿಮ್ಮ ಡಯಸ್ಟೋಲಿಕ್ ಬಡಿತಗಳ ನಡುವೆ ನಿಮ್ಮ ಹೃದಯ ಸಡಿಲಗೊಂಡಾಗ ಆಗುವ ಕಡಿಮೆ ಒತ್ತಡ.

Advertisement
Advertisement

ಅಧಿಕ ರಕ್ತದೊತ್ತಡಕ್ಕೆ ಕಾರಣಗಳು:
* ಅಧಿಕ ತೂಕ
* ಮಾನಸಿಕ ಒತ್ತಡ
* ನಿದ್ರಾಹೀನತೆ
* ಅತಿಯಾದ ಕೊಬ್ಬಿನಂಶ ಅತಿಯಾದ ಉಪ್ಪು ಹಾಗೂ ನಾರಿನ ಅಂಶವಿಲ್ಲದ ಆಹಾರ ಸೇವನೆ
* ಮಧ್ಯಪಾನ / ಧೂಮಪಾನ
* ನೋವು ನಿವಾರಕ ಔಷಧಿಗಳ ದೀರ್ಘಾವಧಿ ಪ್ರಯೋಗ
* ಚಟುವಟಿಕೆ ಇಲ್ಲದ ಅನಿಮಿಯತ ಜೀವನ ಶೈಲಿ
* ಅನುವಂಶಿಕ
* ವಯಸ್ಸಿನ ಅಂಶ
* ಟೈಪ್ 2ಮಧುಮೇಹ,ಹೃದಯ ಸಂಬಂಧಿ ಹಾಗೂ ಮೂತ್ರಪಿಂಡ ಕಾಯಿಲೆಗಳು ನರ ಮತ್ತು ಮಾನಸ ರೋಗ ಕಾಯಿಲೆಗಳು

Advertisement

ಲಕ್ಷಣಗಳು :-
*ತಲೆನೋವು
* ಮಂದದ್ರಷ್ಟಿ
* ತಲೆ ತಿರುಗುವಿಕೆ
* ಉಸಿರಾಟ ತೊಂದರೆ
* ಎದೆ ಮತ್ತು ತಲೆಯ ಭಾಗದಲ್ಲಿ ಬಡಿತದ ಭಾವನೆ
* ಅತಿಯಾದ ಆಯಾಸ ಹಾಗೂ ವಾಕರಿಕೆ

ರಕ್ತದ ಒತ್ತಡ ಪತ್ತೆ ಹಚ್ಚದೆ ಹೋದಲ್ಲಿ ಹೃದಯಘಾತ ಪಾರ್ಶ್ವ ವಾಯು ಮತ್ತು ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.  ಆರೋಗ್ಯಕರ ಆಹಾರ ವ್ಯಾಯಾಮ ಮತ್ತು ಉತ್ತಮ ಒತ್ತಡ ನಿರ್ವಹಣೆಯ ಜೀವನ ಶೈಲಿ ಬದಲಾವಣೆಗಳು ಅಧಿಕ ರಕ್ತದ ಒತ್ತಡವನ್ನು ನಿಭಾಯಿಸಲು ಉತ್ತಮ ಮಾರ್ಗಗಳಾಗಿವೆ ಅಧಿಕ ರಕ್ತದೊತ್ತಡವನ್ನು ಸಂಪೂರ್ಣ ಗುಣಪಡಿಸಲು ಸಾಧ್ಯವಿಲ್ಲ ಔಷಧಿ ಮತ್ತು ಜೀವನಶೈಲಿ ಹಾಗೂ ಆಹಾರ ಪದ್ಧತಿಯಲ್ಲಿ ಕೆಲವು ಮಾರ್ಪಾಡುಗಳೊಂದಿಗೆ ನಿಯಂತ್ರಿಸಬಹುದು ಇದಕ್ಕೆ ಸಾಮಾನ್ಯವಾಗಿ ನಿಯಮಿತ ವೈದ್ಯಕೀಯ ಆರೈಕೆ ಅಗತ್ಯ.

Advertisement

ಆಯುರ್ವೇದ ಔಷಧಿ ಯಾದ ಸರ್ಪಗಂಧವು ರಕ್ತದೊತ್ತಡಕ್ಕೆ ಉತ್ತಮ ಚಿಕಿತ್ಸೆಯಾಗಿದೆ ಪಂಚಕರ್ಮ ಚಿಕಿತ್ಸೆ ಯಲ್ಲಿ ಒಂದಾದ ಶಿರೋದಾರವು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪ್ರಯೋಜನಕಾರಿಯಾಗಿದೆ ದಿನನಿತ್ಯವೂ ಯೋಗಾಸನ ವ್ಯಾಯಾಮ ಇವುಗಳಿಂದಲೂ ರಕ್ತದೊತ್ತಡವನ್ನು ನಿಯಂತ್ರಿಸಬಹುದು.

ಬರಹ :
ಡಾ. ಜ್ಯೋತಿ ಕೆ, ಆಯುರ್ವೇದ ವೈದ್ಯರು, ಮಂಗಳೂರು, 94481 68053
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

Karnataka Weather | 15-05-2024 | ಸದ್ಯ ಮಳೆ ಇದೆ | ಮೇ.21 ರಿಂದ ಮಳೆ ತೀವ್ರತೆ ಕಡಿಮೆ | ಅವಧಿಗೆ ಮುಂಗಾರು ಪ್ರಾರಂಭವಾದೀತೇ..?
May 15, 2024
11:43 AM
by: ಸಾಯಿಶೇಖರ್ ಕರಿಕಳ
ವಳಲಂಬೆಯಲ್ಲಿ ಯಕ್ಷಗಾನ | ಯಕ್ಷಗಾನ ಕಲಾವಿದ ಉಬರಡ್ಕ ಉಮೇಶ್ ಶೆಟ್ಟಿಯವರಿಗೆ ಗೌರವಾರ್ಪಣೆ | ಕಲಾವಿದರನ್ನು ಗೌರವಿಸುವುದು ಉತ್ತಮ ಕೆಲಸ -ಹರೀಶ್ ಬಳಂತಿಮೊಗರು |
May 14, 2024
10:05 PM
by: ದ ರೂರಲ್ ಮಿರರ್.ಕಾಂ
ಶಿಶಿಲದಲ್ಲಿರುವ ಈ ದೈವದ ವಿಶೇಷತೆ..! | ಜೋಡಿ ದೈವಗಳಿಗೆ ಜೀವಂತ ಕೋಳಿ ಅರ್ಪಣೆ |
May 14, 2024
9:32 PM
by: ದ ರೂರಲ್ ಮಿರರ್.ಕಾಂ
ಕೋವಿ ಡಿಪಾಸಿಟ್‌ ಪ್ರಕರಣ | ಮಹತ್ವದ ತೀರ್ಪು | ಚುನಾವಣಾ ಕಾಲದಲ್ಲಿ ಕೋವಿ ಡಿಪಾಸಿಟ್‌ಗೆ ಪರಿಹಾರ |
May 14, 2024
8:28 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror