ಇನ್ನೀಗ ಬೇಸಿಗೆ ಕಾಲ. ತೋಟಗಳಿಗೆ ನೀರುಣಿಸುವ ಸಮಯ. ಇಂತಹ ಸಮಯದಲ್ಲಿ ಸರಿಯಾಗಿ ನೀರುಣಿಸುವುದು ಅಗತ್ಯ ಇದೆ. ಹೆಚ್ಚಿನ ಕೃಷಿಕರು ಈಗ ಸಂಕಷ್ಟ ಅನುಭವಿಸುತ್ತಾರೆ. ನೀರಿನ ತೀವ್ರ ಅಭಾವಕ್ಕೆ ತುತ್ತಾದರೆ ಮನಃಪೂರ್ವಕವಾಗಿ ಸಹಜ ಸ್ಥಿತಿಗೆ ಬರಲು 2 ರಿಂದ 3 ವರ್ಷಕ್ಕೆ ಬೇಕಾಗುತ್ತದೆ. ಮಾತ್ರವಲ್ಲ, 12 ಸೆಲ್ಸಿಯಸ್ ಗಿಂತ ಕಡಿಮೆ ತಾಪಮಾನವಿರುವ ಪ್ರದೇಶಗಳಲ್ಲಿ ತಾಪಮಾನದಿಂದ ಉಂಟಾಗುವ ಒತ್ತಡವನ್ನು ನಿವಾರಿಸುತ್ತದೆ. ಇದರಿಂದ ನೀರಿನ ಸರಿಯಾದ ಪ್ರಮಾಣ ಹಾಗೂ ಯಾವ ಸಮಯದಲ್ಲಿ ನೀರನ್ನು ಹಾಕಬೇಕಾಗುತ್ತದೆ.
ಕರ್ನಾಟಕ ಮತ್ತು ಕೇರಳದಲ್ಲಿ ನವೆಂಬರ್- ಡಿಸೆಂಬರ್ ತಿಂಗಳಿನಲ್ಲಿ ಗುಣಿ ನೀರಾವರಿ ಪದ್ಧತಿಯಲ್ಲಿ ಪ್ರತಿ ಅಡಿಕೆ ಗಿಡದ ಬುಡಕ್ಕೆ 7-8 ದಿನಕ್ಕೊಮ್ಮೆ ನೀರು ಹಾಕಬೇಕು. ಜನವರಿ-ಫೆಬ್ರವರಿ ತಿಂಗಳಿನಲ್ಲಿ 6 ದಿನಕ್ಕೊಮ್ಮೆ ಹಾಗೂ, ಮಾರ್ಚ್- ಮೇ ತಿಂಗಳಿನಲ್ಲಿ 1-5 ದಿನಕ್ಕೊಮ್ಮೆ 175-200 ಲೀಟರ್ ನಷ್ಟು ನೀರನ್ನು ಒದಗಿಸಬೇಕು. ಆದರೆ ನೀವು ತೋಟಕ್ಕೆ ಸ್ಪಿಂಕ್ಲರ್ ಮತ್ತು ಹನಿ ನೀರಾವರ ಪದ್ಧತಿಯನ್ನು ಮಾಡಿದ್ದಾರೆ ಅದು ಸೂಕ್ತ. ಏಕೆಂದರೆ ಹನಿ ನೀರಾವರಿ ಪದ್ಥತಿಯಲ್ಲಿ ನೀರಿನ ಬಳಕಾ ಸಾಮರ್ಥ್ಯ ಶೇಕಡಾ 90-95 ರಷ್ಟಿದ್ದರೆ, ಸಿಂಚಕ ಪದ್ಧತಿಯಲ್ಲಿ ಶೇಕಡಾ 70 ಮತ್ತು ಸಾಂಪ್ರದಾಯಿಕ ಪದ್ಧತಿಯಾದ ನೀರು ನಿಲ್ಲಿಸುವುದು, ಕಟ್ಟುವುದು ಮತ್ತು ಹಾಯಿಸುವುದು ಪದ್ಥತಿಯಲ್ಲಿ ಕೇವಲ ಶೇಕಡಾ 50-60 ರಷ್ಟಿದೆ. ಜೊತೆಗೆ ಸಾಂಪ್ರದಾಯಿಕ ನೀರಾವರಿ ಪದ್ಧತಿಗಿಂತ ಹನಿ ನೀರಾವರಿ ಪದ್ಧತಿಯಲ್ಲಿ ಶೇಕಾಡ 44 ಮತ್ತು ಸಿಂಚಕ ಪದ್ಧತಿಯಲ್ಲಿ ಶೇಕಡಾ 20ರಷ್ಟು ನೀರನ್ನು ಉಳಿತಾಯ ಮಾಡಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ನೀರನ್ನು ಸಾಮಾನ್ಯವಾಗಿ ಈ ಮಾದರಿಯಲ್ಲಿ ತೋಟಕ್ಕೆ ಹಾಕಬಹುದು :
ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆಯ ತೀವ್ರತೆ ಇಳಿಮುಖವಾಗಲಿದ್ದು, ಆಗಸ್ಟ್ 3ರಿಂದ ತೋಟದ…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳನ್ನು 24…
ಹುಬ್ಬಳ್ಳಿಯಲ್ಲಿ ಆರಂಭವಾದ ಮೂರು ದಿನಗಳ ಹಲಸು ಮೇಳಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.…
ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾರಿ ಮಳೆ ಮುಂದುವರಿದಿದ್ದು, ಭದ್ರಾ ಹಾಗೂ ನೇತ್ರಾವತಿ, ಕುಮಾರಧಾರಾ…
ಶಿರಾಡಿ ಘಾಟ್ನ ಎಡಕುಮರಿ–ಶಿರಿಬಾಗಿಲು ನಡುವೆ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಪರಿಹಾರ…
ಆಹಾರ, ನಿದ್ರೆ ಮತ್ತು ಬ್ರಹ್ಮಚರ್ಯ ಸಮತೋಲನದಲ್ಲಿದ್ದಾಗ ಮಾತ್ರ ಆರೋಗ್ಯ ಹಾಗೂ ಆಧ್ಯಾತ್ಮಿಕ ಪ್ರಗತಿ…