#Neuropathy |ನರಗಳ ಅಸ್ವಸ್ಥತೆ ಸಂಭವಿಸಿದ್ರೆ ನರರೋಗ ಖಂಡಿತಾ | ಇದಕ್ಕೆ ಆಯುರ್ವೇದ ಪರಿಹಾರ ಹೇಗೆ?

September 11, 2023
2:42 PM
ಮಾನವ ಶರೀರದಲ್ಲಿನ ನರದ ರೋಗಗಳು ಅಥವಾ ಇಡೀ ದೇಹದಲ್ಲಿ ಕಾಯಿಲೆಯ ಅಡ್ಡ-ಪರಿಣಾಮಗಳಿಂದಾಗಿ ಇದು ಸಂಭವಿಸಬಹುದು. ನರರೋಗಗಳು ದೌರ್ಬಲ್ಯ, ಸ್ವನಿಯಂತ್ರಿತ ಬದಲಾವಣೆಗಳು ಹಾಗೂ ಸಂವೇದನೆ ಬದಲಾವಣೆಗಳ ವಿಭಿನ್ನ ಸಂಯೋಗಗಳೊಂದಿಗೆ ಸಂಬಂಧಿಸಿರುತ್ತದೆ.

ನರಮಂಡಲವು ನರ ಕೋಶಗಳ ಜಾಲವಾಗಿದ್ದು, ಅದು ದೇಹದ ವಿವಿಧ ಭಾಗಗಳಿಗೆ ಸಂಕೇತಗಳನ್ನು ರವಾನಿಸುತ್ತದೆ. ಇದು ವ್ಯಕ್ತಿಯ ಆಹಾರ ಆರೋಗ್ಯ ಮತ್ತು ಬಾಹ್ಯ ಪ್ರಚೋದಕಗಳಿಗೆ ಪ್ರತಿಕ್ರಿಯೆಯ ಸಂಯೋಗದೊಂದಿಗೆ ಕಾರ್ಯನಿರ್ವಹಿಸುತ್ತದೆ. ವಿವಿಧ ಕಾರಣಗಳಿಂದ ನರಗಳಿಗೆ ಹಾನಿ ಉಂಟಾಗಿ ನರಗಳ ಅಸ್ವಸ್ಥತೆ ಸಂಭವಿಸುವ ಸ್ಥಿತಿಯನ್ನು ನರರೋಗಗಳೆಂದು ಕರೆಯುತ್ತೇವೆ.

ವಾತದೋಷದ ಅಸಮತೋಲನದ ಕಾರ್ಯವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ದುರ್ಬಲಗೊಳಿಸುವುದು. ಇದರ ಪರಿಣಾಮವಾಗಿ ಟಾಕ್ಸಿನ್ ಸಂಗ್ರಹವಾಗಿ ಸ್ವಯಂಪ್ರತಿರಕ್ಷಣಾ ಪ್ರತಿಕ್ರಿಯೆ(Autoimmune responses )ನರಮಂಡಲ ಸಂಕೋಚನ(Nerveroot Compression ), ಸಯಾಟಿಕ(Sciatica )ಉರಿಯುತ (Inflamation ),ಅಜೀರ್ಣ, ಖಿನ್ನತೆ, ನಿದ್ರಾಹೀನತೆ, ಬ್ರಮೆ,ಒತ್ತಡ, ಆಯಾಸ, ನರ ಅಂಗಾಂಶಗಳಿಗೆ ಹಾನಿ, ಕಂಪವಾತ (parkinsonism), ಅಲ್ಜಿಮೇರ್ಸ್, ಪಾರ್ಶ್ಶ್ವವಾಯು (Paralysis)ಇತ್ಯಾದಿ ಪರಿಸ್ಥಿತಿಗಳು ಉಂಟಾಗುವುದು.

ನರರೋಗಗಳಿಗೆ ಸಾಮಾನ್ಯ ಕಾರಣ

– ಅತಿಯಾದ ಮದ್ಯಪಾನ
– ವಿಟಮಿನ್ ಬಿ ಕೊರತೆ…. B1,B6 B12 ಇವುಗಳ ಜೊತೆಗೆ ವಿಟಮಿನ್ ಇ ಮತ್ತು ನಿಯಾಸಿನ್ ಕೊರತೆಯೂ ನರಮಂಡಲದ ಮೇಲೆ ಪರಿಣಾಮವನ್ನು ಬೀರುತ್ತದೆ
– ರಾಸಾಯನಿಕ ಹಾಗೂ ವಿಷ ಪದಾರ್ಥಗಳ ಬಳಕೆ ( Chemicals&Poisons )
– ಕೆಲವು ಔಷಧಿಗಳ ಅಡ್ಡ ಪರಿಣಾಮ
– ಯಾವುದೇ ರೀತಿಯ ನರಗಳಿಗೆ ಉಂಟಾದ ಆಘಾತ ಅಥವಾ ಒತ್ತಡ
– ಆಟೋ ಇಮ್ಯೂನ್ ರೋಗಗಳು (Rheumatoid Arthritis, SLE,/Lupus, GBS.-Gulian Bary Syndrome etc)
– ಮೂಳೆ ಮತ್ತು ಮಾಂಸ ಖಂಡಗಳ ಆಸ್ವಸ್ಥತೆಗಳು
– ಕಿಡ್ನಿ ರೋಗಗಳು ಯಕೃತ್ ರೋಗಗಳು ಹೃದಯ ರೋಗಗಳು ಇತ್ಯಾದಿ
ಈ ಎಲ್ಲಾ ಪರಿಸ್ಥಿತಿಗಳಲ್ಲಿ ಸಾಮಾನ್ಯವಾಗಿ ನರ ಕವಚಗಳ ಹಾನಿ, ಮೈಲಿನ್ ಪೊರೆಗೆ ರಕ್ತ ಪೂರೈಸಲು ತೊಂದರೆ ಉಂಟಾಗುವುದರಿಂದ ಮತ್ತು ಕಡಿಮೆ ಆಮ್ಲಜನಕದ ಪೂರೈಕೆಯು ಕಾರಣವಾಗಿರುತ್ತದೆ.

ನರರೋಗಗಳ ಸಾಮಾನ್ಯ ಲಕ್ಷಣಗಳು :-
– ಸ್ಪರ್ಶಕ್ಕೆ ಅತಿ ಸೂಕ್ಷ್ಮತೆ
– ಪೀಡಿತ ನರ ಭಾಗಗಳಲ್ಲಿ ನೋವು,
– ಜುಮ್ಮೆನಿಸುವಿಕೆ
–  ಪೀಡಿತ ಸ್ನಾಯುಗಳಲ್ಲಿ ದೌರ್ಬಲ್ಯ ಹಾಗೂ ಬಲ ಕಡಿಮೆ ಆಗುವುದು
– ರೋಗಿಗಳಿಗೆ ಅತಿಯಾದ ಶಾಖವನ್ನು ಸಹಿಸಲು ಕಷ್ಟವಾಗುವುದು
– ರಕ್ತದೊತ್ತಡದಲ್ಲಿ ಬದಲಾವಣೆ
**ತಲೆ ತಿರುಗುವಿಕೆ /ತುಂಬಾ ಬೇವರುವುದು
– ಕರುಳು,ಮೂತ್ರಕೋಶ, ಮತ್ತು ಜೀರ್ಣಕ್ರಿಯೆಯಲ್ಲಿ ಸಮಸ್ಯೆ ಉಂಟಾಗುವುದು.

ನರರೋಗಳ್ಳಲ್ಲಿ ಸಾಮಾನ್ಯವಾಗಿ ಎರಡು ವಿಧವನ್ನು ಕಾಣಬಹುದು..
1. Mononeuropathy…. ನರರೋಗವು ಕೇವಲ ಒಂದು ನರದಲ್ಲಿ ಸಂಭವಿಸಿದಾಗ ಈ ಸ್ಥಿತಿಯನ್ನು ಕಾಣಬಹುದು eg.. carpel tunnel syndrome, sciatica..
2.Polyneuropathy :- ಒಟ್ಟಾರೆಯಾಗಿ ಅನೇಕ ನರಗಳಲ್ಲಿ ನರರೋಗ ಬದಲಾವಣೆಗಳ ಸ್ಥಿತಿ ಆಗಿರುತ್ತದೆ eg.. Peripheral neuropathy, Diabetic Neuropathy.

ಆಯುರ್ವೇದ ಪರಿಹಾರ:
– ಬಲಪಡಿಸಲು ನೈಸರ್ಗಿಕ ಪರಿಹಾರ ಕಂಡುಕೊಳ್ಳುವುದು ಉತ್ತಮ ನರಗಳ ನೋವಿಗೆ ಹಲವಾರು *ಗಿಡಮೂಲಿಕೆಗಳಿಂದ ತಯಾರಿಸಿದ ಔಷದಗಳನ್ನು ಬಳಕೆ ಮಾಡಲಾಗುತ್ತದೆ
– ಗಿಡಮೂಲಿಕೆಗಳಿಂದ ತಯಾರಿಸಿದ ತೈಲಗಳಿಂದ ಅಭ್ಯಂಗ ಮಾಡುವುದರಿಂದ ನರಗಳ ಆರೋಗ್ಯವನ್ನು ಸುಧಾರಿಸಬಹುದು ಇದರಿಂದ ವಾತವನ್ನು ಸಮತೋಲನಗೊಳಿಸುವ ಮೂಲಕ ಸಂವೇದನೆಯನ್ನು ಸುಧಾರಿಸಿ ಮರಗಟ್ಟುವಿಕೆಯನ್ನು ಕಡಿಮೆ ಮಾಡಬಹುದು
ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡಿ ನರಗಳ ಅರೋಗ್ಯಕ್ಕಾಗಿ ಶಿರೋದಾರ, ಶಿರೋಬಸ್ತಿ ಚಿಕಿತ್ಸೆ
ಸಂಕೀರ್ಣ ಮತ್ತು ದೀರ್ಘಕಾಲದ ನರರೋಗ ಪ್ರಕರಣಗಳಿಗೆ ಪಂಚಕರ್ಮ ಚಿಕಿತ್ಸೆಯು ಸಹಾಯ ಮಾಡುತ್ತದೆ.ಸ್ನೇಹನ ಸ್ವೇದನ ಜೊತೆಗೆ ಬಸ್ತಿ ಚಿಕಿತ್ಸೆ ಮುಖ್ಯವಾಗಿ ನರ ರೋಗಗಳಲ್ಲಿ ಅತ್ಯುತ್ತಮವಾದ ಚಿಕಿತ್ಸೆ ಆಗಿದೆ.ಆದರೆ ನಿರ್ದಿಷ್ಟ ದೋಷಗಳ ಉಲ್ಬಣದಲ್ಲಿ  ವಿರೇಚನ ವಮನ ನಸ್ಯ ಬಳಸಲಾಗುವುದು
– ನರಗಳ ಪ್ರಚೋದನೆಗೆ ಸಹಾಯಕಾರಿಯಾಗುವಂತ ಗಿಡಮೂಲಿಕೆಗಳ ಬಳಕೆ ಉದಾಹರಣೆಗೆ ಅಶ್ವಗಂಧ,,ಬಲಾ, ರಾಸ್ನಾ, ಎರಂಡ, ಪ್ರಸಾರಣಿ, ಗುಡುಚಿ  ಮೊದಲಾದವುಗಳು. ಹಾಗೂ ನರಗಳ ಆಸ್ವಸ್ಥತೆಯನ್ನು ಹೋಗಲಾಡಿಸುವಂತ ಆಯುರ್ವೇದ ಔಷಧಗಳ ಉಪಯೋಗ ಇವುಗಳಿಂದ ನರರೋಗ ನಿವಾರಿಸಬಹುದು.

ಯೋಗ
ದೈನಂದಿನ ಯೋಗಭ್ಯಾಸವು ನಮ್ಮ ನರಗಳನ್ನು ಆರೋಗ್ಯವಾಗಿಡಲು ಸಹಾಯಮಾಡುತ್ತದೆ.ಯೋಗವು ದೇಹದಲ್ಲಿ ರಕ್ತ ಸಂಚಾರವನ್ನು ಸುಗಮವಾಗಿಸಲು ಸಹಾಯಕಾರಿಯಾಗುತ್ತದೆ. ಇದರಿಂದ ನರಗಳನ್ನು ಬಲಪಡಿಸುತ್ತದೆ. ನರರೋಗಗಳಲ್ಲಿ ಸಹಾಯಕಾರಿಯಾಗುವ ಕೆಲವು ಯೋಗಾಸನಗಳು :- ವಿಪರಿತಕರಣಿ, ಪಶ್ಚಿಮೊತ್ತಾಸನ, ಸೇತುಬಂಧನ ,ಸರ್ವಾಂಗಾಸನ ಬದ್ಧ ಕೋನ ಆಸನ, ಬಾಲಾಸನ,, ಸೂರ್ಯ ನಮಸ್ಕಾರ,  ಪ್ರಾಣಾಯಾಮ ಧ್ಯಾನ

ಫಿಜಿಯೋತೆರಪಿ( Pysiotherapy)

ದೀರ್ಘ ಕಾಲದವರೆಗೆ ಗಮನಿಸದೇ ಇದ್ದಾಗ ನರಸಂಬಂಧಿತ ಸಮಸ್ಯೆಗಳು ದೇಹದಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವುದು ಕೆಲವೊಮ್ಮೆ ಅಂಗವೈಕಲ್ಯ, ಸಂವೇದನೆಯ ನಷ್ಟ ಉಂಟು ಮಾಡುವುದು ಹಾಗೂ ದೇಹವನ್ನು ಸಂಪೂರ್ಣ ದುರ್ಬಲಗೊಳಿಸುವ ಸ್ಥಿತಿಯನ್ನು ಉಂಟುಮಾಡುವುದು. ಆದ ಕಾರಣ ನರದ ಸಮಸ್ಯೆಯನ್ನು ನಿರ್ಲಕ್ಷಿಸದೆ ಆರಂಭದಲ್ಲಿ ಚಿಕಿತ್ಸೆ ನೀಡುವುದು ಉತ್ತಮ

ಆಯುರ್ವೇದ ಔಷಧಿಗಳ ಜೊತೆಗೆ ಉತ್ತಮ ವ್ಯಾಯಾಮ ಮತ್ತು ಆರೋಗ್ಯಕರ ಆಹಾರ,ಪಂಚಕರ್ಮ ಚಿಕಿತ್ಸೆ, ಯೋಗ ಚಿಕಿತ್ಸೆ ಪಿಜಿಯೋತೆರಪಿ(Pysiotherapy) ಇವುಗಳನ್ನು ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳುವುದರಿಂದ ನರ ರೋಗವನ್ನು ತಡೆಗಟ್ಟಬಹುದು.

ಬರಹ :
– Dr Jyothi k Laxmi Clinic, Mangalore, 94481 68053

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಸರ್ಕಾರಿ ವೈದ್ಯರು ಆಸ್ಪತ್ರೆಗಳಲ್ಲಿ ಬೆಳಗ್ಗೆ 9 ಗಂಟೆಯಿಂದ 4 ಗಂಟೆಯವರೆಗೆ ಇರಬೇಕು- ಸಚಿವ ಶರಣಪ್ರಕಾಶ್ ಪಾಟೀಲ್
March 12, 2025
7:19 AM
by: The Rural Mirror ಸುದ್ದಿಜಾಲ
ಕುಂಭಮೇಳದ ಪಯಣ ದೇಶದ ಇಣುಕುನೋಟ | ಭೌತಿಕ ಅಭಿವೃದ್ಧಿಯೊಂದಿಗೆ ಬೌದ್ಧಿಕ ಅಭಿವೃದ್ಧಿ ಕೂಡಾ ವೇಗ ಪಡೆಯಬೇಕಿದೆ |
March 11, 2025
7:00 AM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ
ಕುಂಭಮೇಳ | ಸಮಯ ಬಾರದೆ ಒಂದಿನಿತೂ ಮುಂದೆ ಸಾಗದು…
March 10, 2025
7:24 AM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ
ಕುಂಭಮೇಳ | ಕುಂಭಸ್ನಾನ ಮುಗಿಸಿ ಹೊರಟಾಗ….
March 9, 2025
8:31 AM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

You cannot copy content of this page - Copyright -The Rural Mirror