Opinion

ಹಳೆಯದಾದ ದೇವರ ಫೋಟೋ ಬೇಡವೆಂದಾದರೆ ಅಶ್ವತ್ಥ ಮರದಡಿ ಇಡದಿರಿ..! | ಹಾಗಾದ್ರೆ ಏನು ಮಾಡಬೇಕು..? |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ದೇವರ ಫೋಟೋವನ್ನು(God Photo) ಸಿಕ್ಕಸಿಕ್ಕಲ್ಲಿ ಬಿಸಾಡಿದರೆ ಪಾಪ ಸುತ್ತಿಕೊಳ್ಳುತ್ತದೆ ಎಂದು ಕೆಲವರು ಹೆದರಿಸುವಾಗ, ಏನು ಮಾಡುವುದಪ್ಪಾ ಎನ್ನುವ ದೊಡ್ಡ ಸಂದೇಹ ಕಾಡುತ್ತದೆ. ಕೆಲವರು ದೇವರ ಫೋಟೋಗಳನ್ನು ದೇವಸ್ಥಾನದಲ್ಲಿರುವ ಅಶ್ವತ್ಥ ವೃಕ್ಷದ(pipal tree) ಕೆಳಗೆ ಇಡುತ್ತಾರೆ. ಯಾವುದೇ ಮರವಿರಲಿ ಅದರ ಕೆಳಗೆ ಊನವಾದ ದೇವರ ಫೋಟೋ, ಭಿನ್ನವಾದ ದೇವರ ಫೋಟೋ ಇಟ್ಟುಬಿಡುತ್ತಾರೆ. ಆದರೆ ಹೀಗೆ ಮಾಡುವುದು ಒಳ್ಳೆಯದಲ್ಲ.

Advertisement

ವರ್ಷಗಳ ಕಾಲ ಪೂಜಿಸಿದಂತಹ ದೇವರ ಫೋಟೋವನ್ನು ಸೂಕ್ತವಾದ ರೀತಿಯಲ್ಲಿ ಗೌರವದಿಂದ ಹರಿಯುವ ನೀರಿನಲ್ಲಿ(Flowing Water) ಬಿಡಬೇಕು. ಕಸ ಕಡ್ಡಿ ತುಂಬಿಕೊಂಡಿರುವ ನೀರು ಅಥವಾ ಪ್ರವಾಹದ ನೀರಿನಲ್ಲಿ ಬಿಡದೇ ಶುದ್ಧವಾಗಿ ಹರಿಯುವ ನದಿಯ ನೀರು, ಜಲಪಾತದ ನೀರಿನಲ್ಲಿ ಬಿಡಬೇಕು. ನೀರಿನಲ್ಲಿ ಬಿಡುವ ಮುನ್ನ ಫೋಟೋ ಫ್ರೇಂ, ಗಾಜಿನ ಕನ್ನಡಿ ಇದ್ದಲ್ಲಿ ಅದನ್ನು ತೆಗೆದು ನೀರಿನಲ್ಲಿ ಬಿಡಬೇಕು, ಇಲ್ಲವಾದಲ್ಲಿ ಗಾಜಿನಿಂದ ಇತರರಿಗೆ ಗಾಯವಾಗಬಹುದು. ನದಿಯ ನೀರಿನಲ್ಲಿ ಬಿಡಲಾಗದಿದ್ದಲ್ಲಿ ಅಗ್ನಿಯಲ್ಲೂ(Fire) ಸುಡಬಹುದು. ಸುಡುವಾಗ ಮರದ ಕೆಳಗೆ ಸುಟ್ಟರೆ ಒಳ್ಳೆಯದು.

ತೀರ್ಥಯಾತ್ರೆ ಅಥವಾ ದೇವಸ್ಥಾನಗಳಿಗೆ(Pilgrimage and temple) ಹೋದಾಗ ಫೋಟೋವನ್ನು ಕೊಂಡರೆ, ಅದನ್ನು ಇತರರಿಗೆ ಕೊಡಬೇಕೆಂಬ ಮನಸ್ಸಿದ್ದಲ್ಲಿ ಅವರಿಗೆ ಅದು ನಿಜವಾಗಿಯೂ ಬೇಕೇ ಎನ್ನುವುದನ್ನು ತಿಳಿದುಕೊಂಡು ನೀಡಬೇಕು. ಯಾರಿಗೆ ಅಗತ್ಯವಿದೆಯೋ ಅವರಿಗೆ ಮಾತ್ರ ನೀಡುವುದು ಒಳ್ಳೆಯದು. ಮುಖ್ಯವಾಗಿ ಅವರಿಗೆ ಫೋಟೋ ತೆಗೆದುಕೊಳ್ಳಲು ಇಷ್ಟವಿದ್ದಲ್ಲಿ ಮಾತ್ರ ನೀಡಿ. ದೇವರ ಫೋಟೋವನ್ನು ಇತರರಿಗೆ ನೀಡಿದರೆ ತೆಗೆದುಕೊಂಡವರು ಅದಕ್ಕೆ ಸೂಕ್ತ ಪೂಜೆಯನ್ನು ಸಲ್ಲಿವುದು ಮುಖ್ಯ.

ಮನೆಯಲ್ಲಿ ಒಂದೇ ರೀತಿಯ ದೇವರ ಫೋಟೋ ಅಥವಾ ಹಳೆಯ ಫೋಟೋ ನಿಮಗೆ ಬೇಡವೆಂದಾದಲ್ಲಿ ದೇವಸ್ಥಾನದಲ್ಲಿ ಇಟ್ಟುಕೊಳ್ಳುವುದಾದರೆ ನೀಡಬಹುದು. ಇದನ್ನು ಹೊರತು ಪಡಿಸಿ ಮನಸು ಬಂದ ಕಡೆ ಬಿಸಾಕಿದರೆ ದೇವರಿಗೆ ಅಗೌರವ ನೀಡಿದಂತಾಗುವುದು. ದೇವರ ಮೂರ್ತಿಗಳು ಒಡೆದುಹೋಗಿದ್ದಲ್ಲಿ, ಬಿರುಕುಬಿಟ್ಟಿದ್ದಲ್ಲಿ ಅದನ್ನೂ ಹರಿವ ನೀರಿನಲ್ಲಿ ಬಿಡಬಹುದು. ಆದರೆ ಮಾಲಿನ್ಯ ಉಂಟು ಮಾಡುವ ಮೂರ್ತಿಗಳನ್ನು ನೀರಿನಲ್ಲಿ ಬಿಡಬಾರದು.

– ವಾಟ್ಸ್‌ ಅಪ್‌ ಮಾಹಿತಿ

Under the tree they leave a photo of a deformed God, a photo of a different God. But it is not good to do so. A photo of a deity worshiped for years should be left in flowing water with due respect. The clean flowing river water should be discharged into the water of the waterfall rather than the water full of garbage or the flood water.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಭಗವದ್ಗೀತೆ ಬಿಡಿ, ಬೇರೆ ಏನಾದ್ರೂ ಸ್ತೋತ್ರ ಬರ್ತದಾ..?

ಹಿಂದೂ ಧರ್ಮದ ವಿಶೇಷತೆ ಎಂದರೆ ಅದು ಸ್ವ ವಿಮರ್ಶೆಯ (self -criticism) ಸ್ವಾತಂತ್ರ್ಯ…

9 hours ago

ಮೇ.9 | ಪುತ್ತೂರು ಮುಳಿಯದಲ್ಲಿ ಪುದರ್ ದೀತಿಜಿ – ತುಳು ಹಾಸ್ಯ ನಾಟಕ | ಸಂತೋಷದಿಂದ ನಗಲು ಒಂದು ವೇದಿಕೆ

ಮುಳಿಯ ಗೋಲ್ಡ್ ಅಂಡ್ ಡೈಮಂಡ್ ಹೊಸತನದ ಶೋರೂಮ್ ಅನಾವರಣದ ಅಂಗವಾಗಿ ಮೇ 9…

11 hours ago

ಮೇ.11 ಮುಳಿಯ ಕೃಷಿ ಗೋಷ್ಟಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ | ಕೃಷಿ-ಕೃಷಿ ಮಾರುಕಟ್ಟೆ-ಕೃಷಿ ಯಾಂತ್ರೀಕರಣ -ಕೃಷಿ ಬೆಳವಣಿಗೆ |

ಮುಳಿಯ ನೂತನ ನವೀಕೃತ ವಿಸ್ತೃತ ಆಭರಣ ಮಳಿಗೆಯ ಅನಾವರಣ ಪ್ರಯುಕ್ತ ಕೃಷಿ ಬೆಳವಣಿಗೆಗೆ…

12 hours ago

ಧ್ರುವ ಯೋಗ ಯಾವುದರ ಸಂಕೇತ..? | ಯಾವ ರಾಶಿಯವರಿಗೆ ಸದ್ಯ ಈ ಯೋಗ..?

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

12 hours ago

ರಾಷ್ಟ್ರೀಯ ಭದ್ರತೆ | ಪ್ರಧಾನಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ | ಹಲವು ವಿಷಯಗಳ ಕುರಿತು ಚರ್ಚೆ

ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರದ ಎಲ್ಲಾ…

22 hours ago

ರಾಜ್ಯದ 6 ಜಿಲ್ಲೆಗಳಲ್ಲಿ ಶೀಥಲೀಕರಣ ಘಟಕ ನಿರ್ಮಾಣ

ರಾಜ್ಯದ 6 ಜಿಲ್ಲೆಗಳಲ್ಲಿ ತೋಟಗಾರಿಕಾ ಬೆಳೆಗಳಿಗೆ ಅನುಕೂಲವಾಗುವಂತೆ ಶೀಥಲೀಕರಣ ಘಟಕಗಳನ್ನು ನಿರ್ಮಿಸಲಾಗುತ್ತಿದೆ ಎಂದು…

23 hours ago