Advertisement
Opinion

ಹಳೆಯದಾದ ದೇವರ ಫೋಟೋ ಬೇಡವೆಂದಾದರೆ ಅಶ್ವತ್ಥ ಮರದಡಿ ಇಡದಿರಿ..! | ಹಾಗಾದ್ರೆ ಏನು ಮಾಡಬೇಕು..? |

Share

ದೇವರ ಫೋಟೋವನ್ನು(God Photo) ಸಿಕ್ಕಸಿಕ್ಕಲ್ಲಿ ಬಿಸಾಡಿದರೆ ಪಾಪ ಸುತ್ತಿಕೊಳ್ಳುತ್ತದೆ ಎಂದು ಕೆಲವರು ಹೆದರಿಸುವಾಗ, ಏನು ಮಾಡುವುದಪ್ಪಾ ಎನ್ನುವ ದೊಡ್ಡ ಸಂದೇಹ ಕಾಡುತ್ತದೆ. ಕೆಲವರು ದೇವರ ಫೋಟೋಗಳನ್ನು ದೇವಸ್ಥಾನದಲ್ಲಿರುವ ಅಶ್ವತ್ಥ ವೃಕ್ಷದ(pipal tree) ಕೆಳಗೆ ಇಡುತ್ತಾರೆ. ಯಾವುದೇ ಮರವಿರಲಿ ಅದರ ಕೆಳಗೆ ಊನವಾದ ದೇವರ ಫೋಟೋ, ಭಿನ್ನವಾದ ದೇವರ ಫೋಟೋ ಇಟ್ಟುಬಿಡುತ್ತಾರೆ. ಆದರೆ ಹೀಗೆ ಮಾಡುವುದು ಒಳ್ಳೆಯದಲ್ಲ.

ವರ್ಷಗಳ ಕಾಲ ಪೂಜಿಸಿದಂತಹ ದೇವರ ಫೋಟೋವನ್ನು ಸೂಕ್ತವಾದ ರೀತಿಯಲ್ಲಿ ಗೌರವದಿಂದ ಹರಿಯುವ ನೀರಿನಲ್ಲಿ(Flowing Water) ಬಿಡಬೇಕು. ಕಸ ಕಡ್ಡಿ ತುಂಬಿಕೊಂಡಿರುವ ನೀರು ಅಥವಾ ಪ್ರವಾಹದ ನೀರಿನಲ್ಲಿ ಬಿಡದೇ ಶುದ್ಧವಾಗಿ ಹರಿಯುವ ನದಿಯ ನೀರು, ಜಲಪಾತದ ನೀರಿನಲ್ಲಿ ಬಿಡಬೇಕು. ನೀರಿನಲ್ಲಿ ಬಿಡುವ ಮುನ್ನ ಫೋಟೋ ಫ್ರೇಂ, ಗಾಜಿನ ಕನ್ನಡಿ ಇದ್ದಲ್ಲಿ ಅದನ್ನು ತೆಗೆದು ನೀರಿನಲ್ಲಿ ಬಿಡಬೇಕು, ಇಲ್ಲವಾದಲ್ಲಿ ಗಾಜಿನಿಂದ ಇತರರಿಗೆ ಗಾಯವಾಗಬಹುದು. ನದಿಯ ನೀರಿನಲ್ಲಿ ಬಿಡಲಾಗದಿದ್ದಲ್ಲಿ ಅಗ್ನಿಯಲ್ಲೂ(Fire) ಸುಡಬಹುದು. ಸುಡುವಾಗ ಮರದ ಕೆಳಗೆ ಸುಟ್ಟರೆ ಒಳ್ಳೆಯದು.

ತೀರ್ಥಯಾತ್ರೆ ಅಥವಾ ದೇವಸ್ಥಾನಗಳಿಗೆ(Pilgrimage and temple) ಹೋದಾಗ ಫೋಟೋವನ್ನು ಕೊಂಡರೆ, ಅದನ್ನು ಇತರರಿಗೆ ಕೊಡಬೇಕೆಂಬ ಮನಸ್ಸಿದ್ದಲ್ಲಿ ಅವರಿಗೆ ಅದು ನಿಜವಾಗಿಯೂ ಬೇಕೇ ಎನ್ನುವುದನ್ನು ತಿಳಿದುಕೊಂಡು ನೀಡಬೇಕು. ಯಾರಿಗೆ ಅಗತ್ಯವಿದೆಯೋ ಅವರಿಗೆ ಮಾತ್ರ ನೀಡುವುದು ಒಳ್ಳೆಯದು. ಮುಖ್ಯವಾಗಿ ಅವರಿಗೆ ಫೋಟೋ ತೆಗೆದುಕೊಳ್ಳಲು ಇಷ್ಟವಿದ್ದಲ್ಲಿ ಮಾತ್ರ ನೀಡಿ. ದೇವರ ಫೋಟೋವನ್ನು ಇತರರಿಗೆ ನೀಡಿದರೆ ತೆಗೆದುಕೊಂಡವರು ಅದಕ್ಕೆ ಸೂಕ್ತ ಪೂಜೆಯನ್ನು ಸಲ್ಲಿವುದು ಮುಖ್ಯ.

ಮನೆಯಲ್ಲಿ ಒಂದೇ ರೀತಿಯ ದೇವರ ಫೋಟೋ ಅಥವಾ ಹಳೆಯ ಫೋಟೋ ನಿಮಗೆ ಬೇಡವೆಂದಾದಲ್ಲಿ ದೇವಸ್ಥಾನದಲ್ಲಿ ಇಟ್ಟುಕೊಳ್ಳುವುದಾದರೆ ನೀಡಬಹುದು. ಇದನ್ನು ಹೊರತು ಪಡಿಸಿ ಮನಸು ಬಂದ ಕಡೆ ಬಿಸಾಕಿದರೆ ದೇವರಿಗೆ ಅಗೌರವ ನೀಡಿದಂತಾಗುವುದು. ದೇವರ ಮೂರ್ತಿಗಳು ಒಡೆದುಹೋಗಿದ್ದಲ್ಲಿ, ಬಿರುಕುಬಿಟ್ಟಿದ್ದಲ್ಲಿ ಅದನ್ನೂ ಹರಿವ ನೀರಿನಲ್ಲಿ ಬಿಡಬಹುದು. ಆದರೆ ಮಾಲಿನ್ಯ ಉಂಟು ಮಾಡುವ ಮೂರ್ತಿಗಳನ್ನು ನೀರಿನಲ್ಲಿ ಬಿಡಬಾರದು.

– ವಾಟ್ಸ್‌ ಅಪ್‌ ಮಾಹಿತಿ

Under the tree they leave a photo of a deformed God, a photo of a different God. But it is not good to do so. A photo of a deity worshiped for years should be left in flowing water with due respect. The clean flowing river water should be discharged into the water of the waterfall rather than the water full of garbage or the flood water.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಬೇರೊಬ್ಬರ ಬದುಕಿನ ಅಳತೆಯಲ್ಲಿ ನಮ್ಮ ಬದುಕನ್ನು ಅಳೆಯುತ್ತಿದ್ದೇವೆಯೇ?

ಬೇರೊಬ್ಬರ ಬದುಕಿನೊಂದಿಗೆ ನಿರಂತರ ಹೋಲಿಕೆ ನಮ್ಮ ನೆಮ್ಮದಿ ಮತ್ತು ಆತ್ಮವಿಶ್ವಾಸವನ್ನು ಕಸಿದುಕೊಳ್ಳಬಹುದು. ಮತ್ತೊಬ್ಬರ…

1 hour ago

ಗೂಗಲ್‌ ಮತ್ತು AIಯ ಕಾಲದಲ್ಲೂ ಗುರು ಏಕೆ ಬೇಕು..?

ಶಿಕ್ಷಕರ ದಿನಾಚರಣೆ ಶಿಕ್ಷಕರನ್ನು ಸನ್ಮಾನಿಸುವ ದಿನ ಮಾತ್ರವಲ್ಲ, ಶಿಕ್ಷಕತ್ವ ಮತ್ತು ಶಿಕ್ಷಣದ ನಿಜವಾದ…

2 hours ago

ಮಳೆ ಹೆಚ್ಚಿಸಲು ಮೋಡ ಬಿತ್ತನೆಗೆ ಚಾಲನೆ – ಮೋಡ ಬಿತ್ತನೆಯಿಂದ ಮಳೆ ಬರುತ್ತದೆಯೇ?

ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ₹28.52 ಕೋಟಿ ವೆಚ್ಚದ 60 ದಿನಗಳ…

10 hours ago

3,000 ವರ್ಷಗಳ ಹಿಂದೆಯೇ ರೈತರು ಹವಾಮಾನ ಬದಲಾವಣೆಗೆ ಹೊಂದಿಕೊಂಡಿದ್ದರು..! ಬಿಹಾರದ ಪುರಾತನ ಬೀಜಗಳು ಹೇಳಿದ ಕೃಷಿ ಪಾಠ

ಬಿಹಾರದ ಯುರೆನ್‌ನಲ್ಲಿ ಪತ್ತೆಯಾದ 5 ಲಕ್ಷಕ್ಕೂ ಹೆಚ್ಚು ಸುಟ್ಟ ಬೀಜಗಳ ಅಧ್ಯಯನವು ಭಾರತದ…

12 hours ago

ಶ್ರೀಕೃಷ್ಣನನ್ನು ದೇವನಾಗಿ ಮಾತ್ರವಲ್ಲ, ಗುರುವಿನ ರೂಪದಲ್ಲೂ ಕಾಣುವ ದೃಷ್ಟಿ

ಶ್ರೀಕೃಷ್ಣನನ್ನು ಕೇವಲ ದೇವರ ಅವತಾರವಾಗಿ ನೋಡುವುದಕ್ಕಿಂತ, ಮನುಷ್ಯರ ನಡುವೆ ನಿಂತು ಉಪದೇಶಿಸಿದ ಮಾನವಶಿಕ್ಷಕನಾಗಿಯೂ…

17 hours ago

ಹವಾಮಾನ ವರದಿ | 04-09-2026 | ಮುಂಗಾರು ದುರ್ಬಲ… ಆದರೂ ಕರ್ನಾಟಕದಲ್ಲಿ ಗುಡುಗು ಮಳೆ ಮುಂದುವರಿಯುವ ಸಾಧ್ಯತೆ!

ಮುಂಗಾರು ದುರ್ಬಲಗೊಂಡಿದ್ದರೂ ಸ್ಥಳೀಯ ಮೋಡಗಳ ಬೆಳವಣಿಗೆಯಿಂದ ಮಲೆನಾಡು ಹಾಗೂ ಒಳನಾಡಿನಲ್ಲಿ ಗುಡುಗು ಸಹಿತ…

17 hours ago