ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ಹವಾಮಾನ ಎಚ್ಚರಿಕೆ ನೀಡಲಾಗಿದೆ. ಉಡುಪಿ, ದಕ್ಷಿಣ ಕನ್ನಡ, ರಾಯಚೂರು ಹಾಗೂ ಬೀದರ್ ಜಿಲ್ಲೆಗಳಲ್ಲಿ ಪ್ರತ್ಯೇಕ ಪ್ರದೇಶಗಳಲ್ಲಿ ಗುಡುಗು-ಮಿಂಚಿನೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಕೆಲವೆಡೆ ತೀವ್ರ ಮಳೆಯ ಸುರಿಮಳೆ ಹಾಗೂ ಗಂಟೆಗೆ 40 ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.
ಮಳೆಯ ಕಾರಣದಿಂದ ಏನೆಲ್ಲಾ ಪರಿಣಾಮ ಉಂಟಾಗಬಹುದು? : ಕೆಲವೆಡೆ ತಾತ್ಕಾಲಿಕ ವಿದ್ಯುತ್ ವ್ಯತ್ಯಯ ಸಂಭವಿಸಬಹುದು, ಸಂಚಾರದಲ್ಲಿ ಅಡಚಣೆ ಹಾಗೂ ಟ್ರಾಫಿಕ್ ಸಮಸ್ಯೆ ಉಂಟಾಗಬಹುದು, ಸುರಕ್ಷಿತವಲ್ಲದ ಕಟ್ಟಡಗಳಿಗೆ ಹಾನಿಯಾಗುವ ಸಾಧ್ಯತೆ, ದುರ್ಬಲ ಮರಗಳ ಕೊಂಬೆಗಳು ಮುರಿಯುವ ಅಥವಾ ಮರಗಳು ಉರುಳುವ ಸಾಧ್ಯತೆ, ತೆರೆದ ಜಾಗದಲ್ಲಿ ಇಟ್ಟಿರುವ ಕೊಯ್ಲು ಮಾಡಿದ ಕೃಷಿ ಉತ್ಪನ್ನಗಳಿಗೆ ಹಾನಿಯಾಗಬಹುದು.
ಜನರು ಪಾಲಿಸಬೇಕಾದ ಮುನ್ನೆಚ್ಚರಿಕೆಗಳು
- ಸಾಧ್ಯವಾದಷ್ಟು ಮನೆಯೊಳಗೇ ಸುರಕ್ಷಿತವಾಗಿ ಇರಬೇಕು.
- ಅಗತ್ಯವಿಲ್ಲದಿದ್ದರೆ ಪ್ರಯಾಣವನ್ನು ತಪ್ಪಿಸಬೇಕು.
- ಮರಗಳ ಕೆಳಗೆ ಆಶ್ರಯ ಪಡೆಯಬಾರದು.
- ಕಾಂಕ್ರೀಟ್ ಗೋಡೆಗಳಿಗೆ ಒರಗಿಕೊಂಡು ನಿಲ್ಲಬಾರದು.
- ಕೆರೆ, ನದಿ ಸೇರಿದಂತೆ ಜಲಮೂಲಗಳಿಂದ ದೂರವಿರಬೇಕು.
- ವಿದ್ಯುತ್ ತಂತಿ ಹಾಗೂ ವಿದ್ಯುತ್ ಹರಿಯುವ ವಸ್ತುಗಳಿಂದ ದೂರ ಇರಬೇಕು.
- ವಾಹನ ಚಲಾಯಿಸುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕು.
- ಕೊಯ್ಲು ಮಾಡಿದ ಬೆಳೆಗಳನ್ನು ತೆರೆದ ಜಾಗದಲ್ಲಿ ಇಡಬಾರದು.
ಸ್ಥಳೀಯ ಹವಾಮಾನ ಪರಿಸ್ಥಿತಿಯನ್ನು ಗಮನಿಸಿ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿದೆ.
The India Meteorological Department (IMD) has issued a 3-hour Nowcast warning for Udupi, Dakshina Kannada, Raichur and Bidar districts. Moderate rain with thunderstorms, intense spells of rainfall and winds of 40–50 kmph are likely at isolated places. People are advised to stay indoors and avoid unnecessary travel.

