ಮಾವು ಉತ್ಪಾದನೆಯಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನ ಪಡೆದಿರುವ ರಾಮನಗರ ಜಿಲ್ಲೆಯಲ್ಲಿ ಈ ಬಾರಿ ಮಳೆ, ಬಿರುಗಾಳಿ, ಆಲಿಕಲ್ಲು ಇತ್ಯಾದಿಗಳಿಂದ ಇಳುವರಿ ತೀವ್ರ ಕುಸಿತಗೊಂಡಿದೆ.ಬೆಲೆ ಕುಸಿಯುವ ಆತಂಕದಿಂದ ಮಾರುಕಟ್ಟೆಗೆ ಏಕಕಾಲದಲ್ಲಿ ಮಾವು ಸಾಗಣೆ ಮಾಡುತ್ತಿದ್ದು, ಪೂರೈಕೆ ಪ್ರಮಾಣ ಹೆಚ್ಚಾಗಿ ಬೆಲೆಯೂ ಕುಸಿತಗೊಂಡಿದೆ.
ಅಕಾಲಿಕ ಮಳೆ, ಬಿರುಗಾಳಿಯಿಂದ ಮಾವು ಇಳುವರಿ ಕುಸಿತವಾಗಿದ್ದು, ಈ ಹಿನ್ನಲೆಯಲ್ಲಿ ಬೆಳೆಗಾರರ ನೆರವಿಗೆ ಸರ್ಕಾರ ಕೂಡಲೇ ಧಾವಿಸಬೇಕು.ಮಾವು ಬೆಳೆಗಾರ ಹೊನ್ನಪ್ಪ, ಈ ಬಾರಿ ಉತ್ತಮ ಫಸಲು ಬರುವ ನಿರೀಕ್ಷೆಯಿತ್ತು. ಆದರೆ ಬೆಲೆ ಕುಸಿತಗೊಂಡಿದೆ. ಎಲ್ಲ ಲೆಕ್ಕಾಚಾರಗಳೆಲ್ಲಾ ಹುಸಿಯಾಗಿವೆ ಎಂದು ಮಾವು ಬೆಳೆಗಾರ ಗೋಪಾಲ್ ಹೇಳುತ್ತಾರೆ.
ಈ ಬಾರಿ ಉತ್ತಮ ಫಸಲು ಬರುವ ನಿರೀಕ್ಷೆಯಿತ್ತು. ಆದರೆ ಬೆಲೆ ಕುಸಿತಗೊಂಡಿದೆ. ಎಲ್ಲ ಲೆಕ್ಕಾಚಾರಗಳೆಲ್ಲಾ ಹುಸಿಯಾಗಿವೆ.ಈ ಬಾರಿ ಉತ್ತಮ ಆದಾಯ ಬರುವ ನಿರೀಕ್ಷೆ ಇತ್ತು. ಆಲಿಕಲ್ಲು ಮತ್ತು ಮಳೆಯಿಂದಾಗಿ ಬೆಲೆ ಮತ್ತು ಇಳುವರಿ ಎರಡೂ ಕುಸಿತವಾಗಿದೆ ಎಂದು ಮಾವು ಬೆಳೆಗಾರ ಹೊನ್ನಪ್ಪ ಹೇಳುತ್ತಾರೆ,
ರಾಮನಗರ ಜಿಲ್ಲೆಯ 32 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ಮಾವು ಬೆಳೆಯಲಾಗಿದೆ. ಆದರೆ ಪ್ರಕೃತಿಯ ವಿಕೋಪದಿಂದ ಸಮಸ್ಯೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ NDRF, SDRF ನಿಯಮದ ಅನ್ವಯ ಪರಿಹಾರ ನೀಡಲು ಹಾನಿಯ ಸಮೀಕ್ಷೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ರಾಮನಗರ ಜಿಲ್ಲಾ ತೋಟಗಾರಿಕಾ ಉಪನಿರ್ದೇಶಕ ಎಂ.ಎಸ್. ರಾಜು ಹೇಳಿದರು.
23.07.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ ಕರಾವಳಿ: ಕಾಸರಗೋಡು, ದಕ್ಷಿಣ…
ಆಮದುಗೊಂಡ ಕಳಪೆ ಅಡಿಕೆಯನ್ನು ದೇಶೀಯ ಅಡಿಕೆಯೊಂದಿಗೆ ಮಿಶ್ರಣ ಮಾಡಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ…
ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಬಿಟ್ಟು ಬಿಟ್ಟು ಸಾಧಾರಣ ಮಳೆ…
ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಎಲೆ ಚುಕ್ಕೆ, ಹಳದಿ ಎಲೆ ಮತ್ತು ಕೊಳೆ ರೋಗಗಳಿಗೆ…
ದೇಶಾದ್ಯಂತ ಮುಂಗಾರು ಮತ್ತಷ್ಟು ತೀವ್ರಗೊಂಡಿದ್ದು, ಉತ್ತರ ಭಾರತದ ಹಲವು ಭಾಗಗಳಿಗೆ ರೆಡ್ ಅಲರ್ಟ್…
ರಾಜ್ಯದಲ್ಲಿ ಮುಂಗಾರು ಮಳೆ 39% ಕೊರತೆಯಾಗಿದ್ದು, 26 ಜಿಲ್ಲೆಗಳ 178 ತಾಲ್ಲೂಕುಗಳಲ್ಲಿ ಬರದ…