ಮಾವು ಉತ್ಪಾದನೆಯಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನ ಪಡೆದಿರುವ ರಾಮನಗರ ಜಿಲ್ಲೆಯಲ್ಲಿ ಈ ಬಾರಿ ಮಳೆ, ಬಿರುಗಾಳಿ, ಆಲಿಕಲ್ಲು ಇತ್ಯಾದಿಗಳಿಂದ ಇಳುವರಿ ತೀವ್ರ ಕುಸಿತಗೊಂಡಿದೆ.ಬೆಲೆ ಕುಸಿಯುವ ಆತಂಕದಿಂದ ಮಾರುಕಟ್ಟೆಗೆ ಏಕಕಾಲದಲ್ಲಿ ಮಾವು ಸಾಗಣೆ ಮಾಡುತ್ತಿದ್ದು, ಪೂರೈಕೆ ಪ್ರಮಾಣ ಹೆಚ್ಚಾಗಿ ಬೆಲೆಯೂ ಕುಸಿತಗೊಂಡಿದೆ.
ಅಕಾಲಿಕ ಮಳೆ, ಬಿರುಗಾಳಿಯಿಂದ ಮಾವು ಇಳುವರಿ ಕುಸಿತವಾಗಿದ್ದು, ಈ ಹಿನ್ನಲೆಯಲ್ಲಿ ಬೆಳೆಗಾರರ ನೆರವಿಗೆ ಸರ್ಕಾರ ಕೂಡಲೇ ಧಾವಿಸಬೇಕು.ಮಾವು ಬೆಳೆಗಾರ ಹೊನ್ನಪ್ಪ, ಈ ಬಾರಿ ಉತ್ತಮ ಫಸಲು ಬರುವ ನಿರೀಕ್ಷೆಯಿತ್ತು. ಆದರೆ ಬೆಲೆ ಕುಸಿತಗೊಂಡಿದೆ. ಎಲ್ಲ ಲೆಕ್ಕಾಚಾರಗಳೆಲ್ಲಾ ಹುಸಿಯಾಗಿವೆ ಎಂದು ಮಾವು ಬೆಳೆಗಾರ ಗೋಪಾಲ್ ಹೇಳುತ್ತಾರೆ.
ಈ ಬಾರಿ ಉತ್ತಮ ಫಸಲು ಬರುವ ನಿರೀಕ್ಷೆಯಿತ್ತು. ಆದರೆ ಬೆಲೆ ಕುಸಿತಗೊಂಡಿದೆ. ಎಲ್ಲ ಲೆಕ್ಕಾಚಾರಗಳೆಲ್ಲಾ ಹುಸಿಯಾಗಿವೆ.ಈ ಬಾರಿ ಉತ್ತಮ ಆದಾಯ ಬರುವ ನಿರೀಕ್ಷೆ ಇತ್ತು. ಆಲಿಕಲ್ಲು ಮತ್ತು ಮಳೆಯಿಂದಾಗಿ ಬೆಲೆ ಮತ್ತು ಇಳುವರಿ ಎರಡೂ ಕುಸಿತವಾಗಿದೆ ಎಂದು ಮಾವು ಬೆಳೆಗಾರ ಹೊನ್ನಪ್ಪ ಹೇಳುತ್ತಾರೆ,
ರಾಮನಗರ ಜಿಲ್ಲೆಯ 32 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ಮಾವು ಬೆಳೆಯಲಾಗಿದೆ. ಆದರೆ ಪ್ರಕೃತಿಯ ವಿಕೋಪದಿಂದ ಸಮಸ್ಯೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ NDRF, SDRF ನಿಯಮದ ಅನ್ವಯ ಪರಿಹಾರ ನೀಡಲು ಹಾನಿಯ ಸಮೀಕ್ಷೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ರಾಮನಗರ ಜಿಲ್ಲಾ ತೋಟಗಾರಿಕಾ ಉಪನಿರ್ದೇಶಕ ಎಂ.ಎಸ್. ರಾಜು ಹೇಳಿದರು.
ದೇಶದ ಬಹುತೇಕ ಭಾಗಗಳಲ್ಲಿ ನೈಋತ್ಯ ಮುಂಗಾರು ಚುರುಕುಗೊಂಡಿದ್ದು, ಕರ್ನಾಟಕ ಕರಾವಳಿ ಸೇರಿದಂತೆ ಹಲವು…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಜುಲೈ 2ರಂದು ಅಂಗನವಾಡಿ, ಶಾಲೆ…
ಮಹಾರಾಷ್ಟ್ರದಲ್ಲಿ ಅಡಿಕೆ ಲಾರಿಗಳ ತಡೆ ಹಿನ್ನೆಲೆಯಲ್ಲಿ ಶಿರಸಿಯ ವರ್ತಕರು ಸಂಸದ ವಿಶ್ವೇಶ್ವರ ಹೆಗಡೆ…
ಜುಲೈ 2 ಮತ್ತು 3ರಂದು ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆ ಸ್ವಲ್ಪ ಕಡಿಮೆಯಾಗುವ…
ಶಿರಾಡಿ ಘಾಟಿಯಲ್ಲಿ ಪ್ರತಿ ವಾರಾಂತ್ಯ ಉಂಟಾಗುತ್ತಿರುವ ಟ್ರಾಫಿಕ್ ಜಾಮ್ಗೆ ವಿಶೇಷ ಸಂಚಾರ ನಿರ್ವಹಣಾ…
ಜುಲೈ ತಿಂಗಳಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ…