MIRROR FOCUS

ನವರಾತ್ರಿ ಸಂಭ್ರಮ | ಕರಾವಳಿಯಲ್ಲಿಈಗ ಹುಲಿ ವೇಷದ ಕುಣಿತ | ಸ್ಥಾನಪಡೆಯುತ್ತಿರುವ “ಪಿಲಿಗೊಬ್ಬು” |

Share

ದೇಶದೆಲ್ಲೆಡೆ ನವರಾತ್ರಿ ಸಂಭ್ರಮ. ಕರಾವಳಿಯಲ್ಲಿ ನವರಾತ್ರಿಯ ಸಂದರ್ಭ ಹುಲಿವೇಷ ಅತ್ಯಂತ ಮಹತ್ವ ಪಡೆಯುತ್ತದೆ. ಈಚೆಗೆ ಒಂದೆರಡು ವರ್ಷಗಳಿಂದ “ಪಿಲಿಗೊಬ್ಬು” ಗಮನ ಸೆಳೆಯುತ್ತಿರುವ ನೃತ್ಯಗಳಾಗಿದೆ. ದುರ್ಗೆಯ ವಾಹನ ಹುಲಿ. ಹೀಗಾಗಿ ಇಲ್ಲಿ ಹುಲಿ ವೇಷಕ್ಕೆ ಅದರದ್ದೇ ಆದ ರೀತಿ-ನಿಯಮಗಳು ಇವೆ.…..ಮುಂದೆ ಓದಿ….

Advertisement

ಕರಾವಳಿಯಲ್ಲಿ ನವರಾತ್ರಿಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತದೆ. ಅದರಲ್ಲಿಯೂ ದಸರಾ ಮೆರವಣಿಗೆಯಲ್ಲಿ ಹುಲಿ ವೇಷ ನೃತ್ಯ ವಿಶೇಷ ಆಕರ್ಷಣೆಯಾಗಿರುತ್ತದೆ. ಹುಲಿ ವೇಷ ನರ್ತನ ಕರಾವಳಿ ಭಾಗದ ಜನಪದ ಕಲೆಯಾಗಿ ಗುರುತಿಸಿಕೊಂಡಿದೆ. ದಸರಾ ಅಂಗವಾಗಿ ಮಂಗಳೂರಿನಲ್ಲಿ ನಿನ್ನೆ ನಡೆದ ಹುಲಿ ವೇಷದ ಊದು ಪೂಜೆ ಕೂಡಾ ಅತ್ಯಂತ ಪ್ರಮುಖವಾದ ಭಾಗವಾಗಿದೆ.

ಹುಲಿ ವೇಷ ಎನ್ನುವುದು ಕೇವಲ ಕುಣಿತವಲ್ಲ. ಅದರ ಹಿಂದೆ ಹಲವು ಆಚರಣೆಗಳು, ನಂಬಿಕೆ ಕೂಡಾ ಇದೆ. ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಆಸಕ್ತಿಯ ಹುಲಿ ನೃತ್ಯ ಮೇಲ್ನೋಟಕ್ಕೆ ಮನರಂಜನೆಯ ವಿಷಯವಾಗಿ ಕಂಡರೂ ಇದು ದೇವಿಯ  ಆರಾಧನೆಯ  ಇನ್ನೊಂದು ರೂಪ. ಕರಾವಳಿಯಲ್ಲಿ ನಾಗ ಮತ್ತು ದೇವಿಯರ ಆರಾಧನೆಗೆ ಹೆಚ್ಚು ಆದ್ಯತೆ. ಅದಕ್ಕಾಗಿಯೇ ಇಲ್ಲಿ ಹುಲಿ ಕುಣಿತಕ್ಕೂ ಮಹತ್ವ.…..ಮುಂದೆ ಓದಿ….

ಹುಲಿ ವೇಷ ಹಾಕುವುದು ಅಷ್ಟು ಸುಲಭ ಅಲ್ಲ. ತಾಸೆಯ ಪೆಟ್ಟಿಗೆ ನಮ್ಮ ಕೈಕಾಲು ಸ್ಟೆಪ್ ಹಾಕಬಹುದು. ಆದರೆ ಒಂದು ಹುಲಿ ವೇಷ ಹಾಕಬೇಕಾದರೆ ತುಂಬಾ ತಾಳ್ಮೆ ಮತ್ತು ಶ್ರಮ ಬೇಕಾಗುತ್ತದೆ. ವೇಷಧಾರಿ ಮೈಮೇಲೆ ಬಣ್ಣ ಬಳಿದಾಗ ಅದು ಒಣಗುವವರೆಗೂ ನಿಂತಿರಬೇಕು. ಕನಿಷ್ಟ 5 ರಿಂದ 6 ಗಂಟೆ ಬಣ್ಣಕ್ಕಾಗಿ ನಿಲ್ಲಬೇಕು. ಬಣ್ಣದ ಘಾಟು ಮತ್ತು ಉರಿ ನಿಧಾನವಾಗಿ ಮೈಯಲ್ಲಿ ಹೆಚ್ಚಾಗುತ್ತದೆ. ಬಣ್ಣ ಮುಕ್ತಾಯಗೊಂಡ ಬಳಿಕ ಉಳಿದ ಅಲಂಕಾರಗಳನ್ನು ಮಾಡಲಾಗುತ್ತದೆ. ಬಳಿಕ ದೇವರ ಮುಂಭಾಗ ಪೂಜೆ‌ ಸಲ್ಲಿಸಿ ಧೂಪ ಸೇವೆ ನಡೆದು ಹುಲಿವೇಷಧಾರಿಗಳು ಹೆಜ್ಜೆಹಾಕುತ್ತಾರೆ. ಹೀಗಾಗಿ ಇಲ್ಲಿ ವೇಷಧಾರಿಗೆ ಬದ್ಧತೆಯೂ ಹೆಚ್ಚಾಗಿದೆ.ಹೀಗಾಗಿ  ಹುಲಿವೇಷ ಕೇವಲ ಮನರಂಜನೆ ಮಾತ್ರವಲ್ಲ, ವೇಷವೂ ಅಲ್ಲ, ಕರಾವಳಿಯ ಸಂಸ್ಕೃತಿ ಆಚಾರ ವಿಚಾರ ನಂಬಿಕೆ ಸಂಪ್ರದಾಯವೂ ಹೌದು.

ಹೀಗೆ ಆಚರಿಸುವ ಹುಲಿ ವೇಷಕ್ಕೂ ಒಂದು ಕತೆ ಇದೆ. ಮಗುವಿನ ಸಮಸ್ಯೆ ನಿವಾರಣೆಗೆ ತಾಯಿಯೊಬ್ಬಳು ದೇವಿ ಮುಂದೆ ಪ್ರಾರ್ಥನೆ ನಡೆಸಿ ಮುಂದಿನ ಬಾರಿ ವಿಶೇಷ ಸೇವೆಯನ್ನು ದೇವಿ ಮುಂದೆ ಮಾಡಿಸುವುದಾಗಿ ಹರಕೆ ಹೇಳಿಕೊಂಡಿದ್ದರಂತೆ. ಹರಿಕೆ ಹೇಳಿದ ಕೆಲವೇ ದಿನದಲ್ಲಿ ಮಗುವಿನ ಸಮಸ್ಯೆ ನಿವಾರಣೆಯಾಗಿತ್ತಂತೆ. ಅದಕ್ಕಾಗಿ ಮುಂದಿನ ವರ್ಷ ದೇವಿಯ ಮುಂದೆ ಸಂಭ್ರಮದಿಂದ ಕುಣಿದು ಹರಿಕೆ ತೀರಿಸಿದಂತೆ. ಆ ಬಳಿಕ ದೇವಿಯ ವಾಹನ ಹುಲಿಯೂ ಆದ್ದರಿಂದ ಹುಲಿ ವೇಷ ಆರಂಭವಾಯಿತು ಎನ್ನುವುದು ಕತೆ. ಹಾಗಾಗಿ ಈಗಲೂ ಹುಲಿ ವೇಷಕ್ಕೆ ಗೌರವ, ಮಾನ್ಯತೆ ಇದೆ.…..ಮುಂದೆ ಓದಿ….

ಹುಲಿ ವೇಷ ಹಾಕುವುದಕ್ಕೂ ಮೊದಲು ಹುಲಿ ವೇಷದ ಸಲಕರಣೆ, ಜಂಡೆಗಳಿಗೆ ಪೂಜೆಯನ್ನು ನಿಷ್ಠೆಯಿಂದ ಮಾಡಲಾಗುತ್ತದೆ. ಆ ಬಳಿಕವಷ್ಟೇ ಹುಲಿ ವೇಷ ಧರಿಸಿ ನರ್ತನ ಮಾಡಲಾಗುತ್ತದೆ ಎನ್ನುತ್ತಾರೆ  ಊದು ಪೂಜೆ ನಡೆಸುವವರಾದ ಕರುಣಾಕರ ಮುಳಿಹಿತ್ಲು.

ನವರಾತ್ರಿ ಆಚರಣೆ ವೇಳೆ ಹುಲಿ ವೇಷಕ್ಕೆ ಮಹತ್ವವಿದೆ. ಹುಲಿಗಳನ್ನು ಸಾಕ್ಷಾತ್ ದೇವಿಯ ವಾಹನವಾಗಿ ಆರಾಧಿಸಲಾಗುತ್ತದೆ. ಹುಲಿ ವೇಷಧಾರಿಗಳು 9 ದಿನ ಕಟ್ಟುನಿಟ್ಟಿನ ವ್ರತ ಆಚರಣೆ ಮಾಡುತ್ತಾರೆ ಎಂದು ಹೇಳುತ್ತಾರೆ ಹುಲಿ ವೇಷ ತಂಡದ ಸದಸ್ಯ ಗೋಪಾಲ ಶೆಟ್ಟಿ ಮುಳಿಹಿತ್ಲು. ಊದು ಪೂಜೆಯನ್ನು ನಿಷ್ಠೆಯಿಂದ ಸಲ್ಲಿಸಿ ಬಳಿಕ ಹುಲಿ ವೇಷ ಧರಿಸಲಾಗುತ್ತದೆ. ಹುಲಿವೇಷ ಮಂಗಳೂರಿನ ಜನಪದ ಕಲೆಯಾಗಿ ಪ್ರಸಿದ್ಧ ಪಡೆದಿದೆ ಎಂದು ಹೇಳುತ್ತಾರೆ ಹುಲಿ ವೇಷ ತಂಡದ ಮತ್ತೋರ್ವ ಸದಸ್ಯ ದೀಕ್ಷಿತ್ ಬೋಳಾರ್.

ಒಟ್ಟಿನಲ್ಲಿ ಈಗ ಕರಾವಳಿಯಲ್ಲಿ ತಾಸೆಯ ಸದ್ದಿನ ಜೊತೆಗೆ ಕಳೆದ ಕೆಲವು ವರ್ಷಗಳಿಂದ ಪಿಲಿಗೊಬ್ಬ, ಪಿಲಿಏಸ ಆರಂಭವಾಗಿದೆ. ಇದು ಕೂಡಾ ದೇವಿಯ ಆರಾಧನೆಯ ಇನ್ನೊಂದು ರೂಪ. ಹೆಚ್ಚು ಜನರನ್ನು ಆಕರ್ಷಿಸುತ್ತಿರುವ ಈ ಕಾರ್ಯಕ್ರಮಗಳೂ ಈಗ ಕರಾವಳಿಯಲ್ಲಿ ಸ್ಥಾನ ಪಡೆಯುತ್ತಿದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಳೆ ಸಂಭವ | ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು, ಶಿವಮೊಗ್ಗ, ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ…

31 minutes ago

ಮಣಿಪುರದಲ್ಲಿ 68 ಟನ್ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಅಡಿಕೆ ವಶ

ಅಕ್ರಮವಾಗಿ ಸುಮಾರು 68 ಟನ್‌ ಅಡಿಕೆ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಅಸ್ಸಾಂ ಪೊಲೀಸರು…

16 hours ago

ಅಡುಗೆ ಮನೆ ‘ಬೇಯಿಸುವ ಕೋಣೆ’ಯಲ್ಲ!

ಬದುಕಿನ ಒಂದೊಂದು ಅಂಗವೂ ‘ಕಲಾತ್ಮಕ’. ಒದಗುವ ಸುಭಗತನವು ಅನುಭವವೇದ್ಯ. ಅಡುಗೆ ಮನೆಯು ಬರೇ…

17 hours ago

2025ರಲ್ಲಿ ಶನಿ ತಮ್ಮ ನಕ್ಷತ್ರ ಅಥವಾ ರಾಶಿಯಲ್ಲಿ ಅಧೋಗತಿಯ ಚಲನೆ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜೋತಿಷಿಗಳನ್ನು ಸಂಪರ್ಕಿಸಿ 9535156490

17 hours ago

ತಾಪಮಾನ ಹೆಚ್ಚಳ | ಬನ್ನೇರುಘಟ್ಟ ಉದ್ಯಾನವನದಲ್ಲಿ ಪ್ರಾಣಿಗಳಿಗೆ ತಂಪಾದ ಆಹಾರ ಪದಾರ್ಥ |

ಬೇಸಿಗೆ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೃಗಾಲಯದ ಪ್ರಾಣಿಗಳು ಸುಡುಬಿಸಿಲಿಗೆ ಕಂಗಾಲಾಗಿದ್ದು, ಮಧ್ಯಾಹ್ನದ ವೇಳೆಯಲ್ಲಿ…

1 day ago

ತೊಗರಿ ಉತ್ಪನ್ನ ಖರೀದಿ ಅವಧಿ ಎ.25 ರವರೆಗೆ ವಿಸ್ತರಣೆ

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಉತ್ಪನ್ನವನ್ನು ಖರೀದಿಸುವ…

1 day ago