ಅಡಿಕೆ ಬೆಲೆ ಏರಿಕೆಯಾಗುವ ಸುದ್ದಿ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಸದ್ದಾಗುತ್ತಿದೆ….!

March 10, 2025
8:07 AM
ಮಾರುಕಟ್ಟೆಯಲ್ಲಿ ಅಡಿಕೆ ಇರುವ ಕೊರತೆ ಬಗ್ಗೆ ವಿದೇಶದಲ್ಲೂ ಚರ್ಚೆ ಆರಂಭವಾಗಿದೆ. ಹೀಗಾಗಿ ಭಾರತದ ಮಾರುಕಟ್ಟೆಗೆ ಕಳ್ಳಸಾಗಾಣಿಕೆಯ ಮೂಲಕ ಅಡಿಕೆ ಸಾಗಾಟ ಮಾಡುವ ಸಾಧ್ಯತೆ ಈಗ ಹೆಚ್ಚಾಗಿದೆ. ಈ ಕಾರಣದಿಂದ ಇನ್ನು ಮುಂದೆ ಅಡಿಕೆ ಅಕ್ರಮ ಆಮದು ಮೇಲೆ ತೀವ್ರ ನಿಗಾ ಅಗತ್ಯ ಇದೆ.

ಅಡಿಕೆ ಬೆಲೆ ಏರಿಕೆಯ ಸುದ್ದಿ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಸುದ್ದಿಯಾಗುತ್ತಿದೆ. ಭಾರತದಲ್ಲಿ ಅಡಿಕೆ ಕೊರತೆ ಇರುವುದರಿಂದ ಬೇಡಿಕೆ ಬರಲಿದೆ ಎಂದು ಮ್ಯಾನ್ಮಾರ್‌ ಸೇರಿದಂತೆ ಇತರ ದೇಶಗಳಲ್ಲಿ ಚರ್ಚೆ ಆರಂಭವಾಗಿದೆ. ಈ ವರ್ಷ ಅಡಿಕೆ ಪೂರೈಕೆ ಕಡಿಮೆಯಾಗಿರುವುದರಿಂದ, ವ್ಯಾಪಾರಿಗಳು  ಖರೀದಿಗಾಗಿ ಕಾಯುತ್ತಿದ್ದಾರೆ, ಭಾರತ, ಚೀನಾದತಂಹ ದೇಶಗಳಿಗೆ ಅಡಿಕೆ ಬೇಕಾಗಿದೆ ಎಂದು ಅಲ್ಲಿನ ಬೆಳೆಗಾರರಿಗೆ ಮಾಹಿತಿ ನೀಡಲಾಗಿದೆ.

ಚೀನಾ ಹಾಗೂ ಭಾರತದಲ್ಲಿ ಅಡಿಕೆ ಉತ್ಪಾದನೆಯ ಕೊರತೆ ಇರುವುದರಿಂದ ಅಡಿಕೆಗೆ ವಿದೇಶಗಳಿಂದ ಈಗ ಬೇಡಿಕೆ ವ್ಯಕ್ತವಾಗಿದ್ದು, ಈ ವರ್ಷ ಬೆಲೆ ಹೆಚ್ಚಾಗುವ ನಿರೀಕ್ಷೆಯಿದೆ. ಕಳೆದ ವರ್ಷ, ಸೀಮಿತ ಪೂರೈಕೆಯಿಂದಾಗಿ ಅಡಿಕೆ ಬೆಳೆಗಾರರಿಗೆ ನಷ್ಟವಾಗಿತ್ತು. ಈಗಾಗಲೇ ಚೀನಾ ಅಡಿಕೆಗೆ ಬೇಡಿಕೆಯನ್ನು ನೀಡಲು ಪ್ರಾರಂಭಿಸಿದೆ. ಹಿಂದಿನ ವರ್ಷದಂತೆ ಎಳೆಯ ಅಡಿಕೆಗಳನ್ನು ಹೆಚ್ಚಾಗಿ ಮಾರಾಟ ಮಾಡಿದರೆ ಈ ವರ್ಷವೂ ಬೆಲೆ ಏರಿಕೆಯಾಗುತ್ತಲೇ ಇರುತ್ತದೆ. ವರ್ಷವಿಡೀ ಅಡಿಕೆ ಲಭ್ಯವಿರುವುದಿಲ್ಲ, ಆದ್ದರಿಂದ ಈ ವರ್ಷ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನುವುದು ಮ್ಮಾನ್ಮಾರ್‌ ಬೆಳೆಗಾರರಿಗೆ ನೀಡಿರುವ ಮಾಹಿತಿ. ಹಿಂದಿನ ವರ್ಷಗಳಲ್ಲಿ ಎಳೆಯ ಅಡಿಕೆಗೆ ಚೀನಾದ ಬೇಡಿಕೆ ಹೆಚ್ಚಾದ ಕಾರಣ, ಈ ವರ್ಷ ಒಣಗಿದ ಅಡಿಕೆಯ ಬೆಲೆ ಹೆಚ್ಚಾಗಿದೆ. ಪ್ರಸ್ತುತ, ಸ್ಥಳೀಯ ಮಾರುಕಟ್ಟೆಯಲ್ಲಿ ಪೂರೈಕೆಗಿಂತ ಬೇಡಿಕೆ ಹೆಚ್ಚಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಭಾರತಕ್ಕೆ ಬಹುಪಾಲು ಅಡಿಕೆ ಕಳ್ಳಸಾಗಾಣಿಕೆಯ ಮೂಲಕವೇ ಸಾಗಾಟವಾಗುತ್ತದೆ. ಹೀಗಾಗಿ ಈ ಬಾರಿ ಅಡಿಕೆ ಕಳ್ಳಸಾಗಾಣಿಕೆ ತಡೆಗೆ ಭಾರತದಲ್ಲಿ ಸೂಕ್ತ ಕ್ರಮವಾಗಬೇಕಿದೆ. ಅಸ್ಸಾಂ ಮೂಲಕ  ಅಡಿಕೆ ಕಳ್ಳ ಸಾಗಾಟವಾದರೆ, ವಿವಿಧ ಬಂದರುಗಳ ಮೂಲಕ ಒಣ ಹಣ್ಣು ಎಂದು ಉಲ್ಲೇಖಿಸಿ ಅಥವಾ ತಪ್ಪಾದ ಮಾಹಿತಿ ನೀಡಿ ಅಡಿಕೆ ಸಾಗಾಟವಾಗುತ್ತಿರುವುದಕ್ಕೆ ಈಗ ನಿಯಂತ್ರಣ ಅಗತ್ಯ ಇದೆ.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಪಂಚಗ್ರಹಿ ಯೋಗವು ಕೆಲವು ರಾಶಿಗಳಿಗೆ ವಿಶೇಷ ಅನುಕೂಲ
March 10, 2025
11:17 AM
by: ದ ರೂರಲ್ ಮಿರರ್.ಕಾಂ
ಹೊಸರುಚಿ | ಹಲಸಿನಕಾಯಿ ರಚ್ಚೆಯ ಚಟ್ನಿ
March 10, 2025
8:00 AM
by: ದಿವ್ಯ ಮಹೇಶ್
ಲೋಕ ಅದಾಲತ್‌ನಲ್ಲಿ ಐದು ಜಿಲ್ಲೆಗಳಲ್ಲಿ 31 ಸಾವಿರಕ್ಕೂ ಅಧಿಕ ಪ್ರಕರಣ ಇತ್ಯರ್ಥ
March 10, 2025
7:41 AM
by: The Rural Mirror ಸುದ್ದಿಜಾಲ
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ 6 ಹುಲಿ ಮರಿಗಳ ಜನನ | ಶೀಘ್ರದಲ್ಲೇ ಪ್ರವಾಸಿಗರ ವೀಕ್ಷಣೆಗೆ ಅವಕಾಶ
March 10, 2025
7:39 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror