ಅಂತರಾಷ್ಟ್ರೀಯ ರಬ್ಬರ್‌ ಬೆಲೆ ಹೆಚ್ಚಳ | ಹೆಚ್ಚುತ್ತಿರುವ ರಬ್ಬರ್‌ ಬೇಡಿಕೆ |

April 4, 2024
11:11 AM
‌ರಬ್ಬರ್‌ ಬೇಡಿಕೆಯಲ್ಲಿ ಹೆಚ್ಚಳ ಕಂಡುಬಂದಿದೆ. ಸದ್ಯ ರಬ್ಬರ್‌ ಟ್ಯಾಪಿಂಗ್‌ ಸ್ಥಗಿತಗೊಂಡಿದೆ. ಧಾರಣೆ ಹೆಚ್ಚಳ ಕಂಡುಬಂದಿದ್ದು, ರಬ್ಬರ್‌ ಮಾರುಕಟ್ಟೆಯಲ್ಲಿ ಆಶಾದಾಯಕ ವಾತಾವರಣ ಇದೆ.

ಅಂತರಾಷ್ಟ್ರೀಯ ರಬ್ಬರ್‌ ಬೆಲೆಯಲ್ಲಿ ಹೆಚ್ಚಳ ಕಂಡುಬಂದಿದೆ. ಸ್ಥಳೀಯ ಧಾರಣೆಗಿಂತಲೂ ಸುಮಾರು 20 ರೂಪಾಯಿ ಹೆಚ್ಚಳ ಇದೆ. ಸದ್ಯ ರಬ್ಬರ್‌ ಬೇಡಿಕೆ ಮುಂದುವರಿದಿದ್ದು, ರಬ್ಬರ್‌ ಬೆಳೆಗಾರರಿಗೆ ಆಶಾದಾಯಕ ವಾತಾವರಣ ಸದ್ಯದ ಮಟ್ಟಿಗೆ ಕಂಡುಬಂದಿದೆ.

Advertisement
Advertisement
Advertisement
Advertisement

ಅಂತರಾಷ್ಟ್ರೀಯ ರಬ್ಬರ್ ಮಾರುಕಟ್ಟೆಯಲ್ಲಿ ನೈಸರ್ಗಿಕ ರಬ್ಬರ್ ಬೆಲೆ ತನ್ನ ದಾಖಲೆಯನ್ನು ಮುಂದುವರೆಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 211 ರೂಪಾಯಿ ಇದ್ದರೆ ಕೊಟ್ಟಾಯಂನಲ್ಲಿ ಆರ್‌ಎಸ್‌ಎಸ್ 4 ಗ್ರೇಡ್‌ ರಬ್ಬರ್‌ಗೆ  ಕೆಜಿಗೆ 184 ರೂಪಾಯಿ ಇತ್ತು. ಅಂತರಾಷ್ಟ್ರೀಯ ರಬ್ಬರ್‌ ಧಾರಣೆಯು  ಜನವರಿ  ಮಧ್ಯದಿಂದ ಭಾರತೀಯ ಬೆಲೆಯನ್ನು ಮೀರಿಸಿದೆ. ಬೆಲೆ ವ್ಯತ್ಯಾಸವಿದ್ದರೂ, ವಿಯೆಟ್ನಾಂನಂತಹ ವಿವಿಧ‌ ರಬ್ಬರ್ ಉತ್ಪಾದಕ  ರಾಷ್ಟ್ರಗಳಿಗೆ ಕೂಡಾ ಆಮದು-ರಫ್ತು ಲಾಭವನ್ನು ಪಡೆಯಲು ಸಾಧ್ಯವಾಗಲಿಲ್ಲ. ಜಾಗತಿಕವಾಗಿ, ಶೀಟ್ ರಬ್ಬರ್ ಬಳಕೆಯು ಸುಮಾರು 10% ರಷ್ಟು ಹೆಚ್ಚಾಗಿದೆ. ಚೀನಾ, ಮಲೇಷ್ಯಾ ಮತ್ತು ಶ್ರೀಲಂಕಾ ರಬ್ಬರ್‌ ಬಳಕೆಯಲ್ಲಿ ಮುಂಚೂಣಿಯಲ್ಲಿದೆ, ವಿವಿಧ ಕಂಪನಿಗಳು ರಬ್ಬರ್‌ ಬೇಡಿಕೆ ವ್ಯಕ್ತಪಡಿಸಿವೆ.

Advertisement

ಸದ್ಯ ಭಾರತದಲ್ಲೂ ಕೈಗಾರಿಕೆಗಳಿಗೆ ಅನುಕೂಲಕರ ದರದಲ್ಲಿ ರಬ್ಬರ್‌ ಬೇಕಾಗಿದೆ. ಅಂತರಾಷ್ಟ್ರೀಯ ರಬ್ಬರ್‌ ಬೆಲೆ ಏರಿಕೆಯಾದಂತೆಯೇ ದೇಶೀಯ ವಲಯದಲ್ಲಿ ರಬ್ಬರ್‌ ಧಾರಣೆ ಆಶಾದಾಯಕವಾಗಿ ಏರಿಕೆ ಸಾಧ್ಯತೆ ಇದೆ. ಹೀಗಾಗಿ ಧಾರಣೆ ಏರಿಕೆ ಇನ್ನಷ್ಟು ಸಾಧ್ಯತೆ ಇದೆ.

ಸದ್ಯ ಬೇಸಗೆಯ ಕಾರಣದಿಂದ ರಬ್ಬರ್‌ ಟ್ಯಾಪಿಂಗ್‌ ಭಾರತದ ಹಲವು ಕಡೆ ಸ್ಥಗಿತಗೊಂಡಿದೆ. ಮಳೆಗಾಲ ಆರಂಭದಿಂದ ರಬ್ಬರ್‌ ಟ್ಯಾಪಿಂಗ್‌ ಮತ್ತೆ ಆರಂಭಗೊಳ್ಳಲಿದೆ. ಅದುವರೆಗೂ ರಬ್ಬರ್‌ ಧಾರಣೆಯಲ್ಲಿ ಏರಿಕೆ ಕಾಣಲಿದೆ. ಆ ಬಳಿಕದ ವಾತಾವರಣವೂ ಈಗಿನ ಲೆಕ್ಕಾಚಾರದಲ್ಲಿ ಆಶಾದಾಯಕ ವಾತಾವರಣ ಇದೆ.

Advertisement

Source : NRR News

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅರಣ್ಯದಿಂದ ಕೂಡಿದ ಗ್ರಾಮೀಣ ಭಾಗಕ್ಕೂ ನೀರು…! | ಕರಾವಳಿ ಜಿಲ್ಲೆಯ ಈಗಿನ ದೊಡ್ಡ ಯೋಜನೆ ಇದು | ಯಾಕೆ ಎಲ್ಲರೂ ಮೌನವಾಗಿದ್ದಾರೆ..? | ಈ ಕೊಳವೆಯಲ್ಲಿ ಹರಿಯುವುದು ನೀರೋ.. ಹಣವೋ..?
February 1, 2025
8:07 AM
by: ಮಹೇಶ್ ಪುಚ್ಚಪ್ಪಾಡಿ
ಗ್ರಾಮೀಣ, ನಗರ ಪ್ರದೇಶದ ಕಟ್ಟೆಗಳ ಅಭಿವೃದ್ಧಿ – ಧಾರ್ಮಿಕ ಪರಂಪರೆ ಸಂರಕ್ಷಣೆ
January 31, 2025
10:23 PM
by: The Rural Mirror ಸುದ್ದಿಜಾಲ
ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಸಕಲ ಕ್ರಮ | ಮುಖ್ಯಮಂತ್ರಿ  ಸಿದ್ದರಾಮಯ್ಯ
January 31, 2025
10:11 PM
by: The Rural Mirror ಸುದ್ದಿಜಾಲ
ಎಲ್ಲಾ ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ಕಾನೂನು ಜಾರಿಗೆ ರಾಜ್ಯ ರೈತ ಸಂಘಟನೆಗಳ ಮನವಿ
January 31, 2025
10:08 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror