Advertisement
MIRROR FOCUS

ಭಾರತದ ಕೃಷಿ ಚೀನಾವನ್ನೂ ಮೀರಿಸಿದೆ : 10 ವರ್ಷಗಳಲ್ಲಿ ದಾಖಲೆ 4.42% ಬೆಳವಣಿಗೆ

Share

ಭಾರತದ ಕೃಷಿ ಕ್ಷೇತ್ರವು 2015 ರಿಂದ 2024 ರವರೆಗೆ ಸರಾಸರಿ 4.42 ಶೇಕಡಾ ಬೆಳವಣಿಗೆ ದಾಖಲಿಸಿ, ಚೀನಾದ 4.10 ಶೇಕಡಾ ವೃದ್ಧಿದರವನ್ನು ಮೀರಿಸಿದೆ ಎಂದು ನೀತಿ ಆಯೋಗದ ಸದಸ್ಯ ರಮೇಶ್‌ ಚಾಂದ್‌ ಅವರ ವರದಿ ಬಹಿರಂಗಪಡಿಸಿದೆ.

Advertisement

‘Agriculture in Meeting Aspirations of Rising India’ ಎಂಬ ಶೀರ್ಷಿಕೆಯ ಈ ವರದಿಯ ಪ್ರಕಾರ, 2015–16ರಿಂದ 2024–25ರವರೆಗೆ ಭಾರತದ ಕೃಷಿ ಆದಾಯದಲ್ಲಿ ಒಂದು ವರ್ಷವೂ ಋಣಾತ್ಮಕ (Negative) ಬೆಳವಣಿಗೆ ದಾಖಲಾಗಿಲ್ಲ. ಕೋವಿಡ್-19 ಮಹಾಮಾರಿಯ ಸಮಯದಲ್ಲೂ ಕೃಷಿ ಕ್ಷೇತ್ರವು ಇತರೆ ವಲಯಗಳಂತೆ ಕುಸಿತ ಅನುಭವಿಸದೇ ಸ್ಥಿರತೆಯನ್ನು ಪ್ರದರ್ಶಿಸಿದೆ. ಈ ವರದಿಯ ಪ್ರಮುಖ ಅಂಶಗಳು ಹೀಗಿದೆ…

  • 2015–24ರ ಅವಧಿಯಲ್ಲಿ ಭಾರತ ಕೃಷಿ ವೃದ್ಧಿದರ: 4.42%
  • ಚೀನಾದ ಕೃಷಿ ವೃದ್ಧಿದರ: 4.10%
  • 2014–15ರಿಂದ 2023–24ರವರೆಗೆ ಕೃಷಿ ಉತ್ಪಾದಕರ ಆದಾಯ ವಾರ್ಷಿಕವಾಗಿ 10.11% ಏರಿಕೆ
  • ರೈತರ ಆದಾಯ 10 ವರ್ಷಗಳಲ್ಲಿ 126%, ಉತ್ಪಾದಕರ ಆದಾಯ 108% ಹೆಚ್ಚಳ

ರಮೇಶ್ ಚಂದ್ ಅವರ ಪ್ರಕಾರ, 2047ರೊಳಗೆ ‘ವಿಕಸಿತ ಭಾರತ’ (Viksit Bharat) ಸಾಧಿಸುವ ಗುರಿಗೆ ಕೃಷಿ ಕ್ಷೇತ್ರ ಪ್ರಮುಖ ಅಸ್ತಂಭವಾಗಿದೆ. ಪ್ರಸ್ತುತ ಬೆಲೆಯಲ್ಲಿ ಕೃಷಿ ಕ್ಷೇತ್ರವು ದೇಶದ ಒಟ್ಟು ಆದಾಯದ 19.73% ಪಾಲು ಹೊಂದಿದ್ದು, 46% ಕಾರ್ಮಿಕರಿಗೆ ಉದ್ಯೋಗ ಒದಗಿಸುತ್ತದೆ.  2014–15ರಿಂದ 2024–25ರವರೆಗಿನ ಅವಧಿಯನ್ನು ಅವರು ಭಾರತದ ಕೃಷಿ ಇತಿಹಾಸದಲ್ಲೇ ಅತ್ಯಂತ ವೇಗವಾದ ಬೆಳವಣಿಗೆಯ ಹಂತ ಎಂದು ಹೇಳಿದ್ದಾರೆ. ಈ ಬೆಳವಣಿಗೆ ಬೇಡಿಕೆ ಆಧಾರಿತವಾಗಿದ್ದು, ಹೈ-ವ್ಯಾಲ್ಯೂ ಬೆಳೆಗಳು ಹಾಗೂ ಸಹಾಯಕ ವಲಯಗಳತ್ತ ಕೃಷಿ ವೈವಿಧ್ಯಗೊಳ್ಳುತ್ತಿದೆ.

ಉತ್ಪಾದನೆ ಹಾಗೂ ರಫ್ತುಗಳಲ್ಲೂ ಸಾಧನೆಯಾಗಿದ್ದು,  ಹಾಲು ಉತ್ಪಾದನೆ: 146 ಮಿಲಿಯನ್ ಟನ್ (2014–15) → 239 ಮಿಲಿಯನ್ ಟನ್‌ಗಿಂತ ಹೆಚ್ಚು (2023–24) ಆಗಿದ್ದು, ಹಣ್ಣು-ತರಕಾರಿ ಉತ್ಪಾದನೆ: 280.7 → 367.72 ಮಿಲಿಯನ್ ಟನ್ ಆಗಿವೆ. ಭಾರತ ಈಗ ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ಮತ್ತು ಅಕ್ಕಿಯ ಅತಿದೊಡ್ಡ ರಫ್ತುಗಾರನೂ ಆಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಈ ನಡುವೆ ಕೃಷಿ ಬೆಂಬಲ ಯೋಜನೆಗಳನ್ನೂ ಹೀಗೆ ಹೇಳಿದ್ದಾರೆ..

Advertisement
  • ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ವ್ಯಾಪ್ತಿ: 3.4 ಕೋಟಿ → 4.1 ಕೋಟಿ ರೈತರು
  • ಕೃಷಿ ಸಾಲದ ಪ್ರಮಾಣ: 29.4% → 41.7%
  • e-NAM ಮೂಲಕ 1,522 ಮಂಡಿಗಳ ಏಕೀಕರಣ

ವರದಿ ಪ್ರಕಾರ, ಜಾಗತಿಕ ಮಟ್ಟದಲ್ಲಿ ಕೃಷಿ ಬೆಳವಣಿಗೆ ಕುಂಠಿತಗೊಂಡ ಸಮಯದಲ್ಲೂ ಭಾರತ ಮಾತ್ರ ವೇಗ ಹೆಚ್ಚಿಸಿದ್ದು, ಇದು ದೇಶದ ಆಹಾರ ಭದ್ರತೆ, ಗ್ರಾಮೀಣ ಉದ್ಯೋಗ ಮತ್ತು ಆರ್ಥಿಕ ಸ್ಥಿರತೆಗೆ ಬಲ ನೀಡುತ್ತಿದೆ. ಮುಂದಿನ ವರ್ಷಗಳಲ್ಲಿ ಮೌಲ್ಯವರ್ಧನೆ, ಸಂಸ್ಕರಣೆ ಮತ್ತು ಮಾರುಕಟ್ಟೆ ಸಂಪರ್ಕವೇ ರೈತರ ಲಾಭದ ದಾರಿಗಳಾಗಲಿವೆ.

ಈ ವರದಿಯು ರೈತರಿಗೆ  ಮುಖ್ಯ ಸಂದೇಶಗಳನ್ನು ನೀಡುತ್ತದೆ:

  1. ಆದಾಯದಲ್ಲಿ ನಿಜವಾದ ಏರಿಕೆ : ಕಳೆದ 10 ವರ್ಷಗಳಲ್ಲಿ ರೈತರ ಆದಾಯ 126% ಹೆಚ್ಚಾಗಿದೆ. ಇದು ಬೆಲೆ ಬೆಂಬಲ, ಉತ್ಪಾದನೆ ವೃದ್ಧಿ ಮತ್ತು ಸಹಾಯಕ ವಲಯಗಳ (ಹಾಲು, ತೋಟಗಾರಿಕೆ) ಪಾತ್ರವನ್ನು ಸೂಚಿಸುತ್ತದೆ.
  2. ಕೃಷಿ ಈಗ ಅಪಾಯದ ವಲಯವಲ್ಲ : ಕೋವಿಡ್‌ನಂತಹ ಸಂಕಷ್ಟದ ಸಮಯದಲ್ಲೂ ಕೃಷಿ ಕ್ಷೇತ್ರದಲ್ಲಿ ಋಣಾತ್ಮಕ ಬೆಳವಣಿಗೆ ಕಂಡುಬಂದಿಲ್ಲ. ಇದು ಬೆಳೆ ವಿಮೆ, ಸಾಲ ಲಭ್ಯತೆ ಮತ್ತು ಸರ್ಕಾರಿ ಹಸ್ತಕ್ಷೇಪಗಳ ಪರಿಣಾಮ.
  3. ಹಾಲು–ತೋಟಗಾರಿಕೆ ರೈತರಿಗೆ ದೊಡ್ಡ ಅವಕಾಶ : ಭಾರತ ವಿಶ್ವದ ಅತಿದೊಡ್ಡ ಹಾಲು ಉತ್ಪಾದಕವಾಗಿದ್ದು, ಹಣ್ಣು–ತರಕಾರಿ ಉತ್ಪಾದನೆಯಲ್ಲೂ ವೇಗದ ಏರಿಕೆ ಕಂಡಿದೆ. ಇದು ಸಾಂಪ್ರದಾಯಿಕ ಧಾನ್ಯಗಳ ಹೊರತಾಗಿ ಹೈ-ವ್ಯಾಲ್ಯೂ ಬೆಳೆಗಳಿಗೆ ರೈತರು ತಿರುಗಬೇಕೆಂಬ ಸೂಚನೆ.
  4. ಮಹಿಳಾ ಉದ್ಯೋಗ ಮತ್ತು ಗ್ರಾಮೀಣ ಸ್ಥಿರತೆ: ಕೃಷಿಯಲ್ಲಿ ಮಹಿಳಾ ಕಾರ್ಮಿಕರ ಪಾಲು ಹೆಚ್ಚಿದ್ದು, ಗ್ರಾಮೀಣ ಆರ್ಥಿಕತೆಯನ್ನು ಸ್ಥಿರವಾಗಿಟ್ಟಿದೆ.

-‌ ರೂರಲ್‌ ಮಿರರ್‌ ಡಿಜಿಟಲ್‌ ಡೆಸ್ಕ್

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

ಮನೆಯ ಅಡುಗೆ ಮಾತು | ಇಡ್ಲಿ ಕಟ್ಲೇಟ್

"ಉಳಿದ ಇಡ್ಲಿಯಿಂದ ಏನು ಮಾಡೋದು?” ಇಲ್ಲಿದೆ ನೋಡಿ ರೆಸಿಪಿ..

47 minutes ago

ಶಿವಮೊಗ್ಗ ಜಿಲ್ಲೆಯ ಸುಜನಾ ಸ್ತ್ರೀಶಕ್ತಿ ಸ್ವಸಹಾಯ ಸಂಘ | ಸ್ವಾವಲಂಬನೆಯ ಸಂಕಲ್ಪದಿಂದ ಜಾಗತಿಕ ಮಾರುಕಟ್ಟೆಯವರೆಗೆ

ಶಿವಮೊಗ್ಗ ಜಿಲ್ಲೆಯ ಸುಜನಾ ಸ್ತ್ರೀಶಕ್ತಿ ಸ್ವಸಹಾಯ ಸಂಘ ಕಳೆದ 23 ವರ್ಷಗಳಿಂದ ಎಳ್ಳು–ಬೆಲ್ಲ…

1 hour ago

ನಕಲಿ ಬೀಜಗಳ ಮಾರಾಟ ತಡೆಗೆ ಕ್ರಮ – ಬಜೆಟ್ ಅಧಿವೇಶನದಲ್ಲಿ ಬೀಜ ಕಾಯ್ದೆ–2026 ಮಂಡನೆ

ನಕಲಿ ಹಾಗೂ ಕಳಪೆ ಬೀಜಗಳ ಮಾರಾಟ ತಡೆಗೆ ನೂತನ ಬೀಜ ಕಾಯ್ದೆ–2026ನ್ನು ಬಜೆಟ್…

1 hour ago

ಉತ್ತರ ಕನ್ನಡದ ದಾಂಡೇಲಿಯಲ್ಲಿ ಹಾರ್ನ್ಬಿಲ್ ಹಬ್ಬ | ಮಕ್ಕಳಿಗೆ ಹಾರ್ನ್ಬಿಲ್ ಜೀವನ ಕ್ರಮ ಕುರಿತು ಜಾಗೃತಿ

ಉತ್ತರ ಕನ್ನಡದ ದಾಂಡೇಲಿಯಲ್ಲಿ ಹಾರ್ನ್ಬಿಲ್ ಹಬ್ಬಕ್ಕೆ ಚಾಲನೆ ನೀಡಲಾಗಿದ್ದು, ಶಾಲಾ ಮಕ್ಕಳು ಹಾಗೂ…

2 hours ago

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬವಾದರೆ ಕ್ರಮ ಅನಿವಾರ್ಯ | ಅಧಿಕಾರಿಗಳಿಗೆ ಸಚಿವ ಕೃಷ್ಣಭೈರೇಗೌಡ ಎಚ್ಚರಿಕೆ

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ಕಾಮಗಾರಿಯನ್ನು ಸಚಿವ ಕೃಷ್ಣಭೈರೇಗೌಡ…

2 hours ago

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ – ಬೆಲೆ ಖಾತರಿ ಕಾನೂನು ಜಾರಿಗೆ ಒತ್ತಾಯ

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗೆ ಒತ್ತಾಯಿಸಿ ಸಂಯುಕ್ತ…

2 hours ago