#riceshortage | ಅಮೆರಿಕದಲ್ಲಿ ಅಕ್ಕಿಗೆ ಅಭಾವ | ಅಂಗಡಿಯ ಮುಂದೆ ಅಕ್ಕಿ ಖರೀದಿಸಲು ಕ್ಯೂನಿಂತ ಭಾರತೀಯರು |

July 22, 2023
10:11 PM
ಅಮೇರಿಕಾದಲ್ಲಿ ಅಕ್ಕಿಯ ಕೊರತೆ ಉಂಟಾಗಿದೆ. ಇದರಿಂದ ಅನಿವಾಸಿ ಭಾರತೀಯರಿಗೆ ಅಕ್ಕಿ ಖರೀದಿಗೆ ಸರದಿ ಸಾಲಿನಲ್ಲಿ ನಿಲ್ಲಬೇಕಾದ ಸ್ಥಿತಿ ಬಂದಿದೆ. ಭಾರತವು ಅಕ್ಕಿ ರಪ್ತು ತಡೆ ಮಾಡಿರುವುದು ಕೊರತೆಗೆ ಕಾರಣವಾಗಿದೆ.

ಭಾರತ ಸರ್ಕಾರವು ಅಕ್ಕಿ ರಫ್ತಿನ ಮೇಲೆ ನಿಷೇಧ ಹೇರಿದ ಹಿನ್ನಲೆ ಅಮೆರಿಕದಲ್ಲಿ ಅಕ್ಕಿ ಅಭಾವ ಉಂಟಾಗಿದೆ. ಹೀಗಾಗಿ ಅಂಗಡಿಗಳ ಮುಂದೆ ಭಾರತೀಯರು  ಕ್ಯೂ ನಿಂತು ಅಕ್ಕಿ ಖರೀದಿಸುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಅಕ್ಕಿಯ ಕೊರತೆ ಉಂಟಾಗಬಹುದು ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಅಮೇರಿಕಾದಲ್ಲಿರುವ ಭಾರತೀಯರು ಅಕ್ಕಿಗಾಗಿ ಮುಗಿಬಿದ್ದರು.

ಕೇಂದ್ರ ಸರ್ಕಾರ ಗುರುವಾರ ಬಾಸ್ಮತಿ ಅಕ್ಕಿಯನ್ನು ಹೊರತುಪಡಿಸಿ ಉಳಿದ ಎಲ್ಲಾ ಅಕ್ಕಿಯ ರಫ್ತು ಮೇಲೆ ನಿಷೇಧ ಹೇರಿದ ಹಿನ್ನೆಲೆಯಲ್ಲಿ ಅಮೇರಿಕಾದಲ್ಲಿ ಅಕ್ಕಿಯ ಕೊರತೆ ಉಂಟಾಗಿದೆ.ಹೀಗಾಗಿ  ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರಿಗೆ ಊಟಕ್ಕೆ ಅಕ್ಕಿಗಾಗಿ ಅಂಗಡಿ ಮುಂದೆ  ಸರತಿ ಸಾಲಿನಲ್ಲಿ ನಿಂತು ಅಕ್ಕಿ ಗೋಣಿ ಖರೀದಿ ಮಾಡುತ್ತಿದ್ದಾರೆ. ಅಮೆರಿಕದಲ್ಲಿ ಸುಮಾರು 50 ಲಕ್ಷ ಭಾರತೀಯರಿದ್ದು, ಅವರಲ್ಲಿ ಹೆಚ್ಚಿನ ಜನರು ಅಕ್ಕಿಯನ್ನೇ ಆಹಾರವಾಗಿ ಬಳಸುತ್ತಾರೆ.

ಈಗ ಭಾರತೀಯರು ಅಕ್ಕಿಯನ್ನು ತರಲು ಭಾರತೀಯ ಮಳಿಗೆಗಳು ಹಾಗೂ ಕಾಸ್ಟ್ಕೋ ಮಳಿಗೆಗಳಿಗೆಗೆ ಹೆಚ್ಚಿನ ಪ್ರಮಾಣದಲ್ಲಿ ಧಾವಿಸುತ್ತಿದ್ದಾರೆ. ಆದರೆ, ಬಹಳಷ್ಟು ಸ್ಟೋರ್‌ಗಳು ಒಬ್ಬರಿಗೆ ಒಂದೇ ಚೀಲ ಎಂದು ನಿಯಮವನ್ನು ಹಾಕಿದೆ. ಅದಲ್ಲದೇ, ಬಹಳಷ್ಟು ಮಳಿಗೆಗಳಲ್ಲಿ ಅಕ್ಕಿ ದರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. 25 ಕೆಜಿ ಅಕ್ಕಿ ಮೂಟೆಗೆ 22 ಡಾಲರ್‌ಗಳಿಗಿಂತ ಕಡಿಮೆ ಬೆಲೆ ಇತ್ತು.ಆದರೆ, ಈಗ ಅದರ ದರ 32 ರಿಂದ 47 ಡಾಲರ್‌ವರೆಗೆ ಏರಿಕೆ ಆಗಿದೆ.

ಈಗ ಕೇಂದ್ರದ ಈ ನಿರ್ಧಾರದಿಂದ ಅಮೆರಿಕದ  ಭಾರತೀಯರಲ್ಲಿ ಭಾರೀ ಸಂಚಲನ ಮೂಡಿದೆ. ಅಕ್ಕಿಗೆ ಏನು ಮಾಡುವುದು  ಎನ್ನುವ ಚಿಂತೆ ಕಾಡಿದೆ.

ಮಳೆಯ ಕೊರತೆಯಿಂದ  ಈ ಬಾರಿ ಮುಂಗಾರು ತಡವಾಗಿದೆ. ದೇಶದ ಹಲವೆಡೆ ಮಳೆ ವಿಳಂಬವಾಗಿದೆ. ಫೆಬ್ರವರಿ, ಮಾರ್ಚ್ ನಲ್ಲಿ ಸುರಿದ ಮಳೆಗೆ ಹಲವೆಡೆ ಬೆಳೆ ಹಾನಿಯಾಗಿದ್ದು, ಈ ಬಾರಿ ಇಳುವರಿ ಮೇಲೆ ಪರಿಣಾಮ ಬೀರುವ ನಿರೀಕ್ಷೆ ಇದೆ. ಈ ಹಿನ್ನಲೆಯಲ್ಲಿ ಅಕ್ಕಿಯ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.ಇದರೊಂದಿಗೆ ಡಿಜಿಎಫ್‌ಟಿ  ಗುರುವಾರ ಅಧಿಸೂಚನೆ ಹೊರಡಿಸಿದ್ದು, ಭಾಗಶಃ ಮಿಲ್ ಮಾಡಿದ, ಸಂಪೂರ್ಣ ಮಿಲ್ ಮಾಡಿದ ಮತ್ತು ಬಿಳಿ ಅಕ್ಕಿಯ ರಫ್ತಿಗೆ ನಿಷೇಧ ಹೇರಿದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಪಿಎಂ ಕಿಸಾನ್‌ 22ನೇ ಕಂತು ಬಿಡುಗಡೆಗೆ ಸಿದ್ಧತೆ | 9.32 ಕೋಟಿ ರೈತರಿಗೆ ₹18,640 ಕೋಟಿ ನೇರ ನಗದು
March 13, 2026
6:58 AM
by: ಮಿರರ್‌ ಡೆಸ್ಕ್
ಮಹಿಳಾ ಕೃಷಿಕರ ಪಾತ್ರ ಬಲಪಡಿಸಲು ಜಾಗತಿಕ ಸಮ್ಮೇಳನ | ದೆಹಲಿಯಲ್ಲಿ GCWAS-2026 ಆರಂಭ
March 13, 2026
6:48 AM
by: ಮಿರರ್‌ ಡೆಸ್ಕ್
ಗೇರುಹಣ್ಣಿನ ಮೌಲ್ಯವರ್ಧನೆಗೆ ಕೈಗಾರಿಕಾ ಸಂಪರ್ಕ ಸಭೆ : ವ್ಯಾಪಾರೀಕರಣಕ್ಕೆ ಹೊಸ ವೇದಿಕೆ
March 12, 2026
9:26 PM
by: ದ ರೂರಲ್ ಮಿರರ್.ಕಾಂ
ದಕ್ಷಿಣ ಕನ್ನಡದಲ್ಲಿ ಹೆಚ್ಚುತ್ತಿರುವ ಕಡಲ್ಕೊರೆತ ಗಂಭೀರತೆ : ಲೋಕಸಭೆಯಲ್ಲಿ ಧ್ವನಿಯೆತ್ತಿದ ಸಂಸದ
March 12, 2026
9:11 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror