ಭಾರತ ಸರ್ಕಾರದ ಇಥೆನಾಲ್ ಮಿಶ್ರಣ ಕಾರ್ಯಕ್ರಮ (Ethanol Blended Petrol – EBP) ಕಳೆದ ಹತ್ತು ವರ್ಷಗಳಲ್ಲಿ ರೈತರಿಗೆ ₹1.6 ಲಕ್ಷ ಕೋಟಿಗೂ ಅಧಿಕ ಹೆಚ್ಚುವರಿ ಆದಾಯ ತಂದುಕೊಟ್ಟಿದೆ ಎಂದು ವರದಿಯೊಂದು ತಿಳಿಸಿದೆ.
ಈ ಯೋಜನೆಯು ರೈತರನ್ನು ಕೇವಲ “ಅನ್ನದಾತ”ರಷ್ಟೇ ಅಲ್ಲ, ದೇಶದ ಇಂಧನ ಭದ್ರತೆಗೆ ಕೊಡುಗೆ ನೀಡುವ “ಇಂಧನ ಕೊಡುಗೆದಾರ”ನಾಗಿ ಪರಿವರ್ತಿಸಿದೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ. ಕಬ್ಬು, ಕಬ್ಬಿನ ರಸ, ಬಿ-ಹೆವಿ ಮೊಲಾಸಿಸ್, ಸಿ-ಮೊಲಾಸಿಸ್, ಜೋಳ ಸೇರಿದಂತೆ ವಿವಿಧ ಕೃಷಿ ಉತ್ಪನ್ನಗಳಿಂದ ಇಥೆನಾಲ್ ಉತ್ಪಾದನೆಗೆ ಉತ್ತೇಜನ ನೀಡಿರುವುದರಿಂದ ರೈತರಿಗೆ ಹೊಸ ಮಾರುಕಟ್ಟೆ ಸೃಷ್ಟಿಯಾಗಿದೆ. ವಿಶೇಷವಾಗಿ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳಿಂದ ಉತ್ತಮ ಬೇಡಿಕೆ ಮತ್ತು ಪಾವತಿ ವ್ಯವಸ್ಥೆ ದೊರೆತಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
ವಿದೇಶಿ ವಿನಿಮಯ ಉಳಿತಾಯ : ಇಥೆನಾಲ್ ಮಿಶ್ರಣ ಕಾರ್ಯಕ್ರಮದ ಮೂಲಕ ಭಾರತವು 300 ಲಕ್ಷ ಮೆಟ್ರಿಕ್ ಟನ್ಗಿಂತ ಹೆಚ್ಚು ಕಚ್ಚಾ ತೈಲ ಆಮದನ್ನು ಬದಲಿಸಿದ್ದು, ಸುಮಾರು ₹1.84 ರಿಂದ ₹1.90 ಲಕ್ಷ ಕೋಟಿ ವಿದೇಶಿ ವಿನಿಮಯ ಉಳಿತಾಯವಾಗಿದೆ ಎಂದು ಕೇಂದ್ರ ಸರ್ಕಾರದ ಅಂಕಿಅಂಶಗಳು ತಿಳಿಸಿವೆ. ಜೊತೆಗೆ ಇಂಗಾಲದ ಹೊರಸೂಸುವಿಕೆಯೂ ಗಣನೀಯವಾಗಿ ಕಡಿಮೆಯಾಗಿದೆ.
ಸಕ್ಕರೆ ಕಾರ್ಖಾನೆಗಳಿಗೆ ಆರ್ಥಿಕ ಬಲ : ಇಥೆನಾಲ್ ಉತ್ಪಾದನೆಯಿಂದ ಸಕ್ಕರೆ ಕಾರ್ಖಾನೆಗಳು ಸಕ್ಕರೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಂಡಿವೆ. ಸಕ್ಕರೆ ಬೆಲೆ ಕುಸಿದರೂ ಇಥೆನಾಲ್ ಮಾರಾಟದಿಂದ ಆದಾಯ ಲಭಿಸುತ್ತಿರುವುದರಿಂದ ಕಾರ್ಖಾನೆಗಳ ಆರ್ಥಿಕ ಸ್ಥಿತಿ ಸುಧಾರಿಸಿದೆ. ಇದರ ಪರಿಣಾಮವಾಗಿ ರೈತರಿಗೆ ಕಬ್ಬಿನ ಬಾಕಿ ಪಾವತಿಗಳನ್ನು ತ್ವರಿತವಾಗಿ ನೀಡಲು ಸಾಧ್ಯವಾಗುತ್ತಿದೆ.
ಯಾವ ರಾಜ್ಯಗಳಿಗೆ ಹೆಚ್ಚು ಲಾಭ? : ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಕರ್ನಾಟಕದಂತಹ ಕಬ್ಬು ಬೆಳೆಯುವ ರಾಜ್ಯಗಳು ಇಥೆನಾಲ್ ಉತ್ಪಾದನೆಯಲ್ಲಿ ಪ್ರಮುಖ ಪಾತ್ರವಹಿಸಿವೆ. ಇತ್ತೀಚಿನ ವರ್ಷಗಳಲ್ಲಿ ಜೋಳ ಆಧಾರಿತ ಇಥೆನಾಲ್ ಉತ್ಪಾದನೆಗೂ ಉತ್ತೇಜನ ಸಿಕ್ಕಿರುವುದರಿಂದ ಮಳೆ ಆಧಾರಿತ ಪ್ರದೇಶಗಳ ರೈತರೂ ಇದರ ಲಾಭ ಪಡೆಯುತ್ತಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕಕ್ಕೂ ಮಹತ್ವದ ಅವಕಾಶ : ದೇಶದ ಪ್ರಮುಖ ಕಬ್ಬು ಉತ್ಪಾದಕ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಬೆಳಗಾವಿ, ಬಾಗಲಕೋಟೆ, ಮಂಡ್ಯ, ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಬ್ಬು ಬೆಳೆ ವ್ಯಾಪಕವಾಗಿದೆ. ಇಥೆನಾಲ್ ಉತ್ಪಾದನೆಗೆ ಉತ್ತೇಜನ ದೊರೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳು ಮತ್ತು ಕಬ್ಬು ಬೆಳೆಗಾರರಿಗೆ ದೀರ್ಘಾವಧಿಯಲ್ಲಿ ಹೆಚ್ಚಿನ ಅವಕಾಶಗಳು ಸಿಗುವ ನಿರೀಕ್ಷೆಯಿದೆ.
ರೈತರಿಗೆ ಆಗಿರುವ ಪ್ರಮುಖ ಲಾಭಗಳು
- ಕಬ್ಬು ಮತ್ತು ಇತರ ಬೆಳೆಗಳಿಗೆ ಸ್ಥಿರ ಬೇಡಿಕೆ
- ಸಕ್ಕರೆ ಕಾರ್ಖಾನೆಗಳಿಂದ ಪಾವತಿ ಸುಧಾರಣೆ
- ಕೃಷಿ ಉತ್ಪನ್ನಗಳಿಗೆ ಹೆಚ್ಚುವರಿ ಮೌಲ್ಯ
- ಗ್ರಾಮೀಣ ಆರ್ಥಿಕತೆಗೆ ಹೊಸ ಆದಾಯದ ಮೂಲ
- ದೇಶದ ಇಂಧನ ಸ್ವಾವಲಂಬನೆಗೆ ರೈತರ ನೇರ ಕೊಡುಗೆ
ಸವಾಲುಗಳೂ ಇವೆ : ಇಥೆನಾಲ್ ಯೋಜನೆಯು ರೈತರಿಗೆ ಲಾಭ ತಂದಿದ್ದರೂ, ಕಬ್ಬು ನೀರು ಹೆಚ್ಚು ಬೇಕಾಗುವ ಬೆಳೆ ಎಂಬ ಕಾರಣಕ್ಕೆ ನೀರಿನ ನಿರ್ವಹಣೆ ಮತ್ತು ಬೆಳೆ ವೈವಿಧ್ಯೀಕರಣದ ಅಗತ್ಯದ ಬಗ್ಗೆ ತಜ್ಞರು ಒತ್ತಿ ಹೇಳುತ್ತಿದ್ದಾರೆ. ಅಲ್ಲದೆ, ಸಕ್ಕರೆ ಉತ್ಪಾದನೆ ಮತ್ತು ಇಥೆನಾಲ್ ಉತ್ಪಾದನೆ ನಡುವಿನ ಸಮತೋಲನ ಕಾಯ್ದುಕೊಳ್ಳುವ ಜವಾಬ್ದಾರಿಯೂ ಸರ್ಕಾರದ ಮೇಲಿದೆ.
India’s Ethanol Blended Petrol (EBP) programme has generated more than ₹1.6 lakh crore in additional income for farmers over the past decade. The initiative has strengthened the rural economy, reduced crude oil imports, improved sugar industry revenues, and transformed farmers from “Annadatas” into “Energy provider” by linking agriculture with India’s clean energy mission

