ರಾಸಾಯನಿಕ ಉದ್ಯಮ | ಭಾರತವು ರಾಸಾಯನಿಕಗಳ ಪ್ರಮುಖ ಉತ್ಪಾದಕ ರಾಷ್ಟ್ರ

July 4, 2025
7:36 AM

ಭಾರತದ ರಾಸಾಯನಿಕ ವಲಯವು  ಒಟ್ಟು ದೇಶೀಯ ಉತ್ಪನ್ನ ಕೊಡುಗೆಯಲ್ಲಿ ಗಮನಾರ್ಹ ಪಾತ್ರ ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಈ ವಲಯವನ್ನು ಇನ್ನಷ್ಟು ಬಲಪಡಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು  ನೀತಿ ಆಯೋಗದ  ಕಾರ್ಯ ನಿರ್ವಹಣಾಧಿಕಾರಿ  ಬಿ.ವಿ.ಆರ್. ಸುಬ್ರಹ್ಮಣ್ಯಂ ದೆಹಲಿಯಲ್ಲಿ ಹೇಳಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ಭಾರತವು ರಾಸಾಯನಿಕಗಳ ಪ್ರಮುಖ ಉತ್ಪಾದಕ ರಾಷ್ಟ್ರವಾಗಿದೆ. ಇದು ವೇಗವಾಗಿ ಬೆಳೆಯುತ್ತಿರುವ ವಲಯ. ಸಾವಯವ ಮತ್ತು ಅ ಜೈವಿಕ ಎರಡೂ ರಾಸಾಯನಿಕಗಳು ಇಲ್ಲಿ ಉತ್ಪಾದನೆಯಾಗುತ್ತಿವೆ ಎಂದರು. ಜಾಗತಿಕ ರಾಸಾಯನಿಕ ಉದ್ಯಮವು ಪ್ರಮುಖ ಪರಿವರ್ತನೆಗೆ ಒಳಗಾಗುತ್ತಿದೆ. ಜಾಗತಿಕ ರಾಸಾಯನಿಕ ಮೌಲ್ಯ ಸರಪಳಿಗಳಲ್ಲಿ ಭಾರತದ ಶೇಕಡಾ 3.5 ರಷ್ಟು ಪಾಲನ್ನು ನೀಡುತ್ತಿದ್ದರೂ ಕೆಲವೊಂದು ಸಮಸ್ಯೆಗಳನ್ನು ಈ ವಲಯವು ಅನುಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಪೂರೈಕೆ ಸರಪಳಿಗಳನ್ನು ಬದಲಾಯಿಸುವುದು, ಹಸಿರು ರಾಸಾಯನಿಕಗಳಿಗೆ ಬೇಡಿಕೆ ಒದಗಿಸುವುದು ಮತ್ತು  ಸುಸ್ಥಿರತೆಯ ಮೇಲೆ ಹೆಚ್ಚಿನ ಗಮನ ಹರಿಸುವತ್ತ ಚಿತ್ತ ಹರಿಸಲಾಗಿದೆ ಎಂದರು. ಈ ಸುಧಾರಣೆಗಳಿಂದ ಭಾರತವು 2030 ರ ವೇಳೆಗೆ ಜಾಗತಿಕ ರಾಸಾಯನಿಕ ಮೌಲ್ಯ ಸರಪಳಿಯಲ್ಲಿ ಶೇಕಡಾ 5 ರಿಂದ 6 ರಷ್ಟು ಪಾಲನ್ನು ಹೊಂದಿರುವ ಜಾಗತಿಕ ರಾಸಾಯನಿಕ ಉತ್ಪಾದನಾ ಶಕ್ತಿ ಕೇಂದ್ರವಾಗಲಿದೆ ಎಂದರು. ಇದೇ ಮುಂದುವರೆದರೆ 2040 ರ ವೇಳೆಗೆ ಭಾರತವು 1 ಟ್ರಿಲಿಯನ್ ಡಾಲರ್‌ ರಾಸಾಯನಿಕ ವಲಯವನ್ನು ತಲುಪುವ ಮತ್ತು ಶೇಕಡಾ 12 ರಷ್ಟು ಜಾಗತಿಕ ಮೌಲ್ಯ ಸರಪಳಿ  ಪಾಲನ್ನು ಸಾಧಿಸುವ ನಿರೀಕ್ಷೆ ಇದೆ  ಅಲ್ಲದೆ, 7 ಲಕ್ಷ ಹೆಚ್ಚುವರಿ ಉದ್ಯೋಗ ಕೂಡಾ ಸೃಷ್ಟಿಯಾಗಲಿದೆ ಎಂದು ಸುಬ್ರಹ್ಮಣ್ಯಂ ತಿಳಿಸಿದರು.

NITI Aayog released its report “Chemical Industry: Powering India’s Participation in Global Value Chains”. This report offers an extensive analysis of India’s chemical sector, highlighting both opportunities and challenges, and outlining a pathway for positioning India as a key player in global chemical markets.  India’s 3.5% share in global chemical value chains and its chemical trade deficit at USD 31 billion in 2023, underscores its high dependence on imported feedstock and specialty chemicals.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 09-07-2025 | ಇಂದು ಸಾಮಾನ್ಯ ಮಳೆ | ಜುಲೈ 16 ರಿಂದ ಮುಂಗಾರು ದುರ್ಬಲಗೊಳ್ಳಬಹುದಾ ? |
July 9, 2025
1:47 PM
by: ಸಾಯಿಶೇಖರ್ ಕರಿಕಳ
ಜೋಯಿಡಾದ ಗ್ರಾಮದಲ್ಲಿ ಸೇತುವೆ ಕುಸಿತ | ತಾತ್ಕಾಲಿಕ ಕಾಲು ಸಂಕ ನಿರ್ಮಾಣ |
July 9, 2025
10:57 AM
by: The Rural Mirror ಸುದ್ದಿಜಾಲ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಶಿಖರ್ ಬಿ.ಕೆ.
July 9, 2025
7:44 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಕ್ರಿಶನ್ ಎಸ್ ಭಟ್
July 9, 2025
7:18 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror