ಭಾರತ ಅತಿದೊಡ್ಡ ಮಾಲಿನ್ಯಭರಿತ ದೇಶಗಳಲ್ಲಿ ಒಂದು | ಭಾರತೀಯ ಮೂಲದ ಯುಎಸ್ ಅಧ್ಯಕ್ಷೆಯಿಂದ ಆರೋಪ | ನೆಟ್ಟಿಗರಿಂದ ತರಾಟೆ |

June 9, 2023
11:12 AM

ಭಾರತ ಅತಿದೊಡ್ಡ ಮಾಲಿನ್ಯಕಾರಕ ದೇಶಗಳಲ್ಲಿ ಒಂದು ಎಂದು ಭಾರತೀಯ ಮೂಲದ ಯುಎಸ್ ರಿಪಬ್ಲಿಕನ್ ಅಧ್ಯಕ್ಷೆ ನಿಕ್ಕಿ ಹ್ಯಾಲೆ, ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ನಿಕ್ಕಿ ಹ್ಯಾಲೆ, ಪರಿಸರವನ್ನು ಉಳಿಸಲು ಭಾರತ ಹಾಗೂ ಚೀನಾದಲ್ಲಿ ಮಾಲಿನ್ಯ ನಿಯಂತ್ರಣ ಕಾರ್ಯಗಳನ್ನು ಮೊದಲು ಕೈಗೊಳ್ಳಬೇಕಿದೆ ಎಂದು ನಿಕ್ಕಿ ಹೇಳಿಕೆ ನೀಡಿದ್ದರು. ನಿಕ್ಕಿ ಹ್ಯಾಲೆಯ ಈ ಹೇಳಿಕೆಯನ್ನು ವಿರೋಧಿಸಿ ಬಳಕೆದಾರರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement
Advertisement

ಪರಿಸರವನ್ನು ಸಂರಕ್ಷಿಸುವ ಗಂಭೀರತೆಯ ಬಗ್ಗೆ ಯೋಚಿಸಲು ಬಯಸುವುದಾದರೆ ಭಾರತ ಹಾಗೂ ಚೀನಾದಲ್ಲಿ ಮೊದಲು ಬದಲಾವಣೆಯನ್ನು ತರಬೇಕಿದೆ, ಏಕೆಂದರೆ ಈ ದೇಶಗಳು ಅತಿದೊಡ್ಡ ಮಾಲಿನ್ಯಕಾರಕರಗಳಾಗಿವೆ ಎಂದು ಹ್ಯಾಲೆ ಟ್ವೀಟ್ ಮಾಡಿದ್ದಾರೆ. ಹ್ಯಾಲೆ ಟ್ವೀಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಆಕೆಗೆ ಭಾರೀ ಮುಖಭಂಗವಾಗಿದೆ.

 

ಲೇಖಕ ಶೈಲೇಂದ್ರ ಮಲಿಕ್ ಕೂಡ ನಿಕ್ಕಿಯವರನ್ನು ತರಾಟೆಗೆ ತೆಗೆದುಕೊಂಡಿದ್ದು ವಿವಿಧ ಅಮೇರಿಕನ್ ಕಂಪನಿಗಳ ಸಿಇಒಗಳಾಗಿ ಭಾರತೀಯರು ಕಾರ್ಯನಿರ್ವಹಿಸುತ್ತಿರುವುದು ಉತ್ತಮ ವಿಚಾರ ಆದರೆ ರಾಜಕಾರಣಿಗಳಾಗಿ ಅವರಷ್ಟು ನಿಷ್ಪ್ರೋಜಕರು ಬೇರೆ ಯಾರೂ ಇಲ್ಲ ಎಂದು ಟೀಕಿಸಿದ್ದಾರೆ.

ತಪ್ಪು ಮಾಹಿತಿಯ ಆಧಾರದ ಮೇಲೆ ಭಾರತವನ್ನು ದೂಷಿಸುವ ಭಾರತೀಯ ಮೂಲದ ರಾಜಕೀಯ ವ್ಯಕ್ತಿಗಳು ವಿದೇಶದಲ್ಲಿ ನೆಲೆಯೂರಿದ ನಂತರ ದೇಶವನ್ನು ಜರೆಯುವ ಕಾರ್ಯದಲ್ಲಿ ತೊಡಗಬಾರದು ಎಂದು ಬಳಕೆದಾರರು ನಿಕ್ಕಿಗೆ ಕಾಮೆಂಟ್ ಮಾಡಿದ್ದಾರೆ.

ಭಾರತೀಯ ಮೂಲದ ಯಾರಾದರೂ ವಿದೇಶದಲ್ಲಿ ಯಶಸ್ಸನ್ನು ಸಾಧಿಸಿದಾಗ ಭಾರತೀಯರು ಆ ಬಗ್ಗೆ ಹೆಮ್ಮೆಪಡಬಾರದು ಎಂಬುದಕ್ಕೆ ನಿಕ್ಕಿ ಹ್ಯಾಲಿಯಂತವರು ಉದಾಹರಣೆಯಾಗಿದ್ದಾರೆ ಎಂದು ಬಳಕೆದಾರರು ತಿಳಿಸಿದ್ದಾರೆ. ವಿದೇಶದಲ್ಲಿ ಭಾರತೀಯರು ಯಶಸ್ಸು ಸಾಧಿಸಿದಾಗ ಅದನ್ನು ಕೊಂಡಾಡುವ ಮೊದಲು ಅವರ ಪರಂಪರೆ ಹಾಗೂ ಅವರ ಪೂರ್ವಜರು ತಮ್ಮ ತಾಯ್ನಾಡನ್ನು ಒಪ್ಪಿಕೊಳ್ಳಲು ಸಿದ್ಧರಿದ್ದಾರೆಯೇ ಎಂಬುದನ್ನು ಕಾಯುವುದು ಉತ್ತಮ ಎಂದು ತಿಳಿಸಿದ್ದಾರೆ.

 

Advertisement
Advertisement

Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಆಪ್‌ನಲ್ಲಿ ವಿವರ ದಾಖಲಿಸಲು ರೈತರಿಗೆ ಮನವಿ
June 28, 2025
9:16 PM
by: The Rural Mirror ಸುದ್ದಿಜಾಲ
ನಾರಾಯಣಪುರ ಅಣೆಕಟ್ಟೆಯ ನೀರಿನ ಮಟ್ಟ ಹೆಚ್ಚಳ | ನದಿ ಪಾತ್ರದ ಜನರಿಗೆ ಜಾಗ್ರತೆಯಿಂದ ಇರಲು ಎಚ್ಚರಿಕೆ
June 28, 2025
8:36 PM
by: The Rural Mirror ಸುದ್ದಿಜಾಲ
ಹಳ್ಳಿಗಳು ಅಭಿವೃದ್ಧಿ ಹೊಂದಿದರೆ ಮಾತ್ರ ದೇಶದ ಅಭಿವೃದ್ಧಿ
June 28, 2025
8:29 PM
by: The Rural Mirror ಸುದ್ದಿಜಾಲ
ಕೃಷಿ ಕೂಡಾ ಅತಿ ಹೆಚ್ಚು ಉದ್ಯೋಗ ಒದಗಿಸುವ ಕ್ಷೇತ್ರ
June 28, 2025
8:14 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group