ಭಾರತವು ಅಪಾಯಕಾರಿ ಕಳೆನಾಶಕ ಏಕೆ ನಿಷೇಧಿಸಬೇಕು ? | ಡೌನ್‌ ಟು ಅರ್ಥ್‌ ವಿಶೇಷ ವರದಿಯಲ್ಲಿ ಹೇಳಿದೆ |

November 2, 2022
7:46 PM

ಗ್ಲೈಫೋಸೇಟ್ ಸಸ್ಯನಾಶಕ ಮತ್ತು ಅದರ ಉತ್ಪನ್ನಗಳ ಬಳಕೆಗೆ ಇತ್ತೀಚೆಗೆ ಕೇಂದ್ರ ಸರ್ಕಾರವು ಈಚೆಗೆ ನಿರ್ಬಂಧ ಹೇರಿದೆ. ಮನುಷ್ಯನ ಆರೋಗ್ಯದ ಮೇಲೆ ಗಂಭೀರ ಸಮಸ್ಯೆಗಳುಂಟಾಗಬಹುದು, ಮನುಷ್ಯರು ಹಾಗೂ ಪ್ರಾಣಿಗಳಿಗೆ ಅಪಾಯವುಂಟಾಗಬಹುದು ಎಂಬ ಭೀತಿಯಿಂದ ಸರ್ಕಾರ ಈ ನಿರ್ಬಂಧ ಹೇರಿದೆ. ಆದರೆ ಇದನ್ನು ಜಾಗತಿಕ ಅಧ್ಯಯನಗಳು ಮತ್ತು ನಿಯಂತ್ರಕ ಸಂಸ್ಥೆಗಳ ಅನುಮೋದನೆಗಳನ್ನು ಉಲ್ಲೇಖಿಸಿ ಉದ್ಯಮ ಸಂಘ, ಆಗ್ರೋ-ಕೆಮಿಕಲ್ ಫೆಡರೇಶನ್ ಆಫ್ ಇಂಡಿಯಾ(AGFI) ವಿರೋಧಿಸಿದೆ.

Advertisement
ಗ್ಲೈಫೋಸೇಟ್ ಮತ್ತು ಅದರ ಸಂಯೋಜನೆಗಳನ್ನು ವ್ಯಾಪಕವಾಗಿ ನೋಂದಾಯಿಸಲಾಗಿದ್ದು, ಪ್ರಸ್ತುತ ಐರೋಪ್ಯ ಒಕ್ಕೂಟ ಮತ್ತು ಅಮೆರಿಕ ಸೇರಿದಂತೆ 160ಕ್ಕೂ ಹೆಚ್ಚು ದೇಶಗಳಲ್ಲಿ ಬಳಸಲಾಗುತ್ತಿದೆ. ಜಗತ್ತಿನಾದ್ಯಂತ ರೈತರು ಕಳೆದ 40 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಸುರಕ್ಷಿತ ಮತ್ತು ಪರಿಣಾಮಕಾರಿ ಕಳೆ ನಿಯಂತ್ರಕವಾಗಿ ರೈತರು ಬಳಸುತ್ತಿದ್ದಾರೆ.
ಗ್ಲೈಫೋಸೇಟ್ ಬಳಕೆಯನ್ನು ನಿರ್ಬಂಧಿಸಲಾಗಿದ್ದು, ಕೀಟ ನಿಯಂತ್ರಣ ನಿರ್ವಾಹಕರನ್ನು (PCOs) ಹೊರತುಪಡಿಸಿ ಬೇರೆ ಯಾರೂ ಗ್ಲೈಫೋಸೇಟ್ ಬಳಸಬಾರದು ಎಂದು ಕೃಷಿ ಸಚಿವಾಲಯವು  ಅಕ್ಟೋಬರ್ 25 ರಂದು ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.

ಆದರೆ ಡೌನ್‌ ಟು ಅರ್ಥ್‌ ತನ್ನ ವಿಶೇಷ ವರದಿಯಲ್ಲಿ  ಉಲ್ಲೇಖಿಸಿದೆ,  ಭಾರತವು ಅಪಾಯಕಾರಿ ಕಳೆನಾಶಕ ಗ್ಲೈಫೋಸೇಟ್ ಬಳಕೆಯನ್ನು ನಿರ್ಬಂಧಿಸದೆ  ನಿಷೇಧಿಸಬೇಕು ಏಕೆ ಎಂದು ವಿವರಿಸಿದೆ. ಡೌನ್‌ ಟು ಅರ್ಥ್‌ ಪರಿಸರ ಪರವಾಗಿ, ಕೃಷಿ ಪರವಾಗಿ ಧ್ವನಿ ಎತ್ತುತ್ತಿರುವ ಪತ್ರಿಕೆಯಾಗಿದೆ. ಈ ಹಿಂದೆ ಎಂಡೋಸಲ್ಫಾನ್‌ ಬಗ್ಗೆ ಸಮಗ್ರವಾದ ವರದಿ ಪ್ರಕಟ ಮಾಡಿತ್ತು.

ಕೀಟನಾಶಕ ಕಾಯಿದೆ, 1968 ರ ಅಡಿಯಲ್ಲಿ ಸ್ಥಾಪಿಸಲಾದ ತಜ್ಞರ ಸಮಿತಿಯ ವರದಿ ಮತ್ತು ನೋಂದಣಿ ಸಮಿತಿಯೊಂದಿಗೆ ಸಮಾಲೋಚಿಸಿದ ನಂತರ ಗ್ಲೈಫೋಸೇಟ್ ಬಳಕೆಯನ್ನು ನಿರ್ಬಂಧಿಸಿದೆ. ಭಾರತದಲ್ಲಿ ಸುಮಾರು 35 ಬ್ರಾಂಡ್‌ಗಳ ಗ್ಲೈಫೋಸೇಟ್ ಲಭ್ಯವಿದೆ ಎಂದು ಕೀಟನಾಶಕ ಆಕ್ಷನ್ ನೆಟ್‌ವರ್ಕ್ ವರದಿ ಹೇಳಿದೆ.

ಭಾರತದಲ್ಲಿ, ಕಳೆಗಳ ನಿಯಂತ್ರಣಕ್ಕಾಗಿ ಗ್ಲೈಫೋಸೇಟ್ ಬಳಕೆಯನ್ನು ಚಹಾ ಬೆಳೆ ಮತ್ತು ಬೆಳೆಯೇತರ ಪ್ರದೇಶಗಳಿಗೆ ಮಾತ್ರ ಅನುಮೋದಿಸಲಾಗಿದೆ. ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳ ಭಾರತದ ಪ್ರಮುಖ ಚಹಾ ತೋಟದ ರಾಜ್ಯಗಳಾಗಿವೆ. ಆದರೆ  ಚಹಾ ಬೆಳೆಗಳನ್ನು ಹೊಂದಿರದ ರಾಜ್ಯಗಳಲ್ಲಿ ಬಳಕೆ ಹೆಚ್ಚಾಗಿದೆ ಎಂದು ಸರ್ಕಾರದ ಅಂಕಿಅಂಶಗಳು ತೋರಿಸಿವೆ. ಉದಾಹರಣೆಗೆ, 2020-21ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಗ್ಲೈಫೋಸೇಟ್  ಬಳಕೆಯು ಉತ್ತರ ಪ್ರದೇಶದಲ್ಲಿ ಬಳಕೆಯಾಗಿದೆ. ನಂತರ ಗುಜರಾತ್ , ಜಮ್ಮು ಮತ್ತು ಕಾಶ್ಮೀರ , ತಮಿಳುನಾಡು. ಅಸ್ಸಾಂ , ಮಧ್ಯಪ್ರದೇಶ ಹಾಗೂ ಇತರ ರಾಜ್ಯಗಳಲ್ಲಿ ಬಳಕೆ ಇದೆ.

ಆಂಧ್ರಪ್ರದೇಶ, ಹಿಮಾಚಲ ಪ್ರದೇಶ, ಜಾರ್ಖಂಡ್, ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳದ ರೈತರು 2017 ರಲ್ಲಿ ಪ್ಯಾನ್ ಇಂಡಿಯಾದ ಕ್ಷೇತ್ರ ಅಧ್ಯಯನದ ಸಮಯದಲ್ಲಿ 20 ಕ್ಕೂ ಹೆಚ್ಚು ಕ್ಷೇತ್ರ ಬೆಳೆಗಳಲ್ಲಿ ಅದರಲ್ಲೂ ಮುಖ್ಯವಾಗಿ 16 ಆಹಾರ ಬೆಳೆಗಳಲ್ಲಿ ಗ್ಲೈಫೋಸೇಟ್ ಅನ್ನು ಅಕ್ರಮವಾಗಿ ಬಳಸುತ್ತಿರುವುದು ಕಂಡುಬಂದಿದೆ ಎಂದು ವರದಿಯಾಗಿದೆ.

ಕೇರಳ ಸರ್ಕಾರವು ಜೂನ್ 20, 2019 ರಂದು ಕೇಂದ್ರ ಸರ್ಕಾರಕ್ಕೆ ಬರೆದ ಪತ್ರದಲ್ಲಿ ಗ್ಲೈಫೋಸೇಟ್ (ಕಳೆನಾಶಕ) ಅನ್ನು ರೈತರು ಭತ್ತದ ಗದ್ದೆಗಳಲ್ಲಿ ವ್ಯಾಪಕವಾಗಿ ಮತ್ತು ವಿವೇಚನೆಯಿಲ್ಲದೆ ಬಳಸುತ್ತಿರುವ ಬಗ್ಗೆ ವರದಿ ಮಾಡಿದೆ. ಹಣ್ಣುಗಳು ಮತ್ತು ತರಕಾರಿಗಳಲ್ಲಿ ಹೆಚ್ಚಿನ ಕೀಟನಾಶಕಗಳು ತೋರಿಸುತ್ತವೆ ಎಂದೂ ಕೇರಳದ ಕೃಷಿ ವಿಶ್ವವಿದ್ಯಾಲಯದ ಅಧ್ಯಯನ ವರದಿಯನ್ನು ಉಲ್ಲೇಖಿಸಿದೆ.

ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ ಎನ್ನುವ ಸಂಸ್ಥೆ 2015 ರಲ್ಲಿ ಗ್ಲೈಫೋಸೇಟ್ ಕಾರ್ಸಿನೋಜೆನಿಕ್‌ ಎಂದು ಹೇಳಿದೆ. ಯುರೋಪಿಯನ್ ಕೆಮಿಕಲ್ ಏಜೆನ್ಸಿಯು ಗ್ಲೈಫೋಸೇಟ್ ಕಣ್ಣುಗಳಿಗೆ  ಹಾನಿಯನ್ನುಂಟು ಮಾಡುತ್ತದೆ ಎಂದು ಕಂಡುಹಿಡಿದಿದೆ. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನಡೆಸಿದ ಅಧ್ಯಯನವು ಪಿಟ್ಯುಟರಿ ಗ್ರಂಥಿಯ ಕಾರ್ಯನಿರ್ವಹಣೆಯಲ್ಲಿ ಗ್ಲೈಫೋಸೇಟ್‌ಗೆ ಅಡ್ಡಿಪಡಿಸುತ್ತದೆ ಎಂದು ವರದಿಯಲ್ಲಿ ಹೇಳಿದೆ.

ಈಗಾಗಲೇ ಸುಮಾರು 35 ಕ್ಕೂ ಹೆಚ್ಚು ದೇಶಗಳಲ್ಲಿ ಗ್ಲೈಫೋಸೇಟ್ ಅನ್ನು ನಿಷೇಧಿಸಲಾಗಿದೆ. ಇವುಗಳಲ್ಲಿ ಶ್ರೀಲಂಕಾ, ನೆದರ್ಲ್ಯಾಂಡ್ಸ್, ಫ್ರಾನ್ಸ್, ಕೊಲಂಬಿಯಾ, ಕೆನಡಾ, ಇಸ್ರೇಲ್ ಮತ್ತು ಅರ್ಜೆಂಟೀನಾ ಮತ್ತು ಆರು ಭಾರತೀಯ ರಾಜ್ಯಗಳು ಸೇರಿವೆ.

ಆದರೆ ಭಾರತವು ಈಗ ಕೀಟ ನಿಯಂತ್ರಣ ನಿರ್ವಾಹಕರನ್ನು ಹೊರತುಪಡಿಸಿ ಯಾವುದೇ ವ್ಯಕ್ತಿ ಗ್ಲೈಫೋಸೇಟ್ ಬಳಸಬಾರದು ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಿದೆ.  ಆದರೆ, ಆ ಕೀಟ ನಿಯಂತ್ರಣ ನಿರ್ವಾಹಕರು ಯಾರು ಮತ್ತು ಈ ನಿಯಮವನ್ನು ಕಾರ್ಯಗತಗೊಳಿಸುವ ವಿಧಾನ ಏನು ಎಂಬುದು ಸ್ಪಷ್ಟವಾಗಿಲ್ಲ.

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

ಯುದ್ಧ ಆದರೆ ಕೃಷಿ ಉತ್ಪನ್ನಗಳ ಧಾರಣೆ ಏನಾಗಬಹುದು?
May 6, 2025
7:44 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಪ್ರೀತಿಯ ಹಂಬಲ ಇರುವ, ವಯಸ್ಸಾದ, ಅನುಭವ ಹೊಂದಿದ ವ್ಯಕ್ತಿಗಳನ್ನು ಗೌರವಿಸುವ 5 ರಾಶಿಯ ಹುಡುಗಿಯರು |
May 6, 2025
7:18 AM
by: ದ ರೂರಲ್ ಮಿರರ್.ಕಾಂ
ಮಂಗಳೂರು | ರಾಷ್ಟ್ರೀಯ ಚೆಸ್ ಪಂದ್ಯಾಟ ಇಂದು ಸಮಾರೋಪ
May 6, 2025
7:02 AM
by: The Rural Mirror ಸುದ್ದಿಜಾಲ
ಸಹಜ ಸಾವನ್ನಪ್ಪುವ ಕಾಡುಪ್ರಾಣಿಗಳನ್ನು ಸುಡುವಂತಿಲ್ಲ | ಪ್ರಕೃತಿ ಚಕ್ರ ಕಾಪಾಡಲು ಸಹಕಾರಿ | ರಾಜ್ಯ ಸರ್ಕಾರದಿಂದ ಸುತ್ತೋಲೆ
May 5, 2025
10:56 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group