ದಿನದಿಂದ ದಿನಕ್ಕೆ ಭಾರತ ಉತ್ತುಂಗ ಸ್ಥಾನಕ್ಕೆ ಏರುತ್ತಿದೆ. ಮೊನ್ನೆ ಜಿಡಿಪಿಯಲ್ಲಿ ದೇಶ ಮೊದಲನೇ ಸ್ಥಾನವನ್ನು ಉಳಿಸಿಕೊಂಡಿದ್ರೆ ಈಗ ಭಾರತ ತಯಾರಕಾ ಕ್ಷೇತ್ರದಲ್ಲಿ ದಾಪುಗಾಲು ಇಡುತ್ತಿದೆ. ಕೇಂದ್ರ ಸರ್ಕಾರ ಉತ್ಪಾದನಾ ಆಧಾರಿತ ಪ್ರೋತ್ಸಾಹಕ ಯೋಜನೆ ಜಾರಿಗೆ ತಂದ ಬಳಿಕ ಭಾರತದ ತಯಾರಕಾ ಕ್ಷೇತ್ರ ಮಿರಮಿರ ಮಿಂಚತೊಡಗಿದೆ. ಅನೇಕ ವಲಯಗಳಿಗೆ ಪಿಎಲ್ಐ ಸ್ಕೀಮ್ನ ವ್ಯಾಪ್ತಿ ವಿಸ್ತರಣೆ ಮಾಡಲಾಗಿರುವುದು ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದ ಅಮೂಲಾಗ್ರ ಬೆಳವಣಿಗೆಗೆ ಸಹಾಯಕವಾಗಲಿದೆ.
ಭಾರತದಲ್ಲಿ ದಶಕಗಳಿಂದ ಮ್ಯಾನುಫ್ಯಾಕ್ಚರಿಂಗ್ ಘಟಕಗಳನ್ನು ಹೊಂದಿ ಕಾರ್ಯನಿರ್ವಹಿಸುತ್ತಿರುವ ಫಾಕ್ಸ್ಕಾನ್ ಈಗ ಭಾರತ ಭವಿಷ್ಯದ ಹೊಸ ತಯಾರಿಕಾ ಅಡ್ಡಿಯಾಗಿ ಬೆಳೆಯಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದೆ. ಫಾಕ್ಸ್ಕಾನ್ನ ಅಧಿಕೃತ ಹೆಸರಾದ ಹೋನ್ ಹೋಯ್ ಟೆಕ್ನಾಲಜೀಸ್ನ ಛೇರ್ಮನ್ ಯಂಗ್ ಲಿಯು ಅವರು, ಭಾರತ ಈ ವಿಶ್ವದ ತಯಾರಕಾ ಅಡ್ಡೆಯಾದರೆ, ತೈವಾನ್ ಭಾರತದ ಅತ್ಯಂತ ವಿಶ್ವಾಸಾರ್ಹ ಜೊತೆಗಾರನಾಗಿರುತ್ತದೆ ಎಂದು ಹೇಳಿದ್ದಾರೆ.
ಚೀನಾಗೆ 30 ವರ್ಷ ಬೇಕಾಯಿತು ಭಾರತಕ್ಕೆ ಅಷ್ಟು ಅವಧಿ ಬೇಕಿಲ್ಲ : ತಯಾರಕಾ ಉದ್ಯಮ ನಿರ್ಮಾಣವಾಗಲು ಸಪ್ಲೈ ಚೈನ್ ವ್ಯವಸ್ಥೆ ಅವಶ್ಯಕತೆ ಇರುತ್ತದೆ. ಈ ಇಕೋಸಿಸ್ಟಂ ಅನ್ನು ನಿರ್ಮಿಸಲು ಚೀನಾಗೆ 30 ವರ್ಷಕ್ಕೂ ಹೆಚ್ಚು ಕಾಲ ಬೇಕಾಯಿತು. ಈ ಇಕೋಸಿಸ್ಟಂ ತಯಾರಿಸಲು ಭಾರತಕ್ಕೂ ಸಮಯ ಹಿಡಿಯುತ್ತದೆ. ಆದರೆ ಚೀನಾಗೆ ತೆಗೆದುಕೊಂಡಷ್ಟು ಸಮಯ ಭಾರತಕ್ಕೆ ಬೇಕಾಗುವುದಿಲ್ಲ. ಸ್ಥಳೀಯ ಎಲೆಕ್ಟ್ರಾನಿಕ್ಸ್ ಉದ್ಯಮ ಬೆಳೆಯಲು ಹೇರಳ ಅವಕಾಶಗಳಿವೆ ಎಂದು ಫಾಕ್ಸ್ಕಾನ್ ಮುಖ್ಯಸ್ಥ ಯಂಗ್ ಲಿಯು ಅಭಿಪ್ರಾಯಪಟ್ಟಿದ್ದಾರೆ.
ಫಾಕ್ಸ್ಕಾನ್ ಭಾರತದಲ್ಲಿ 2005ರಿಂದಲೂ ಇದೆ. ಆದರೆ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಉತ್ಪನ್ನಗಳ ಅಸೆಂಬ್ಲಿಂಗ್ ಕಾರ್ಯಗಳನ್ನು ಫಾಕ್ಸ್ಕಾನ್ ಮಾಡುತ್ತಾ ಬಂದಿದೆ. ಆದರೆ, ಈ ಸರ್ಕಾರದ ಆದ್ಯತೆ ಸಂಪೂರ್ಣ ತಯಾರಿಕೆಯ ಮೇಲೆ ನೆಟ್ಟಿರುವ ಹಿನ್ನೆಲೆಯಲ್ಲಿ ಉತ್ಪನ್ನದ ಮುಖ್ಯ ಬಿಡಿಭಾಗಗಳ ತಯಾರಿಕೆಯತ್ತಲೂ ಫಾಕ್ಸ್ಕಾನ್ ಅಸ್ಥೆ ವಹಿಸುತ್ತಿದೆ.
ಫಾಕ್ಸ್ಕಾನ್ ಸದ್ಯಕ್ಕೆ ಭಾರತದಲ್ಲಿ ಐಫೋನ್ಗಳ ಅಸೆಂಬ್ಲಿಂಗ್ ಹೆಚ್ಚಾಗಿ ಮಾಡುತ್ತಿದೆ. ಈಗ ಸೆಮಿಕಂಡಕ್ಟರ್ ಚಿಪ್ಗಳನ್ನು ತಯಾರಿಸಲು ಸೂಕ್ತ ಜೊತೆಗಾರಿಕೆಗೆ ಹುಡುಕಾಡುತ್ತಿದೆ. ಚಿಪ್ ತಯಾರಿಸಲು ಕೆಲ ಮುಖ್ಯ ಬಿಡಿಭಾಗಗಳೂ ಬೇಕಾಗುತ್ತದೆ. ಆ ಬಿಡಿಭಾಗಗಳನ್ನು ತಯಾರಿಸುವ ಕಂಪನಿಗಳನ್ನೂ ಭಾರತಕ್ಕೆ ಕರೆತರುವುದು ಫಾಕ್ಸ್ಕಾನ್ನ ಉದ್ದೇಶವಾಗಿದೆ. ಕರ್ನಾಟಕ ಸೇರಿದಂತೆ ಭಾರತದ ವಿವಿಧೆಡೆ ಫಾಕ್ಸ್ಕಾನ್ 9 ಕ್ಯಾಂಪಸ್ಗಳನ್ನು ಹೊಂದಿದೆ. ಒಟ್ಟು 30 ಫ್ಯಾಕ್ಟರಿಗಳನ್ನು ಅದು ಸ್ಥಾಪಿಸಿದೆ. ಫಾಕ್ಸ್ಕಾನ್ನ ಒಟ್ಟೂ ಭಾರತೀಯ ಘಟಕಗಳನ್ನು ಸೇರಿಸಿದರೆ 500 ಫುಟ್ಬಾಲ್ ಮೈದಾನಗಳಷ್ಟಾಗುತ್ತದೆ. ಇಷ್ಟೂ ಘಟಕಗಳಿಂದ ಒಂದು ವರ್ಷದಲ್ಲಿ ಆಗುವ ವ್ಯವಹಾರ 10 ಬಿಲಿಯನ್ ಡಾಲರ್.
Source: News Agencies
ದೇಶದಲ್ಲಿ ನೈಋತ್ಯ ಮುಂಗಾರು ಚುರುಕುಗೊಂಡಿದ್ದು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ…
ರಾಜಸ್ಥಾನದಲ್ಲಿ ಕಳೆದ ಎರಡು ವರ್ಷಗಳಲ್ಲಿ ಕೀಟನಾಶಕ ಬಳಕೆಯಿಂದ 535 ರೈತರು ಮೃತಪಟ್ಟಿರುವುದು ಬಹಿರಂಗವಾಗಿದೆ.…
ಕೊಟ್ಟಿಯೂರು ದೇವಸ್ಥಾನದಲ್ಲಿ ‘ಬಾವಳಿಕೆಟ್ಟು’ ಆಚರಣೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ವಿವಾದ ಹುಟ್ಟಿಕೊಂಡಿದೆ.…
ಕರ್ನಾಟಕದಲ್ಲಿ ಮುಂಗಾರು ಚಟುವಟಿಕೆಗಳು ಜೂ. 8ರಿಂದ ಮತ್ತಷ್ಟು ಚುರುಕುಗೊಳ್ಳುವ ಲಕ್ಷಣಗಳು ಕಂಡುಬಂದಿದ್ದು, ಕರಾವಳಿ…
ಜೋಯಿಡಾದಲ್ಲಿ ನಡೆದ ಹಲಸು ಉತ್ಸವದಲ್ಲಿ 50ಕ್ಕೂ ಹೆಚ್ಚು ಮೌಲ್ಯವರ್ಧಿತ ಹಲಸಿನ ಉತ್ಪನ್ನಗಳು ಪ್ರದರ್ಶನಗೊಂಡು…
ಕ್ಯಾಂಪ್ಕೋ ಸಂಸ್ಥಾಪಕ ವಾರಣಾಶಿ ಸುಬ್ರಾಯ ಭಟ್ ಅವರ ಜನ್ಮಕ್ಕೆ 99 ವರ್ಷಗಳು ಪೂರ್ಣಗೊಂಡಿದ್ದು,…