The Rural Mirror ವಾರದ ವಿಶೇಷ

ಕೆಲವೇ ದಿನಗಳಲ್ಲಿ ಭಾರತದ 1000 ಡ್ಯಾಂಗಳು 50 ವರ್ಷ ಪೂರೈಸಲಿವೆ | ಎಚ್ಚೆತ್ತುಕೊಳ್ಳಬೇಕಾಗಿದೆ ಸರ್ಕಾರಗಳು

Share

ಅಣೆಕಟ್ಟುಗಳು ರಾಜ್ಯದ, ದೇಶದ ಆಸ್ತಿ. ಅದಕ್ಕಿಂತ ಹೆಚ್ಚಾಗಿ ಆಯಾ ಪ್ರದೇಶದ ರೈತರ ಜೀವನಾಡಿ. ದೇಶದಲ್ಲಿ ಅದೆಷ್ಟೋ ಡ್ಯಾಂಗಳು ದೇಶದ ರೈತರ ಹಾಗೂ ಜನರ ಜೀವನ ಕಟ್ಟಿಕೊಟ್ಟಿದೆ. ಆದರೆ ಇದೇ ಅಣೆಕಟ್ಟುಗಳು ಒಂದಷ್ಟು ಜನರನ್ನು ವಸತಿ ರಹಿತವಾಗಿಯೂ ಮಾಡಿವೆ. ಹಾಗೆ ಅದರ ಸುತ್ತ ಮುತ್ತ ಬದುಕುವವರು ಜೀವ ಕೈಯಲ್ಲಿ ಹಿಡಿದುಕೊಂಡೇ ಬದುಕ ಬೇಕಾಗುತ್ತದೆ. ಕೆಲವು ಅಣೆಕಟ್ಟುಗಳು ಶಿಥಿಲಾವಸ್ಥೆಗೆ ಬಂದಿವೆ. ಮುಂದಿನ ಎರಡು ವರ್ಷಗಳಲ್ಲಿ ಭಾರತದಲ್ಲಿನ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಅಣೆಕಟ್ಟುಗಳು 50 ವರ್ಷಗಳನ್ನು ಪೂರೈಸಲಿವೆ. ಇದರಿಂದಾಗಿ ಶಿಥಿಲಗೊಂಡಿರುವ ಡ್ಯಾಂಗಳ ಸಂಖ್ಯೆ ಹೆಚ್ಚುವ ಮೂಲಕ ದುರಂತಗಳ ಭೀತಿ ಕೂಡ ಕಾಡುತ್ತಿದೆ.

Advertisement

ಇದೇ ತಿಂಗಳ ಆರಂಭದಲ್ಲಿ ಸಂಭವಿಸಿದ ಲಿಬಿಯಾದ ಎರಡು ಅಣೆಕಟ್ಟುಗಳ ಕುಸಿತದಿಂದ ಉಂಟಾದ ಭೀಕರ ಪ್ರವಾಹದಿಂದ 5,300ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಅಲ್ಲದೇ 11 ಸಾವಿರಕ್ಕೂ ಹೆಚ್ಚು ಜನ ಈ ದುರಂತದಲ್ಲಿ ನಾಪತ್ತೆಯಾಗಿದ್ದಾರೆ. ಭೀಕರ ಮಳೆಯಿಂದ ಕುಸಿತಕ್ಕೊಳಗಾದ ಡ್ಯಾಂಗಳ ವಿಚಾರವಾಗಿ ವಿಶ್ವಸಂಸ್ಥೆಈ ಹಿಂದೆ ಹಲವು ಬಾರಿ ಎಚ್ಚರಿಸಿದ್ದರೂ ಈ ಎಚ್ಚರಿಕೆಯನ್ನು ನಿರ್ಲಕ್ಷಿಸಿದ್ದರ ಪರಿಣಾಮ ಈ ಭೀಕರ ದುರಂತಕ್ಕೆ ಲಿಬಿಯಾ ಸಾಕ್ಷಿಯಾಗಿದೆ. ಇದೇ ರೀತಿ ವಿಶ್ವದ ನಾನಾ ಭಾಗಗಳ ಹಲವಾರು ಅಣೆಕಟ್ಟುಗಳು ತಮ್ಮ ಆಯಸ್ಸನ್ನು ಮುಗಿಸುತ್ತ ಬಂದಿದ್ದು ಲಿಬಿಯಾ ದುರಂತದಿಂದ ಎಚ್ಚೆತ್ತುಕೊಳ್ಳುವಂತೆ ಕೂಗಿ ಹೇಳುತ್ತಿವೆ.

ಅಣೆಕಟ್ಟುಗಳ ಜೀವಿತಾವಧಿ ಎಷ್ಟು? : ಡ್ಯಾಂಗಳ ಜೀವಿತಾವಧಿಯನ್ನು ಸುಮಾರು 50 ರಿಂದ 100 ವರ್ಷ ಎಂದು ಅಂದಾಜಿಸಲಾಗುತ್ತದೆ. ಈ ಅಂದಾಜು ಸಿಮೆಂಟ್‌ನ ಜೀವಿತಾವಧಿ, ಡ್ಯಾಂನಲ್ಲಿನ ಬಿರುಕು, ಒಣಗುವಿಕೆ, ಭೂಕಂಪ ಅಲ್ಲದೇ ಬಿರುಕುಗಳಲ್ಲಿ ಹುಟ್ಟಬಹುದಾದ ಸಸ್ಯಗಳ ಆಧಾರದ ಮೇಲೆ ಕಡಿಮೆಯಾಗುವ ಸಾಧ್ಯತೆ ಕೂಡ ಇದೆ. ಡ್ಯಾಂಗಳ ನಿರ್ಮಾಣದ ಜಾಗದಲ್ಲಿರುವ ಬಂಡೆಗಳಲ್ಲಿನ ಪಲ್ಲಟ ಇಲ್ಲವೇ ಮೃದುಗೊಳ್ಳುವಿಕೆ ಕೂಡ ಡ್ಯಾಂಗಳ ಕುಸಿತಕ್ಕೆ ಕಾರಣವಾಗಬಹುದು. ಅಣೆಕಟ್ಟುಗಳ ಮರು ನವೀಕರಣ ಸ್ವಲ್ಪ ಪ್ರಮಾಣದಲ್ಲಿ ಜೀವಿತಾವಧಿಯನ್ನೂ ಮುಂದೂಡಬಹುದು. ಆದರೆ ಅದು ಶಾಶ್ವತ ಪರಿಹಾರ ಆಗಲು ಸಾಧ್ಯವಿಲ್ಲ.

ಕೆಲವೇ ದಿನಗಳಲ್ಲಿ ಭಾರತದ 1000 ಡ್ಯಾಂಗಳು 50 ವರ್ಷ ಪೂರೈಸಲಿವೆ : ಮುಂದಿನ ಎರಡು ವರ್ಷಗಳಲ್ಲಿ ಭಾರತದಲ್ಲಿನ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಅಣೆಕಟ್ಟುಗಳು 50 ವರ್ಷಗಳನ್ನು ಪೂರೈಸಲಿವೆ. ಇದರಿಂದಾಗಿ ಶಿಥಿಲಗೊಂಡಿರುವ ಡ್ಯಾಂಗಳ ಸಂಖ್ಯೆ ಹೆಚ್ಚುವ ಮೂಲಕ ದುರಂತಗಳ ಭೀತಿ ಕೂಡ ಕಾಡುತ್ತಿದೆ. ಈ ವಿಚಾರದಲ್ಲಿ ಅಣೆಕಟ್ಟುಗಳ ಸುತ್ತಲಿನ ಪ್ರದೇಶಗಳಲ್ಲಿನ ಜನರ ಜೀವದ ಬಗ್ಗೆ ಯೋಚಿಸಲೇ ಬೇಕಾದ ಅನಿವಾರ್ಯ ಕೂಡ ಇದೆ. ಈ ಬಗ್ಗೆ ವಿಶ್ವಸಂಸ್ಥೆ ಕೂಡ ಕಳವಳ ವ್ಯಕ್ತಪಡಿಸಿದೆ.

1930 ರಿಂದ 1970ರ ನಡುವೆ ವಿಶ್ವಾದ್ಯಂತ 58,700 ಅಣೆಕಟ್ಟುಗಳನ್ನು ನಿರ್ಮಿಸಲಾಗಿತ್ತು. ಅವುಗಳ ಕಾಲಾವಧಿಯನ್ನು 50 ರಿಂದ 100 ವರ್ಷಗಳು ಎಂದು ವಿನ್ಯಾಸ ತಜ್ಞರು ಮತ್ತು ಸಿವಿಲ್ ಇಂಜಿನಿಯರ್‌ಗಳು ನಿರ್ಧರಿಸಿದ್ದಾರೆ. ಅದರಂತೆ 2025ಕ್ಕೆ ಭಾರತವೊಂದರಲ್ಲೇ ಸಾವಿರಕ್ಕೂ ಹೆಚ್ಚು ಡ್ಯಾಂಗಳ ನಿರ್ಮಾಣಗೊಂಡು 50 ವರ್ಷಗಳ ಅವಧಿ ಪೂರ್ಣಗೊಳ್ಳಲಿದೆ. ಇದರಿಂದಾಗಿ ಅವುಗಳು ಶಿಥಿಲಗೊಳ್ಳುತ್ತಾ ಹೋಗುತ್ತವೆ ಎಂದು ವಿಶ್ವಸಂಸ್ಥೆ ಅಧ್ಯಯನ ವರದಿಯಲ್ಲಿ ಕೂಡ ತಿಳಿಸಿತ್ತು.

2050ರ ಹೊತ್ತಿಗೆ ಬಹುತೇಕ ಡ್ಯಾಂಗಳ ಕುಸಿತ : ಸದ್ಯ 50 ವರ್ಷ ದಾಟಿರುವ ಮತ್ತು ಅದಕ್ಕೂ ಹಳೆಯದಾದ ಡ್ಯಾಂಗಳು 2050ರ ಹೊತ್ತಿಗೆ ತೀವ್ರ ಶಿಥಿಲಗೊಂಡು ಕುಸಿಯಲು ಆರಂಭಗೊಳ್ಳಲಿವೆ. ಇಲ್ಲವೇ ಸರ್ಕಾರವೇ ಡ್ಯಾಂಗಳನ್ನು ಕೆಡವಲು ಮುಂದಾಗಬೇಕಾದ ಸ್ಥಿತಿ ನಿರ್ಮಾಣವಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವರದಿ ಸಿದ್ಧಪಡಿಸಲು ಅಮೆರಿಕ, ಕೆನಡಾ, ಫ್ರಾನ್ಸ್, ಭಾರತ, ಜಪಾನ್, ಜ್ಯಾಂಬಿಯಾ ಹಾಗೂ ಜಿಂಬಾಬ್ವೆಗಳಲ್ಲಿನ ದೊಡ್ಡ ಅಣೆಕಟ್ಟುಗಳ ಅಧ್ಯಯನವನ್ನೂ ಮಾಡಲಾಗಿದೆ.

ಏಷ್ಯಾ ಒಂದರಲ್ಲೇ ವಿಶ್ವದ 55% ಬೃಹತ್ ಡ್ಯಾಂಗಳು : ವಿಶ್ವದಲ್ಲಿರುವ ಡ್ಯಾಂಗಳ ಪ್ರಮಾಣದ 55%ರಷ್ಟು ಏಷ್ಯಾದ ನಾಲ್ಕೇ ರಾಷ್ಟ್ರಗಳಲ್ಲಿ ನಿರ್ಮಿಸಲಾಗಿದೆ. ಅಂದರೆ ಭಾರತ (India), ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ 32,716 ಬೃಹತ್ ಗಾತ್ರದ ಅಣೆಕಟ್ಟುಗಳಿವೆ. ಇದರಲ್ಲಿ ಬಹುತೇಕ ಡ್ಯಾಂಗಳು ಮುಂದಿನ ಎರಡು ವರ್ಷಗಳಲ್ಲಿ 50 ವರ್ಷಗಳನ್ನು ಪೂರೈಸಲಿವೆ.

  • ಅಂತರ್ಜಾಲ ಮಾಹಿತಿ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 06-04-2025 | ಕೆಲವು ಕಡೆ ಸಾಮಾನ್ಯ ಮಳೆ ನಿರೀಕ್ಷೆ | ಎ.7 ರಿಂದ ಮಳೆಯ ಪ್ರಮಾಣ ಕಡಿಮೆ |

ರಾಜ್ಯದಲ್ಲಿ ಈಗಿನಂತೆ ಎಪ್ರಿಲ್ 7 ರಿಂದ ಮಳೆ ಕಡಿಮೆಯಾಗುವ ಲಕ್ಷಣಗಳಿದ್ದು, ಎಪ್ರಿಲ್ 9…

12 hours ago

ಒಂದೆಡೆ ಮಳೆ-ಇನ್ನೊಂದೆಡೆ ಹೀಟ್‌ವೇವ್‌ | ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಏಪ್ರಿಲ್ 7 ರಿಂದ 9 ರವರೆಗೆ ಪೂರ್ವ ಭಾರತದಲ್ಲಿ ಗುಡುಗು ಮತ್ತು ಮಿಂಚಿನೊಂದಿಗೆ…

19 hours ago

ಮ್ಯಾನ್ಮಾರ್‌ನ ಭೂಕಂಪ | ಭಾರತೀಯ ಸೇನಾ ಆಸ್ಪತ್ರೆಯಲ್ಲಿ 700 ಕ್ಕೂ ಅಧಿಕ ರೋಗಿಗಳಿಗೆ ಚಿಕಿತ್ಸೆ

ಮ್ಯಾನ್ಮಾರ್‌ ಭೂಕಂಪದ ಬಳಿಕ ವಿವಿಧ ರೀತಿಯಲ್ಲಿ ಭಾರತವು ನೆರವು ನೀಡುತ್ತಿದೆ. ಇದುವರೆಗೆ ಭಾರತೀಯ ಸೇನಾ…

20 hours ago

ಮಾನವ-ಆನೆ ಸಂಘರ್ಷ ತಡೆಗೆ ಕ್ರಮ | 200 ಕೋ. ರೂ. ವೆಚ್ಚದ ರೈಲ್ವೆ ಬ್ಯಾರಿಕೇಡ್ ಕಾಮಗಾರಿ

ರಾಜ್ಯದಲ್ಲಿ 6395 ಆನೆಗಳಿದ್ದು, ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಯಲ್ಲಿ ಕಾಫಿ ತೋಟಗಳಲ್ಲಿ ನೂರಾರು…

21 hours ago

ಬೃಹಸ್ಪತಿ ಅಂದರೆ ಜ್ಞಾನವಂತ

ಬದುಕಿನ ದೀವಿಗೆ ಜ್ಞಾನ. ಅದು ಜ್ಞಾನ ದೀವಿಗೆ. ಜ್ಞಾನಕ್ಕೆ ಮುಪ್ಪಿಲ್ಲ, ಸಾವಿಲ್ಲ. ಅದು…

22 hours ago

ಪಶು ಸಖಿಯರ ಮಾಸಿಕ ಗೌರವಧನ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ

ರಾಜ್ಯದಲ್ಲಿ 1 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಬೇಸಿಗೆಯಲ್ಲಿ 89 ಲಕ್ಷ ಲೀಟರ್‌ಗೆ…

23 hours ago