ಕೃಷಿಗೆ, ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗವಾಗಿರುವ ಗೋ ಸಂರಕ್ಷಣೆಯ ಕೆಲಸ ಹಲವು ಕಡೆ ಸದ್ದಿಲ್ಲದೆ ನಡೆಯುತ್ತಿದೆ. ಇಂದು ಗೋವನ್ನು ಹಾಲಿಗಿಂತಲೂ ಇತರ ಉತ್ಪನ್ನಗಳ ಕಾರಣದಿಂದ ಸಾಕಬೇಕಾಗಿದೆ. ಹಾಲು ಉತ್ಪಾದನೆಗಿಂತಲೂ ಮಣ್ಣಿನ ಸಂರಕ್ಷಣೆಯ ಕಾರಣದಿಂದ ಸೆಗಣಿ, ಗೋಮೂತ್ರ ಬಳಕೆ ಬಗ್ಗೆ ಜಾಗೃತಿ ಆಗಬೇಕಿದೆ. ಇದಕ್ಕಾಗಿ ಗೋವಿನ ಉತ್ಪನ್ನ ತಯಾರಕ ಕೃಷಿಕರ ಹಾಗೂ ಗವ್ಯ ಉತ್ಪನ್ನಗಳ ಪರಿಚಯ ಅಭಿಯಾನ “ಗೋಸುರಭಿ” ಯನ್ನು ರೂರಲ್ ಮಿರರ್ ಡಿಜಿಟಲ್ ಮಿಡಿಯಾ ನಡೆಸುತ್ತಿದೆ. ಸದ್ಯದಲ್ಲೇ ನಿರೀಕ್ಷಿಸಿ….
ಗೋವನ್ನು ಹಾಲಿಗಾಗಿ ಮಾತ್ರಾ ಸಾಕುತ್ತಿಲ್ಲ ಎನ್ನುವ ಹಲವು ಕೃಷಿಕರು ಇದ್ದಾರೆ. ಹಾಲು ಹಾಗೂ ಅದರ ಉತ್ಪನ್ನಗಳ ಹೊರತಾಗಿ ಅನೇಕ ಉತ್ಪನ್ನಗಳು ತಯಾರಾಗುತ್ತಿದೆ. ಇದರಿಂದ ಗೋಸಾಕಾಣಿಕೆ ಲಾಭದಾಯಕ ಮಾಡುವವರು ಇದ್ದಾರೆ. ಇಂತಹ ಕೃಷಿಕರ ಪರಿಚಯ ಮಾಡುವ ಅಭಿಯಾನ ನಡೆಸಲು ನಮ್ಮ ಡಿಜಿಟಲ್ ಮೀಡಿಯಾ ಮುಂದಾಗಿದೆ.ಇದಕ್ಕೆ “ಗೋಸುರಭಿ” ಎಂದು ಕರೆದಿದ್ದೇವೆ. ಕನಿಷ್ಠ 15 ದಿನಗಳಲ್ಲಿ ನಮಗೆ ಸಾಧ್ಯವಾಗುವ ಪ್ರಯತ್ನ ಮಾಡಬೇಕು. ಭಾರತೀಯ ಗೋವಿನ ಉಳಿಸುವ ಹಾಗೂ ಅದರ ಉತ್ಪನ್ನಗಳ ತಯಾರಿಕೆಗೆ ಆದ್ಯತೆ ನೀಡುತ್ತೇವೆ. ಇಷ್ಟು ಮಾತ್ರ ಅಲ್ಲ, ಮಣ್ಣಿನ ಸಂರಕ್ಷಣೆಯಲ್ಲೂ ಗೋವಿನ ಪಾತ್ರ ಬಹುಮುಖ್ಯವಾಗಿದೆ. ಈ ಮಣ್ಣು ಹಾಗೂ ಪರಿಸರದ ಸಂರಕ್ಷಣೆಯೂ ಅಗತ್ಯವಾಗಿದೆ.
ಹಾಲಿನ ಹೊರತಾಗಿ ಗೋವಿನ ಉತ್ಪನ್ನಗಳನ್ನು ತಯಾರಿಸುವ ಕೃಷಿಕರು,ಉದ್ಯಮಿಗಳು ಇದ್ದರೆ ನಮಗೆ ಮಾಹಿತಿ ನೀಡಿ. ನಮ್ಮ ಸಂಪರ್ಕ : 9449125447
ಕೃಷಿ ಉತ್ಪಾದನೆ ಹೆಚ್ಚಿಸಲು ಬ್ಯಾಂಕ್ಗಳು ರೈತರಿಗೆ ಹೆಚ್ಚಿನ ಸಾಂಸ್ಥಿಕ ಸಾಲ ನೀಡಬೇಕು ಎಂದು…
E20 ನೀತಿಯಡಿ ಎಥನಾಲ್ ಉತ್ಪಾದನೆಗೆ ಜೋಳ ಸೇರಿದಂತೆ ಧಾನ್ಯಗಳ ಬೇಡಿಕೆ ಹೆಚ್ಚುತ್ತಿರುವ ನಡುವೆ…
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗದಗ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ…
ಕರ್ನಾಟಕದಲ್ಲಿ ಮಳೆಯ ತೀವ್ರತೆ ಕ್ರಮೇಣ ಕಡಿಮೆಯಾಗುವ ಲಕ್ಷಣಗಳಿದ್ದು, ಸೆಪ್ಟೆಂಬರ್ 4ರಿಂದ ಕರಾವಳಿ ಮತ್ತು…
ಭಾರತದ ಅತಿದೊಡ್ಡ ಕಾಫಿ ಉತ್ಸವ 2027 ಫೆಬ್ರವರಿ 26ರಿಂದ 28ರವರೆಗೆ ಬೆಂಗಳೂರಿನಲ್ಲಿ ನಡೆಯಲಿದ್ದು,…
ಅಪಾರ್ಥವಾಗುವುದು ಮಾನವ ಸಹಜ; ಆದರೆ ಅಪಾರ್ಥವಾಯಿತೆಂಬ ಅರಿವು ಬಂದ ನಂತರ ಮತ್ತೆ ‘ಅರ್ಥ’ದೆಡೆಗೆ…