ಔಷಧಿಯ ಗುಣಗಳುಳ್ಳ ಇಪ್ಪೆ ಮರ | ಎಲೆ, ಹೂ, ಕಾಯಿ, ತೊಗಟೆ ಎಲ್ಲವೂ ಉಪಯೋಗ….! |

April 7, 2023
10:55 AM

ಔಷಧಿಯ ಗುಣಗಳುಳ್ಳ ಇಪ್ಪೆ ಮರ ಮಲೆನಾಡಿನ ಕಾಡು ಬೆಳೆಗಳಲ್ಲಿ ಒಂದು.ಮರದ ಬುಡದಲ್ಲಿ ಕುಳಿತರು ಸಾಕು ಮನಸ್ಸು ಶಾಂತವಾಗುತ್ತದೆ. ಇದರ ಎಲೆ ಹೂವು ಕಾಯಿ ತೊಗಟೆ ಇವು ಉತ್ತಮ ಔಷಧಿಯು ಹೌದು. ರುಚಿಯು ಹೌದು.

ಸಾಧಾರಣವಾಗಿ ಮೇ ಕೊನೆಯ ವಾರಗಳಲ್ಲಿ ಇದರ ಹಣ್ಣು ಬೀಜ ಸಿಕ್ಕುತ್ತದೆ. ಬೀಜವನ್ನು ಸಂಗ್ರಹಿಸಿ ಉಪ್ಪಾಗೆ, ಮುರುಗನ ಬೀಜ ದಿಂದ ಎಣ್ಣೆ ತೆಗೆದಂತೆ (ತುಪ್ಪ) ತೆಗೆಯಬೇಕು ಇದು ಎರಡು ವರ್ಷಕ್ಕೂ ಹಾಳಾಗುವುದಿಲ್ಲ.

1) ಇಪ್ಪೆ ತುಪ್ಪವನ್ನು ಬಿಸಿ ಮಾಡಿ ಹಚ್ಚುವುದರಿಂದ ಸಂಧಿವಾತ ಗುಣವಾಗುತ್ತದೆ.
2) ತಲೆಗೆ ಹಾಕುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ ಮತ್ತು ತಲೆನೋವು ಗುಣವಾಗುತ್ತದೆ.
3) ಇಪ್ಪೇಚಕ್ಕೆ ಕಷಾಯ ಸಂಧಿವಾತಕ್ಕೆ ಒಳ್ಳೆಯ ಔಷಧಿ.
4) ತೊಗಟೆಯ ಪುಡಿಯಲ್ಲಿ ಹಲ್ಲು ಉಜ್ಜುವುದರಿಂದ ಹಲ್ಲಿನ ಸಮಸ್ಯೆಗಳು ದೂರವಾಗುತ್ತವೆ.
5) ತೊಗಟೆಯ ಪುಡಿಯನ್ನು ತೋನ್ನು ರೋಗದಲ್ಲಿ ಉಪಯೋಗಿಸುತ್ತೇನೆ.
6) ತೊಗಟೆಯ ಪುಡಿಯನ್ನು ಕ್ಯಾನ್ಸರ್ ರೋಗದಲ್ಲಿ ಬಳಸುತ್ತೇನೆ.
7) ತಿಪ್ಪೆಯ ಹೂವಿನಲ್ಲಿ ಮಾಡಿದ ಲೇಹ್ಯ ನಿದ್ದೆಗೆ ಮತ್ತು ಪುಷ್ಟಿಗೆ ತುಂಬಾ ಒಳ್ಳೆಯದು.
8) ಹೂವನ್ನು ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿ ಬೇಕಾದಾಗ ಶರಭತ್ ಮಾಡಿ ಕುಡಿಯಬಹುದು.
9) ಹೂವನ್ನು ನೀರು ಅಥವಾ ಹಾಲು ಹಾಕಿ ಕುದಿಸಿ ಕುಡಿಯುವುದರಿಂದ ಕರುಳಿನ ಹುಣ್ಣು ಗುಣವಾಗುತ್ತದೆ.
10) ಹಸಿ ಹೂವನ್ನು ತಿನ್ನುವುದರಿಂದ ಕೆಮ್ಮು ಗುಣವಾಗುತ್ತದೆ.
11) ಅರೆಬರೆ ವಣಗಿದ ಹಣ್ಣು ಯಾವ ಡ್ರೈಫ್ರೂಟಿಗೂ ಕಡಿಮೆ ಇಲ್ಲ. ಶಾಲಾ ದಿನಗಳಲ್ಲಿ ಮರದ ಕೆಳಗೆ ಹೆಕ್ಕಿ ತಿನ್ನುವುದೇ ಒಂದು ಸಂಭ್ರಮ. ಹೆಚ್ಚಾಗಿ ಮತ್ತು ಬರುವ ಸಾಧ್ಯತೆಯೂ ಇದೆ.
12) ಇದರ ಎಳೆಯ ಎಲೆಗಳನ್ನು ಎಣ್ಣೆಯಲ್ಲಿ ಕುದಿಸಿ ಕಿವಿಗೆ ಹಾಕುವುದರಿಂದ ಕಿವಿ ನೋವು ಗುಣವಾಗುತ್ತದೆ.
13) ಬೆಳೆದ ಮರದಿಂದ ಮಣೆ (ಕುಳಿತು ಕೊಳ್ಳಲು) ಮಾಡಿ ಕುಳಿತು ಜಪ ಮಾಡುವುದರಿಂದ ಬೇಗನೆ ಸಿದ್ದಿ ಆಗುವುದು ಎನ್ನುವ ನಂಬಿಕೆ.
14) ಮರದ ಕಡಗೋಲು ತಯಾರಿಸಿ ಮಜ್ಜಿಗೆ ಕಡೆಯುವುದರಿಂದ ವಾತರೋಗ ನಿವಾರಣೆ ಆಗುತ್ತದೆ. ದೇಹಕ್ಕೂ ತಂಪು.

ಖ್ಯಾತ ನಾಟಿ ವೈದ್ಯೆ ಸುಮನಾ ಮಳಗದ್ದೆಯವರು ಇಪ್ಪೆ ಮರದ ಉಪಯೋಗಗಳ ಬಗ್ಗೆ ಬಹಳ ಸೊಗಸಾಗಿ ಹೇಳಿದ್ದಾರೆ. ಅವರನ್ನು ಸಂಪರ್ಕಿಸೋದಾದ್ರೆ :  ಸುಮನಾ ಮಳಲಗದ್ದೆ 9980182883.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಗಗನಯಾನಿ ಸುನಿತಾ ವಿಲಿಯಮ್ಸ್‌ಗೆ 9 ತಿಂಗಳ ಬಾಹ್ಯಾಕಾಶ ವಾಸ | ಭೂಮಿಗೆ ಕರೆತರುವ ಪ್ರಯತ್ನಕ್ಕೆ ಚಾಲನೆ | ನಾಸಾ ಹೇಳಿಕೆ |
March 17, 2025
8:07 AM
by: The Rural Mirror ಸುದ್ದಿಜಾಲ
ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಯಲ್ಲಿ ಪೋಷಕರನ್ನು ಬಿಟ್ಟು ಮಕ್ಕಳು ನಾಪತ್ತೆ…!
March 17, 2025
7:02 AM
by: The Rural Mirror ಸುದ್ದಿಜಾಲ
ದೇಶದಲ್ಲಿ 90 ಸಾವಿರ ಸರ್ಕಾರಿ ಶಾಲೆಗಳು ಬಂದ್
March 17, 2025
6:42 AM
by: The Rural Mirror ಸುದ್ದಿಜಾಲ
ರಾಜ್ಯದಲ್ಲಿ ಶೀಘ್ರ 5 ಸಾವಿರ ಶಿಕ್ಷಕರ ನೇಮಕ
March 17, 2025
6:36 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror