ಹಲಸು ಮೌಲ್ಯವರ್ಧನೆಯಾಗಿ ಅಡುಗೆ ಮನೆ ಸೇರುತ್ತಿದೆ. ಅದರ ಜೊತೆಗೇ ಹಲಸು ವಿವಿಧ ರೂಪದಲ್ಲಿ ಈಗ ಬೇಡಿಕೆಯ ಹಣ್ಣಾಗಿದೆ. ಇದೀಗ ಹಲಸಿನ ಬೀಜವೂ ವಿವಿಧ ಖಾದ್ಯವಾಗಿ ಅಡುಗೆ ಮನೆಯಲ್ಲಿ ಸದ್ದಾಗುತ್ತಿದೆ. ಹಲಸಿನ ಬೀಜದ ಖಾರಾ ಸೇವ್ ಬಗ್ಗೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಪಾರಂಪಳ್ಳಿಯ ಗೌತಮ್ ಐತಾಳ ಅವರು ಈ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ. ಬಹಳ ರುಚಿಕರವಾಗಿದೆ ಎಂದು ಹೇಳಿದ್ದಾರೆ.
ಹಲಸಿನ ಬೀಜವನ್ನು ಬೇಯಿಸಿ ಕಡಲೆ ಹಿಟ್ಟು ಮತ್ತು ಸ್ವಲ್ಪ ಅಕ್ಕಿ ಹಿಟ್ಟು ಹಾಕಿ ಕಲಸಿ ನಂತರ ಎಣ್ಣೆಯಲ್ಲಿ ಕರಿದಿದ್ದೇವೆ. ಮೊದಲ ಪ್ರಯತ್ನ ಇದಾಗಿದೆ. ಇನ್ನೂ ಸುಧಾರಿಸಬಹುದುಎಂದಿದ್ದಾರೆ.ಹಲಸಿನ ಬೀಜದ ಪೌಡರ್ ಸಿಕ್ಕಿದರೆ ಮತ್ತಷ್ಟುರುಚಿಕರವಾಗಿ ಮಾಡಬಹುದು ಎಂದು ಹೇಳಿದ್ದಾರೆ.
ಹಲಸಿನ ಬೀಜವನ್ನು ಬೇಯಿಸಿ ಗೋದಿ ಹಿಟ್ಟನ್ನು ಮಾಡಿಕೊಂಡು ಸ್ಮಾಷ್ ಮಾಡಿಕೊಳ್ಳಬೇಕು. ದೊಡ್ಡ ತುಂಡುಗಳು ಹಾಗೆ ಉಳಿದರೆ ಮಿಕ್ಸಿ ಗೆ ಅಥವಾ ಗ್ರೈಂಡರ್ ಗೆ ಹಾಕಿ ರುಬ್ಬಿ ಕೊಳ್ಳಬಹುದು. ನೀರು ನೋಡಿಕೊಂಡು ಹಾಕಬೇಕು ಎಂದು ಮಾಹಿತಿ ನೀಡಿದ್ದಾರೆ. ಕೋಡುಬಳೆ ಕೂಡಾ ಮಾಡಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ. ನೀವೂ ಈ ಬಗ್ಗೆ ಪ್ರಯತ್ನ ಮಾಡಿ. ಹೊಸ ವಿಧಾನ ಇದ್ದರೆ ಇತರರಿಗೂ ಹೇಳಿ.
ಜಗತ್ತು ಸದಾ ನಮ್ಮ ಜೊತೆಗಿರುತ್ತದೆ ಎಂಬ ನಿರೀಕ್ಷೆಗಿಂತ, ಪರಿಸ್ಥಿತಿ ಬದಲಾದರೂ ನಮ್ಮ ದಾರಿಯಲ್ಲಿ…
ಮಾರುಕಟ್ಟೆಗೆ ಯೋಗ್ಯವಲ್ಲದ ತೆಂಗಿನಕಾಯಿಯಿಂದ ಪಡೆದ ತೆಂಗಿನ ಎಣ್ಣೆಯನ್ನು ಬಳಸಿ ಸುಸ್ಥಿರ ವಿಮಾನ ಇಂಧನ…
ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…
ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು…
ಕರ್ನಾಟಕದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ…
ಮಂಗಳೂರಿನ ಅಶ್ಮಿತ್ ಎ.ಜೆ. ಅವರು ಝೀ ಕನ್ನಡದ ‘ಸರಿಗಮಪ 2026’ರ ವಿಜೇತರಾಗಿ ₹20…