ಮೈದಾಕ್ಕೆ ಪರ್ಯಾಯ ಹಿಟ್ಟು ಯಾವುದಿದೆ…? | ಬಾ ಕಾ ಹು ನಂತರ ಹ ಬೀ ಹು ಪ್ರಯೋಗ |

July 19, 2024
11:36 AM
ಬಾ ಕಾ ಹು ನಂತರ ಈಗ ಹ ಬೀ ಹು ಬಗ್ಗೆ ಚಿಂತನೆ ಆರಂಭವಾಗಿದೆ. ಹಲಸಿನ ಬೀಜದ ಹುಡಿಯನ್ನು ಮೈದಾ ಪರ್ಯಾಯವಾಗಿ ಬಳಕೆ ಮಾಡಬಹುದಾ ಎನ್ನುವ ಬಗ್ಗೆ ಯೋಚನೆ ಶುರುವಾಗಿದೆ.

ಕಳೆದ ಮೂರು – ನಾಲ್ಕು ವರ್ಷಗಳಿಂದ ಮೈದಾ ಹುಡಿಗೆ ಪರ್ಯಾಯವಾಗಿ ಬಾಳೆಕಾಯಿಯ ಹುಡಿಯನ್ನು ಅಂದರೆ ಬಾಕಾಹು ಬಳಸುವ ಬಗ್ಗೆ ಅನೇಕ ಪ್ರಯೋಗಗಳು ಕೇರಳ ಹಾಗೂ ಉತ್ತರ ಕನ್ನಡ, ದಕ್ಷಿಣ ಕನ್ನಡದ ಕೆಲವೆಡೆ ನಡೆದಿದೆ.  ಅದೇ ರೀತಿ ಹಲಸಿನ ಬೀಜವನ್ನು ಹುಡಿ ಮಾಡಿ ಮೈದಕ್ಕೆ ಪರ್ಯಾಯಾವಾಗಿ ಬಳಸುವ ಪ್ರಯೋಗಳು ನಡೆಯುತ್ತಿವೆ. ಇತ್ತೀಚೆಗೆ ಹಲಸಿನ ಬೆಳೆಯನ್ನು ವಾಣಿಜ್ಯ ಬೆಳೆಯಾಗಿ ಬೆಳೆಯಲು ಹಲವು ಪ್ರಯತ್ನಗಳೂ ನಡೆಯುತ್ತಿವೆ. 

Advertisement
Advertisement

ಇದೀಗ ಶಿರಸಿಯಲ್ಲಿ ಹಬೀಹು ಅಂದರೆ ಹಲಸಿನ ಬೀಜದ ಹುಡಿಯಿಂದ ಒಂದಷ್ಟು ಪ್ರಯೋಗಗಳನ್ನು ಮಹಿಳೆಯೊಬ್ಬರು ಮಾಡಿ ಯಶಸ್ವಿಯಾಗಿದ್ದಾರೆ.  ಹೌದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಆಶೀಸರದ ಮಹಿಳೆಯೊಬ್ಬರು ಹಲಸಿನ ಬೇಳೆಯಿಂದ (Jackfruit Seed) ಹುಡಿ, ರವೆಯನ್ನು ತಯಾರಿಸುತ್ತಿದ್ದಾರೆ.

ಆಶೀಸರದ ಅರುಣಾ ಹೆಗಡೆ ಅವರು ಕಳೆದ 10 ವರ್ಷದಿಂದ ಹಲಸಿನ ತಿನಿಸು ಮಾಡುವಲ್ಲಿ ಸಿದ್ಧಹಸ್ತರು. ಕಳೆದ ವರ್ಷ ಅವರಿಗೆ ಈ ಉಪಾಯ ಬಂದಿತ್ತು. ಹೀಗಾಗಿ ಹಲಸಿನ ಬೇಳೆಯನ್ನು ಮೊದಲು ಬೇಯಿಸಿಕೊಂಡು ನಂತರ ಒಣಗಿಸಿ ಅದನ್ನು ನುರಿದುಕೊಂಡು ಮಿಕ್ಸಿ ಮಾಡಿಕೊಂಡರು. ಇವರು ಎಂಟು ರೌಂಡ್ ಮಿಕ್ಸಿ ಮಾಡಿದ ನಂತರ ಅದರಲ್ಲಿ ಜಿನುಗು ರವೆ, ದಪ್ಪ ರವೆ, ಕೊನೆಯ ಪ್ರಾಡಕ್ಟ್ ಆಗಿ ಹಿಟ್ಟು ದೊರೆಯಿತು. ಆ ಹಿಟ್ಟಿನಿಂದ ಶಂಕರಪೋಳಿಯಂತಹ ಖಾದ್ಯಗಳನ್ನು ಇವರು ತಯಾರಿಸಿದ್ದಾರೆ.

ಈ ಹಿಟ್ಟು ಮೈದಾದ ಹಾಗೆ ಅಲ್ಲ ಇದು ಬೇಗ ಕರಗುತ್ತದೆ. ಹೀಗಾಗಿ ಇದನ್ನು ಒಮ್ಮೆ ಹಲಸಿನ ಸೀಸನ್ ಅಲ್ಲಿ ಸಂಸ್ಕರಿಸಿ ಇಟ್ಟುಕೊಂಡರೆ, ನಮಗೆ ಬೇಕಾದ ತಿಂಡಿಗಳನ್ನು ಹಲಸಿನ ಬೇಳೆಯ ಹುಡಿ ಅಥವಾ ಹಿಟ್ಟಿನಲ್ಲಿಯೇ ಮಾಡಬಹುದು.‌ ಅಂತೆಯೇ ಹಲಸಿನ ರವೆಯನ್ನೂ ಸಹ ಉಪ್ಪಿಟಿಗೆ, ಶೀರಾಕ್ಕೆ ಬಳಸಬಹುದಾಗಿದೆ. ಹೋಳಿಗೆ ಮಾಡಲು ಚಿರೋಟಿ ರವಾ ಅನ್ನೂ ಕೂಡ ಹಲಸಿನ ಬೇಳೆ ಹುಡಿಯಿಂದಲೇ ಮಾಡಿಕೊಳ್ಳಬಹುದು. ದೊಡ್ಡ ಪ್ರಮಾಣದಲ್ಲಿ ಇದಕ್ಕೊಂದು ಮಾರ್ಕೆಟ್ ಸಿಕ್ಕರೆ ಒಳ್ಳೆಯ ಗೃಹೋದ್ಯಮವಾಗಬಹುದು. ಅರುಣಾ ಹೆಗಡೆಯವರು ಪ್ರಯೋಗವಾಗಿ ಇದನ್ನು ಮಾಡಿದ್ದಾರೆ, ಹಲಸು ಬೆಳೆಗಾರರು ಇದನ್ನು ಪ್ರಾಯೋಗಿಕವಾಗಿ ಒಮ್ಮೆ ಮಾಡಬಹುದಾಗಿದೆ.

  • ಅಂತರ್ಜಾಲ ಮಾಹಿತಿ

The trend of using jackfruit seed flour as a substitute for all-purpose flour like maida is gaining popularity after ba ka hu. However, important considerations need to be taken into account before making this substitution.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆಯ ಬಗ್ಗೆ ಹೊಸ ಅಧ್ಯಯನ | ಕ್ಯಾನ್ಸರ್‌ ಅಷ್ಟೇ ಅಲ್ಲ… ಹೃದಯ ರೋಗ ಮತ್ತು ಮೆಟಾಬಾಲಿಕ್ ಸಮಸ್ಯೆಯೂ ಇದೆ…!
February 12, 2026
7:47 AM
by: ದ ರೂರಲ್ ಮಿರರ್.ಕಾಂ
ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ | ಶಾಶ್ವತ ಪರಿಹಾರಕ್ಕೆ ಕೇಂದ್ರದ ಗಮನ ಸೆಳೆದು ಕುಮಾರಸ್ವಾಮಿ ಮನವಿ
February 12, 2026
7:04 AM
by: ಮಿರರ್‌ ಡೆಸ್ಕ್
ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರಿಗೆ ಲಾಭ
February 12, 2026
6:54 AM
by: ದ ರೂರಲ್ ಮಿರರ್.ಕಾಂ
ಜಲಜೀವನ್ ಮಿಷನ್ ವೇಗಕ್ಕೆ ಕಟ್ಟುನಿಟ್ಟಿನ ಗಡಿ : ಉಳಿದ ಕಾಮಗಾರಿಗಳು ತ್ವರಿತ ಪೂರ್ಣಗೊಳಿಸಿ
February 12, 2026
6:47 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror