Advertisement
Opinion

ಮೈದಾಕ್ಕೆ ಪರ್ಯಾಯ ಹಿಟ್ಟು ಯಾವುದಿದೆ…? | ಬಾ ಕಾ ಹು ನಂತರ ಹ ಬೀ ಹು ಪ್ರಯೋಗ |

Share

ಕಳೆದ ಮೂರು – ನಾಲ್ಕು ವರ್ಷಗಳಿಂದ ಮೈದಾ ಹುಡಿಗೆ ಪರ್ಯಾಯವಾಗಿ ಬಾಳೆಕಾಯಿಯ ಹುಡಿಯನ್ನು ಅಂದರೆ ಬಾಕಾಹು ಬಳಸುವ ಬಗ್ಗೆ ಅನೇಕ ಪ್ರಯೋಗಗಳು ಕೇರಳ ಹಾಗೂ ಉತ್ತರ ಕನ್ನಡ, ದಕ್ಷಿಣ ಕನ್ನಡದ ಕೆಲವೆಡೆ ನಡೆದಿದೆ.  ಅದೇ ರೀತಿ ಹಲಸಿನ ಬೀಜವನ್ನು ಹುಡಿ ಮಾಡಿ ಮೈದಕ್ಕೆ ಪರ್ಯಾಯಾವಾಗಿ ಬಳಸುವ ಪ್ರಯೋಗಳು ನಡೆಯುತ್ತಿವೆ. ಇತ್ತೀಚೆಗೆ ಹಲಸಿನ ಬೆಳೆಯನ್ನು ವಾಣಿಜ್ಯ ಬೆಳೆಯಾಗಿ ಬೆಳೆಯಲು ಹಲವು ಪ್ರಯತ್ನಗಳೂ ನಡೆಯುತ್ತಿವೆ. 

ಇದೀಗ ಶಿರಸಿಯಲ್ಲಿ ಹಬೀಹು ಅಂದರೆ ಹಲಸಿನ ಬೀಜದ ಹುಡಿಯಿಂದ ಒಂದಷ್ಟು ಪ್ರಯೋಗಗಳನ್ನು ಮಹಿಳೆಯೊಬ್ಬರು ಮಾಡಿ ಯಶಸ್ವಿಯಾಗಿದ್ದಾರೆ.  ಹೌದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಆಶೀಸರದ ಮಹಿಳೆಯೊಬ್ಬರು ಹಲಸಿನ ಬೇಳೆಯಿಂದ (Jackfruit Seed) ಹುಡಿ, ರವೆಯನ್ನು ತಯಾರಿಸುತ್ತಿದ್ದಾರೆ.

ಆಶೀಸರದ ಅರುಣಾ ಹೆಗಡೆ ಅವರು ಕಳೆದ 10 ವರ್ಷದಿಂದ ಹಲಸಿನ ತಿನಿಸು ಮಾಡುವಲ್ಲಿ ಸಿದ್ಧಹಸ್ತರು. ಕಳೆದ ವರ್ಷ ಅವರಿಗೆ ಈ ಉಪಾಯ ಬಂದಿತ್ತು. ಹೀಗಾಗಿ ಹಲಸಿನ ಬೇಳೆಯನ್ನು ಮೊದಲು ಬೇಯಿಸಿಕೊಂಡು ನಂತರ ಒಣಗಿಸಿ ಅದನ್ನು ನುರಿದುಕೊಂಡು ಮಿಕ್ಸಿ ಮಾಡಿಕೊಂಡರು. ಇವರು ಎಂಟು ರೌಂಡ್ ಮಿಕ್ಸಿ ಮಾಡಿದ ನಂತರ ಅದರಲ್ಲಿ ಜಿನುಗು ರವೆ, ದಪ್ಪ ರವೆ, ಕೊನೆಯ ಪ್ರಾಡಕ್ಟ್ ಆಗಿ ಹಿಟ್ಟು ದೊರೆಯಿತು. ಆ ಹಿಟ್ಟಿನಿಂದ ಶಂಕರಪೋಳಿಯಂತಹ ಖಾದ್ಯಗಳನ್ನು ಇವರು ತಯಾರಿಸಿದ್ದಾರೆ.

ಈ ಹಿಟ್ಟು ಮೈದಾದ ಹಾಗೆ ಅಲ್ಲ ಇದು ಬೇಗ ಕರಗುತ್ತದೆ. ಹೀಗಾಗಿ ಇದನ್ನು ಒಮ್ಮೆ ಹಲಸಿನ ಸೀಸನ್ ಅಲ್ಲಿ ಸಂಸ್ಕರಿಸಿ ಇಟ್ಟುಕೊಂಡರೆ, ನಮಗೆ ಬೇಕಾದ ತಿಂಡಿಗಳನ್ನು ಹಲಸಿನ ಬೇಳೆಯ ಹುಡಿ ಅಥವಾ ಹಿಟ್ಟಿನಲ್ಲಿಯೇ ಮಾಡಬಹುದು.‌ ಅಂತೆಯೇ ಹಲಸಿನ ರವೆಯನ್ನೂ ಸಹ ಉಪ್ಪಿಟಿಗೆ, ಶೀರಾಕ್ಕೆ ಬಳಸಬಹುದಾಗಿದೆ. ಹೋಳಿಗೆ ಮಾಡಲು ಚಿರೋಟಿ ರವಾ ಅನ್ನೂ ಕೂಡ ಹಲಸಿನ ಬೇಳೆ ಹುಡಿಯಿಂದಲೇ ಮಾಡಿಕೊಳ್ಳಬಹುದು. ದೊಡ್ಡ ಪ್ರಮಾಣದಲ್ಲಿ ಇದಕ್ಕೊಂದು ಮಾರ್ಕೆಟ್ ಸಿಕ್ಕರೆ ಒಳ್ಳೆಯ ಗೃಹೋದ್ಯಮವಾಗಬಹುದು. ಅರುಣಾ ಹೆಗಡೆಯವರು ಪ್ರಯೋಗವಾಗಿ ಇದನ್ನು ಮಾಡಿದ್ದಾರೆ, ಹಲಸು ಬೆಳೆಗಾರರು ಇದನ್ನು ಪ್ರಾಯೋಗಿಕವಾಗಿ ಒಮ್ಮೆ ಮಾಡಬಹುದಾಗಿದೆ.

  • ಅಂತರ್ಜಾಲ ಮಾಹಿತಿ

The trend of using jackfruit seed flour as a substitute for all-purpose flour like maida is gaining popularity after ba ka hu. However, important considerations need to be taken into account before making this substitution.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?

ಗುಟ್ಕಾ–ಪಾನ್‌ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…

9 hours ago

ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…

1 day ago

ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ

ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…

1 day ago

ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?

ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…

1 day ago

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುತ್ತಿದೆಯೇ? – ಹೊಸ ಅಧ್ಯಯನದ ಎಚ್ಚರಿಕೆ

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುವ ಕ್ಯಾಂಪಿಲೋಬ್ಯಾಕ್ಟರ್ ಬ್ಯಾಕ್ಟೀರಿಯಾದ ಹರಡುವಿಕೆಯನ್ನು ವೇಗಗೊಳಿಸುತ್ತಿದೆ…

1 day ago

ಹವಾಮಾನ ಬದಲಾವಣೆಯಿಂದ ರೈತರ ರಕ್ಷಣೆಗೆ ಸರ್ಕಾರದ ತಂತ್ರ – 310 ಜಿಲ್ಲೆಗಳು ಅಪಾಯದಲ್ಲಿ, 2,661 ಸಹಿಷ್ಣು ತಳಿಗಳ ಅಭಿವೃದ್ಧಿ

ದೇಶದ 651 ಕೃಷಿ ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ದುರ್ಬಲವೆಂದು…

2 days ago