ಹಲಸಿನ ಕಾಯಿ ತಂಬುಳಿ – ಊಟಕ್ಕೆ ತಂಪು ನೀಡುವ ಸಾಂಪ್ರದಾಯಿಕ ಸವಿರುಚಿ

June 20, 2026
10:01 AM
ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ ಸಾಂಪ್ರದಾಯಿಕ ಹಲಸಿನ ಕಾಯಿ ತಂಬುಳಿ ಮಾಡುವ ಸುಲಭ ವಿಧಾನ ಇಲ್ಲಿದೆ. ಹಲಸಿನ ಕಾಯಿ, ಮಜ್ಜಿಗೆ ಮತ್ತು ಜೀರಿಗೆಯಿಂದ ತಯಾರಾಗುವ ಆರೋಗ್ಯಕರ ಖಾದ್ಯ.

ಹಲಸಿನ ಹಣ್ಣಿನ ಸೀಸನ್‌ನಲ್ಲಿ ಹಲಸಿನ ಕಾಯಿಯಿಂದ ವಿವಿಧ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಅವುಗಳಲ್ಲಿ ಆರೋಗ್ಯಕರ ಹಾಗೂ ರುಚಿಕರವಾದ ಒಂದು ವಿಶೇಷ ಖಾದ್ಯವೇ ಹಲಸಿನ ಕಾಯಿ ತಂಬುಳಿ. ಮಜ್ಜಿಗೆ, ತೆಂಗಿನ ತುರಿ ಹಾಗೂ ಜೀರಿಗೆ ಸುವಾಸನೆಯೊಂದಿಗೆ ತಯಾರಾಗುವ ಈ ತಂಬುಳಿ ಬೇಸಿಗೆಯ ದಿನಗಳಲ್ಲಿ ದೇಹಕ್ಕೆ ತಂಪು ನೀಡುವುದರ ಜೊತೆಗೆ ಊಟದ ರುಚಿಯನ್ನು ಹೆಚ್ಚಿಸುತ್ತದೆ.

ಬೇಕಾಗುವ ಪದಾರ್ಥಗಳು :

  • ಬಲಿತ ಹಲಸಿನ ಕಾಯಿ – 6 ಎಸಳು (ಬೇಯಿಸಿಕೊಂಡದ್ದು)
  • ಜೀರಿಗೆ – 1 ಚಮಚ
  • ಕಾಯಿತುರಿ – ¼ ಕಪ್
  • ಹಸಿಮೆಣಸಿನ ಕಾಯಿ – 1
  • ಹಿಂಗು – ಸ್ವಲ್ಪ
  • ಮಜ್ಜಿಗೆ – 1 ಲೋಟ
  • ಉಪ್ಪು – ರುಚಿಗೆ ತಕ್ಕಷ್ಟು

ಒಗ್ಗರಣೆಗೆ

  • ಸಾಸಿವೆ , ಕರಿಬೇವಿನ ಸೊಪ್ಪು , ತುಪ್ಪ, ಹಿಂಗು, ಒಣ ಕೆಂಪು ಮೆಣಸು

ಮಾಡುವ ವಿಧಾನ

  1. ಹಲಸಿನ ಕಾಯಿಯನ್ನು ಚೆನ್ನಾಗಿ ಬೇಯಿಸಿಕೊಳ್ಳಿ.
  2. ಮಿಕ್ಸಿ ಜಾರ್‌ಗೆ ಕಾಯಿತುರಿ, ಜೀರಿಗೆ, ಹಸಿಮೆಣಸಿನ ಕಾಯಿ, ಬೇಯಿಸಿದ ಹಲಸಿನ ಕಾಯಿ, ಉಪ್ಪು ಹಾಗೂ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
  3. ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ.
  4. ಇದಕ್ಕೆ ಮಜ್ಜಿಗೆ ಹಾಗೂ ಅಗತ್ಯವಿದ್ದಷ್ಟು ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  5. ಸಣ್ಣ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಸಾಸಿವೆ, ಕರಿಬೇವು, ಹಿಂಗು ಹಾಗೂ ಒಣ ಕೆಂಪು ಮೆಣಸು ಹಾಕಿ ಒಗ್ಗರಣೆ ತಯಾರಿಸಿ.
  6. ಈ ಒಗ್ಗರಣೆಯನ್ನು ತಂಬುಳಿಗೆ ಸೇರಿಸಿ ಕಲಸಿ.

ವಿಶೇಷತೆ :  ಹಲಸಿನ ಕಾಯಿ ತಂಬುಳಿ ಅನ್ನದ ಜೊತೆ ಅತ್ಯಂತ ರುಚಿಕರವಾಗಿದ್ದು, ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ ಆರೋಗ್ಯಕರ ಖಾದ್ಯವಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Jackfruit Thambuli is a traditional Karnataka dish prepared using boiled jackfruit, coconut, cumin, and buttermilk. It is a refreshing and healthy side dish that pairs well with rice, especially during summe

 

View this post on Instagram

 

A post shared by Rural Mirror (@theruralmirror)

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದಿವ್ಯ ಮಹೇಶ್

ದಿವ್ಯಾ ಮಹೇಶ್ ಅವರು ಗೃಹಿಣಿ. ಅಡುಗೆಯಲ್ಲಿ ಹೊಸರುಚಿ ಅವರ ಆಸಕ್ತಿಯ ಕ್ಷೇತ್ರ. ಸೋಶಿಯಲ್‌ ಮೀಡಿಯಾಗಳಲ್ಲಿ ಹೊಸರುಚಿ ಅಡುಗೆಯ ಮೂಲಕ ಗಮನ ಸೆಳೆದವರು. ಈಗಾಗಲೇ 700 ಕ್ಕೂ ಅಧಿಕ ರಿಸಿಪಿಗಳ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ನೀಡುವ ಮೂಲಕ ವಿಶೇಷವಾಗಿ ಗಮನ ಸೆಳೆದಿದ್ದಾರೆ. ಸಂಗೀತ ಆಲಿಸುವುದು, ಭರತನಾಟ್ಯ, ಓದುವುದು ಇತ್ಯಾದಿ ಅವರ ಆಸಕ್ತಿಯ ವಿಷಯ.

ಇದನ್ನೂ ಓದಿ

ಮಾತು ವ್ಯಕ್ತಿತ್ವವನ್ನು ತೋರಿಸುತ್ತದೆ, ಮೌನ ಅದನ್ನು ಎತ್ತುತ್ತದೆ..!
June 21, 2026
3:51 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಎಳೆಯ ಮನಸುಗಳಲ್ಲಿ ಪರಿಸರ ಜಾಗೃತಿ ಮೂಡಿದರೆ ಮಾತ್ರ ಸ್ವಚ್ಛ ಭವಿಷ್ಯ ನಿರ್ಮಾಣ
June 21, 2026
3:16 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 21-06-2026 | ಕರ್ನಾಟಕದಲ್ಲಿ ದುರ್ಬಲ ಮುಂಗಾರು ಮುಂದುವರಿಕೆ – ಜೂನ್ 26ರಿಂದ ಮಳೆ ಚೇತರಿಕೆಯ ನಿರೀಕ್ಷೆ
June 21, 2026
3:00 PM
by: ಸಾಯಿಶೇಖರ್ ಕರಿಕಳ
ಧರ್ಮಸ್ಥಳದಲ್ಲಿ ಭಕ್ತಸಾಗರ – ರಸ್ತೆಗಳಲ್ಲಿ ವಾಹನ ದಟ್ಟಣೆ
June 21, 2026
2:52 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror