ಸಾಮಾನ್ಯವಾಗಿ ಶುಂಠಿಯ ಗೊಂಚಲು ಸಾಮಾನ್ಯವಾಗಿ ಒಂದರಿಂದ ಎರಡು ಕೆ.ಜಿ ಮಾತ್ರ ಇರುತ್ತದೆ. ಆದರೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆ ಮೋಪಿದೇವಿ ಮಂಡಲದ ಶಿವರಾಮಪುರ ಎಂಬಲ್ಲಿ ಯರ್ಲಗಡ್ಡದ ನಾಗೇಶ್ವರರಾವ್ ಎಂಬುವವರು ಮನೆಯ ಹಿತ್ತಲಲ್ಲಿ ಬೆಳೆದ ಶುಂಠಿಯ ಗೊಂಚಲು ಬರೋಬ್ಬರಿ 7 ಕೆಜಿತೂಗುತ್ತಿದೆ.ಇದು ರೈತ ಸಮಾವೇಶವೊಂದರಲ್ಲಿ ಪ್ರಮುಖ ಆಕರ್ಷಣೆಯಾಗಿದೆ.
ರಾಸಾಯನಿಕ ಗೊಬ್ಬರ ಹಾಕದೇ ಸಾವಯವ ಪದ್ಧತಿಯಲ್ಲಿಯೇ ಈ ಶುಂಠಿಯನ್ನು ಬೆಳೆಯಲಾಗಿದೆ,ಇದನ್ನು ಮಾವಿನ ಶುಂಠಿ ಎಂದು ಕರೆಯಲಾಗುತ್ತದೆ. ಈ ಶುಂಠಿಯನ್ನು ಉಪ್ಪಿನಕಾಯಿಗೆ ಹೆಚ್ಚಿಗೆ ಬಳಸಲಾಗುತ್ತದೆ. ಈಗ ಒಂದು ಕೆಜಿ ಶುಂಠಿ ಬೆಲೆ 50 ರೂಪಾಯಿವರೆಗೆ ಇದೆ.
ಅರಿಶಿನದ ಸುಗ್ಗಿಯ ಅವಧಿ 7 ತಿಂಗಳಿಂದ 9 ತಿಂಗಳುಗಳಾಗಿದೆ. ಮಾವಿನ ಶುಂಠಿ ಕೇವಲ ಆರು ತಿಂಗಳಲ್ಲಿ ಕೊಯ್ಲಿಗೆ ಬರುತ್ತದೆ. ಮಾವಿನ ಶುಂಠಿಯನ್ನು ಕರ್ಕುಮಾ ಮಂಗ್ಗಾ ಎಂದೂ ಕರೆಯುತ್ತಾರೆ. ಮಾವಿನ ಶುಂಠಿಯಲ್ಲಿ ಈ ರೀತಿಯಾಗಿ ತೂಕ ಹೆಚ್ಚಾಗುವುದು ಬಹಳ ಅಪರೂಪ ಎಂದು ಘಂಟಸಾಲ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ಇಲಾಖೆಯ ಹಿರಿಯ ವಿಜ್ಞಾನಿ ಡಾ. ವಿ.ಮಂಜುವಾಣಿ ತಿಳಿಸಿದ್ದಾರೆ.
ಕಾಸರಗೋಡಿನ ICAR-CPCRIನಲ್ಲಿ ವಿಶ್ವ ತೆಂಗು ದಿನ–2026 ಆಚರಿಸಿ, ಹವಾಮಾನ ಅನಿಶ್ಚಿತತೆಯ ನಡುವೆ ತೆಂಗು…
ಕರಾವಳಿಯಲ್ಲಿ ಮುಂದಿನ ಎರಡು ದಿನ ಅಲ್ಲಲ್ಲಿ ಸಾಮಾನ್ಯ ಮಳೆಯಾದರೂ ಜೋರು ಮಳೆಯ ಸಾಧ್ಯತೆ…
ಕೃಷಿ ಉತ್ಪಾದನೆ ಹೆಚ್ಚಿಸಲು ಬ್ಯಾಂಕ್ಗಳು ರೈತರಿಗೆ ಹೆಚ್ಚಿನ ಸಾಂಸ್ಥಿಕ ಸಾಲ ನೀಡಬೇಕು ಎಂದು…
E20 ನೀತಿಯಡಿ ಎಥನಾಲ್ ಉತ್ಪಾದನೆಗೆ ಜೋಳ ಸೇರಿದಂತೆ ಧಾನ್ಯಗಳ ಬೇಡಿಕೆ ಹೆಚ್ಚುತ್ತಿರುವ ನಡುವೆ…
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗದಗ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ…
ಕರ್ನಾಟಕದಲ್ಲಿ ಮಳೆಯ ತೀವ್ರತೆ ಕ್ರಮೇಣ ಕಡಿಮೆಯಾಗುವ ಲಕ್ಷಣಗಳಿದ್ದು, ಸೆಪ್ಟೆಂಬರ್ 4ರಿಂದ ಕರಾವಳಿ ಮತ್ತು…