Advertisement
Opinion

ಜೀವಕ್ಕೇ ಅಮೃತ – ಜೀವಾಮೃತ | ಜೀವಾಮೃತವು ಗಿಡ-ಮರಗಳನ್ನು ಬಿಸಿ ಮತ್ತು ಬರ, ನೀರಿನ ಕೊರತೆಯ ಸಹಿಷ್ಣುತೆ ಹೆಚ್ಚಿಸುತ್ತದೆ | |

Share

ಈ ವಿಡಿಯೋ ನೋಡಿ… ಸುಡುಮಣ್ಣೂ ಆಯ್ತು, ಕಸಗಳ ವಿಲೇವಾರಿಯೂ ಆಯ್ತು ಎಂದು ತೋಟದ ಮಧ್ಯೆ ಸಿಬ್ಬಂದಿಗಳು ಎಲೆಕಸಗಳಿಗೆ(Dry leaf waste) ಬೆಂಕಿ(Fire) ಕೊಟ್ಟಿದ್ದರು. ಅಲ್ಲೇ ಸಮೀಪದ ಮುಂಡಕ್ಕಿ ಹಣ್ಣಿನ ಗಿಡ (ಗುಡ್ಡ ನೇರಳೆ, ಮೀನಂಗಿ, Syzygium zeylanicum, Cat eye fruit)ಕ್ಕೆ ಘಾತವಾಯಿತು . ಸ್ನೇಹಿತರೊಬ್ಬರು ಆ ಬೀಜದ ಗಿಡ ಕೊಟ್ಟಿದ್ದರು. ಅದನ್ನು ನೆಟ್ಟು ಕೆಲವು ವರ್ಷಗಳೇ ಆಗಿತ್ತು. ಬಾಲ್ಯದಲ್ಲಿ ಅಜ್ಜನ ಮನೆ ಪರಿಸರದಲ್ಲಿ ಸಿಕ್ಕಾಪಟ್ಟೆ ಅದರ ಹಣ್ಣುಗಳನ್ನು ತಿಂದ ಕಾರಣ ಆ ಗಿಡದ ಮೇಲೆ ವಿಶೇಷ ಮೋಹವಿತ್ತು. ಏನು ಮಾಡಲಿ, ಈ ಬಿರು ಬೇಸಗೆಗೆ ಗಿಡ ಹೀಗೆ ಸೋತು ಹೋದರೆ ಬದುಕಿ ಉಳಿಯುತ್ತದೋ ಎನ್ನುವ ಅನುಮಾನ ಇತ್ತು. ಆ ದುಃಖದಲ್ಲಿ 2 ವಾರ ಕಳೆದು ಹೋಯ್ತು.

ಪ್ರತೀ 15 ದಿನಗಳಿಗೊಮ್ಮೆ ಗೋಕೃಪಾಮೃತ ( ಸುಲಭದ ಭಾಷೆಗೆ ಜೀವಾಮೃತ ಎನ್ನಿ)ವನ್ನು ತೆಂಗು, ತರಕಾರಿ, ಹೂಗಿಡಗಳಿಗೆ ಹಾಕುವುದು ಅಭ್ಯಾಸವಾಗಿದೆ. 100ಲೀಟರ್ ಡ್ರಮ್ಮಿನಲ್ಲಿ ಒಂದೈದು ಲೀಟರ್ ಇರುವಾಗಲೇ ಪುನಃ 1ಕೇಜಿ ಬೆಲ್ಲ, 1ಕೇಜಿ ಕಡಲೆಹಿಟ್ಟು , ನೀರು ಬೆರಸಿ ಯಾವಾಗಲೂ ಜೀವಾಮೃತ ಸಿದ್ಧವಿರುತ್ತದೆ. ನೋಡಿಯೇ ಬಿಡೋಣವೆಂದು ಹಾಗೆಯೇ ಈ ಸೋತುಹೋದ ಮುಂಡಕ್ಕಿ ಹಣ್ಣಿನ ಗಿಡಕ್ಕೆ ಅಂದಾಜು 1 ಲೀಟರ್ ಹಾಕಿದ್ದೆ.

ಒಂದು ವಾರದಲ್ಲಿ ಗಿಡವೆಲ್ಲ ಹೊಸ ಚಿಗುರುಗಳಿಂದ ಕಂಗೊಳಿಸಲು ಶುರುವಾಯ್ತು . ಈ ರೀತಿಯ ಬದಲಾವಣೆ ಎಲ್ಲ ವಿಧದ ಸಸ್ಯ, ಮರಗಳಲ್ಲಿ ಕಂಡಿದ್ದೇನೆ. ಹೆಚ್ಚಾಗಿ ಗಿಡ/ಮರದ ಎಲೆಗಳು ಆ ಗಿಡ/ಮರದ ಬುಡದಲ್ಲೇ ಬಿದ್ದು ಮಣ್ಣು ಫಲವತ್ತಾಗಿರುತ್ತದೆ. ಆ ಫಲವತ್ತತೆಯನ್ನು ಗಿಡಕ್ಕೆ ಒದಗಿಸಿಕೊಡುವ ಕೆಲಸ ( Bioavailability) ಮಾಡುವುದು ಈ ಜೀವಾಮೃತ. ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳು ಮತ್ತು ಜೀವಾಮೃತದಲ್ಲಿರುವ ಜೀವಿಗಳು ಜಂಟಿಯಾಗಿ ( ಅವರಿಬ್ಬರ synergistic effect ) ಮಣ್ಣಿನಲ್ಲಿರುವ ಪೋಶಕಾಂಶಗಳು ಇನ್ನಷ್ಷು ಕರಗುವಂತೆ ( soluble) ಮಾಡಿ ಬೇರಿಗೆ ಒದಗಿಸಲು ಸಹಾಯ ಮಾಡುತ್ತವೆ. ಈ ಅಗತ್ಯವಿರುವ ಫಲವತ್ತತೆಯಿಂದ ಹಣ್ಣು, ಹೂವುಗಳ ಗಾತ್ರ, ಸಂಖ್ಯೆ, ಬಣ್ಣ, ಸುವಾಸನೆಯಲ್ಲಿ ಹೆಚ್ಚಳ ನಿಚ್ಚಳ. ತೆಂಗು, ಅಡಿಕೆಯಂತಹ ಏಕದಳ ಮರಗಳ ( ಬೇರು ಆಳಕ್ಕಿರುವುದಿಲ್ಲ ) ಸೋಗೆ ( ಎಲೆ, ಹೆಡೆ)ಗಳನ್ನು ಅವುಗಳ ಬುಡದಲ್ಲೇ ಕೊಚ್ಚಿಹಾಕಿ ಎರಡು ತಿಂಗಳಿಗೊಮ್ಮೆ ಜೀವಾಮೃತ ಮಾತ್ರ ಹಾಕಿ ( ಬೇರೆ ಗೊಬ್ಬರ, ಸಿಂಪಡಣೆ ಇಲ್ಲ) ಅಧಿಕ, ರೋಗರಹಿತ ಬೆಳೆ ತೆಗೆಯುವವರಿದ್ದಾರೆ.ಜೀವಾಮೃತದಿಂದ ಈ ವರ್ಷದ ಹೊಸ ಪಾಠ ಏನೆಂದರೆ ಗಿಡ/ಮರಗಳನ್ನು ಬಿಸಿ ಮತ್ತು ಬರ(ನೀರಿನ ಕೊರತೆ)ಕ್ಕೆ ಸಹಿಷ್ಣುತೆ ಹೆಚ್ಚಿಸುತ್ತದೆಯೆಂದು.

ಪೂರಕ ಮಾಹಿತಿ: ಹಟ್ಟಿ ತೊಳೆದ ನೀರಿನಲ್ಲಿ ಜೀವಾಮೃತದಲ್ಲಿರುವಂತೆ ಸೂಕ್ಷ್ಮ ಜೀವಿಗಳು ಇರುತ್ತವೆ. ಜೀವಾಮೃತದಲ್ಲಿ ಪೋಷಕಾಂಶಗಳು ಹೆಚ್ಚಿರುತ್ತವೆ ಅಂದರೆ ನಾವು ಒದಗಿಸುವ ಬೆಲ್ಲ ಮತ್ತು ಕಡಲೆಹಿಟ್ಟು ( ಯಾವುದೇ ಧಾನ್ಯದ ಹಿಟ್ಟು) ಬೆರಸಿದ ಮಾಧ್ಯಮವು ಬುರುಗುವಿಕೆ( Fermentation)ಗೆ ಒಳಗಾಗಿ ಕೋಟ್ಯಾಂತರ ಸೂಕ್ಷ್ಮ ಜೀವಿಗಳ ಪುನರ್ ಜನನ – ಮರಣ ನಿರಂತರ. ಹಾಗೆ ಸಾಯುವಾಗ ಅವುಗಳ ದೇಹದಿಂದ ಕಿಣ್ವಗಳು ( enzymes) ಮತ್ತು ಜೀವಸತ್ವಗಳು ಬಿಡುಗಡೆಯಾಗಿ ಅವೆಲ್ಲ ಮತ್ತೆ ಸಸ್ಯಗಳಿಗೆ ಸಮೃದ್ಧ ಆಹಾರವೇ. ಗೋಬರ್ ಗ್ಯಾಸಿನ ಸ್ಲರಿಯಲ್ಲಿ ಯಾವುದೇ ಸೂಕ್ಷ್ಮ ಜೀವಿಗಳಿರುವುದಿಲ್ಲ.

ಬರಹ :
ಡಾ.ಪಿ. ಮನೋಹರ ಉಪಾಧ್ಯ
, ಮಂಗಳೂರು
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ

ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್‌ನಲ್ಲಿ…

8 hours ago

ಹವಾಮಾನ ವರದಿ |13-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಹಂತ ಹಂತವಾಗಿ ಚುರುಕಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಮಳೆ ಕಡಿಮೆಯಾಗಿದ್ದು, ಬಿಸಿಲು ಹೆಚ್ಚಾಗಿರುವ ನಡುವೆಯೇ ಸೆ.14ರಿಂದ ದಕ್ಷಿಣ ಒಳನಾಡಿನಲ್ಲಿ…

17 hours ago

ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು

ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ನಡುವೆ ಭತ್ತ–ಗೋಧಿಯಂತಹ ಹೆಚ್ಚಿನ ನೀರು ಮತ್ತು…

21 hours ago

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…

2 days ago

ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ

ಇಂಪೀರಿಯಲ್ ಕಾಲೇಜ್ ಲಂಡನ್‌ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…

2 days ago

ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?

ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…

2 days ago