Advertisement
ಅಂಕಣ

10000 ಕಿಲೋಮೀಟರ್ ನಡಿಗೆಯ ನಂತರ….| ವಿವೇಕಾನಂದ ಎಚ್‌ ಕೆ ಬರೆಯುತ್ತಾರೆ…… | ಜ್ಞಾನ ಭಿಕ್ಷಾ ಪಾದಯಾತ್ರೆಯ ಪಕ್ಷಿನೋಟ…|

Share

10000 ಕಿಲೋಮೀಟರ್……..! ಕಾಲ್ನಡಿಗೆ..!. 

Advertisement
Advertisement

ರಾಷ್ಟ್ರದ ಮೊದಲ ಹೊಗೆ ಮುಕ್ತ ಗ್ರಾಮ ಎಂದು ಹೆಸರಾದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ವೈಚ್ಕೂರಳ್ಳಿಯಲ್ಲಿ ಕುಳಿತು ನೆನಪಿನ ಅಂಗಳಕ್ಕೆ ಜಿಗಿದಾಗ…..

Advertisement

ನಾನು ಡ್ಯಾನ್ಸ್ ಮಾಡುವವನಲ್ಲ, ಹಾಡು ಹೇಳುವವನಲ್ಲ, ಕಾಮಿಡಿ ಕಿಲಾಡಿಯಲ್ಲ, ಮಿಮಿಕ್ರಿ ಟಾಕೀಸಿನವನಲ್ಲ, ಯಾವುದೇ ಧರ್ಮದ ಧಾರ್ಮಿಕ ನಾಯಕನಲ್ಲ, ಪ್ರಶಸ್ತಿ ವಿಜೇತನಲ್ಲ, ಯಾವ ಅಧಿಕಾರವೂ ಇಲ್ಲ, ಯಾವ ಸಂಘಟನೆ ಅಥವಾ ಸಂಸ್ಥೆಗೂ ಸೇರಿಲ್ಲ……..

ಆದರೂ ಕರ್ನಾಟಕದ ಜನತೆ ಈ 336 ದಿನಗಳು 10 ಸಾವಿರ ಕಿಲೋಮೀಟರುಗಳ ಯಾತ್ರೆಯಲ್ಲಿ ತಮ್ಮ ಪ್ರೀತಿಯನ್ನು ಮೊಗೆ ಮೊಗೆದು ನೀಡಿದ್ದಾರೆ. ನನ್ನನ್ನು ಅಭಿಮಾನದಿಂದ ಸಾಕಿದ್ದಾರೆ. ಊಟ ವಸತಿ ಸೌಕರ್ಯಗಳಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡಿದ್ದಾರೆ.

Advertisement

ಕೇವಲ ಅಕ್ಷರಗಳಲ್ಲಿ ಮೂಡಿದ ಅಭಿಪ್ರಾಯಗಳನ್ನು ಓದಿ ವ್ಯವಸ್ಥೆಯ ಸುಧಾರಣೆಗೆ ಹಾತೊರೆಯುತ್ತಿರುವ ಮನಸ್ಸುಗಳೇ ಇದಕ್ಕೆಲ್ಲ ಬಹುಮುಖ್ಯ ಕಾರಣ.

ಚಳಿ ಬಿಸಿಲು ಮಳೆ ಗಾಳಿ ಎತ್ತರದಿಂದ ಇಳಿಜಾರು ಪ್ರದೇಶಗಳಲ್ಲಿ ಸಂಚರಿಸುತ್ತಾ, ಕೊರೊನಾ ಅಲೆಯ ನಡುವೆ ಸಾಗುತ್ತಾ ನಗದು ರಹಿತವಾಗಿ ಕಾಲ್ನಡಿಗೆ ಮುಂದುವರಿಯಲು ಜನರು ತೋರಿದ ಕಾಳಜಿಯೇ ಕಾರಣ.

Advertisement

ಪ್ರತಿ ಹೆಜ್ಜೆಯಲ್ಲೂ ಸಿಗುವ ಜನರೊಂದಿಗೆ ಸಂವಾದ ಮಾಡುತ್ತಾ, ಎಲ್ಲಾ ಸ್ತರಗಳ ಸಾರ್ವಜನಿಕರೊಂದಿಗೆ ಬೆರೆಯುತ್ತಾ ಮಾನವೀಯ ಮೌಲ್ಯಗಳ ಬಗ್ಗೆ ಒಂದು ಚರ್ಚೆ ಹುಟ್ಟುಹಾಕುತ್ತಾ ನಿರಂತರ ಪಯಣ ಸಾಗಲು ಕಾರಣವೇ ಬದಲಾವಣೆಯ ತುಡಿತದ ಮನಸ್ಸುಗಳು.

ಎಲ್ಲರಿಗೂ ತುಂಬು ಹೃದಯದಿಂದ ಕೃತಜ್ಞತೆಗಳನ್ನು ಅರ್ಪಿಸುತ್ತಾ……… ಇನ್ನೂ ಸಾಗುತ್ತಲೇ ಇದೆ….

Advertisement

ಮಾನವೀಯ ಮೌಲ್ಯಗಳ ಪುನರುತ್ಥಾನದ ” ಜ್ಞಾನ ಭಿಕ್ಷಾ ಪಾದಯಾತ್ರೆ “……

ನಿಜ ಮನುಷ್ಯರ ಹುಡುಕುತ್ತಾ….. ಸಮ ಸಮಾಜದ ಕನಸಿನಲ್ಲಿ…….. ಜೀವಪರ ನಿಲುವಿನೊಂದಿಗೆ…… ಪರಿಸರದ ಉಳಿವಿಗಾಗಿ…….  ಎಲ್ಲಾ ಭಾವನೆಗಳನ್ನು ಅನುಭವಿಸುತ್ತಾ….. ತಿನ್ನುವ ಅನ್ನ ಬೆಳೆಯುವ ರೈತರ ಋಣ ತೀರಿಸಲು….. ಎಲ್ಲರಲ್ಲೂ ಪ್ರೀತಿ ಎಂಬ ಭಾವವನ್ನು ಸ್ಥಾಯಿಯಾಗಿಸುವ ಆಸೆಯೊಂದಿಗೆ…… ಕಾಲ್ನಡಿಗೆಯೇ ಒಂದು ಸಾಧನೆಯಲ್ಲ, ಸಾಮಾಜಿಕ ಪರಿವರ್ತನೆಗೆ ಪಾದಯಾತ್ರೆ ಒಂದು ಮಾರ್ಗ ಅಷ್ಟೇ….. ಸಾಗುತ್ತಿದೆ ಪಯಣ ಕೊನೆಯ ಉಸಿರಿನವರೆಗೆ………..

Advertisement

ಇಲ್ಲಿಯವರೆಗಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆಯ ಒಂದು ಪಕ್ಷಿನೋಟ……

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

Published by
ವಿವೇಕಾನಂದ ಎಚ್‌ ಕೆ

Recent Posts

ಬಹುಬೆಳೆ ಬೆಳೆದು ಉತ್ತಮ ಫಸಲು ಪಡೆದ ರೈತ | ಕೃಷಿಗೆ ರೈತ ಅನುಸರಿಸಿದ ಕ್ರಮಗಳಾವುವು..?

ಮಿಶ್ರ ಬೆಳೆ, ಪರ್ಯಾಯ ಬೆಳೆ, ಬಹು ಬೆಳೆ(Mixed cropping, alternating cropping, multiple…

7 hours ago

ಸ್ಟ್ರೀಟ್ ಫುಡ್ ವರ್ಸಸ್ ಆರೋಗ್ಯ | ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಿ

ಆಹಾರ ಹಾಗೂಆಹಾರ ಪದ್ಧತಿಗಳ ಬಗ್ಗೆ ವಿವೇಕ್‌ ಆಳ್ವ ಅವರು ಬರೆದಿದ್ದಾರೆ.

7 hours ago

ಸಕ್ಕರೆ ತಿನ್ನುವುದಕ್ಕಿಂತ ಶುಗರ್ ಫ್ರೀ ಸೇವನೆ ಹೆಚ್ಚು ಅಪಾಯಕಾರಿ…! |

`ಶುಗರ್ ಫ್ರೀ’(Sugar Free) ಎಂಬ ಹೆಸರಿನಲ್ಲಿ ಕೃತಕ ಸಿಹಿಕಾರಕಗಳ(Artificial sweet) ಟ್ರೆಂಡ್(Trend) ಹೆಚ್ಚುತ್ತಿರುವ…

8 hours ago

Karnataka Weather | 14-05-2024 | ಹಲವು ಕಡೆ ಗುಡಗು ಸಹಿತ ಮಳೆ ಮುಂದುವರಿಕೆ | ಮೇ.20 ರ ನಂತರ ಮಳೆ ಅಬ್ಬರ ಕಡಿಮೆ |

ಮೇ 20 ರ ನಂತರ ರಾಜ್ಯದಲ್ಲಿ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿದ್ದು, ಕರಾವಳಿ…

8 hours ago

ಮರಗಿಡಗಳಿಲ್ಲದೇ ಭೂಮಿಗೆ ಶಕ್ತಿ ಬರಲು ಸಾಧ್ಯವೇ?

ಕೃಷಿ ನೆಲದಲ್ಲಿ ಸಾವಯವ ಇಂಗಾಲದ(Carbon) ಕೊರತೆ ಕಾಡುತ್ತಿದೆ. ಮರಗಿಡಗಳಿಲ್ಲದೇ ಭೂಮಿಗೆ ಶಕ್ತಿ ಬರಲು…

8 hours ago