Advertisement

ಸಹಕಾರಿ ಸಂಘದಿಂದ ಜಾಬ್‌ ವರ್ಕ್‌ | ಕಲ್ಮಡ್ಕ ಸಹಕಾರಿ ಸಂಘದಿಂದ ಹೊಸ ಹೆಜ್ಜೆ | ಕೃಷಿಕರಿಗೆ ನೆರವಾಗುವ ವಿನೂತನ ಯೋಜನೆಗೆ ಸೆ.1 ಕ್ಕೆ ಚಾಲನೆ |

Share

ಎಲ್ಲೆಡೆಯೂ ಕೃಷಿ ಸಂಕಷ್ಟದಲ್ಲಿದೆ ಎನ್ನುವ ಮಾತುಗಳೇ ಹೆಚ್ಚು ಕೇಳುತ್ತಿದೆ. ಇದಕ್ಕೆ ಪರಿಹಾರ ಮಾರ್ಗಗಳೂ ಅಲ್ಲಲ್ಲಿ ತಯಾರಾಗುತ್ತಿದೆ. ಸುಳ್ಯ ತಾಲೂಕಿನ ಕಲ್ಮಡ್ಕದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ವಿನೂತನ ಹೆಜ್ಜೆ ಇರಿಸಿದೆ. ಸಹಕಾರಿ ಸಂಘದ ಮೂಲಕ ತೆಂಗಿನಕಾಯಿ ಕೊಯ್ಲು, ಅಡಿಕೆಗೆ ಔಷಧಿ ಸಿಂಪಡಣೆ, ಕಳೆ ತೆಗೆಯಲು ತಂಡವನ್ನು ಸಿದ್ಧ ಮಾಡುತ್ತಿದೆ. ಸದ್ಯ 7 ಜನರ ತಂಡ ಇದೆ. ಕೃಷಿಕರಿಗೆ ನೆರವಾಗುವ ಈ ಯೋಜನೆ ಸೆ.1 ರಿಂದ ಚಾಲನೆಗೆ ಬರಲಿದೆ. 

ದಕ್ಷಿಣ ಕನ್ನಡ ಜಿಲ್ಲೆಯು ಸಹಕಾರಿ ಸಂಘದ ತವರೂರು. ಸಹಕಾರಿ ಸಂಘಗಳು ಪರಸ್ಪರ ಸಹಕಾರ ಎಂಬ ಮನೋಭಾವದಿಂದಲೇ ಹುಟ್ಟಿಕೊಂಡವು. ಮೊಳಹಳ್ಳಿ ಶಿವರಾಯರು ಸಹಕಾರಿ ಸಂಘಗಳ ಉದ್ದೇಶವನ್ನೇ ಸ್ಪಷ್ಟವಾಗಿ ಹೇಳಿದ್ದರು. ಕೃಷಿಕರು , ಗ್ರಾಮೀಣ ಜನರು ಹಾಗೂ ಸಂಘದ ಪರಸ್ಪರ ಸಹಕಾರದ ತತ್ತ್ವದ ಮೂಲಕ ದ ಕ ಜಿಲ್ಲೆಯಲ್ಲಿ ಸಹಕಾರಿ ಸಂಘ ಬೆಳೆಯಿತು. ರೈತರಿಗೆ ಸಾಲ ನೀಡುವುದು, ವಸೂಲಾತಿ, ಬಡ್ಡಿ , ಉದ್ಯಮ ಇಷ್ಟೇ ಅಲ್ಲ. ರೈತರು, ಗ್ರಾಮೀಣ ಜನರು ಸಂಕಷ್ಟದಲ್ಲಿರುವಾಗ ನೆರವಾಗುವುದು ಅದಕ್ಕಾಗಿಯೇ ಲಾಭದ ಉದ್ದೇಶ ಇಲ್ಲದೆಯೇ ನೆರವಾಗುವುದು  ಕೂಡಾ ಸಹಕಾರಿಯ ಉದ್ದೇಶವೂ ಆಗಿದೆ.

ಇದೀಗ ಕಲ್ಮಡ್ಕ ವ್ಯವಸಾಯ ಸಹಕಾರಿ ಸಂಘವು ಕೃಷಿಕರಿಗೆ ನೆರವಾಗುವ ತಂಡವನ್ನು ಸಿದ್ಧ ಮಾಡುತ್ತಿದೆ. ಸಂಘದ ಅಧ್ಯಕ್ಷ ಬೆಟ್ಟ ಉದಯಕುಮಾರ್‌ ಅವರ ಆಡಳಿತದ ನಿರ್ದೇಶಕರ ತಂಡ ಹಾಗೂ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್‌ ಜೋಗಿಬೆಟ್ಟು ಅವರ ಯೋಜನೆಯೊಂದಿಗೆ ಈ ತಂಡ ಸಿದ್ಧವಾಗುತ್ತಿದೆ. ಸಂಘದ ವ್ಯಾಪ್ತಿಯ ಕೃಷಿಕರಿಗೆ ತೆಂಗಿನ ಕಾಯಿ ಕೊಯ್ಲು, ಕಳೆ ತೆಗೆಯಲು ಸೇರಿದಂತೆ ಮುಂದಿನ ವರ್ಷದಿಂದ ಅಡಿಕೆಗೆ ಔಷಧಿ ಸಿಂಪಡಣೆಗೂ ತಂಡ ತಯಾರು ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಸದ್ಯ 7 ಜನರ ತಂಡವನ್ನು ಸಿದ್ಧ ಮಾಡಿದ್ದಾರೆ. ಕೃಷಿಕರು ಸಹಕಾರಿ ಸಂಘಕ್ಕೆ ಬೇಡಿಕೆ ಸಲ್ಲಿಸಿದರೆ ಸಂಘವು ಇದಕ್ಕಾಗಿಯೇ ನೇಮಕ ಮಾಡಿರುವ ಸಿಬಂದಿಯ ಮೂಲಕ ಜಾಬ್‌ ವರ್ಕ್‌ ತಂಡವನ್ನು ನಿರ್ವಹಣೆ ಮಾಡುತ್ತದೆ. ಕೃಷಿಕರ ಬೇಡಿಕೆ ಗಮನಿಸಿಕೊಂಡು ಕೆಲಸವನ್ನು ವಿಭಾಗಿಸಿ ಸಂಘವು ತಂಡವನ್ನು ಕೃಷಿಕರಲ್ಲಿಗೆ ಕಳುಹಿಸಿಕೊಡುತ್ತದೆ. ಸಂಘದ ವತಿಯಿಂದಲೇ ಈ ತಂಡಕ್ಕೆ ಬೇಕಾದ ಎಲ್ಲಾ ಸಲಕರಣೆಗಳನ್ನೂ ಒದಗಿಸಲಾಗುತ್ತಿದೆ. ಈಗಾಗಲೇ ಎರಡು ಕಾರ್ಬನ್‌ ಪೈಬರ್‌ ದೋಟಿ, ಕಳೆ ಕಟಾವು ಯಂತ್ರವನ್ನೂ ಖರೀದಿ ಮಾಡಿದೆ.

ಕೃಷಿಕರು ಜಾಬ್‌ ವರ್ಕ್‌ ತಂಡಕ್ಕೆ ನೀಡಬೇಕಾದ ಎಲ್ಲಾ ವೇತನವನ್ನೂ ಸಹಕಾರಿ ಸಂಘಕ್ಕೆ ಪಾವತಿ ಮಾಡಬೇಕು.ಸಂಘವು ಈ ತಂಡಕ್ಕೆ ವೇತನ ನೀಡುತ್ತದೆ. ಇದರ ಜೊತೆಗೆ ಉದ್ಯೋಗ ಭದ್ರತೆ, ವಿಮೆ ಸೇರಿದಂತೆ ಪಿ ಎಫ್‌ ಮಾದರಿಯ ಹೂಡಿಕೆಯನ್ನೂ ಮಾಡಲು ಯೋಜನೆ ಹಾಕಿಕೊಂಡಿದೆ. ಈ ಮೂಲಕ ಜಾಬ್‌ ವರ್ಕ್‌ ಮಾಡುವ ಉದ್ಯೋಗಿಗೂ ಉದ್ಯೋಗ ಭದ್ರತೆಯೂ ಲಭ್ಯವಾಗುತ್ತಿದೆ. ಕೃಷಿಕರಿಗೂ ಕ್ಲಪ್ತ ಸಮಯದಲ್ಲಿ ಸೇವೆ ನೀಡಲು ಯೋಜನೆ ಹಾಕಿಕೊಂಡಿದೆ ಸಹಕಾರಿ ಸಂಘ.

ಸೆ.1 ರಿಂದ ಈ ತಂಡ ಸಿದ್ಧವಾಗುತ್ತಿದೆ. ಸಂಘದ ವತಿಯಿಂದಲೇ ಸಮವಸ್ತ್ರ ನೀಡಲಾಗುತ್ತಿದ್ದು, ಸಮಯವನ್ನು ನಿಗದಿ ಮಾಡಿ ಆ ಸಮಯದಲ್ಲಿ ಕೃಷಿಕರ ತೋಟದಲ್ಲಿ ಕೆಲಸಕ್ಕೆ ಸಿದ್ಧವಾಗುತ್ತಿದೆ ಈ ತಂಡ. ತನ್ನ ಸಹಕಾರಿ ಸಂಘದ ವ್ಯಾಪ್ತಿಯಲ್ಲಿ ಸದ್ಯ ಈ ತಂಡ ಕೆಲಸ ಮಾಡುತ್ತದೆ.

ಕೃಷಿಕರಿಗೆ ನೆರವಾಗುವ ಈ ಯೋಜನೆಯಲ್ಲಿ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಯೋಜನೆಯ ಮೂಲಕ ಆರಂಭಗೊಳ್ಳುತ್ತಿದೆ. ಈ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡಲು ಹಾಗೂ ಕೃಷಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೇಕಾದ ವ್ಯವಸ್ಥೆ ಮಾಡಲಾಗುತ್ತಿದೆ. ಸೆ.1 ರಿಂದ ಸಹಕಾರಿ ಸಂಘ ವ್ಯಾಪ್ತಿಯಲ್ಲಿ ಜಾರಿಯಾಗುತ್ತದೆ.
ಪ್ರಶಾಂತ್‌ ಜೋಗಿಬೆಟ್ಟು , ಸಿಇಒ, ಕಲ್ಮಡ್ಕ ಸಹಕಾರಿ ಸಂಘ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

2050 ರ ವೇಳೆಗೆ ಭೂಕುಸಿತದ ಅಪಾಯ ಮತ್ತಷ್ಟು ಹೆಚ್ಚಳ : ಮಳೆ ತೀವ್ರತೆ, ನಗರೀಕರಣವೇ ಪ್ರಮುಖ ಕಾರಣ – ಅಧ್ಯಯನ

2050ರ ವೇಳೆಗೆ ಮಳೆಯ ತೀವ್ರತೆ ಮತ್ತು ನಗರೀಕರಣದ ಪರಿಣಾಮವಾಗಿ ಭಾರತದ ಹಲವು ಗುಡ್ಡ…

6 hours ago

ಅಕಾಲದ ಹಸಿವು, ಅಸಮಯದ ನಿದ್ದೆ ದೇಹದ ಯಂತ್ರ ಕೆಟ್ಟಿರುವ ಸಂಕೇತ : ರಾಘವೇಶ್ವರ ಶ್ರೀ

ಅಕಾಲದ ಹಸಿವು ಮತ್ತು ಅಸಮಯದ ನಿದ್ದೆ ದೇಹದ ಯಂತ್ರದಲ್ಲಿ ಸಮಸ್ಯೆಯ ಸಂಕೇತ ಎಂದು…

8 hours ago

ಮತ್ತೆ ಚುರುಕುಗೊಂಡ ಮಳೆ | ಸುಳ್ಯ ಮಲೆನಾಡು ಭಾಗದಲ್ಲಿ ಬೆಳಗ್ಗಿನಿಂದ ಧಾರಾಕಾರ ಮಳೆ

ಸುಳ್ಯ ತಾಲೂಕಿನ ಮಲೆನಾಡು ಭಾಗದಲ್ಲಿ ಎರಡು ದಿನಗಳ ವಿರಾಮದ ಬಳಿಕ ಮತ್ತೆ ಭಾರೀ…

8 hours ago

ದೇಶದ ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕದ ಮೊದಲು – 75.47% ಉತ್ಪಾದನೆ, 71.56% ವಿಸ್ತೀರ್ಣದಲ್ಲಿ ಅಡಿಕೆ ಬೆಳೆ

ದೇಶದ ಅಡಿಕೆ ಉತ್ಪಾದನೆ ಹಾಗೂ ಬೆಳೆ ವಿಸ್ತೀರ್ಣದಲ್ಲಿ ಕರ್ನಾಟಕವೇ ಅಗ್ರಸ್ಥಾನದಲ್ಲಿದೆ ಎಂದು ಕೇಂದ್ರ…

17 hours ago

ಕಳಪೆ ವಿದೇಶಿ ಅಡಿಕೆ ಆಮದು ನಿಯಂತ್ರಿಸಿ – ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ

ವಿದೇಶದಿಂದ ಕಳಪೆ ಅಡಿಕೆ ಆಮದು ನಿಯಂತ್ರಿಸಿ ದೇಶೀಯ ಅಡಿಕೆ ಬೆಳೆಗಾರರನ್ನು ರಕ್ಷಿಸುವಂತೆ ಸಂಸದ…

20 hours ago

ಹವಾಮಾನ ವರದಿ | 04-08-2026 | ರಾಜ್ಯದಲ್ಲಿ ಆಗಸ್ಟ್‌ 12 ರವರೆಗೆ ಮಳೆ ಸಾಧ್ಯತೆ – ಮುಂಗಾರು ದುರ್ಬಲವಾಗುವ ಲಕ್ಷಣ

ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್‌ 12ರವರೆಗೆ ಬಿಟ್ಟುಬಿಟ್ಟು ಮಳೆಯಾಗುವ ಸಾಧ್ಯತೆ ಇದೆ. ಜಪಾನ್ ಸಮೀಪದ…

1 day ago