ಹಿಂದುತ್ವದ ಪರ ಬ್ಯಾಟಿಂಗ್ | ಕಂಗನಾಗೆ 40 ಕೋಟಿ ರೂಪಾಯಿ ನಷ್ಟ| ಬೇಸರ ಎಂದ ನಟಿ

May 18, 2023
10:00 AM

ಹಿಂದುತ್ವದ ಬಗ್ಗೆ ಮಾತನಾಡಿದ್ದಕ್ಕೆ ನಟಿ ಕಂಗನಾ ರಣಾವತ್ ಅವರಿಗೆ ಆದ ನಷ್ಟ ಬರೋಬ್ಬರಿ 30-40 ಕೋಟಿ ರೂಪಾಯಿ. ಹೀಗೇಕೆ ಎನ್ನುವ ವಿಚಾರದ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

Advertisement
Advertisement
Advertisement

ನಟಿ ಕಂಗನಾ ರಣಾವತ್ ಅವರು ಎಲ್ಲಾ ವಿಷಯಗಳ ಬಗ್ಗೆ ಮಾತನಾಡುತ್ತಾರೆ. ಸಮಾಜದ ಆಗು-ಹೋಗುಗಳ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸುತ್ತಾರೆ. ಇದರಿಂದ ಅವರು ಸಾಕಷ್ಟು ವಿವಾದ ಮಾಡಿಕೊಂಡಿದ್ದೂ ಇದೆ. ಆದರೆ, ಇದಕ್ಕೆಲ್ಲ ಅವರು ಹೆಚ್ಚು ತಲೆಕೆಡಿಸಿಕೊಂಡವರಲ್ಲ. ಈಗ ಕಂಗನಾ ರಾಣವತ್ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

Advertisement

ಟ್ವಿಟರ್ ಮುಖ್ಯಸ್ಥ ಎಲಾನ್ ಮಸ್ಕ್ ಅವರು ಮಾತನಾಡಿದ ವಿಡಿಯೋ ಒಂದನ್ನು ಅವರು ಹಂಚಿಕೊಂಡಿದ್ದಾರೆ. ‘ನನಗೆ ಇಷ್ಟ ಬಂದಿದ್ದನ್ನು ನಾನು ಹೇಳುತ್ತೇನೆ. ಅದರಿಂದ ಹಣ ಕಳೆದುಕೊಂಡರೂ ತೊಂದರೆ ಇಲ್ಲ’ ಎಂದು ಎಲಾನ್ ಮಸ್ಕ್​ ಅವರು ಈ ವಿಡಿಯೋದಲ್ಲಿ ಹೇಳಿದ್ದರು. ಈ ಮಾತು ಕಂಗನಾಗೆ ಇಷ್ಟವಾಗಿದೆ. ಇದು ಅವರ ಜೀವನದಲ್ಲೂ ನಡೆದಿದೆ ಎನ್ನಲಾಗುತ್ತಿದೆ.

‘ನಾನು ಹಿಂದುತ್ವದ ಬಗ್ಗೆ, ರಾಜಕಾರಣಿಗಳು ಹಾಗೂ ದೇಶ ವಿರೋಧಿಗಳ ಬಗ್ಗೆ ಮಾತನಾಡಿದ್ದಕ್ಕೆ ನನಗೆ 30-40 ಕೋಟಿ ರೂಪಾಯಿ ನಷ್ಟ ಆಗಿದೆ. 20-25 ಬ್ರ್ಯಾಂಡ್​ಗಳು ತಮ್ಮ ಒಪ್ಪಂದವನ್ನು ರಾತ್ರೋರಾತ್ರಿ ರದ್ದು ಮಾಡಿಕೊಂಡವು’ ಎಂದಿದ್ದಾರೆ ಕಂಗನಾ.

Advertisement

‘ನಾನು ಸ್ವತಂತ್ರಳು. ನನಗೆ ಅನಿಸಿದ್ದನ್ನು ಹೇಳಲು ಯಾವುದೂ ಅಡ್ಡಿಯಾಗದು. ನಾನು ಎಲಾನ್ ಮಸ್ಕ್​ ಅವರನ್ನು ಈ ವಿಚಾರದಲ್ಲಿ ಪ್ರಶಂಸಿಸುತ್ತೇನೆ. ಏಕೆಂದರೆ ಎಲ್ಲರೂ ದೌರ್ಬಲ್ಯಗಳನ್ನು ಮಾತ್ರ ಪ್ರದರ್ಶಿಸುತ್ತಾರೆ. ಆದರೆ, ಎಲಾನ್ ಮಸ್ಕ್ ಆ ರೀತಿ ಅಲ್ಲ. ಶ್ರೀಮಂತನಾದವನು ಹಣಕ್ಕಾಗಿ ಕಾಳಜಿ ವಹಿಸಬಾರದು’ ಎಂದಿದ್ದಾರೆ.

ಟ್ವಿಟರ್ ನಿಯಮ ಉಲ್ಲಂಘನೆ ಆರೋಪದ ಮೇಲೆ ಕಂಗನಾ ರಣಾವತ್ ಅವರ ಟ್ವಿಟರ್ ಖಾತೆಯ ಮೇಲೆ ನಿರ್ಬಂಧ ಹೇರಲಾಗಿತ್ತು. ಆದರೆ, ಎಲಾನ್ ಮಸ್ಕ್ ಅವರು ಟ್ವಿಟರ್​​ನ ಪಡೆದುಕೊಂಡಮೇಲೆ ಈ ಖಾತೆಯನ್ನು ಹಿಂದಿರುಗಿ ನೀಡಲಾಗಿದೆ. ಈ ಕಾರಣಕ್ಕೂ ಅವರಿಗೆ ಎಲಾನ್ ಮಸ್ಕ್​ ಮೇಲೆ ವಿಶೇಷ ಗೌರವ ಇದೆ.

Advertisement

ಸದ್ಯ ಕಂಗನಾ ರಣಾವತ್ ಅವರು ‘ಚಂದ್ರಮುಖಿ 2’ ಹಾಗೂ ‘ಎಮರ್ಜೆನ್ಸಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ಎಮರ್ಜೆನ್ಸಿ’ ಚಿತ್ರಕ್ಕೆ ಕಂಗನಾ ರಣಾವತ್ ಅವರು ನಿರ್ದೇಶನ ಮಾಡುತ್ತಿದ್ದಾರೆ ಕೂಡ. ನಿರ್ಮಾಣದಲ್ಲೂ ಅವರ ಪಾಲಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮಹಿಳೆಯರಿಗೆ ಕೌಶಲ್ಯ ತರಬೇತಿ ಕಾರ್ಯಾಗಾರ | ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಹೇಗೆ..?
October 18, 2024
6:58 AM
by: ದ ರೂರಲ್ ಮಿರರ್.ಕಾಂ
ಭೂಮಿ ಹುಣ್ಣಿಮೆ | ಅನ್ನದಾತರಿಂದ ಹೊಲ ಗದ್ದೆಗಳಲ್ಲಿ ವಿಶೇಷ ಪೂಜೆ |
October 18, 2024
6:50 AM
by: The Rural Mirror ಸುದ್ದಿಜಾಲ
ಕೊಪ್ಪಳದಲ್ಲಿ ಮಳೆಯಿಂದ ದ್ರಾಕ್ಷಿ ಬೆಳೆ ನಾಶ | ಸಂಕಷ್ಟಕ್ಕೆ ಸಿಲುಕಿದ ರೈತರು
October 18, 2024
6:39 AM
by: ದ ರೂರಲ್ ಮಿರರ್.ಕಾಂ
6 ಜಿ ತಂತ್ರಜ್ಞಾನದತ್ತ ಮುನ್ನುಗ್ಗುತ್ತಿರುವ ಭಾರತ | ಹಳ್ಳಿಗಳಿಗೂ ವೇಗ ಇಂಟರ್ನೆಟ್‌ ಏಕೆ ಅಗತ್ಯ..? | ಬಿಎಸ್‌ಎನ್‌ಎಲ್‌ ಒಳಗೆ ಕೆಲಸ ಹೇಗೆ ನಡೆಯುತ್ತಿದೆ…?
October 18, 2024
6:32 AM
by: ವಿಶೇಷ ಪ್ರತಿನಿಧಿ

You cannot copy content of this page - Copyright -The Rural Mirror