ಹಿಂದುತ್ವದ ಪರ ಬ್ಯಾಟಿಂಗ್ | ಕಂಗನಾಗೆ 40 ಕೋಟಿ ರೂಪಾಯಿ ನಷ್ಟ| ಬೇಸರ ಎಂದ ನಟಿ

May 18, 2023
10:00 AM

ಹಿಂದುತ್ವದ ಬಗ್ಗೆ ಮಾತನಾಡಿದ್ದಕ್ಕೆ ನಟಿ ಕಂಗನಾ ರಣಾವತ್ ಅವರಿಗೆ ಆದ ನಷ್ಟ ಬರೋಬ್ಬರಿ 30-40 ಕೋಟಿ ರೂಪಾಯಿ. ಹೀಗೇಕೆ ಎನ್ನುವ ವಿಚಾರದ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

Advertisement
Advertisement

ನಟಿ ಕಂಗನಾ ರಣಾವತ್ ಅವರು ಎಲ್ಲಾ ವಿಷಯಗಳ ಬಗ್ಗೆ ಮಾತನಾಡುತ್ತಾರೆ. ಸಮಾಜದ ಆಗು-ಹೋಗುಗಳ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸುತ್ತಾರೆ. ಇದರಿಂದ ಅವರು ಸಾಕಷ್ಟು ವಿವಾದ ಮಾಡಿಕೊಂಡಿದ್ದೂ ಇದೆ. ಆದರೆ, ಇದಕ್ಕೆಲ್ಲ ಅವರು ಹೆಚ್ಚು ತಲೆಕೆಡಿಸಿಕೊಂಡವರಲ್ಲ. ಈಗ ಕಂಗನಾ ರಾಣವತ್ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಟ್ವಿಟರ್ ಮುಖ್ಯಸ್ಥ ಎಲಾನ್ ಮಸ್ಕ್ ಅವರು ಮಾತನಾಡಿದ ವಿಡಿಯೋ ಒಂದನ್ನು ಅವರು ಹಂಚಿಕೊಂಡಿದ್ದಾರೆ. ‘ನನಗೆ ಇಷ್ಟ ಬಂದಿದ್ದನ್ನು ನಾನು ಹೇಳುತ್ತೇನೆ. ಅದರಿಂದ ಹಣ ಕಳೆದುಕೊಂಡರೂ ತೊಂದರೆ ಇಲ್ಲ’ ಎಂದು ಎಲಾನ್ ಮಸ್ಕ್​ ಅವರು ಈ ವಿಡಿಯೋದಲ್ಲಿ ಹೇಳಿದ್ದರು. ಈ ಮಾತು ಕಂಗನಾಗೆ ಇಷ್ಟವಾಗಿದೆ. ಇದು ಅವರ ಜೀವನದಲ್ಲೂ ನಡೆದಿದೆ ಎನ್ನಲಾಗುತ್ತಿದೆ.

‘ನಾನು ಹಿಂದುತ್ವದ ಬಗ್ಗೆ, ರಾಜಕಾರಣಿಗಳು ಹಾಗೂ ದೇಶ ವಿರೋಧಿಗಳ ಬಗ್ಗೆ ಮಾತನಾಡಿದ್ದಕ್ಕೆ ನನಗೆ 30-40 ಕೋಟಿ ರೂಪಾಯಿ ನಷ್ಟ ಆಗಿದೆ. 20-25 ಬ್ರ್ಯಾಂಡ್​ಗಳು ತಮ್ಮ ಒಪ್ಪಂದವನ್ನು ರಾತ್ರೋರಾತ್ರಿ ರದ್ದು ಮಾಡಿಕೊಂಡವು’ ಎಂದಿದ್ದಾರೆ ಕಂಗನಾ.

‘ನಾನು ಸ್ವತಂತ್ರಳು. ನನಗೆ ಅನಿಸಿದ್ದನ್ನು ಹೇಳಲು ಯಾವುದೂ ಅಡ್ಡಿಯಾಗದು. ನಾನು ಎಲಾನ್ ಮಸ್ಕ್​ ಅವರನ್ನು ಈ ವಿಚಾರದಲ್ಲಿ ಪ್ರಶಂಸಿಸುತ್ತೇನೆ. ಏಕೆಂದರೆ ಎಲ್ಲರೂ ದೌರ್ಬಲ್ಯಗಳನ್ನು ಮಾತ್ರ ಪ್ರದರ್ಶಿಸುತ್ತಾರೆ. ಆದರೆ, ಎಲಾನ್ ಮಸ್ಕ್ ಆ ರೀತಿ ಅಲ್ಲ. ಶ್ರೀಮಂತನಾದವನು ಹಣಕ್ಕಾಗಿ ಕಾಳಜಿ ವಹಿಸಬಾರದು’ ಎಂದಿದ್ದಾರೆ.

Advertisement

ಟ್ವಿಟರ್ ನಿಯಮ ಉಲ್ಲಂಘನೆ ಆರೋಪದ ಮೇಲೆ ಕಂಗನಾ ರಣಾವತ್ ಅವರ ಟ್ವಿಟರ್ ಖಾತೆಯ ಮೇಲೆ ನಿರ್ಬಂಧ ಹೇರಲಾಗಿತ್ತು. ಆದರೆ, ಎಲಾನ್ ಮಸ್ಕ್ ಅವರು ಟ್ವಿಟರ್​​ನ ಪಡೆದುಕೊಂಡಮೇಲೆ ಈ ಖಾತೆಯನ್ನು ಹಿಂದಿರುಗಿ ನೀಡಲಾಗಿದೆ. ಈ ಕಾರಣಕ್ಕೂ ಅವರಿಗೆ ಎಲಾನ್ ಮಸ್ಕ್​ ಮೇಲೆ ವಿಶೇಷ ಗೌರವ ಇದೆ.

ಸದ್ಯ ಕಂಗನಾ ರಣಾವತ್ ಅವರು ‘ಚಂದ್ರಮುಖಿ 2’ ಹಾಗೂ ‘ಎಮರ್ಜೆನ್ಸಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ಎಮರ್ಜೆನ್ಸಿ’ ಚಿತ್ರಕ್ಕೆ ಕಂಗನಾ ರಣಾವತ್ ಅವರು ನಿರ್ದೇಶನ ಮಾಡುತ್ತಿದ್ದಾರೆ ಕೂಡ. ನಿರ್ಮಾಣದಲ್ಲೂ ಅವರ ಪಾಲಿದೆ.

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ರಾಜ್ಯಾದ್ಯಂತ ಭಾರೀ ಮಳೆ  ಹಿನ್ನೆಲೆ | ಜಿಲ್ಲಾ ಸಚಿವರು,ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಆದೇಶ
May 29, 2025
7:40 AM
by: The Rural Mirror ಸುದ್ದಿಜಾಲ
ಭಾರತ್ ಮುನ್ಸೂಚನಾ ವ್ಯವಸ್ಥೆ | ಭಾರತದಿಂದ ವಿಶ್ವದ ಅತ್ಯಂತ ನಿಖರವಾದ ಹವಾಮಾನ ಮಾದರಿಗೆ ಚಾಲನೆ | ಸಣ್ಣ ಪ್ರಮಾಣದ ಹವಾಮಾನ ಸ್ಥಿತಿಗತಿಗಳ ನಿಖರವಾದ ಮಾಹಿತಿ ಲಭ್ಯ|
May 29, 2025
7:37 AM
by: ದ ರೂರಲ್ ಮಿರರ್.ಕಾಂ
ಇಂದು ದೇಶಾದ್ಯಂತ ವಿಕಸಿತ ಕೃಷಿ ಸಂಕಲ್ಪ ಅಭಿಯಾನ
May 29, 2025
7:22 AM
by: The Rural Mirror ಸುದ್ದಿಜಾಲ
14 ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ
May 29, 2025
7:12 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group