Advertisement
The Rural Mirror ಫಾಲೋಅಪ್

ಕಾಣಿಯೂರು ಕಾರು ಅಪಘಾತ | ಕಾರಿನಲ್ಲಿಯೂ ಇಲ್ಲ…. ಫೋನಿಗೂ ಸಿಗುತ್ತಿಲ್ಲ… | ಯುವಕರಿಗೆ ಶೋಧ ಆರಂಭ |

Share

ಕಾಣಿಯೂರು ಬಳಿ ಬೈತಡ್ಕದಲ್ಲಿ  ಸೇತುವೆಗೆ ಡಿಕ್ಕಿಯಾದ ಕಾರು ಹೊಳೆಗೆ ಬಿದ್ದಿತ್ತು. ಕಾರಿನಲ್ಲಿ ಇಬ್ಬರು ಯುವಕರು ಇದ್ದರು. ಭಾನುವಾರ ಬೆಳಗ್ಗೆ ಕಾರು ಬಿದ್ದಿರುವುದು  ಸಿಸಿಟಿವಿ ದೃಶ್ಯಾವಳಿಯ ಮೂಲಕ ಖಚಿತವಾಗಿತ್ತು. ಅದಾಗಿ ಶೋಧ ಕಾರ್ಯ ನಡೆಸಿ ಕಾರನ್ನು ಹರಸಾಹಸದಿಂದ ಹೊಳೆಯಿಂದ ಮೇಲೆ ತರಲಾಯಿತು. ಈಗ ಯುವಕರಿಗಾಗಿ ಶೋಧ ಕಾರ್ಯ ಆರಂಭವಾಗಿದೆ.  ಪೊಲೀಸರು ತನಿಖೆ ಆರಂಭಿಸಿದ್ದಾರೆ, ಹೊಳೆಯಲ್ಲೂ ಶೋಧ ಕಾರ್ಯ ಆರಂಭವಾಗಿದೆ.

ಶನಿವಾರ ತಡರಾತ್ರಿ ಕಾರು ಬೈತಡ್ಕ ಮಸೀದಿ ಬಳಿಯಲ್ಲಿ  ನೇರವಾಗಿ ಹೊಳೆಗೆ ಬೀಳುವ ದೃಶ್ಯದ ಮೂಲಕ ಕಾರು ಹೊಳೆಗೆ ಬಿದ್ದಿರುವುದು  ಖಚಿತವಾಗಿತ್ತು. ಹೀಗಾಗಿ ಶೋಧ ಕಾರ್ಯ ನಡೆದ ಬಳಿಕ ಘಟನಾ ಸ್ಥಳದಿಂದ ಸುಮಾರು 60 ಮೀಟರ್‌ ದೂರಲ್ಲಿ ಕಾರು (ಮಾರುತಿ 800) ಪತ್ತೆಯಾಗಿದೆ. ಹರಸಾಹಸದ ಮೂಲಕ ಕಾರನ್ನು  ಸವಣೂರಿನ ಚಾಲಕರು ಹಾಗೂ ಅಗ್ನಿಶಾಮಕ ದಳದ ಸಿಬಂದಿಗಳ ನೆರವಿನಿಂದ  ಮೇಲೆ ತೆಗೆಯಲಾಗಿದೆ. ಯುವಕರ ಪತ್ತೆ ಕಾರ್ಯ ಆರಂಭವಾಗಿದೆ.

ಆದರೆ ಯುವಕರು ಕಾರಿನಿಂದ ಜಿಗಿದರೇ ಅಥವಾ ಹೊಳೆಯಿಂದ ದಾಟಿ ಬಂದರೇ ಅಥವಾ ಹೊಳೆಯಲ್ಲಿ ಕೊಚ್ಚಿ ಹೋದರೇ ಈ ಪ್ರಶ್ನೆಗಳ ಆಧಾರದಲ್ಲಿ ಈಗ ತನಿಖೆ ಆರಂಭವಾಗಿದೆ. ಕಾರಿನಲ್ಲಿ ಇಬ್ಬರು ಯುವಕರು ಇದ್ದದ್ದು  ಖಚಿತವಾಗಿದೆ. ಪುತ್ತೂರು-ಕಾಣಿಯೂರು ರಸ್ತೆ ನಡುವೆ ಸವಣೂರು ಹಾಗೂ ಕಾಣಿಯೂರು ಪ್ರದೇಶದಲ್ಲಿ ಪೊಲೀಸರು ರಾತ್ರಿ ವೇಳೆ ವಾಹನ ತಪಾಸಣೆ ಮಾಡುತ್ತಾರೆ. ಈ ಸಮಯದಲ್ಲಿ ವಾಹನಗಳ ಸಂಖ್ಯೆ ಹಾಗೂ ಮೊಬೈಲ್‌ ಸಂಖ್ಯೆ ಪಡೆಯುತ್ತಾರೆ. ರಾತ್ರಿ ವೇಳೆ ಈ ಯುವಕರು ಸಾಗುತ್ತಿದ್ದ ಕಾರಿನ ಸಂಖ್ಯೆ ಹಾಗೂ ಕಾರಿನ ಚಾಲಕನ ಸಂಖ್ಯೆಯನ್ನೂ ಪಡೆದಿದ್ದಾರೆ ಎಂದು ತಿಳಿದುಬಂದಿದೆ.  ಕಾರಿನಲ್ಲಿದ್ದ ವಿಟ್ಲ ಕುಂಡಡ್ಕದ ಧನುಷ್ (26) ಮತ್ತು ಮಂಜೇಶ್ವರ ನಿವಾಸಿ ಧನುಷ್ (21) ಇಬ್ಬರೂ ಸೋದರಸಂಬಂಧಿ ಎನ್ನಲಾಗಿದೆ. ವಿಟ್ಲದಿಂದ ಹೊರಟಿದ್ದ ಕಾರು ಗುತ್ತಿಗಾರಿನ ಸಂಬಂಧಿಕರ ಮನೆಗೆ ಬರುತ್ತಿತ್ತು. ತಡರಾತ್ರಿ ನಿದ್ರೆಯ ಮಂಪರಿನಲ್ಲಿದ್ದರೇ ಯುವಕರು ಎಂಬುದು  ಸಂದೇಹಕ್ಕೆ ಕಾರಣವಾಗಿದೆ. ಸದ್ಯ ಇಬ್ಬರಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.

ಅಪಘಾತವು ಸುಮಾರು 12.30 ರ ಆಸುಪಾಸಿನಲ್ಲಿ ನಡೆದಿದೆ. ಅದಾದ ಬಳಿಕ ಈ ಯುವಕರ ಮೊಬೈಲ್‌ ಬಳಕೆಯಾಗಿದೆ ಎಂಬುದು ಸದ್ಯದ ಮಾಹಿತಿ. ತಡರಾತ್ರಿ ಮನೆಗೂ ಕರೆ ಮಾಡಿದ್ದಾರೆ ಎಂಬುದು  ಮನೆಯವರ ಮಾಹಿತಿ. ಹಾಗಾದರೆ ಈ ಇಬ್ಬರು ಯುವಕರ ಮೊಬೈಲ್‌ ಏನಾಗಿದೆ?. ಹೊಳೆ ದಾಟಿದರೆ ? ಈಜಿ ಬಂದರೇ ? ಎಂಬುದು ತನಿಖೆಯ ದಾರಿಗಳು. ಹೀಗಾಗಿ ಮೊಬೈಲ್‌ ಟವರ್‌ ಲೊಕೇಶನ್‌ ಹಾಗೂ ಇತರ ಮಾಹಿತಿಗಳ ಮೂಲಕ ತನಿಖೆ ಆರಂಭಿಸಿದ್ದಾರೆ ಪೊಲೀಸರು. ಭಾರೀ ಮಳೆಯ ಕಾರಣದಿಂದ ರಸ್ತೆ ಬದಿ ಕಾಣದೆ ಸೇತುವೆಗೆ ಡಿಕ್ಕಿಯಾಯಿತೇ ? ಯುವಕರು ನಿದ್ರೆಯ ಮಂಪರಿನಲ್ಲಿದ್ದರೇ ?  ಈ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಯುತ್ತಿದೆ. ಸದ್ಯ ಯುವಕರಿಗೆ ಶೋಧ ಕಾರ್ಯ ಆರಂಭವಾಗಿದೆ.

 

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ತೆಂಗಿನ ಎಣ್ಣೆಯಿಂದ ವಿಮಾನದ ಇಂಧನ ? ಜೆಟ್‌ ಎಂಜಿನ್‌ ಪರೀಕ್ಷೆಯಲ್ಲಿ ಕುತೂಹಲ ಮೂಡಿಸಿದ ಫಲಿತಾಂಶ

ಮಾರುಕಟ್ಟೆಗೆ ಯೋಗ್ಯವಲ್ಲದ ತೆಂಗಿನಕಾಯಿಯಿಂದ ಪಡೆದ ತೆಂಗಿನ ಎಣ್ಣೆಯನ್ನು ಬಳಸಿ ಸುಸ್ಥಿರ ವಿಮಾನ ಇಂಧನ…

5 hours ago

ಕೃಷಿ ಇನ್ನು ಕೇವಲ ಬೆಳೆ ಬೆಳೆಯುವುದಲ್ಲ – ಯುವಕರಿಗೆ ಸ್ಟಾರ್ಟ್‌ಅಪ್ ಕ್ಷೇತ್ರ

ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…

8 hours ago

ಬರಪೀಡಿತ ಪ್ರದೇಶಗಳ ರೈತರಿಗೆ ಗುಡ್‌ನ್ಯೂಸ್ ; ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ

ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು…

17 hours ago

ರಾಜ್ಯದ 102 ತಾಲೂಕುಗಳಲ್ಲಿ ಬರದ ಛಾಯೆ – ತಿಂಗಳಾಂತ್ಯಕ್ಕೆ ಕೇಂದ್ರಕ್ಕೆ ವರದಿ ಸಲ್ಲಿಕೆ

ಕರ್ನಾಟಕದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ…

17 hours ago

ಮಂಗಳೂರಿನ ಅಶ್ಮಿತ್ ಎ.ಜೆ. ಅವರಿಗೆ ‘ಸರಿಗಮಪ 2026’ರ ಕಿರೀಟ

ಮಂಗಳೂರಿನ ಅಶ್ಮಿತ್ ಎ.ಜೆ. ಅವರು ಝೀ ಕನ್ನಡದ ‘ಸರಿಗಮಪ 2026’ರ ವಿಜೇತರಾಗಿ ₹20…

18 hours ago

ಮಲೆನಾಡು ತಪ್ಪಲಲ್ಲಿ ಧಾರಾಕಾರ ಮಳೆ – ಹಲವು ಕಡೆ ಕೆಲವೇ ಗಂಟೆಯಲ್ಲಿ 100 ಮಿಮೀ ದಾಟಿದ ಮಳೆ

ದಕ್ಷಿಣ ಕನ್ನಡದ ಮಲೆನಾಡು ತಪ್ಪಲಿನ ಸುಬ್ರಹ್ಮಣ್ಯ, ಸುಳ್ಯ, ಕಡಬ ಸೇರಿದಂತೆ ಹಲವು ಪ್ರದೇಶಗಳಲ್ಲಿ…

1 day ago