Advertisement
MIRROR FOCUS

ಅನಾರೋಗ್ಯದಿಂದ ಬಳಲುತ್ತಿರುವ ಕುಟುಂಬಕ್ಕೆ ಮನೆಯಲ್ಲಿಯೇ ಆಧಾರ್ ಅಪ್ಡೇಟ್‌ | ಮಾದರಿಯಾದ ಅಂಚೆ ಇಲಾಖೆಯ ಸೇವೆ |

Share

ಕಾರ್ಕಳದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಕುಟುಂಬವೊಂದರ ಮನೆ ಬಾಗಿಲಿಗೆ ತೆರಳಿ ಆಧಾರ್ ನವೀಕರಣ ಸೇವೆಯನ್ನು ಒದಗಿಸಿದ ಕಾರ್ಕಳ ಮತ್ತು ಪುತ್ತೂರು ಅಂಚೆ ವಿಭಾಗದ ಅಂಚೆ ಅಧಿಕಾರಿಗಳು ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕಾರ್ಕಳದ ಅಂಚೆ ಸಿಬ್ಬಂದಿಯ ಮಾದರಿ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement
Advertisement
Advertisement
Advertisement

ಅಂಚೆ ಜನ ಸಂಪರ್ಕ ಅಭಿಯಾನದಡಿ ಪುತ್ತೂರು ಅಂಚೆ ವಿಭಾಗದಿಂದ ಅನಾರೋಗ್ಯ ಪೀಡಿತ ಬಾಲಕಿಯ ಮನೆಗೆ ತೆರಳಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಮಾಡಲಾಗಿದೆ. ಒಟ್ಟು 317 ಅಶಕ್ತರ ಮನೆ ಬಾಗಿಲಿಗೆ ಹೋಗಿ ಈ  ಸೇವೆ ನೀಡಲಾಗಿದೆ. ಮರ್ಣೆ ಗ್ರಾಮದ ದಿನೇಶ್ ಹಾಗೂ ಉಷಾ ದಂಪತಿಯ 10 ವರ್ಷದ ಮಗಳು ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದು, ಇವರ ಮನೆಗೆ ತೆರಳಿದ ತಂಡ ಆಧಾರ್ ಬಯೋಮೆಟ್ರಿಕ್ ನವೀಕರಣ ಹಾಗೂ ವಿಳಾಸ ತಿದ್ದುಪಡಿ ಮಾಡಿದೆ.ಈ ಜನೋಪಯೋಗಿ ಸೇವೆಗೆ ಸ್ಥಳೀಯರು ಹಾಗೂ ಜನಪ್ರತಿನಿಧಿಗಳು ಮೆಚ್ಚುಗೆ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಫೋಸ್ಟ್ ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.‌ ಅಂಚೆ ಸಿಬ್ಬಂದಿಯ ಮಾದರಿ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದು, ಅಂಚೆ ಇಲಾಖೆಯ ಅತ್ಯುತ್ತಮ ಸೇವಾ ಯೋಜನೆಗಳು ಮತ್ತಷ್ಟು ಜನರಿಗೆ ತಲುಪವಂತಾಗಲಿ ಎಂದು ಶುಭ ಹಾರೈಸಿದ್ದಾರೆ.

Advertisement

ಕಾರ್ಕಳದ  ದೊಂಬರಪಲ್ಕೆಯ 10 ವರ್ಷದ ಬಾಲಕಿ ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿದ್ದಳು. ಆಕೆಯ ತಾಯಿಯೂ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಕುಟುಂಬ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಅವರು ತಮ್ಮ ಆಧಾರ್ ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸಬೇಕಾಗಿತ್ತು ಹಾಗೂ ಅವರ ವಿಳಾಸವನ್ನು ಸರಿಪಡಿಸಬೇಕಾಗಿತ್ತು ಆದರೆ ಅವರ ಆರೋಗ್ಯ ಸ್ಥಿತಿಯ ಕಾರಣದಿಂದಾಗಿ ಅಂಚೆ ಕಚೇರಿಗೆ ಭೇಟಿ ನೀಡಲು ಸಾಧ್ಯವಾಗಲಿಲ್ಲ.

ಹೀಗಾಗಿ ಕುಟುಂಬವು ಕಾರ್ಕಳ ಪ್ರಧಾನ ಅಂಚೆ ಕಚೇರಿಯನ್ನು ಸಂಪರ್ಕಿಸಿ, ಆಧಾರ್ ನವೀಕರಣಕ್ಕಾಗಿ ಮನೆಯ ಸಹಾಯವನ್ನು ಕೋರಿತ್ತು. ಬಳಿಕ ಪುತ್ತೂರು ಅಂಚೆ ವಿಭಾಗದ ಮಾರ್ಕೆಟಿಂಗ್ ತಂಡವು ಯಂತ್ರಗಳೊಂದಿಗೆ ಕುಟುಂಬದ ಮನೆಗೆ ಭೇಟಿ ನೀಡಿ ಅಗತ್ಯ ಬಯೋಮೆಟ್ರಿಕ್ ನವೀಕರಣಗಳು ಮತ್ತು ವಿಳಾಸ ತಿದ್ದುಪಡಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು.

Advertisement

ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕಾರ್ಯಕ್ರಮದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅಂಚೆ ಅಧಿಕಾರಿಗಳ ಸೇವೆಯನ್ನು ಶ್ಲಾಘಿಸಿದ್ದಾರೆ.

Advertisement

“Hats off to the postal officials of Karkala and Puttur divisions for going above and beyond in their duties, delivering Aadhaar updates to a sick family’s doorstep. Their dedication and compassion is truly commendable. #PostalService #AadhaarUpdate #Karkala #Puttur”

Advertisement

The postal officials of Karkala and Puttur postal divisions are receiving widespread praise for their exemplary service in providing Aadhaar updates directly to the home of a family in Karkala who are suffering from illness.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ರಸ್ತೆ ನಿರ್ಮಾಣದಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ

ಸಂಚಾರ ವಲಯದಲ್ಲಿ ಮೂಲಸೌಕರ್ಯ ತಂತ್ರಜ್ಞಾನ ಕುರಿತ ಟ್ರಾಫಿಕ್  ಇನ್ಫ್ರಾ ಟೆಕ್  ಪ್ರದರ್ಶನವನ್ನು ದೆಹಲಿಯಲ್ಲಿ…

4 hours ago

ಶೇ.61 ರಷ್ಟು ಹಿಂಗಾರು ಮಳೆ ಹೆಚ್ಚು |  7 ಜಿಲ್ಲೆಗಳಲ್ಲಿ ಬೆಳೆ , ಆಸ್ತಿಪಾಸ್ತಿ ಹಾನಿ | ಸಮೀಕ್ಷಗೆ ಸೂಚನೆ |

ರಾಜ್ಯದಲ್ಲಿ ಸುಮಾರು  1 ಲಕ್ಷ  ಹೆಕ್ಟೇರ್ ಗೂ ಅಧಿಕ ಪ್ರದೇಶದ ಬೆಳೆ ಹಾನಿಯಾಗಿದೆ.…

5 hours ago

ಉಡುಪಿಯಲ್ಲಿ ಅಖಿಲ ಭಾರತೀಯ ಪ್ರಾಚ್ಯವಿದ್ಯಾ ಸಮ್ಮೇಳನ ಉದ್ಘಾಟಿಸಿದ ಯೋಗ ಗುರು ರಾಮದೇವ್ |

ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಆಯೋಜಿಸಿದ್ದ ಮೂರು ದಿನಗಳ ಅಖಿಲ ಭಾರತೀಯ ಪ್ರಾಚ್ಯವಿದ್ಯಾ ಸಮ್ಮೇಳನವನ್ನು …

6 hours ago

ಸ್ಥಳೀಯವಾಗಿ ಮೀನು ಸೇವನೆ ಪ್ರೋತ್ಸಾಹಿಸಲು  “ಮತ್ಸ್ಯವಾಹಿನಿ” ಯೋಜನೆ

ಸ್ಥಳೀಯವಾಗಿ ಮೀನು ಸೇವನೆ ಪ್ರೋತ್ಸಾಹಿಸಲು ಹಾಗೂ ತಾಜಾ ಮೀನು ಮತ್ತು ಮೀನು ಉತ್ಪನ್ನಗಳ…

6 hours ago

ನಿರಂತರ ಮಳೆಗೆ ಬೆಳೆ ನಾಶ – ಚಿಕ್ಕಮಗಳೂರಿನಲ್ಲಿ ತರಕಾರಿ ಬೆಳೆಗಳು ಹಾನಿ

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ವಾರದಿಂದ ಬಿಡದೇ ಸುರಿದ ಮಳೆಗೆ ಕೃಷಿ ಬೆಳೆಗಳು ಸಂಪೂರ್ಣ ನಾಶವಾಗಿದ್ದು,…

6 hours ago

ಹವಾಮಾನ ವರದಿ | 25-10-2024 | ಗುಡುಗು ಸಹಿತ ತುಂತುರು ಮಳೆ | ಹಿಂಗಾರು ಮಳೆ ಮತ್ತೆ ಚುರುಕು ಸಾಧ್ಯತೆ |

ಅಕ್ಟೊಬರ್ 30ರಿಂದ ಅಧಿಕ ತಾಪಮಾನ ಹಾಗೂ ಅಲ್ಪ ಪ್ರಮಾಣದಲ್ಲಿ ಹಿಂಗಾರು ಚುರುಕಾಗುವ ಕಾರಣದಿಂದ…

7 hours ago