ರಾಜ್ಯ ಬಜೆಟ್‌ನಲ್ಲೂ ಅಡಿಕೆ ಬೆಳೆಗಾರರಿಗೆ ಬೆಂಬಲವಿಲ್ಲ..! |

February 16, 2024
8:25 PM
ಅಡಿಕೆ ಬೆಳೆಗಾರರಿಗೆ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ನಿರಾಸೆಯಾಗಿದೆ.

ರಾಜ್ಯದ ಅಡಿಕೆ ಬೆಳೆಯಲ್ಲಿ ಕಂಡು ಬರುವ ಮಾರಕ ರೋಗಗಳನ್ನು ನಿಯಂತ್ರಿಸಲು ಪೂರಕವಾದ ಸಂಶೋಧನೆ ಹಾಗೂ ಸಸ್ಯ ಸಂರಕ್ಷಣಾ ಚಟುವಟಿಕೆಗಳನ್ನು ಕೇಂದ್ರ ಸರಕಾರದ ಸಹಯೋಗದೊಂದಿಗೆ ಕೈಗೊಳ್ಳಲಾಗುವುದು…!, ಪುನಃ ಸ್ಮಾರ್ಟ್ ಸೆಂಟೆನ್ಸ್ ಹಾಕಿ ಚೆಂಡನ್ನು ಕೇಂದ್ರದ ಅಂಗಳಕ್ಕೆ ಒದೆಯಲಾಗಿದೆ!. ಮಲೆನಾಡಿನ ಕೃಷಿಕ ಅರವಿಂದ್‌ ಸಿಗದಾಳ್, ಮೇಲುಕೊಪ್ಪ ಅವರು ಬಜೆಟ್‌ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅನಾರೋಗ್ಯದ ತುಂಬಾ ಕ್ರಿಟಿಕಲ್ ಪರಿಸ್ಥಿತಿಯಲ್ಲಿ “ಆಸ್ಪತ್ರೆಯಲ್ಲಿ ಏನೂ ಮಾಡಕಾಗಲ್ಲ, ಡಿಸ್‌ಚಾರ್ಜ್ ಮಾಡಿ ಮನೆಗೆ ಕರ್ಕೊಂಡು ಹೋಗಿ. ಇನ್ನೆಷ್ಟು ದಿನ ಇರ್ತಾರೆ ಅಂತ ಹೇಳೋಕಾಗಲ್ಲ. ದೇವರ ಮೇಲೆ ಬಾರ ಹಾಕಿ ಪ್ರಾರ್ಥನೆ ಮಾಡಿ.” ಅಂತಾರಲ್ಲ ಹಾಗೆ!!!.

ಸ್ಟೇಟ್ ಡಾಕ್ಟರ್, ಸೆಂಟ್ರಲ್ ಸರ್ಜನ್ ಇಬ್ಬರೂ ಅಡಿಕೆ ಎಲೆ ಚುಕ್ಕಿ, ಹಳದಿ ರೋಗದ ಬಗ್ಗೆ ಪರೋಕ್ಷವಾಗಿ ಅಂತಿಮ ತೀರ್ಮಾನ ಹೇಳಿಯಾಗಿದೆ. ಮಲೆನಾಡು-ಕರಾವಳಿಗಳಲ್ಲಿ ರೋಗಿಷ್ಟ ಅಡಿಕೆಯ ಮಾನ-ಪ್ರಾಣ ಎರಡೂ ಕೊನೇ ಉಸಿರನ್ನು ಎಣಿಸುತ್ತಿವೆ. ಬಅಡಿಕೆ ತೋಟಗಳ ಒಂದೆರಡು ಫೋಟೋ ತೆಗೆದು ಇಟ್ಕೊಂಡಿರಿ..!. ಸಂಬಂಧಿಕರಿಗೆಲ್ಲ ವಿಷಯ ತಿಳಿಸಿರಿ!.

ಹೀಗೆ ಆಗಿದೆ ಮಲೆನಾಡು ಹಾಗೂ ಕರಾವಳಿಯ ಅಡಿಕೆ ಬೆಳೆಗಾರ ಸ್ಥಿತಿ. ಅಡಿಕೆ ಬೆಳೆಗಾರರಿಗೆ ರಾಜ್ಯದಿಂದಲೂ, ಕೇಂದ್ರದಿಂದಲೂ ಸೂಕ್ತವಾದ ನ್ಯಾಯ ದೊರೆಯುತ್ತಿಲ್ಲ.

ಬರಹ :
ಅರವಿಂದ ಸಿಗದಾಳ್, ಮೇಲುಕೊಪ್ಪ

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಂಗಳೂರು ಅಡಿಕೆ ಮಾರುಕಟ್ಟೆ | ಸ್ಥಿರತೆಯಿಂದ ಏರಿಕೆಯತ್ತ ಮುಖ ಮಾಡಿದ ಧಾರಣೆ
April 2, 2026
6:56 AM
by: ಅರುಣ್‌ ಕುಮಾರ್ ಕಾಂಚೋಡು
ಜನಗಣತಿ 2026 – ಏಪ್ರಿಲ್ 1ರಿಂದ ಸ್ವಯಂ-ಎಣಿಕೆ ಆರಂಭ – ಸಹಕರಿಸಲು ಜಿಲ್ಲಾಧಿಕಾರಿ ಕರೆ
April 2, 2026
6:37 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 01-04-2026 | ಕರಾವಳಿ-ಮಲೆನಾಡಿನಲ್ಲಿ ಗುಡುಗು ಮಳೆ ಮುಂದುವರಿಕೆ – ಏ.10 ರಿಂದ ಮತ್ತೆ ಮಳೆ ಚುರುಕು ಸಾಧ್ಯತೆ!
April 1, 2026
2:30 PM
by: ಸಾಯಿಶೇಖರ್ ಕರಿಕಳ
ಮಳೆಯ ನಡುವೆಯೂ ಉರಿಯುವ ಬಿಸಿಲು..! ಏಪ್ರಿಲ್–ಜೂನ್‌ನಲ್ಲಿ ಹವಾಮಾನ ಸವಾಲು..!
April 1, 2026
6:29 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror