Advertisement
Opinion

ಮಳೆ ಹೆಚ್ಚಿಸಲು ಮೋಡ ಬಿತ್ತನೆಗೆ ಚಾಲನೆ – ಮೋಡ ಬಿತ್ತನೆಯಿಂದ ಮಳೆ ಬರುತ್ತದೆಯೇ?

Share

ಕರ್ನಾಟಕದಲ್ಲಿ ಮುಂಗಾರು ಮಳೆ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಮಳೆಯ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಸೆಪ್ಟೆಂಬರ್ 4, ರಂದು ರಾಜ್ಯದಲ್ಲಿ ಅಧಿಕೃತವಾಗಿ ಮೋಡ ಬಿತ್ತನೆ (Cloud Seeding) ಯೋಜನೆಗೆ ಚಾಲನೆ ನೀಡಲಾಗಿದೆ. ಸುಮಾರು ₹28.52 ಕೋಟಿ ವೆಚ್ಚದ ಈ ಯೋಜನೆ 60 ದಿನಗಳ ಕಾಲ ನಡೆಯಲಿದ್ದು, ಸೂಕ್ತ ಮೋಡಗಳು ಲಭ್ಯವಿರುವ ಸಂದರ್ಭಗಳಲ್ಲಿ ವಿಮಾನಗಳ ಮೂಲಕ ಮೋಡಗಳೊಳಗೆ ನಿರ್ದಿಷ್ಟ ರಾಸಾಯನಿಕ ಕಣಗಳನ್ನು ಸಿಂಪಡಿಸುವ ಮೂಲಕ ಮಳೆ ಪ್ರಮಾಣ ಹೆಚ್ಚಿಸಲು ಪ್ರಯತ್ನಿಸಲಾಗುತ್ತದೆ.

ಮೋಡ ಬಿತ್ತನೆ ಎಂದರೇನು? : ವಾತಾವರಣದಲ್ಲಿರುವ ಮೋಡಗಳಲ್ಲಿನ ತೇವಾಂಶವು ಮಳೆಯಾಗಿ ಸುರಿಯುವಂತೆ ಮಾಡಲು, ಕೃತಕವಾಗಿ ರಾಸಾಯನಿಕಗಳನ್ನು ಸಿಂಪಡಿಸಿ ಮಳೆಯಾಗುವ ಪ್ರಕ್ರಿಯೆಯನ್ನು ಚುರುಕುಗೊಳಿಸುವ ವೈಜ್ಞಾನಿಕ ವಿಧಾನವೇ ಮೋಡ ಬಿತ್ತನೆ.
ಮೋಡ ಬಿತ್ತನೆ ಎಂದರೆ ಕೃತಕವಾಗಿ ಮಳೆ ಬರಿಸಲು ಮೋಡಗಳ ಮೇಲೆ ನಿರ್ದಿಷ್ಟ ರಾಸಾಯನಿಕಗಳನ್ನು ವಿಮಾನದ ಮೂಲಕ ಸಿಂಪಡಿಸುವ ವೈಜ್ಞಾನಿಕ ವಿಧಾನವಾಗಿದೆ.

ಮೋಡ ಬಿತ್ತನೆ ಪ್ರಕ್ರಿಯೆ ಹೇಗೆ? : ಮೊದಲು ಮೋಡಗಳನ್ನು ರಾಡಾರ್ ಮತ್ತು ಉಪಗ್ರಹಗಳ ಸಹಾಯದಿಂದ ತೇವಾಂಶವಿರುವ ಸೂಕ್ತ ಮೋಡಗಳನ್ನು ಮೊದಲು ಗುರುತಿಸಲಾಗುತ್ತದೆ. ಬಳಿಕ ಸಿಲ್ವರ್ ಅಯೋಡೈಡ್, ಪೊಟ್ಯಾಸಿಯಮ್ ಅಯೋಡೈಡ್, ಒಣ ಮಂಜುಗಡ್ಡೆ (ಡ್ರೈ ಐಸ್) ಅಥವಾ ಸಾಮಾನ್ಯ ಉಪ್ಪನ್ನು (ಸೋಡಿಯಂ ಕ್ಲೋರೈಡ್) ಬಳಸಲಾಗುತ್ತದೆ. ವಿಶೇಷ ವಿಮಾನಗಳು ಅಥವಾ ನೆಲದ ಮೇಲಿನ ಜನರೇಟರ್‌ಗಳ ಮೂಲಕ ಈ ರಾಸಾಯನಿಕಗಳನ್ನು ಮೋಡಗಳ ಒಳಗೆ ಬಿಡಲಾಗುತ್ತದೆ. ರಾಸಾಯನಿಕ ಕಣಗಳು ಮೋಡದೊಳಗಿನ ಸಣ್ಣ ನೀರಿನ ಹನಿಗಳನ್ನು ಆಕರ್ಷಿಸಿ ಒಟ್ಟುಗೂಡಿಸುತ್ತವೆ. ಹನಿಗಳು ಭಾರವಾಗಿ ಮಂಜುಗಡ್ಡೆ ಅಥವಾ ಮಳೆಯ ಹನಿಗಳಾಗಿ ಪರಿವರ್ತನೆಗೊಂಡು ನೆಲಕ್ಕೆ ಬೀಳುತ್ತವೆ.

ಪ್ರಮುಖ ಮಿತಿಗಳು : ಈ ತಂತ್ರಜ್ಞಾನದಿಂದ ಮಳೆ ಬರಬೇಕಾದರೆ ಆಕಾಶದಲ್ಲಿ ಕಡ್ಡಾಯವಾಗಿ ತೇವಾಂಶವಿರುವ ಮೋಡಗಳು ಇರಬೇಕು. ಸಂಪೂರ್ಣ ಒಣ ಹವಾಮಾನ ಅಥವಾ ಮೋಡಗಳೇ ಇಲ್ಲದಾಗ ಇದನ್ನು ಮಾಡಲು ಸಾಧ್ಯವಿಲ್ಲ.ಇದು ಸಾಕಷ್ಟು ದುಬಾರಿ ಪ್ರಕ್ರಿಯೆಯಾಗಿದ್ದು, ಶೇಕಡಾ 100 ರಷ್ಟು ಯಶಸ್ಸು ಸಿಗುತ್ತದೆ ಎಂದು ಖಚಿತವಾಗಿ ಹೇಳಲು ಬರುವುದಿಲ್ಲ.

ಮೋಡ ಬಿತ್ತನೆ (Cloud Seeding) ಒಂದು ಹಂತದವರೆಗೆ ಪರಿಣಾಮಕಾರಿಯಾಗಿದೆ, ಆದರೆ ಇದು ಎಲ್ಲಾ ಪರಿಸ್ಥಿತಿಗಳಲ್ಲೂ ನೂರಕ್ಕೆ ನೂರು ಯಶಸ್ಸು ನೀಡುವುದಿಲ್ಲ. ಸಾಮಾನ್ಯವಾಗಿ, ಮೋಡ ಬಿತ್ತನೆಯಿಂದ ಮಳೆಯ ಪ್ರಮಾಣವನ್ನು ಶೇಕಡಾ 10 ರಿಂದ 30 ರಷ್ಟು ಹೆಚ್ಚಿಸಬಹುದು ಎಂದು ವಿವಿಧ ಸಂಶೋಧನೆಗಳು ತೋರಿಸಿವೆ.

ತಜ್ಞರ ಪ್ರಕಾರ, ಮೋಡ ಬಿತ್ತನೆಯು ಬರಗಾಲಕ್ಕೆ ಸಂಪೂರ್ಣ ಪರ್ಯಾಯ ಪರಿಹಾರವಲ್ಲ. ಮೋಡ ಬಿತ್ತನೆಯು ಬರಗಾಲಕ್ಕೆ ಸಂಪೂರ್ಣ ಪರ್ಯಾಯ ಪರಿಹಾರವಲ್ಲ. ಆದರೆ ತುರ್ತು ಪರಿಸ್ಥಿತಿಯಲ್ಲಿ ಮಳೆಯ ಕೊರತೆಯನ್ನು ಸ್ವಲ್ಪ ಮಟ್ಟಿಗೆ ನೀಗಿಸಲು ಇರುವ ಒಂದು ಪೂರಕ ತಂತ್ರಜ್ಞಾನ ಮಾತ್ರವಾಗಿದೆ

ದಕ್ಷಿಣ ಒಳನಾಡಿನಲ್ಲಿ ಸೆಪ್ಟೆಂಬರ್ ತಿಂಗಳು ಪೂರ್ವದಿಂದ ತೇವಾಂಶದ ಮೋಡ ಬಂದರೇ 25-30% ಮಳೆ ಬರಬಹುದು. ಆದರೇ ಬಂದ ಮಳೆಯನ್ನು ನೈಸರ್ಗಿಕ ಮಳೆ ಅಥವಾ ಮೋಡ ಬಿತ್ತನೆಯ ಮಳೆ ಎಂದು ವಿಭಾಗ ಮಾಡಿ ನಿಖರವಾಗಿ ಹೇಳಲು ಸಾಧ್ಯವಿಲ್ಲ. ರಾಜ್ಯದಲ್ಲಿ ಉತ್ತಮ ಹಿಂಗಾರು ಮಳೆ ಬೀಳಬಹುದು ಯೋಜನೆ ಯಶಸ್ವಿಯಾಗಲಿ ಅಂತ ಆಶಾವಾದಿಗಳಾಗೋಣ

ದಕ್ಷಿಣ ಒಳನಾಡಿನಲ್ಲಿ ಏನಾಗಬಹುದು?

ಹವಾಮಾನ ವಿಶ್ಲೇಷಕ ರಘುರಾಮ ಕಂಪದಕೋಡಿ ಅವರ ಅಭಿಪ್ರಾಯದಂತೆ, ಸೆಪ್ಟೆಂಬರ್‌ನಲ್ಲಿ ದಕ್ಷಿಣ ಒಳನಾಡಿನ ಭಾಗಗಳಿಗೆ ಪೂರ್ವ ದಿಕ್ಕಿನಿಂದ ತೇವಾಂಶ ಹೊಂದಿರುವ ಮೋಡಗಳು ಬಂದರೆ ಸುಮಾರು 25–30% ಮಳೆಯಾಗುವ ಸಾಧ್ಯತೆ ಇರಬಹುದು. ಆದರೆ ಸುರಿಯುವ ಮಳೆಯಲ್ಲಿ ಎಷ್ಟು ಭಾಗ ನೈಸರ್ಗಿಕ ಮಳೆ ಮತ್ತು ಎಷ್ಟು ಭಾಗ ಮೋಡ ಬಿತ್ತನೆಯ ಪರಿಣಾಮ ಎಂಬುದನ್ನು ನಿಖರವಾಗಿ ವಿಭಾಗಿಸುವುದು ಸಾಧ್ಯವಿಲ್ಲ.

ಹೀಗಾಗಿ ಮೋಡ ಬಿತ್ತನೆಯನ್ನು ಬರಗಾಲಕ್ಕೆ ಸಂಪೂರ್ಣ ಪರಿಹಾರವೆಂದು ನೋಡುವ ಬದಲು, ಲಭ್ಯವಿರುವ ತೇವಾಂಶದ ಮೋಡಗಳಿಂದ ಹೆಚ್ಚಿನ ಮಳೆ ಪಡೆಯಲು ಪ್ರಯತ್ನಿಸುವ ಪೂರಕ ತಂತ್ರಜ್ಞಾನ ಎಂದು ನೋಡುವುದು ಸೂಕ್ತ.

ಕರ್ನಾಟಕಕ್ಕೆ ಮುಂದಿನ ದಿನಗಳಲ್ಲಿ ಉತ್ತಮ ಹಿಂಗಾರು ಮಳೆ ದೊರೆಯುವ ನಿರೀಕ್ಷೆಯೂ ಇದೆ. ಮೋಡ ಬಿತ್ತನೆ ಯೋಜನೆಯೂ ಸೂಕ್ತ ಮೋಡಗಳ ಲಭ್ಯತೆಯೊಂದಿಗೆ ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಮಳೆ ಕೊರತೆಯನ್ನು ಸ್ವಲ್ಪ ಮಟ್ಟಿಗಾದರೂ ತಗ್ಗಿಸಲಿ ಎಂಬುದು ಆಶಯ.

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

Karnataka has officially launched a ₹28.52-crore cloud-seeding programme on September 4, to enhance rainfall amid monsoon deficiency. The 60-day operation will use aircraft to seed suitable moisture-bearing clouds, but experts caution that cloud seeding cannot create rain without existing clouds and is only a supplementary measure, not a complete solution to drought.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಈಶಾನ್ಯದಿಂದ ಜಾರ್ಖಂಡ್‌ವರೆಗೆ ರಬ್ಬರ್‌ ಕೃಷಿಯ ವಿಸ್ತರಣೆ | ಹೊಸ ಪ್ರದೇಶಗಳಲ್ಲಿ ರಬ್ಬರ್‌ ಕೃಷಿ ವಿಸ್ತರಣೆ – ಅಪಾಯವೇ..? ಅವಕಾಶವೇ..?

ನಾಗಾಲ್ಯಾಂಡ್‌ನಲ್ಲಿ ರಬ್ಬರ್‌ ಕೃಷಿ ಸುಮಾರು 29,794 ಹೆಕ್ಟೇರ್‌ಗೆ ವಿಸ್ತರಿಸಿರುವ ಬೆನ್ನಲ್ಲೇ ಜಾರ್ಖಂಡ್‌ನಲ್ಲಿ ಸೂಕ್ತ…

9 hours ago

ದಾವಣಗೆರೆಯಲ್ಲಿ ಮಳೆ ಕೊರತೆ – ಮೆಕ್ಕೆಜೋಳ, ರಾಗಿ ಬೆಳೆ ಶೇ.50 ಹಾನಿ ಭೀತಿ

ದಾವಣಗೆರೆ ಜಿಲ್ಲೆಯಲ್ಲಿ 15 ದಿನಗಳಿಂದ ಮಳೆ ಕೊರತೆಯಾಗಿದ್ದು, ಮುಂದಿನ ಕೆಲ ದಿನಗಳಲ್ಲೂ ಮಳೆಯಾಗದಿದ್ದರೆ…

12 hours ago

ಹವಾಮಾನ ವರದಿ | 05-09-2026 | ಕರಾವಳಿಯಲ್ಲಿ ತೇವಾಂಶ ಇಳಿಕೆ, ಬಳಿಕ ಒಣಹವೆ?

ಸೆ.8ರಿಂದ ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮತ್ತೆ ಮಳೆ ಚಟುವಟಿಕೆ ಹೆಚ್ಚಾಗುವ ಸಾಧ್ಯತೆಯಿದೆ.…

18 hours ago

ಬೇರೊಬ್ಬರ ಬದುಕಿನ ಅಳತೆಯಲ್ಲಿ ನಮ್ಮ ಬದುಕನ್ನು ಅಳೆಯುತ್ತಿದ್ದೇವೆಯೇ?

ಬೇರೊಬ್ಬರ ಬದುಕಿನೊಂದಿಗೆ ನಿರಂತರ ಹೋಲಿಕೆ ನಮ್ಮ ನೆಮ್ಮದಿ ಮತ್ತು ಆತ್ಮವಿಶ್ವಾಸವನ್ನು ಕಸಿದುಕೊಳ್ಳಬಹುದು. ಮತ್ತೊಬ್ಬರ…

24 hours ago

ಗೂಗಲ್‌ ಮತ್ತು AIಯ ಕಾಲದಲ್ಲೂ ಗುರು ಏಕೆ ಬೇಕು..?

ಶಿಕ್ಷಕರ ದಿನಾಚರಣೆ ಶಿಕ್ಷಕರನ್ನು ಸನ್ಮಾನಿಸುವ ದಿನ ಮಾತ್ರವಲ್ಲ, ಶಿಕ್ಷಕತ್ವ ಮತ್ತು ಶಿಕ್ಷಣದ ನಿಜವಾದ…

1 day ago

3,000 ವರ್ಷಗಳ ಹಿಂದೆಯೇ ರೈತರು ಹವಾಮಾನ ಬದಲಾವಣೆಗೆ ಹೊಂದಿಕೊಂಡಿದ್ದರು..! ಬಿಹಾರದ ಪುರಾತನ ಬೀಜಗಳು ಹೇಳಿದ ಕೃಷಿ ಪಾಠ

ಬಿಹಾರದ ಯುರೆನ್‌ನಲ್ಲಿ ಪತ್ತೆಯಾದ 5 ಲಕ್ಷಕ್ಕೂ ಹೆಚ್ಚು ಸುಟ್ಟ ಬೀಜಗಳ ಅಧ್ಯಯನವು ಭಾರತದ…

1 day ago