ರಾಜ್ಯಕ್ಕೆ 191.67 ಕೋಟಿ ಬೇಳೆ ಮಿಷನ್ ಅನುದಾನ | 35 ಗಿರಣಿಗಳಿಗೆ ಕೇಂದ್ರದಿಂದ ಭರ್ಜರಿ ಬೆಂಬಲ

February 10, 2026
5:58 AM

ದ್ವಿದಳ ಧಾನ್ಯ (ಬೇಳೆ) ಮಿಷನ್ ಅಡಿ ಕರ್ನಾಟಕಕ್ಕೆ ₹191 ಕೋಟಿ 67 ಲಕ್ಷ ಅನುದಾನ ಮಂಜೂರಾದ ನೆರವು ಪತ್ರವನ್ನು ಕೇಂದ್ರ ಕೃಷಿ ಸಚಿವರಾದ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು  ರಾಜ್ಯದ ಕೃಷಿ ಸಚಿವರಾದ ಎನ್‌ ಚಲುವರಾಯಸ್ವಾಮಿ ಅವರಿಗೆ ಹಸ್ತಾಂತರಿಸಿದರು.

ಅವರು ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ – ಉತ್ಪಾದನೋತ್ತರ ಕೃಷಿ ಮತ್ತು ರೈತರ ಸಬಲೀಕರಣ ಕಾರ್ಯಕ್ರಮದಲ್ಲಿ ಮಾತನಾಡಿ, ತೊಗರಿಬೇಳೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕದಲ್ಲಿ 35 ಬೇಳೆ ಸಂಸ್ಕರಣಾ ಗಿರಣಿಗಳನ್ನು ಸ್ಥಾಪಿಸಬೇಕು ಎಂದು ಸೂಚಿಸಿದರು. ಪ್ರತಿ ಗಿರಣಿಗೆ ₹25 ಲಕ್ಷ ಸಹಾಯಧನ, ತಾಂತ್ರಿಕ ಸಹಯೋಗದ ಭರವಸೆ, ಎಕರೆವಾರು ಉತ್ಪಾದಕತೆ ಹೆಚ್ಚಿಸಲು ಕ್ರಮದ ಬಗ್ಗೆ ಮಾತನಾಡಿದರು.  ರಾಜ್ಯದಲ್ಲಿ 25 ಬೀಜ ಗ್ರಾಮಗಳ ಸ್ಥಾಪನೆಗೆ ಸೂಚನೆ, ಮಾದರಿ ಪ್ರದರ್ಶನಕ್ಕೆ ರೈತರಿಗೆ ₹10,000 ಪ್ರೋತ್ಸಾಹಧನ, ಉತ್ತಮ ಇಳುವರಿಗಾಗಿ ಉತ್ತಮ ಬೀಜ ಬಳಕೆ ಮೇಲೆ ಒತ್ತು ನೀಡುವ ಯೋಜನೆಯನ್ನು ಪ್ರಸ್ತಾಪಿಸಿದರು.  ಪ್ರಧಾನಮಂತ್ರಿಯವರ ನಿರ್ದೇಶನದ ಮೇರೆಗೆ ತೆಂಗು ಅಭಿವೃದ್ಧಿ ಕಾರ್ಯಕ್ರಮ ಆರಂಭಿಸಲಾಗುವುದು. ರೋಗಪೀಡಿತ ಹಳೆಯ ಮರಗಳನ್ನು ಬದಲಿಸಲು ಉತ್ತೇಜನ ನೀಡಲಾಗುವುದು ಎಂದು ಸಚಿವರು ಹೇಳಿದರು.

ರೈತರ ನೆರವಿನಿಂದ ಭಾರತ ವಿಶ್ವದಲ್ಲೇ ಅಗ್ರಮಾನ್ಯ ಭತ್ತ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿದ್ದು, ಚೀನಾವನ್ನು ಹಿಂದಿಕ್ಕಿದೆ ಎಂದು ಸಚಿವರು ಹೇಳಿದರು. ನೀರಿನ ಮಿತಬಳಕೆ ಮತ್ತು ಕಡಿಮೆ ಶ್ರಮದಲ್ಲಿ ಹೆಚ್ಚಿನ ಇಳುವರಿ ನೀಡುವ ಅಕ್ಕಿತಳಿಗಳ ಬಳಕೆಗಾಗಿ ವಿಜ್ಞಾನಿಗಳ ಸಂಶೋಧನೆ ಮುಂದುವರಿದಿದೆ ಎಂದು ತಿಳಿಸಿದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಕಾಫಿ, ಕೊಕ್ಕೊ, ಫಲಪುಷ್ಪ, ತರಕಾರಿ ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ಕೇಂದ್ರ ಸರ್ಕಾರ ಬೆಂಬಲ ನೀಡುತ್ತಿದೆ. ಕರ್ನಾಟಕದ ಸಿರಿಧಾನ್ಯ ಬ್ರ್ಯಾಂಡ್‌ಗಳನ್ನು ದೇಶ-ವಿದೇಶಗಳಲ್ಲಿ ಪ್ರಚುರಗೊಳಿಸಲು ಸಹ ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಅವರು ತಿಳಿಸಿದರು.ಇದಲ್ಲದೇ ರಾಜ್ಯಕ್ಕೆ ನೀಡಬೇಕಿರುವ ₹154 ಕೋಟಿ ಅನುದಾನವನ್ನೂ ಬಿಡುಗಡೆ ಮಾಡುವುದಾಗಿ ಕೇಂದ್ರ ಸಚಿವರು ಘೋಷಿಸಿದರು.

ಇದನ್ನೂ ಓದಿ…

ಗಡಿಯಲ್ಲೇ ಗಡಿ ಮೀರಿ ಭ್ರಷ್ಟಾಚಾರ ! ಅಡಿಕೆ ಕಳ್ಳಸಾಗಾಟಕ್ಕೆ ಲಂಚ…!?

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್

the rural mirror news

ಇದನ್ನೂ ಓದಿ

2030ರೊಳಗೆ 5 ಟ್ರಿಲಿಯನ್ ಆರ್ಥಿಕತೆ ಮೀರಿದ ರಾಷ್ಟ್ರವಾಗಲಿದೆ ಭಾರತ
March 3, 2026
9:53 AM
by: ಮಿರರ್‌ ಡೆಸ್ಕ್
ರೈತರ ಹಿತಕ್ಕಾಗಿ ಎರಡು ಮಹತ್ವದ ಸುಧಾರಣೆಗಳು | ಹೊಸ ಬೀಜ ಕಾಯ್ದೆ, ಪರಿಷ್ಕೃತ ಕೀಟನಾಶಕ ಕಾಯ್ದೆ ಜಾರಿಗೆ ಕೇಂದ್ರ ಸಿದ್ಧತೆ
March 3, 2026
9:37 AM
by: ಮಿರರ್‌ ಡೆಸ್ಕ್
ಇನ್ನೆರಡು ದಿನಗಳಲ್ಲಿ ತಂಬಾಕು ಬೆಳೆಗಾರರ ಸಮಸ್ಯೆಗೆ ಪರಿಹಾರ : ಕುಮಾರಸ್ವಾಮಿ ಭರವಸೆ
March 3, 2026
9:31 AM
by: ದ ರೂರಲ್ ಮಿರರ್.ಕಾಂ
ಅಡಿಕೆ ತೋಟದ ಹಳದಿ ಎಲೆ ರೋಗ ಚೀನಾದಲ್ಲೂ ಮದ್ದಿಲ್ಲ…! | ಮಣ್ಣಿನೊಳಗಿನ ಡಿಎನ್‌ಎ ನೀಡುತ್ತಿದೆ ಎಚ್ಚರಿಕೆ
March 2, 2026
9:49 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror