Advertisement
ಸುದ್ದಿಗಳು

ಕಾಪುವಿನಲ್ಲಿ ರಾಜ್ಯ ಸ್ಕೂಲ್ ಚೆಸ್ ಚಾಂಪಿಯನ್‌ಶಿಪ್ – 24 ಪ್ರತಿಭೆಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ

Share

ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಕಾಪು ವತಿಯಿಂದ, ಅಫಿಲಿಯೆನ್ಸ್ ಟೆಕ್ನಾಲಜಿ ಮಂಗಳೂರು ಹಾಗೂ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ ಕಾಪು ಆಶ್ರಯದಲ್ಲಿ ಆಯೋಜಿಸಿದ್ದ 9ನೇ ಕರ್ನಾಟಕ ರಾಜ್ಯ ಸ್ಕೂಲ್ ಚೆಸ್ ಚಾಂಪಿಯನ್‌ಶಿಪ್-2026ರ ಸಮಾರೋಪ ಸಮಾರಂಭವು ಕಾಪುವಿನ ಶ್ರೀ ಹಳೆಮಾರಿಯಮ್ಮ ಸಭಾಭವನದಲ್ಲಿ ನಡೆಯಿತು.

ರಾಜ್ಯದ ವಿವಿಧ ಜಿಲ್ಲೆಗಳಿಂದ 390 ಪ್ರತಿಭಾವಂತ ಚದುರಂಗ ಆಟಗಾರರು ಈ ರಾಜ್ಯಮಟ್ಟದ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದರು. ಒಟ್ಟು 12 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದಿದ್ದು, ಪ್ರತಿ ವಿಭಾಗದಿಂದ ಇಬ್ಬರಂತೆ ಒಟ್ಟು 24 ಆಟಗಾರರು ರಾಷ್ಟ್ರ ಮಟ್ಟದ ಸ್ಕೂಲ್ ಚೆಸ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಡಾ. ಸೀತಾರಾಮ ಭಟ್, ಅಧ್ಯಕ್ಷರು, ದಂಡತೀರ್ಥ ಪ್ರತಿಷ್ಠಾನ, ಕಾಪು ವಹಿಸಿದ್ದರು. ಬಹುಮಾನ ವಿತರಣೆಯನ್ನು ಅವಿನಾಶ್ ಶೆಟ್ಟಿ, ಸ್ಥಾಪಕರು, ಅಫಿಲಿಯೆನ್ಸ್ ಟೆಕ್ನಾಲಜಿ, ಮಂಗಳೂರು ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಶ್ರೀ ಹಳೇಮಾರಿಯಮ್ಮ ದೇವಸ್ಥಾನದ ಮೊಕ್ತೇಸರ ರಾಮ್ ನಾಯಕ್, ಯುವವಾಹಿನಿ ಘಟಕ ಕಾಪು ಕಾರ್ಯದರ್ಶಿ ಸುನಿಲ್ ಪೂಜಾರಿ, ಉಡುಪಿ ಜಿಲ್ಲಾ ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಮಧುಕರ್, ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಉಪಾಧ್ಯಕ್ಷ ರಮೇಶ್ ಕೋಟೆ, ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ ಕಾರ್ಯದರ್ಶಿ ಸಿದ್ದಕೃಷ್ಣ, ಬಾಬು ಜೆ. ಪೂಜಾರಿ (ಉಪ್ಪುಂದ), ನಾಗೇಶ್ ಕಾರಂತ್ (ಪಾಂಗಾಳ), ಶ್ರೀ ನಾರಾಯಣ ಗುರು ಸ್ಪೋರ್ಟ್ಸ್ & ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಉಮಾನಾಥ ಕಾಪು ಹಾಗೂ ನಿರ್ದೇಶಕ ಲೋಕೇಶ್ ಬೆಳ್ಚಡ ಉಪಸ್ಥಿತರಿದ್ದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

ನಿರ್ದೇಶಕಿ ಸೌಂದರ್ಯ ಯು.ಕೆ. ಸ್ವಾಗತಿಸಿದರು. ಉಮಾನಾಥ ಕಾಪು ವಂದಿಸಿದರು. ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್‌ನ ಸ್ಥಾಪಕ ಸಾಕ್ಷಾತ್ ಯು.ಕೆ. ಕಾರ್ಯಕ್ರಮ ನಿರೂಪಿಸಿದರು.

ವಿಜೇತರು ಮತ್ತು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಪ್ರಮುಖ ಆಟಗಾರರು

ವಿಭಾಗ ಪ್ರಥಮ ಸ್ಥಾನ ದ್ವಿತೀಯ ಸ್ಥಾನ
U-07 ಅಥ್ರೇಯ ರಾಮ್ (ದಕ್ಷಿಣ ಕನ್ನಡ) ಸಮ್ರಾಟ್ ಎಸ್ (ಬೆಂಗಳೂರು ನಗರ)
F-07 ಹನ್ವಿಕಾ ವಿ. ರಾವ್ (ಮೈಸೂರು) ಅವ್ನಿ ಎಸ್. ದಾಥನ್ (ದಕ್ಷಿಣ ಕನ್ನಡ)
U-09 ಗಹನ್ ಸಿ.ಡಿ. (ಮೈಸೂರು) ಹರ್ಷಿತ್ ಪಾಟೀಲ್ (ಕೊಪ್ಪಳ)
F-09 ದರ್ಶ್ವಿ ರೈ (ಬೆಂಗಳೂರು) ವೈ.ಎನ್. ನಿಧಿಶ್ರೀ (ತುಮಕೂರು)
U-11 ಸ್ರಾಗ್ವಿಧ ಎಸ್. (ಬೆಂಗಳೂರು) ಕೋಶಿವರ್ಧ್ ಸೆಂಥಿಲ್ ಕುಮಾರ್ (ಬೆಂಗಳೂರು ನಗರ)
F-11 ಸಾನ್ವಿತಾ ಎ. ಶೆಟ್ಟಿ (ಶಿವಮೊಗ್ಗ) ಆರೂಷಿ ರೈ (ದಕ್ಷಿಣ ಕನ್ನಡ)
U-13 ಇಂದ್ರಜಿತ್ ಮಜುಂದಾರ್ (ಬೆಂಗಳೂರು) ಈಶ್ವರ್ ವೀರಪ್ಪನ್ ಅಯ್ಯಪ್ಪನ್ (ಮೈಸೂರು)
F-13 ಇಂದುಶೀತಲಾ (ಬೆಂಗಳೂರು ನಗರ) ರಿಜೆಲ್ ಅಲಿಡಾ ಡಿಸೋಜಾ (ದಕ್ಷಿಣ ಕನ್ನಡ)
U-15 ಆರುಷ್ ಭಟ್ (ದಕ್ಷಿಣ ಕನ್ನಡ) ರಿತೇಶ್ ಕೆ. (ಉಡುಪಿ)
F-15 ಆದ್ಯ ಎ. ಶೆಟ್ಟಿ (ದಕ್ಷಿಣ ಕನ್ನಡ) ಕೃಪಾ ಎಸ್. ಉಕ್ಕಲಿ (ಬೆಂಗಳೂರು ನಗರ)
U-17 ಕೃಷ್ಣ (ಬೆಂಗಳೂರು) ಆದರ್ಶ್ ಡಿ. (ಬೆಂಗಳೂರು)
F-17 ಅರುಷಿ ಸೆವೆರಿನ್ ಹೆಲೆನ್ ಡಿ ಸಿಲ್ವಾ (ದಕ್ಷಿಣ ಕನ್ನಡ) ಜಾನವಿ ಎಸ್. (ಮೈಸೂರು)

ರೂರಲ್ ಮಿರರ್ | ಒಳನೋಟ

ಕರ್ನಾಟಕದಲ್ಲಿ ಶಾಲಾ ಮಟ್ಟದಲ್ಲೇ ಚದುರಂಗ ಕ್ರೀಡೆಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿರುವುದು ಈ ಚಾಂಪಿಯನ್‌ಶಿಪ್‌ನಿಂದ ಮತ್ತೊಮ್ಮೆ ಸಾಬೀತಾಗಿದೆ. 390 ಆಟಗಾರರ ಭಾಗವಹಿಸುವಿಕೆ ಹಾಗೂ 12 ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳು ರಾಜ್ಯದಲ್ಲಿ ಚೆಸ್ ಕ್ರೀಡೆಗೆ ಹೆಚ್ಚುತ್ತಿರುವ ಆಸಕ್ತಿಯನ್ನು ಪ್ರತಿಬಿಂಬಿಸುತ್ತವೆ.

ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಆಟಗಾರರು ಹಲವು ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವುದು ಜಿಲ್ಲೆಯ ಚದುರಂಗ ತರಬೇತಿ ವ್ಯವಸ್ಥೆಯ ಗುಣಮಟ್ಟವನ್ನು ತೋರಿಸುತ್ತದೆ. ಗ್ರಾಮೀಣ ಭಾಗಗಳಲ್ಲೂ ಚೆಸ್ ತರಬೇತಿ ಕೇಂದ್ರಗಳು ಬೆಳೆಯುತ್ತಿರುವುದು ರಾಜ್ಯಕ್ಕೆ ಭವಿಷ್ಯದ ಅಂತರರಾಷ್ಟ್ರೀಯ ಆಟಗಾರರನ್ನು ರೂಪಿಸಬಹುದಾಗಿದೆ. ಇದಕ್ಕಾಗಿ ಹೆಚ್ಚಿನ ಪ್ರೋತ್ಸಾಹ ಅಗತ್ಯವಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

The 9th Karnataka State Schools Chess Championship concluded at Kaapu with participation from 390 players representing various districts. Competitions were held in 12 categories, and 24 players (two from each category) qualified for the National School Chess Championship. Dakshina Kannada players delivered an impressive performance by winning titles in several categories.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ರೋಗ ಸಂಕಷ್ಟಕ್ಕೆ ಸಂಸತ್ತಿನಲ್ಲಿ ಧ್ವನಿ : ನಿಯಮ 377ರಡಿ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ

ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಎಲೆ ಚುಕ್ಕೆ, ಹಳದಿ ಎಲೆ ಮತ್ತು ಕೊಳೆ ರೋಗಗಳಿಗೆ…

14 hours ago

ದೇಶಾದ್ಯಂತ ಮುಂಗಾರು ಅಬ್ಬರ : ಹಲವು ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ, ಹಿಮಾಲಯ ತಪ್ಪಲಿನಲ್ಲಿ ರೆಡ್ ಅಲರ್ಟ್

ದೇಶಾದ್ಯಂತ ಮುಂಗಾರು ಮತ್ತಷ್ಟು ತೀವ್ರಗೊಂಡಿದ್ದು, ಉತ್ತರ ಭಾರತದ ಹಲವು ಭಾಗಗಳಿಗೆ ರೆಡ್ ಅಲರ್ಟ್…

1 day ago

ರಾಜ್ಯದಲ್ಲಿ ಬರದ ಛಾಯೆ | 178 ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆ, ಜಲಾಶಯಗಳ ನೀರಿನ ಮಟ್ಟ ಶೇ.40ಕ್ಕೆ ಕುಸಿತ

ರಾಜ್ಯದಲ್ಲಿ ಮುಂಗಾರು ಮಳೆ 39% ಕೊರತೆಯಾಗಿದ್ದು, 26 ಜಿಲ್ಲೆಗಳ 178 ತಾಲ್ಲೂಕುಗಳಲ್ಲಿ ಬರದ…

2 days ago

ಪುತ್ತೂರಿಗೆ ಪುತ್ತಿಲ? ಪುತ್ತೂರಿನ ರಾಜಕೀಯದ ಹೊಸ ವ್ಯಾಕರಣ

ಪುತ್ತೂರಿನ ರಾಜಕೀಯದಲ್ಲಿ ವ್ಯಕ್ತಿತ್ವದ ಪ್ರಭಾವ ಹೆಚ್ಚುತ್ತಿರುವ ಕುರಿತು ಈ ವಿಶ್ಲೇಷಣೆ ಬೆಳಕು ಚೆಲ್ಲುತ್ತದೆ.…

2 days ago

ತೆಂಗಿನ ನಾಡಿನಲ್ಲಿ ಅಡಿಕೆ ಕ್ರಾಂತಿ….! ತುಮಕೂರಿನಲ್ಲಿ ಅಡಿಕೆ ಸಸಿಗಳಿಗೆ ಭಾರೀ ಬೇಡಿಕೆ

ಕೊಪ್ಪರ ಬೆಲೆಯ ಏರಿಳಿತದಿಂದ ತುಮಕೂರಿನಲ್ಲಿ ರೈತರು ಅಡಿಕೆ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಇದರ…

2 days ago

ಹವಾಮಾನ ವರದಿ | 19-07-2026 | ಜುಲೈ 20 ರಿಂದ ಮಳೆ ಇಳಿಮುಖ…! ಕರಾವಳಿ–ಮಲೆನಾಡಿನಲ್ಲಿ ಮಾತ್ರ ಅಲ್ಲಲ್ಲಿ ಮಳೆ ಮುಂದುವರಿಕೆ

ಜುಲೈ 20ರಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಪ್ರಮಾಣ ಇಳಿಮುಖವಾಗುವ ಲಕ್ಷಣಗಳಿವೆ. ಉತ್ತರ…

2 days ago