ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಕಾಪು ವತಿಯಿಂದ, ಅಫಿಲಿಯೆನ್ಸ್ ಟೆಕ್ನಾಲಜಿ ಮಂಗಳೂರು ಹಾಗೂ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ ಕಾಪು ಆಶ್ರಯದಲ್ಲಿ ಆಯೋಜಿಸಿದ್ದ 9ನೇ ಕರ್ನಾಟಕ ರಾಜ್ಯ ಸ್ಕೂಲ್ ಚೆಸ್ ಚಾಂಪಿಯನ್ಶಿಪ್-2026ರ ಸಮಾರೋಪ ಸಮಾರಂಭವು ಕಾಪುವಿನ ಶ್ರೀ ಹಳೆಮಾರಿಯಮ್ಮ ಸಭಾಭವನದಲ್ಲಿ ನಡೆಯಿತು.
ರಾಜ್ಯದ ವಿವಿಧ ಜಿಲ್ಲೆಗಳಿಂದ 390 ಪ್ರತಿಭಾವಂತ ಚದುರಂಗ ಆಟಗಾರರು ಈ ರಾಜ್ಯಮಟ್ಟದ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದ್ದರು. ಒಟ್ಟು 12 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದಿದ್ದು, ಪ್ರತಿ ವಿಭಾಗದಿಂದ ಇಬ್ಬರಂತೆ ಒಟ್ಟು 24 ಆಟಗಾರರು ರಾಷ್ಟ್ರ ಮಟ್ಟದ ಸ್ಕೂಲ್ ಚೆಸ್ ಚಾಂಪಿಯನ್ಶಿಪ್ಗೆ ಆಯ್ಕೆಯಾಗಿದ್ದಾರೆ.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಡಾ. ಸೀತಾರಾಮ ಭಟ್, ಅಧ್ಯಕ್ಷರು, ದಂಡತೀರ್ಥ ಪ್ರತಿಷ್ಠಾನ, ಕಾಪು ವಹಿಸಿದ್ದರು. ಬಹುಮಾನ ವಿತರಣೆಯನ್ನು ಅವಿನಾಶ್ ಶೆಟ್ಟಿ, ಸ್ಥಾಪಕರು, ಅಫಿಲಿಯೆನ್ಸ್ ಟೆಕ್ನಾಲಜಿ, ಮಂಗಳೂರು ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಶ್ರೀ ಹಳೇಮಾರಿಯಮ್ಮ ದೇವಸ್ಥಾನದ ಮೊಕ್ತೇಸರ ರಾಮ್ ನಾಯಕ್, ಯುವವಾಹಿನಿ ಘಟಕ ಕಾಪು ಕಾರ್ಯದರ್ಶಿ ಸುನಿಲ್ ಪೂಜಾರಿ, ಉಡುಪಿ ಜಿಲ್ಲಾ ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಮಧುಕರ್, ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಉಪಾಧ್ಯಕ್ಷ ರಮೇಶ್ ಕೋಟೆ, ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ ಕಾರ್ಯದರ್ಶಿ ಸಿದ್ದಕೃಷ್ಣ, ಬಾಬು ಜೆ. ಪೂಜಾರಿ (ಉಪ್ಪುಂದ), ನಾಗೇಶ್ ಕಾರಂತ್ (ಪಾಂಗಾಳ), ಶ್ರೀ ನಾರಾಯಣ ಗುರು ಸ್ಪೋರ್ಟ್ಸ್ & ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಉಮಾನಾಥ ಕಾಪು ಹಾಗೂ ನಿರ್ದೇಶಕ ಲೋಕೇಶ್ ಬೆಳ್ಚಡ ಉಪಸ್ಥಿತರಿದ್ದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
ನಿರ್ದೇಶಕಿ ಸೌಂದರ್ಯ ಯು.ಕೆ. ಸ್ವಾಗತಿಸಿದರು. ಉಮಾನಾಥ ಕಾಪು ವಂದಿಸಿದರು. ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ನ ಸ್ಥಾಪಕ ಸಾಕ್ಷಾತ್ ಯು.ಕೆ. ಕಾರ್ಯಕ್ರಮ ನಿರೂಪಿಸಿದರು.
ವಿಜೇತರು ಮತ್ತು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಪ್ರಮುಖ ಆಟಗಾರರು
| ವಿಭಾಗ | ಪ್ರಥಮ ಸ್ಥಾನ | ದ್ವಿತೀಯ ಸ್ಥಾನ |
|---|---|---|
| U-07 | ಅಥ್ರೇಯ ರಾಮ್ (ದಕ್ಷಿಣ ಕನ್ನಡ) | ಸಮ್ರಾಟ್ ಎಸ್ (ಬೆಂಗಳೂರು ನಗರ) |
| F-07 | ಹನ್ವಿಕಾ ವಿ. ರಾವ್ (ಮೈಸೂರು) | ಅವ್ನಿ ಎಸ್. ದಾಥನ್ (ದಕ್ಷಿಣ ಕನ್ನಡ) |
| U-09 | ಗಹನ್ ಸಿ.ಡಿ. (ಮೈಸೂರು) | ಹರ್ಷಿತ್ ಪಾಟೀಲ್ (ಕೊಪ್ಪಳ) |
| F-09 | ದರ್ಶ್ವಿ ರೈ (ಬೆಂಗಳೂರು) | ವೈ.ಎನ್. ನಿಧಿಶ್ರೀ (ತುಮಕೂರು) |
| U-11 | ಸ್ರಾಗ್ವಿಧ ಎಸ್. (ಬೆಂಗಳೂರು) | ಕೋಶಿವರ್ಧ್ ಸೆಂಥಿಲ್ ಕುಮಾರ್ (ಬೆಂಗಳೂರು ನಗರ) |
| F-11 | ಸಾನ್ವಿತಾ ಎ. ಶೆಟ್ಟಿ (ಶಿವಮೊಗ್ಗ) | ಆರೂಷಿ ರೈ (ದಕ್ಷಿಣ ಕನ್ನಡ) |
| U-13 | ಇಂದ್ರಜಿತ್ ಮಜುಂದಾರ್ (ಬೆಂಗಳೂರು) | ಈಶ್ವರ್ ವೀರಪ್ಪನ್ ಅಯ್ಯಪ್ಪನ್ (ಮೈಸೂರು) |
| F-13 | ಇಂದುಶೀತಲಾ (ಬೆಂಗಳೂರು ನಗರ) | ರಿಜೆಲ್ ಅಲಿಡಾ ಡಿಸೋಜಾ (ದಕ್ಷಿಣ ಕನ್ನಡ) |
| U-15 | ಆರುಷ್ ಭಟ್ (ದಕ್ಷಿಣ ಕನ್ನಡ) | ರಿತೇಶ್ ಕೆ. (ಉಡುಪಿ) |
| F-15 | ಆದ್ಯ ಎ. ಶೆಟ್ಟಿ (ದಕ್ಷಿಣ ಕನ್ನಡ) | ಕೃಪಾ ಎಸ್. ಉಕ್ಕಲಿ (ಬೆಂಗಳೂರು ನಗರ) |
| U-17 | ಕೃಷ್ಣ (ಬೆಂಗಳೂರು) | ಆದರ್ಶ್ ಡಿ. (ಬೆಂಗಳೂರು) |
| F-17 | ಅರುಷಿ ಸೆವೆರಿನ್ ಹೆಲೆನ್ ಡಿ ಸಿಲ್ವಾ (ದಕ್ಷಿಣ ಕನ್ನಡ) | ಜಾನವಿ ಎಸ್. (ಮೈಸೂರು) |
ಕರ್ನಾಟಕದಲ್ಲಿ ಶಾಲಾ ಮಟ್ಟದಲ್ಲೇ ಚದುರಂಗ ಕ್ರೀಡೆಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿರುವುದು ಈ ಚಾಂಪಿಯನ್ಶಿಪ್ನಿಂದ ಮತ್ತೊಮ್ಮೆ ಸಾಬೀತಾಗಿದೆ. 390 ಆಟಗಾರರ ಭಾಗವಹಿಸುವಿಕೆ ಹಾಗೂ 12 ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳು ರಾಜ್ಯದಲ್ಲಿ ಚೆಸ್ ಕ್ರೀಡೆಗೆ ಹೆಚ್ಚುತ್ತಿರುವ ಆಸಕ್ತಿಯನ್ನು ಪ್ರತಿಬಿಂಬಿಸುತ್ತವೆ.
ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಆಟಗಾರರು ಹಲವು ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವುದು ಜಿಲ್ಲೆಯ ಚದುರಂಗ ತರಬೇತಿ ವ್ಯವಸ್ಥೆಯ ಗುಣಮಟ್ಟವನ್ನು ತೋರಿಸುತ್ತದೆ. ಗ್ರಾಮೀಣ ಭಾಗಗಳಲ್ಲೂ ಚೆಸ್ ತರಬೇತಿ ಕೇಂದ್ರಗಳು ಬೆಳೆಯುತ್ತಿರುವುದು ರಾಜ್ಯಕ್ಕೆ ಭವಿಷ್ಯದ ಅಂತರರಾಷ್ಟ್ರೀಯ ಆಟಗಾರರನ್ನು ರೂಪಿಸಬಹುದಾಗಿದೆ. ಇದಕ್ಕಾಗಿ ಹೆಚ್ಚಿನ ಪ್ರೋತ್ಸಾಹ ಅಗತ್ಯವಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಕಾಪುವಿನಲ್ಲಿ ರಾಜ್ಯ ಸ್ಕೂಲ್ ಚೆಸ್ ಚಾಂಪಿಯನ್ಶಿಪ್ – 24 ಪ್ರತಿಭೆಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ https://t.co/pdfwfR6QFV #Chess #Karnataka #TheRuralMirror #SchoolChess
Advertisement— theruralmirror (@ruralmirror) June 30, 2026
The 9th Karnataka State Schools Chess Championship concluded at Kaapu with participation from 390 players representing various districts. Competitions were held in 12 categories, and 24 players (two from each category) qualified for the National School Chess Championship. Dakshina Kannada players delivered an impressive performance by winning titles in several categories.
ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ ಕಾಸರಗೋಡು ಜಿಲ್ಲೆಯಲ್ಲಿ ಜುಲೈ 1ರಂದು ಎಲ್ಲಾ ಶಿಕ್ಷಣ…
ಯಾದಗಿರಿ ಜಿಲ್ಲೆಯಲ್ಲಿ ಮಳೆ ಕೊರತೆಯ ಸಾಧ್ಯತೆಯಿರುವುದರಿಂದ ರೈತರು ಬೆಳೆ ಆಯ್ಕೆಯಲ್ಲಿ ಎಚ್ಚರಿಕೆ ವಹಿಸುವಂತೆ…
ಮಲೆನಾಡು ಮತ್ತು ಶಿರಾಡಿ ಘಾಟಿಯ ಮಳೆಗಾಲದ ಸೌಂದರ್ಯ ಪ್ರಕೃತಿಪ್ರಿಯರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಆದರೆ ಈ…
ಒಂದು ತಿಂಗಳ ತಡದ ಬಳಿಕ ಮಲೆನಾಡು ಮತ್ತು ಕರಾವಳಿಯಲ್ಲಿ ಮುಂಗಾರು ಚುರುಕುಗೊಂಡಿದ್ದು, ರೈತರಲ್ಲಿ…
ಹಲಸಿನ ಹಾಲು, ದಾಳಿಂಬೆ ಸಿಪ್ಪೆಯ ಸಾರ ಮತ್ತು ಸಿಮ್ವಾಸ್ಟಾಟಿನ್ ಬಳಸಿ ವಿಜ್ಞಾನಿಗಳು ವಸಡು…
ಅಡಿಕೆ ನಿಷೇಧಿಸುವ ಬದಲು ಕಲಬೆರಕೆ ಅಡಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ…