ಮಳೆಗಾಲ ಬಂದರೆ ಇಲ್ಲಿಯ ಜನರಿಗೆ ಭಯ..! | ಅಧಿಕಾರಿ-ಜನಪ್ರತಿನಿಧಿಗಳಿಗೆ ನಿರಾತಂಕ..! | ಇದು ಗ್ರಾಮೀಣ ಪ್ರತಿಬಿಂಬ

September 28, 2020
2:28 PM
ಗ್ರಾಮೀಣ ಭಾಗಗಳಿಗೆ ಸ್ವಾತಂತ್ರ್ಯ ಎಂದು ? ಹೀಗೊಂದು ಪ್ರಶ್ನೆ ಈಗ ಕೇಳಲೇಬೇಕಾಗಿದೆ. ಏಕೆಂದರೆ ಇಂದಿಗೂ ಹಲವು ಗ್ರಾಮೀಣ ಪ್ರದೇಶಗಳು ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ. ಮಳೆಗಾಲ ಬಂದರೆ ಭಯಗೊಳ್ಳುವ ಸ್ಥಿತಿ ಇದೆ. ಇದಕ್ಕೆ ಉದಾಹರಣೆ ಸುಳ್ಯ ತಾಲೂಕಿನ ಕೊಲ್ಲಮೊಗ್ರ ಕಟ್ಟ ನಿವಾಸಿಗಳು. ಏನಿದು ಇವರ ಸಂಕಷ್ಟ ಇಲ್ಲಿದೆ.
ಸುಳ್ಯ ತಾಲೂಕಿನ ಕೊಲ್ಲಮೊಗ್ರದಿಂದ ಕಟ್ಟ – ಗೋವಿಂದನಗರಕ್ಕೆ ತೆರಳುವ ರಸ್ತೆ ಇದೆ. ಇದು ಮೂಲ ರಸ್ತೆಯೂ ಆಗಿದೆ. ಈ ರಸ್ತೆಯಲ್ಲಿ  ಕಿರು ಸೇತುವೆಯೊಂದು ಸಿಗುತ್ತದೆ. ಈ ಸೇತುವೆ ಕುಸಿದ ಒಡೆದು ಹೋಗಿದೆ. ತಳ ಭಾಗವೂ ಅರ್ಧದಷ್ಟು ಕುಸಿದಿದೆ.

Advertisement
Advertisement
ಇಂದೋ ನಾಳೆಯೋ ಕುಸಿಯುವ ಭೀತಿ ಎದುರಾಗಿದೆ. ಕಳೆದ ಆರು ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಹೀಗಾಗಿ ಈಗ ಪ್ರತೀ ಮಳೆಗಾಲ ಬಂದರೆ ಸ್ಥಳೀಯರಿಗೆ  ರಸ್ತೆ ಸೇತುವೆ ಕೊಚ್ಚಿ ಹೋಗುವ ಭಯದಿಂದ ಇರುವ ಪರಿಸ್ಥಿತಿ ಇದೆ. ರಸ್ತೆ ಸಂಪರ್ಕ ಕಡಿತವಾಗುವ ಭೀತಿ ಎದುರಾಗಿದೆ.  ಮುಂದೆ ಸಂಪೂರ್ಣ ಕುಸಿಯುವ ಮುನ್ನ ಅಥವಾ ಅನಾಹುತವಾಗುವ ಮುನ್ನ ಯಾರಾದರೂ ಎಚ್ಚೆತ್ತುಕೊಂಡಾರೆಯೇ ಎಂದು ಜನರು ಕೇಳುವ ಸ್ಥಿತಿ ಬಂದಿದೆ. ಆಡಳಿತಕ್ಕೆ ಕೇಳಿಸೀತೇ ? ಜನಪ್ರತಿನಿಧಿಗಳು ಗಮನಿಸಿಯಾರೇ ?
ಕಳೆದ 6  ವರ್ಷಗಳಿಂದ ಕೊಲ್ಲಮೊಗ್ರದಿಂದ ಕಟ್ಟ – ಗೋವಿಂದನಗರದ ಕಿರು ಸೇತುವೆ ಕುಸಿದು ಹೋಗಿದೆ. ಈಗ ಸಂಪರ್ಕ ಕಡಿತದ ಭೀತಿ ಎದುರಾಗಿದೆ. ಸಂಬಂಧಿತರು ಈ ಕಡೆ ಸ್ಪಂದಿಸಿದರೆ ಉತ್ತಮ ಎನ್ನುತ್ತಾರೆ ಮಿಥುನ್‌ ಕುಮಾರ್.
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಏಕ ಬೆಳೆಯ ಅಪಾಯಗಳು ಹಾಗೂ ರೈತರ ಅನಿಶ್ಚಿತ ಭವಿಷ್ಯ | ಭಾರತ ಮತ್ತು ಕರ್ನಾಟಕ ಈಗಲೇ ಕಲಿಯಬೇಕಾದ ಸತ್ಯಗಳು..!
January 20, 2026
7:00 AM
by: ಮಿರರ್‌ ಡೆಸ್ಕ್
ಸುಳ್ಯದಲ್ಲಿ 265 ಅರ್ಹ ರೈತರಿಗೆ ಕೃಷಿ ಸವಲತ್ತುಗಳ ವಿತರಣೆ
January 20, 2026
6:24 AM
by: ದ ರೂರಲ್ ಮಿರರ್.ಕಾಂ
ಪೆಟ್ರೋಲಿಯಂ ಸಂಸ್ಥೆಗಳ ಮಾಲೀಕರಿಗೆ ಸುಳ್ಳು ಕರೆ | ಲೈಸೆನ್ಸ್ ಹೆಸರಿನಲ್ಲಿ ಹಣ ಕೇಳುವ ವಂಚನೆ – ಎಚ್ಚರಿಕೆ
January 16, 2026
9:31 PM
by: ದ ರೂರಲ್ ಮಿರರ್.ಕಾಂ
ದೀಪಾವಳಿ ಹಬ್ಬವನ್ನು ಅತ್ಯಂತ ಜಾಗರೂಕತೆಯಿಂದ ಆಚರಿಸುವಂತೆ ಸಲಹೆ
October 18, 2025
5:58 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror