ಬದುಕಿನ ದಾರಿಯಲ್ಲಿ, ಚಲಿಸುವ ಪಥಗಳಲ್ಲಿ ಏನೋ ಒಂದು ಕಥೆಗಳಿವೆ…
ಜೀವನದ ಹಾದಿಯಲ್ಲಿ, ಹುಟ್ಟು-ಸಾವು ಮದ್ಯದಲ್ಲಿ ಚರಿತ್ರೆ ಸೃಷ್ಟಿಸುವ ಅವಕಾಶಗಳಿವೆ…
ಪ್ರತಿಯೊಂದು ಹೆಜ್ಜೆಯಲ್ಲೂ ಸೋಲು ಒಂದು ಪಾಠವಾಗಿ, ಗೆಲುವು ಪ್ರತಿಫಲವಾಗಿ ದೊರೆಯುವುದು ಸಾಧನೆಯ ಹಾದಿಯಲ್ಲಿ…
ಸೋಲಿಗೆಂದು ಹೆದರದೆ-ಬೆದರದೆ,
ನೋವಿಗೆಂದು ಜಗ್ಗದೆ-ಕುಗ್ಗದೆ ಸಾಗುವುದೇ ಜೀವನ,
ಮುಂದೆ ಸಾಗುವುದೇ ಜೀವನ…
ರಾತ್ರಿ ಕಾಣುವ ಕನಸೆಲ್ಲಾ ಎಂದಿಗೂ ನನಸಾಗದು…
ಪ್ರಯತ್ನವು ಇಲ್ಲದೇ ಫಲವು ಎಂದಿಗೂ ದೊರೆಯದು…
ಬದುಕಿನ ದಾರಿಯಲ್ಲಿ, ಚಲಿಸುವ ಪಥಗಳಲ್ಲಿ ಏನೋ ಒಂದು ಕಥೆಗಳಿವೆ…
ಹೇಳಲು ಆಗದ ಕಥೆಗಳು, ಹೇಳಿಯೂ ತೀರದ ಕಥೆಗಳು ನಮ್ಮ-ನಿಮ್ಮ ಬದುಕಿನಲ್ಲಿ ನೂರಾರು…
ನಮ್ಮ ಬದುಕಿನ ಕಥೆಗಳೆಲ್ಲಾ ಮುಂದೆ ಒಂದು ಚರಿತ್ರೆಯಾಗಿ ಎಲ್ಲರಿಗೂ ಸ್ಪೂರ್ತಿಯಾಗಿ ಬದುಕುವುದೇ ಜೀವನ,
ನಾವು ಸತ್ತ ಮೇಲೂ ಬದುಕುವುದೇ ಜೀವನ…
# ಉಲ್ಲಾಸ್ ಕಜ್ಜೋಡಿ
ಜಾಗತಿಕ ಬಿಕ್ಕಟ್ಟಿನಿಂದ ಆಟೋ LPG ಬೇಡಿಕೆ ಏರಿಕೆ ಕಂಡಿದ್ದು, ಇಂಡಿಯನ್ ಆಯಿಲ್ ಪೂರೈಕೆಯನ್ನು…
“ರೈತ ರತ್ನ” ರಿಯಾಲಿಟಿ ಶೋ ಮೂಲಕ ಕೃಷಿಕರ ಸಾಧನೆಗೆ ಹೊಸ ವೇದಿಕೆ ಸಿಕ್ಕಿದೆ.…
ಮಿಜೋರಾಂದ ಚಾಂಫೈ ಜಿಲ್ಲೆಯಲ್ಲಿ ₹54.88 ಲಕ್ಷ ಮೌಲ್ಯದ 98 ಚೀಲ ಅಡಿಕೆ ವಶಪಡಿಸಲಾಗಿದೆ.…
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಏಪ್ರಿಲ್ 19ರಿಂದ ಮಳೆ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ.…
ಗ್ರಾಮ ಮತ್ತು ನಗರ ಜೀವನ ಪರಸ್ಪರ ವಿರುದ್ಧವಲ್ಲ, ಪೂರಕ ಶಕ್ತಿಗಳು. ಸಮತೋಲನವೇ ಸಮೃದ್ಧ…
ದೇಶದಲ್ಲಿ ಹವಾಮಾನ ತೀವ್ರ ಬದಲಾವಣೆ ಕಂಡುಬರುತ್ತಿದ್ದು, 13 ರಾಜ್ಯಗಳಲ್ಲಿ ಮಳೆ ಮತ್ತು ಗಾಳಿ…