ಅನುಕ್ರಮ

ಕವನ | ಒಂದಿಷ್ಟು ಹೊತ್ತು ಕೇಳೆನ್ನ ಮಾತು…

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಮರಳಿನ ಮೇಲೆ ಬರೆದೆಯೊಂದು ಓಲೆ
ಅಳಿಸಿಬಿಟ್ಟಿತು ಅಪ್ಪಳಿಸಿದ ಅಲೆ
ಅಳಿಯದೇ ಉಳಿಯಿತು,ನೆನಪಿನ ಕಲೆ

Advertisement

ನಿನ್ನ ಜೊತೆ ಕಟ್ಟಿದೆ ನೂರಾರು ಕನಸು
ಇಂದೇಕೋ ಮುಳುವಾಯ್ತು ನನ್ನ ವಯಸ್ಸು
ಕ್ಷಣ ಮಾತ್ರದಲ್ಲಿ ಮುರಿದು ಬಿಟ್ಟೆ ನನ್ನ ಮನಸ್ಸು
ಕಾಲ ಸಾಗಿದೆ,ನೆನಪುಗಳು ಕಾಡುತಿದೆ
ಮನಸ್ಸು ಮರಳಿ ಸಾಮಿಪ್ಯ ಬೇಡುತಿದೆ
ಕಣ್ಣ ರೆಪ್ಪೆಗಳು ಮುಚ್ಚದೇ ಕಾಯುತಿದೆ
ನೀನಾಗಿದ್ದೆ ನನಗೆ ಸಂಗೀತ ರಾಗ
ಕೊಟ್ಟುಬಿಟ್ಟಿದ್ದೆ ನಿನಗೆ ನನ್ನೆದೆಯ ಜಾಗ
ಇಂದು ಭಾದಿಸುತಿದೆ ನಿನ್ನ ನೆನಪಿನ ರೋಗ

ಕಳೆದು ಹೋದೆ ನಾನು ನಿನ್ನೊಳಗೆ
ತಿಳಿಯದೇ ಮರೆಯಾದೆ ನಾ ನನ್ನೊಳಗೆ
ಮರೆಯಾಗಿದೆ ನಿನ್ನನಗಲಿ ನನ್ನ ಮುಗುಳ್ನಗೆ
ಸಾಕಾಯ್ತು ನನಗೆ ನೆನಪುಗಳೊಡನೆ ಹೋರಾಟ
ಮುಗಿಯುವುದೆಂದೋ ನಾ ಕಾಣೆ ಈ ಸಂಕಟ
ಆದಷ್ಟು ಬೇಗ ಕೊನೆಗಾಣಬೇಕಿದೆ ಈ ಪರದಾಟ

# ಅಪೂರ್ವ ಚೇತನ್ ಪೆರಂದೋಡಿ

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

Published by
ಅಪೂರ್ವಚೇತನ್ ಪೆರಂದೋಡಿ

Recent Posts

ಕಾವೇರಿ ನದಿ ನೀರು ಮಲಿನ ತಡೆಯಲು ಕ್ರಮ | ಅಸ್ತಿ ವಿಸರ್ಜನೆ ಮಾಡದಂತೆ ಸೂಚನೆ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಅಸ್ತಿ ವಿಸರ್ಜನೆ ಮಾಡಿ ನದಿ…

5 hours ago

ಸ್ವಾತಂತ್ರ್ಯಕ್ಕಾಗಿ ಮದುವೆ

ಕುಟುಂಬ ಎಂಬುದು ಸಮಾಜದ ಆಧಾರ ಸ್ಥಂಭ. ಮದುವೆ ಎಂಬುದು ಈ ಸ್ಥಂಭದ ತಳಪಾಯ.…

5 hours ago

ಅಡಿಕೆ ಕೊಳೆರೋಗ | ಸಿಎಂ ಜೊತೆ ಶಾಸಕ ಅಶೋಕ್ ಕುಮಾರ್ ರೈ ಚರ್ಚೆ

ದ ಕ ಜಿಲ್ಲೆಯಲ್ಲಿ ಅಡಿಕೆಗೆ ಕೊಳೆರೋಗ ಭಾದಿಸಿದ್ದು ಇದರಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ…

11 hours ago

ಹವಾಮಾನ ವರದಿ | 14-08-2025 | ಆ.20 ರವರೆಗೂ ಮಳೆ -ತುಂತುರು ಮಳೆ

15.08.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…

11 hours ago

ಸಗಣಿಯಿಂದ 5500 ಕಿಮೀ ಮಾಲಿನ್ಯ ರಹಿತ ಪ್ರಯಾಣ..!

ಒಂದು ಹಸುವಿನ ಸಗಣಿಯಿಂದ ಪ್ರತಿ ವರ್ಷ 225 ಲೀಟರ್ ಪೆಟ್ರೋಲ್‌ಗೆ ಸಮಾನವಾದ ಮೀಥೇನ್…

18 hours ago

ಬಾಗಿಲು ಇಲ್ಲದ ಮನೆಯಂತಾದ ಕನ್ನಡ ಸ್ಥಿತಿ : ರಾಘವೇಶ್ವರ ಶ್ರೀ

ಕನ್ನಡದ ಸ್ಥಿತಿ ಇಂದು ಬೇಲಿ ಇಲ್ಲದ ತೋಟದಂತೆ, ಬಾಗಿಲಿಲ್ಲದ ಮನೆಯಂತಾಗಿದ್ದು, ನಾಲಿಗೆ ಶುದ್ಧೀಕರಣ,…

19 hours ago