ಮರಳಿನ ಮೇಲೆ ಬರೆದೆಯೊಂದು ಓಲೆ
ಅಳಿಸಿಬಿಟ್ಟಿತು ಅಪ್ಪಳಿಸಿದ ಅಲೆ
ಅಳಿಯದೇ ಉಳಿಯಿತು,ನೆನಪಿನ ಕಲೆ
ನಿನ್ನ ಜೊತೆ ಕಟ್ಟಿದೆ ನೂರಾರು ಕನಸು
ಇಂದೇಕೋ ಮುಳುವಾಯ್ತು ನನ್ನ ವಯಸ್ಸು
ಕ್ಷಣ ಮಾತ್ರದಲ್ಲಿ ಮುರಿದು ಬಿಟ್ಟೆ ನನ್ನ ಮನಸ್ಸು
ಕಾಲ ಸಾಗಿದೆ,ನೆನಪುಗಳು ಕಾಡುತಿದೆ
ಮನಸ್ಸು ಮರಳಿ ಸಾಮಿಪ್ಯ ಬೇಡುತಿದೆ
ಕಣ್ಣ ರೆಪ್ಪೆಗಳು ಮುಚ್ಚದೇ ಕಾಯುತಿದೆ
ನೀನಾಗಿದ್ದೆ ನನಗೆ ಸಂಗೀತ ರಾಗ
ಕೊಟ್ಟುಬಿಟ್ಟಿದ್ದೆ ನಿನಗೆ ನನ್ನೆದೆಯ ಜಾಗ
ಇಂದು ಭಾದಿಸುತಿದೆ ನಿನ್ನ ನೆನಪಿನ ರೋಗ
ಕಳೆದು ಹೋದೆ ನಾನು ನಿನ್ನೊಳಗೆ
ತಿಳಿಯದೇ ಮರೆಯಾದೆ ನಾ ನನ್ನೊಳಗೆ
ಮರೆಯಾಗಿದೆ ನಿನ್ನನಗಲಿ ನನ್ನ ಮುಗುಳ್ನಗೆ
ಸಾಕಾಯ್ತು ನನಗೆ ನೆನಪುಗಳೊಡನೆ ಹೋರಾಟ
ಮುಗಿಯುವುದೆಂದೋ ನಾ ಕಾಣೆ ಈ ಸಂಕಟ
ಆದಷ್ಟು ಬೇಗ ಕೊನೆಗಾಣಬೇಕಿದೆ ಈ ಪರದಾಟ
# ಅಪೂರ್ವ ಚೇತನ್ ಪೆರಂದೋಡಿ
ಮಿಜೋರಾಂನ ಅಸ್ಸಾಂ ರೈಫಲ್ಸ್ ಸಿಬ್ಬಂದಿ ಮತ್ತು ಕಸ್ಟಮ್ಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ,…
ಜೂನ್ 14 ರಿಂದ ಕರಾವಳಿ ಜಿಲ್ಲೆಗಳಲ್ಲಿ ಸಾಮಾನ್ಯ ಮುಂಗಾರು ಮಳೆ ಮುಂದುವರಿಯಲಿದ್ದು, ಜೂನ್…
ಕರಾವಳಿ ಹಾಗೂ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ.ಉತ್ತರಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ ಹಾಗೂ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಟೇಕ್ ಆಫ್ ಆಗುತ್ತಿದ್ದ ಏರ್ ಇಂಡಿಯಾ ವಿಮಾನ ಪತನವಾಗಿರುವ ಘಟನೆ ಗುಜರಾತಿನ ಅಹಮದಾಬಾದ್ನಲ್ಲಿ…
ಜೂನ್ 13ರಿಂದ ಗಾಳಿಯ ಚಲನೆಯು ನೈರುತ್ಯದಿಂದ ಈಶಾನ್ಯಕ್ಕೆ ಬದಲಾಗುವ ಸಾಧ್ಯತೆಗಳಿರುವುದರಿಂದ ರಾಜ್ಯದ ವಿವಿದೆಡೆ…