ಕವನ | ಕರುನಾಡಿನ ರಾಜಕುಮಾರ

October 31, 2021
9:59 PM

ಕೋಟಿ ಹೃದಯ ಗೆದ್ದ ಕುವರ, ಆಗಿಹೋದ ಇಂದು ಅಮರ…
ಹೇಳು ವಿಧಿಯೇ ನೀ ಯಾಕಿಷ್ಟು ಕ್ರೂರಿ…
ಕೋಟಿ ಜನರ ಜನಮಾನಸದಲ್ಲಿ ಅಚ್ಚಳಿಯದ ನೆನಪು “ಅಪ್ಪು”…
ಇನ್ನೆಂದಿಗೂ ಬಾರದ ಲೋಕ ಸೇರಿಬಿಟ್ಟೆಯಾ, ನೀ ಸೇರಿಬಿಟ್ಟೆಯಾ…?

ಕೋಟಿ ಜನರ ಪ್ರಾರ್ಥನೆಯೂ ಫಲಿಸದೇ ಹೋಯಿತು ಇಂದು…
ನಿಮ್ಮ ನಿಷ್ಕಲ್ಮಶ ಮನಸ್ಸು ದೇವರಿಗೂ ಇಷ್ಟವಾಗಿ ಕರೆಸಿ ಬಿಟ್ಟನೇ ನಿಮ್ಮ ತನ್ನ ಬಳಿ, ಆ ಪರಮಾತ್ಮನ ಬಳಿ…
ಸಾವಿರಾರು ಜನರ ಬದುಕಿಗೆ ಬೆಳಕಾದ ನಿಮ್ಮ ಬದುಕು ಅಂತ್ಯವಾಯಿತೇ, ಇಲ್ಲಿಗೆ ಕೊನೆಯಾಯಿತೇ…?
ನಿಮ್ಮ ಬದುಕ ಯಾತ್ರೆಯು ಇಂದು ಕೊನೆಯಾಯಿತೇ, ಇಲ್ಲಿಗೆ ಮುಗಿದು ಹೋಯಿತೇ…?

ಹಾಡುತಿದ್ದ ನಿಮ್ಮ ಸ್ವರವು ಮೌನವಾಗಿದೆ, ಇಂದು ಮೌನವಾಗಿದೆ…
ಕುಣಿಯುತ್ತಿದ್ದ ನಿಮ್ಮ ಕೈ-ಕಾಲುಗಳು ನಿಂತುಹೋಗಿವೆ, ಇಂದು ನಿಂತು ಹೋಗಿವೆ…
ನಿಮ್ಮ ಬದುಕ ಯಾತ್ರೆಯು ಇಂದು ಮುಗಿದು ಹೋಯಿತೇ, ಇಲ್ಲಿಗೆ ಕೊನೆಯಾಯಿತೇ…?
ನೀವು ಇಂದು ಇಲ್ಲದೇ ಹೋದರೂ, ನಿಮ್ಮ ನೆನಪುಗಳೆಲ್ಲಾ ಉಳಿದು ಹೋಗಿವೆ, ನಮ್ಮ ಮನದಲ್ಲಿ ಅಚ್ಚಳಿಯದೇ ಉಳಿದುಹೋಗಿವೆ…

ನಿಮ್ಮ ಬದುಕ ಸಾಧನೆಯೆಲ್ಲಾ ನಮಗೆ ದಾರಿದೀಪವಾಗಿ, ನಿಮ್ಮ ಪ್ರತಿಯೊಂದು ಹೆಜ್ಜೆ ನಮ್ಮ ಬದುಕಿಗೆ ಸ್ಪೂರ್ತಿಯಾಗಿ ಕಾಣುವುದು, ನಮ್ಮ ಮುನ್ನಡೆಸುವುದು…
ಇಂದು ನೀವು ಇಲ್ಲದೇ ಹೋದರೂ, ನಿಮ್ಮ ನೆನಪುಗಳೆಲ್ಲಾ ನಮ್ಮ ಮನದಲ್ಲಿ ಉಳಿದುಹೋಗಿವೆ, ಅಚ್ಚಾಗಿ ಉಳಿದು ಹೋಗಿವೆ…
ಮುಂದಿನ ಜನ್ಮದಲ್ಲಿ ನೀವು ಇದೇ ಕರುನಾಡಿನಲ್ಲಿ ವೀರ ಕನ್ನಡಿಗನಾಗಿ ಹುಟ್ಟಿ ಬನ್ನಿ, ಮತ್ತೊಮ್ಮೆ ಹುಟ್ಟಿ ಬನ್ನಿ…
ಆ ಪರಮಾತ್ಮನು ನಿಮ್ಮ ಆತ್ಮಕ್ಕೆ ಶಾಂತಿಯನ್ನು ನೀಡಲೆಂದು ನಿಮಗೆ ನಾವು ದುಃಖದ ವಿದಾಯ ಹೇಳುತಿರುವೆವು, ನಾವು ಹೇಳುತಿರುವೆವು…

ಕೋಟಿ ಹೃದಯ ಗೆದ್ದ ಕುವರ, ಆಗಿಹೋದ ಇಂದು ಅಮರ…
ಹೇಳು ವಿದಿಯೇ ನೀನು ಯಾಕಿಷ್ಟು ಕ್ರೂರಿ…
ಕೋಟಿ ಜನರ ಪ್ರಾರ್ಥನೆಯು ಫಲಿಸದೇ ಹೋಯಿತು ಇಂದು…
ನಿಮ್ಮ ಬದುಕ ಯಾತ್ರೆಯು ಇಲ್ಲಿಗೆ ಮುಗಿದು ಹೋಯಿತು, ಇಂದು ಕೊನೆಯಾಯಿತು…
ನೀವು ಮತ್ತೆ ಹುಟ್ಟಿ ಬನ್ನಿ ನಮ್ಮ ಕರುನಾಡಿನ ಮನೆ ಮಗನಾಗಿ ಎಂದು ನಾವು ಬೇಡುತ್ತಾ ನಿಮ್ಮ ಆತ್ಮಕ್ಕೆ ಶಾಂತಿ ಕೋರುತ್ತಿರುವೆವು, ನಾವು ಕೋರುತ್ತಿರುವೆವು…

# ಉಲ್ಲಾಸ್ ಕಜ್ಜೋಡಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಹೊಸರುಚಿ | ಎಳೆಯ ಹಲಸಿನ ಕಾಯಿ ರೋಲ್ – ಕ್ರಿಸ್ಪಿ ಟೀ ಟೈಮ್ ಸ್ನ್ಯಾಕ್
March 21, 2026
5:00 PM
by: ದಿವ್ಯ ಮಹೇಶ್
ಕೌಶಲ್ಯಾಭಿವೃದ್ಧಿ ಮತ್ತು ಸ್ವಾವಲಂಬನೆ : ಯುವಜನತೆಗೆ ಕಾಲದ ಕರೆಯೇ?
March 20, 2026
8:07 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹೊಸರುಚಿ | ಹಲಸಿನ ಹಣ್ಣಿನಿಂದ ಇಷ್ಟು ರುಚಿ ಸಿಗುತ್ತದಾ…? ಈ ಕಸ್ಟರ್ಡ್ ಮಿಸ್ ಮಾಡ್ಬೇಡಿ…!
March 14, 2026
8:05 PM
by: ದ ರೂರಲ್ ಮಿರರ್.ಕಾಂ
ಯುವಶಕ್ತಿ ದಿಕ್ಕುತಪ್ಪದಿರಲು ಹಿರಿಯರ ಮಾರ್ಗದರ್ಶನವೇ ದೀಪಸ್ತಂಭ
March 13, 2026
7:02 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror